AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day 2025: ಉದ್ಯೋಗಸ್ಥ ಮಹಿಳೆಯರೇ, ನಿಮ್ಮ ಹಣಕಾಸು ನಿರ್ವಹಣೆ ಹೀಗಿದ್ದರೆ ಬೆಸ್ಟ್

ಈಗಿನ ಕಾಲದಲ್ಲಿ ಎಷ್ಟು ದುಡಿದರೂ ಕೂಡ ಸಾಲುವುದಿಲ್ಲ. ಗಂಡ ಹೆಂಡಿರು ಇಬ್ಬರೂ ದುಡಿದರೂ ಕೂಡ ದುಬಾರಿ ದುನಿಯಾದಲ್ಲಿ ಮನೆ ಹಾಗೂ ಸಂಸಾರ ನಿರ್ವಹಣೆಗೆ ಅಷ್ಟು ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಣಕಾಸು ನಿರ್ವಹಣೆ ಮಾಡುವುದು ಸವಾಲಿನ ಕೆಲಸವೇ ಆಗಿರಬಹುದು. ಆದರೆ ತಿಂಗಳ ಸಂಬಳವನ್ನು ಸರಿಯಾಗಿ ವಿನಿಯೋಗಿಸುವುದು ಆರ್ಥಿಕವಾಗಿ ಸದೃಢರಾಗಿರುವಂತೆ ಮಾಡುತ್ತದೆ. ಉದ್ಯೋಗದಲ್ಲಿರು ಮಹಿಳೆಯರಿಗೆ ತಮ್ಮ ಆರ್ಥಿಕ ಭವಿಷ್ಯದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುವ ಕೆಲವು ಆರ್ಥಿಕ ಸಲಹೆಗಳು ಇಲ್ಲಿವೆ.

Women's Day 2025: ಉದ್ಯೋಗಸ್ಥ ಮಹಿಳೆಯರೇ, ನಿಮ್ಮ ಹಣಕಾಸು ನಿರ್ವಹಣೆ ಹೀಗಿದ್ದರೆ ಬೆಸ್ಟ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2025 | 3:16 PM

ಇದೀಗ ಕಾಲ ಬದಲಾಗಿದೆ, ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಗಂಡಿನಷ್ಟೇ ಆರ್ಥಿಕವಾಗಿ ಸ್ವತಂತ್ರಳಾಗಿದ್ದಾಳೆ. ನಾಲ್ಕು ಕಾಸು ಸಂಪಾದಿಸುವ ಮೂಲಕ ಸಂಸಾರ ನಿಭಾಯಿಸುವ ಗಂಡಿಗೂ ಕೂಡ ಹೆಗಲಾಗಿದ್ದಾಳೆ. ಆದರೆ ದುಡಿದ ಅಷ್ಟು ಹಣವೂ ಖರ್ಚು ಆಗಿ ಹೋದರೆ ಆರ್ಥಿಕ ಭದ್ರತೆಗೆ ದಾರಿ ಮಾಡಿಕೊಡುವುದಿಲ್ಲ. ಹೆಣ್ಣು ಮಕ್ಕಳಿಗೆ ಹಣಕಾಸು ನಿರ್ವಹಣೆ (Financial Management) ಯ ಬಗ್ಗೆ ಹೇಳಿ ಕೊಡಬೇಕಾಗಿಲ್ಲ. ಉಳಿತಾಯ ಹಾಗೂ ಹೂಡಿಕೆ ಮಾಡುವುದರಲ್ಲಿ ಕೈ ಒಂದು ಹೆಜ್ಜೆ ಮುಂದೆ ಇದ್ದಾರೆ. ಆದರೆ ಮನೆಯ ಜವಾಬ್ದಾರಿಗಳು ಹೆಚ್ಚಿದ್ದಾಗ ಹಣಕಾಸಿನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಸರಿಯಾದ ತಂತ್ರಗಳು ಮತ್ತು ಮನಸ್ಥಿತಿಯೊಂದಿಗೆ, ಹಣವನ್ನು ಪರಿಣಾಮಕಾರಿಯಾಗಿ ವಿನಿಯೋಗಿಸಿದರೆ ಆರ್ಥಿಕ ಸ್ವಾತಂತ್ರ್ಯರಾಗಬಹುದು. ಕಿನಾರಾ ಕ್ಯಾಪಿಟಲ್‌ನ ಸ್ಥಾಪಕಿ ಮತ್ತು ಸಿಇಒ ಹಾರ್ದಿಕಾ ಶಾ (Hardika Shah, Capital Founder and CEO of Kinara Capital) ಉದ್ಯೋಗದಲ್ಲಿರುವ ಮಹಿಳೆಯರು ಹಣಕಾಸಿನ ನಿರ್ವಹಣೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.

ಉದ್ಯೋಗಸ್ಥ ಮಹಿಳೆಯರು ತಮ್ಮ ಹಣಕಾಸನ್ನು ನಿರ್ವಹಿಸಲು ಇಲ್ಲಿದೆ ಸಲಹೆಗಳು

  1. ಸ್ಪಷ್ಟ ಹಣಕಾಸು ಯೋಜನೆಯನ್ನು ರಚಿಸಿ: ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇಡಲು ಬಯಸಿದರೆ ಹಣಕಾಸು ಯೋಜನೆಯತ್ತ ಹಣ ವಿನಿಯೋಗಿಸುವುದು. ಹೌದು, ಅಲ್ಪಾವಧಿ ಮತ್ತು ದೀರ್ಘಾವಧಿಯ ಎರಡೂ ಹಣಕಾಸಿನ ಗುರಿಗಳನ್ನು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಮಹಿಳೆಯರಿಗೆ ಖರ್ಚುಗಳನ್ನು ವರ್ಗೀಕರಿಸಿ, ತುರ್ತು ನಿಧಿಗಳಿಗಾಗಿ ಉಳಿತಾಯ ಮಾಡಿ. ಇದು ಯಾವುದೇ ಅನಿರೀಕ್ಷಿತವಾಗಿ ಎದುರಾಗುವ ಆರ್ಥಿಕ ಸಮಸ್ಯೆಯ ವೇಳೆ ಈ ಹಣವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ.
  2. ತುರ್ತು ನಿಧಿಯಿರಲಿ : ಜೀವನವು ಅನಿರೀಕ್ಷಿತ ವೆಚ್ಚಗಳಿಂದ ತುಂಬಿದ್ದು, ಯಾವಾಗ ಹಣ ಅವಶ್ಯಕತೆ ಬರುತ್ತದೆ ಎಂದು ಹೇಳಲಾಗದು. ಹೀಗಾಗಿ ಹಾರ್ದಿಕಾ ಶಾ ರವರು ತುರ್ತು ನಿಧಿಯ ಮಹತ್ವವನ್ನು ಒತ್ತಿ ಹೇಳಿದ್ದು, ಸಂಬಳದ ಇಂತಿಷ್ಟು ಹಣವನ್ನು ತುರ್ತು ನಿಧಿಯೆಂದು ಎತ್ತಿಡಿ. ನೀವು ನಿಮ್ಮ ಸಂಬಳ ಅಥವಾ ಆದಾಯವನ್ನು ಪಡೆದ ತಕ್ಷಣ, ಖರ್ಚು ಮಾಡಲು ಪ್ರಾರಂಭಿಸುವ ಮೊದಲು, ಒಂದು ನಿರ್ದಿಷ್ಟ ಮೊತ್ತವನ್ನು ಪಕ್ಕಕ್ಕೆ ಇರಿಸಿಕೊಳ್ಳಿ. ಕಷ್ಟದ ಸಮಯದಲ್ಲಿ ಈ ಹಣವನ್ನು ಬಳಸಿಕೊಳ್ಳುವುದೇ ಹೆಚ್ಚು. ತುರ್ತು ಸಮಯದಲ್ಲಿ ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಾಲಗಳನ್ನು ಅವಲಂಬಿಸದೇ ಈ ತುರ್ತು ನಿಧಿಯಲ್ಲಿಟ್ಟ ಹಣವನ್ನು ಬಳಸಿಕೊಳ್ಳಬಹುದು.
  3. ಸ್ಥಿರ ಆಸ್ತಿಗಳ ಮೇಲೆ ಹೆಚ್ಚಿನ ಹೂಡಿಕೆ ಬೇಡ : ಮಹಿಳೆಯರು ತಮ್ಮ ಹಣಕಾಸನ್ನು ನಿರ್ವಹಿಸುವಾಗ ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು ಆಸ್ತಿ ಹಾಗೂ ದುಬಾರಿ ಬೆಲೆಯ ಸ್ಥಿರವಾದ ಸ್ವತ್ತುಗಳಲ್ಲಿ ಅತಿಯಾಗಿ ಹೂಡಿಕೆ ಮಾಡುವುದು. ಅತಿಯಾದ ಹೂಡಿಕೆಯೂ ಆರ್ಥಿಕವಾಗಿ ನಿಮ್ಮ ಕೈಯನ್ನು ಕಟ್ಟಿ ಹಾಕಬಹುದು. ಹೀಗಾಗಿ ಆಸ್ತಿ ಸೇರಿದಂತೆ ಸ್ಥಿರವಾದ ಸ್ವತ್ತುಗಳ ಮೇಲೆ ಹೂಡಿಕಕೆ ಮಾಡುವ ಮೊದಲು ತಮ್ಮ ಹಣಕಾಸಿನ ಗುರಿಗಳನ್ನು ಎಚ್ಚರಿಕೆಯಿಂದ ಗಮನಿಸಲು ಹಾರ್ದಿಕಾ ಷಾ ಕೆಲಸ ಮಾಡುವ ಮಹಿಳೆಯರಿಗೆ ಸಲಹೆ ನೀಡುತ್ತಾರೆ.
  4. ಬಹು ಆದಾಯದ ಮೂಲಗಳನ್ನು ಸೃಷ್ಟಿಸಿ : ಈ ದುಬಾರಿ ದುನಿಯಾದಲ್ಲಿ ಆರ್ಥಿಕ ಭದ್ರತೆಗಾಗಿ ಒಂದೇ ಆದಾಯದ ಮೂಲವನ್ನು ಅವಲಂಬಿಸಿದ್ದರೆ ಸಾಲದು. ಹಾರ್ದಿಕಾ ಶಾ ಅವರು ಬಹು ಆದಾಯದ ಮೂಲವನ್ನು ನಿರ್ಮಿಸಿಕೊಳ್ಳಲು ಹೇಳುತ್ತಾರೆ. ಒಂದು ಅಥವಾ ಎರಡು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಬಹು ಆದಾಯದ ಮೂಲಗಳು ಆದಾಯ ಹೆಚ್ಚಿಸಿ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಆದಾಯಕ್ಕಾಗಿ ಒಂದೇ ಮೂಲವನ್ನು ಅವಲಂಬಿಸದೇ ಪರ್ಯಾಯ ಆದಾಯದ ಮೂಲಗಳು ಇರುವುದು ಬಹಳ ಮುಖ್ಯ.
  5. ಭವಿಷ್ಯಕ್ಕಾಗಿ ಹೂಡಿಕೆ ಮಾಡಿ : ದುಡಿದ ಅಲ್ಪಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ, ಇದು ಭವಿಷ್ಯಕ್ಕೆ ನೆರವಾಗುತ್ತದೆ. ಆರ್ಥಿಕ ತಜ್ಞರು ಹೇಳುವಂತೆ ಉದ್ಯೋಗದಲ್ಲಿರುವ ಮಹಿಳೆಯರು ಸಣ್ಣ ಮೊತ್ತವಾಗಿದ್ದರೂ ಸರಿಯೇ ಹೂಡಿಕೆ ಮಾಡುವತ್ತ ಗಮನ ಹರಿಸಿ ಎನ್ನುತ್ತಾರೆ. ಮ್ಯೂಚುವಲ್ ಫಂಡ್‌ಗಳು , ಷೇರುಗಳು ಅಥವಾ ರಿಯಲ್ ಎಸ್ಟೇಟ್‌ನಂತಹ ಸ್ವತ್ತುಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯ ಆದಾಯವನ್ನು ಪಡೆಯಬಹುದು. ಆದರೆ ಹಣಕಾಸಿನ ಗುರಿಗಳಿಗೆ ಹೊಂದಿಕೆಯಾಗುವ ಹೂಡಿಕೆಯತ್ತ ಗಮನ ಕೊಡುವುದು ಉತ್ತಮ.
  6. ವೃತ್ತಿಪರ ಆರ್ಥಿಕ ತಜ್ಞರ ಸಲಹೆ ಪಡೆಯಿರಿ: ಹೆಚ್ಚಿನವರಿಗೆ ಹಣಕಾಸಿನ ನಿರ್ವಹಣೆ ಹೇಗೆ ಮಾಡಬೇಕು ಎಲ್ಲಿಂದ ಪ್ರಾರಂಭಿಸಬೇಕು ಎನ್ನುವುದು ತಿಳಿದಿರುವುದಿಲ್ಲ. ಈ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೆ ಹಣಕಾಸು ತಜ್ಞರಿಂದ ಸಲಹೆ ಪಡೆಯುವುದು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಅದರಲ್ಲಿಯೂ ವಿಶೇಷವಾಗಿ ಹೂಡಿಕೆ ತಂತ್ರಗಳು ಅಥವಾ ತೆರಿಗೆ ಯೋಜನೆಯ ಬಗ್ಗೆ ವೃತ್ತಿಪರ ಮಾರ್ಗದರ್ಶನವನ್ನು ಕೇಳುವುದರಲ್ಲಿ ಒಳ್ಳೆಯದು. ಇದು ನಿಮ್ಮಲ್ಲಿರುವ ಗೊಂದಲವನ್ನು ನಿವಾರಿಸಿ, ಹಣಕಾಸು ಹೂಡಿಕೆಯ ಕುರಿತು ಯೋಗ್ಯ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ನಂಬಿ, ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ನೇತಾಡಿದ ಕಾರು
ಗೂಗಲ್ ನಂಬಿ, ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ನೇತಾಡಿದ ಕಾರು
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​