AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Kindness Day 2025: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ

ಇಂದಿನ ದಿನಗಳಲ್ಲಿ ಮನುಷ್ಯ ದಯೆ, ಮಾನವೀಯ ಗುಣಗಳನ್ನು ಮರೆತು ವರ್ತಿಸುತ್ತಿದ್ದಾನೆ. ದಯೆ ಗುಣ ಇಲ್ಲದ ಆತನಲ್ಲಿ ಎಷ್ಟೇ ದುಡ್ಡು, ಶ್ರೀಮಂತಿಕೆ ಇದ್ದರೂ ಏನು ಪ್ರಯೋಜನವಿಲ್ಲ. ಆದರೆ ದಯೆಯೆಂಬ ಸಣ್ಣ ಕ್ರಿಯೆ ಇತರರ ಮೊಗದಲ್ಲಿ ನಗು ಮೂಡಿಸುವುದರ ಜೊತೆಗೆ, ನಿಮ್ಮೊಳಗೂ ಸಕಾರಾತ್ಮಕತೆಯನ್ನು ಹೆಚ್ಚುತ್ತದೆ. ಒಟ್ಟಾರೆಯಾಗಿ ದಯೆಯೆಂಬ ದಾರದಿಂದ ಮಾನವೀಯತೆಯನ್ನು ಒಂದುಗೂಡಿಸಲು ಸಾಧ್ಯ. ದಯೆಯ ಈ ಮಹತ್ವವನ್ನು ಸಾರಲು ಪ್ರತಿವರ್ಷ ನವೆಂಬರ್‌ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ.

World Kindness Day 2025: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ
ವಿಶ್ವ ದಯೆ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Nov 13, 2025 | 9:56 AM

Share

ದಯೆಯೇ ಧರ್ಮದ ಮೂಲ ಎಂಬ ಮಾತೊಂದಿದೆ.  ದಯೆ (Kindness), ಕರುಣೆ, ಅನುಂಕಪ ಇವೆಲ್ಲವೂ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಈ ಗುಣಗಳೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ.  ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಮನುಷ್ಯನದಲ್ಲಿ ದಯೆ, ಅನುಕಂಪ, ಮಾನವೀಯತೆ ಎಂಬುದು ಮರೆಯಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಅಮಾನವೀಯ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಲು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಸಲುವಾಗಿ ನವೆಂಬರ್‌ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

ವಿಶ್ವ ದಯೆಯ ದಿನದ ಇತಿಹಾಸವೇನು?

ವಿಶ್ವ ದಯೆ ದಿನವನ್ನು 1998 ರಲ್ಲಿ ಜಪಾನ್‌ನ ವಿಶ್ವ ದಯೆ ಚಳುವಳಿಯು ಸ್ಥಾಪಿಸಿತು. ದಯೆಯ ಕ್ರಿಯೆಗಳ ಮೂಲಕ ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕತೆಯನ್ನು ಹರಡುವುದು ಇದರ ಧ್ಯೇಯವಾಗಿತ್ತು. ಇಂದು, 30 ಕ್ಕೂ ಹೆಚ್ಚು ದೇಶಗಳು ಈ ಆಂದೋಲನದ ಭಾಗವಾಗಿದ್ದು, ದಯೆಯೆಂಬ ಸಾಮಾನ್ಯ ದಾರದ ಮೂಲಕ ಮಾನವೀಯತೆಯನ್ನು ಒಂದುಗೂಡಿಸಲು ಕೆಲಸ ಮಾಡುತ್ತಿವೆ.

ವಿಶ್ವ ದಯೆ ದಿನದ ಮಹತ್ವವೇನು?

  • ವಿಶ್ವ ದಯೆಯ ದಿನವು ದಯೆಯ ಸಕಾರಾತ್ಮಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವುದರಿಂದ ಅದು ಹೆಚ್ಚಿನ ಮಹತ್ವವನ್ನು ಹೊಂದಿದೆ.
  • ನಕಾರಾತ್ಮಕತೆ ಮತ್ತು ಸಂಘರ್ಷಗಳಿಂದ ತುಂಬಿರುವ ಜಗತ್ತಿನಲ್ಲಿ, ದಯೆಗೆ ಮೀಸಲಾದ ದಿನವು ಜನರು, ಸಮಾಜ ಮತ್ತು ಸಮುದಾಯವು ಒಳ್ಳೆಯ ಕೆಲಸಗಳನ್ನು ಮಾಡಲು ಮತ್ತು ಎಲ್ಲರಿಗೂ ದಯೆ ತೋರಲು ಪ್ರೋತ್ಸಾಹಿಸುತ್ತದೆ.
  • ದಯೆ ಎಂದರೆ ಕೇವಲ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಲ್ಲ, ಯಾರೊಂದಿಗಾದರೂ ನಗುವುದು ಅಥವಾ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಆಗಿದೆ. ದಯೆ ಇತರರಿಗೆ ಪ್ರಯೋಜನವನ್ನು ನೀಡುವುದಲ್ಲದೆ ನಮ್ಮ ಸಂತೋಷ ಮತ್ತು ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ತೋರಿಸುತ್ತದೆ.

ಇದನ್ನೂ ಓದಿ: ಶಿಕ್ಷಣವು ಜೀವನವನ್ನು ಬದಲಾಯಿಸುವ ಶಕ್ತಿಶಾಲಿ ಅಸ್ತ್ರ

ದಯೆಯ ಸಣ್ಣ ಉಪಕ್ರಮಗಳು:

  • ವಯಸ್ಸಾದ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುವುದು
  • ಅಗತ್ಯವಿರುವವರಿಗೆ ಆಹಾರ ಅಥವಾ ಬಟ್ಟೆ ನೀಡುವುದು.
  • ಗಿಡಗಳನ್ನು ನೆಡುವುದು
  • ದುಃಖಿತ ವ್ಯಕ್ತಿಗೆ ಮಾನಸಿಕ ಬೆಂಬಲ, ಸ್ಥೈರ್ಯ ನೀಡುವುದು
  • ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ನಿಮ್ಮ ಸುತ್ತಮುತ್ತ ಸಕಾರಾತ್ಮಕ ಭಾವನೆಗಳನ್ನು ಹರಡುವುದು

ನಿಮ್ಮ ಈ ಸಣ್ಣ ಹೆಜ್ಜೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ