AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾಯವನ್ನು ಸಂಕೇತಿಸಲು ಕೆಂಪು ಬಣ್ಣವನ್ನು ಮಾತ್ರ ಬಳಸೋದೇಕೇ?

ಅಪಾಯ, ಎಚ್ಚರಿಕೆ ಅಥವಾ ತುರ್ತು ಸಂಕೇತಗಳನ್ನು ಸೂಚಿಸಲು ಕೆಂಪು ಬಣ್ಣವನ್ನು ಮಾತ್ರ ಬಳಸಲಾಗುತ್ತದೆ. ಆಂಬ್ಯುಲೆನ್ಸ್‌, ಎಚ್ಚರಿಕೆ ಫಲಕ ಇವೆಲ್ಲದರಲ್ಲೂ ಕೆಂಪು ಬಣ್ಣವೇ ಇರುತ್ತದೆ. ಅಷ್ಟಕ್ಕೂ ಅಪಾಯದ ಸೂಚನೆಗಳಿಗೆ ಕೆಂಪು ಬಣ್ಣವನ್ನೇ ಏಕೆ ಆಯ್ಕೆ ಮಾಡಲಾಗಿದೆ,ಇದರ ಹಿಂದಿನ ವೈಜ್ಞಾನಿಕ ಕಾರಣವಾದರೂ ಏನು ಎಂಬುದನ್ನು ತಿಳಿಯಿರಿ.

ಅಪಾಯವನ್ನು ಸಂಕೇತಿಸಲು ಕೆಂಪು ಬಣ್ಣವನ್ನು ಮಾತ್ರ ಬಳಸೋದೇಕೇ?
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on:Nov 26, 2025 | 4:33 PM

Share

ಬಿಳಿ ಬಣ್ಣವು ಶಾಂತಿಯನ್ನು ಸಂಕೇತಿಸುವಂತೆಯೇ, ಅಪಾಯದ ಸೂಚನೆಗಳಿಗೆ ಕೆಂಪು ಬಣ್ಣವನ್ನು (red color) ಬಳಸಲಾಗುತ್ತದೆ. ಏಕೆ ಅಪಾಯದ ಮುನ್ಸೂಚನೆಗಳಿಗೆ ಕೆಂಪು ಬಣ್ಣವನ್ನು ಮಾತ್ರ ಬಳಸಲಾಗುತ್ತದೆ, ಕಪ್ಪು, ಹಳದಿ ಅಥವಾ ನೀಲಿ ಬಣ್ಣವನ್ನು ಏಕೆ ಬಳಸಲಾಗುವುದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ ಅದೇನೆಂಬುದನ್ನು ನೋಡೋಣ.

ಅಪಾಯದ ಸೂಚನೆಗಳಿಗೆ ಕೆಂಪು ಬಣ್ಣವನ್ನು ಆಯ್ಕೆ ಮಾಡಿರೋದೇಕೆ?

ದೂರದಿಂದ ಗೋಚರಿಸುತ್ತದೆ: ಕೆಂಪು ಬಣ್ಣವು ಅತಿ ಉದ್ದದ ತರಂಗಾಂತರವನ್ನು ಹೊಂದಿದ್ದು, ಇತರ ಬಣ್ಣಗಳಿಗಿಂತ ಈ ಬಣ್ಣ ದೂರದಿಂದ ಹೆಚ್ಚು ಗೋಚರಿಸುತ್ತದೆ. ಇದಲ್ಲದೆ, ಕೆಂಪು ಬಣ್ಣವು ತಕ್ಷಣವೇ ನಮ್ಮ ಕಣ್ಣುಗಳನ್ನು ಆಕರ್ಷಿಸುತ್ತದೆ ಮತ್ತು ನಮ್ಮನ್ನು ಎಚ್ಚರಿಸುತ್ತದೆ. ಅದಕ್ಕಾಗಿಯೇ  ಸಂಚಾರ ಸಂಕೇತಗಳಲ್ಲಿ, ಅಗ್ನಿಶಾಮಕ ದಳದ ಉಪಕರಣಗಳಲ್ಲಿ ಮತ್ತು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲು ಕೆಂಪು ಬಣ್ಣವನ್ನು ಬಳಸಲಾಗುತ್ತದೆ. ಇದರಿಂದಾಗಿ ಜನರು ದೂರದಿಂದಲೇ ಜಾಗರೂಕರಾಗಿರಬಹುದು ಮತ್ತು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಬಹುದು.

ಮಾನಸಿಕ ಪ್ರಭಾವ: ಮನೋವಿಜ್ಞಾನದ ಪ್ರಕಾರ, ಕೆಂಪು ಬಣ್ಣವು ಮೆದುಳನ್ನು ತಕ್ಷಣವೇ ಸಕ್ರಿಯಗೊಳಿಸುತ್ತದೆ. ಮೆದುಳು ಕೆಂಪು ಬಣ್ಣಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತದೆ. ಆದ್ದರಿಂದ, ಜನರು ಅದನ್ನು ನೋಡಿದ ತಕ್ಷಣ ಎಚ್ಚರಗೊಳ್ಳಲು ಸಾಧ್ಯವಾಗುವಂತೆ ತುರ್ತು ಎಚ್ಚರಿಕೆಯನ್ನು ಸೂಚಿಸಲು ಕೆಂಪು ಬಣ್ಣವನ್ನು ಆಯ್ಕೆ ಮಾಡಲಾಗಿದೆ.

ಗಮನ ಸೆಳೆಯುತ್ತದೆ: ಕೆಂಪು ಬಣ್ಣವು ನಮ್ಮ ಕಣ್ಣನ್ನು ತಕ್ಷಣ ಸೆಳೆಯುತ್ತದೆ. ಇದು ನೈಸರ್ಗಿಕ ಪ್ರತಿಕ್ರಿಯೆಯಾಗಿದ್ದು ಅದು ಅಪಾಯದ ಬಗ್ಗೆ ಎಚ್ಚರದಿಂದಿರಲು ನಮ್ಮನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ: ಗೋಡಂಬಿ ಬೀಜ ಇಷ್ಟೊಂದು ಕಾಸ್ಟ್ಲಿಯಾಗಿರೋದು ಏಕೆ ಗೊತ್ತಾ?

ಸಂಪ್ರದಾಯಿಕ ಕಾರಣ: ಕೆಂಪು ಬಣ್ಣವನ್ನು ಬಹಳ ಹಿಂದಿನಿಂದಲೂ ಶಕ್ತಿ, ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಯುದ್ಧಗಳಲ್ಲಿ, ಸೈನಿಕರು ಯುದ್ಧವನ್ನು ಘೋಷಿಸಲು ಕೆಂಪು ಧ್ವಜಗಳನ್ನು ಎತ್ತುತ್ತಿದ್ದರು. ಅದಕ್ಕಾಗಿಯೇ ಇಂದು ಸಹ ಮಿಲಿಟರಿ ಮತ್ತು ತುರ್ತು ಸೇವೆಗಳಲ್ಲಿ ಕೆಂಪು ಬಣ್ಣವನ್ನು  ವ್ಯಾಪಕವಾಗಿ ಬಳಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Wed, 26 November 25

Follow Us
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ