Rudra Veena from Vehicle Scrap: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ ವೀಣೆ

ಮಧ್ಯಪ್ರದೇಶದ ಕಲಾವಿದರ ಗುಂಪೊಂದು ವಾಹನದ ಬಿಡಿಭಾಗಗಳನ್ನು(Vehicle Scrap) ಬಳಸಿ ವಿಶ್ವದ ಅತಿದೊಡ್ಡ ರುದ್ರ ವೀಣೆಯನ್ನು ಆರು ತಿಂಗಳಲ್ಲಿ ನಿರ್ಮಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾವಿದರು ಈ ಬೃಹತ್ ವೀಣೆ ತಯಾರಿ ಮಾಡಿದ್ದಾರೆ.

Rudra Veena from Vehicle Scrap: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ ವೀಣೆ
ವಿಶ್ವದ ಅತಿ ದೊಡ್ಡ ರುದ್ರ ವೀಣೆImage Credit source: ANI
Follow us
| Updated By: ಅಕ್ಷತಾ ವರ್ಕಾಡಿ

Updated on:Dec 17, 2022 | 2:36 PM

ಭೋಪಾಲ್: ಮಧ್ಯಪ್ರದೇಶದ ಕಲಾವಿದರ ಗುಂಪೊಂದು ವಾಹನದ ಬಿಡಿಭಾಗಗಳನ್ನು(Vehicle Scrap) ಬಳಸಿ ವಿಶ್ವದ ಅತಿದೊಡ್ಡ ರುದ್ರ ವೀಣೆಯನ್ನು ಆರು ತಿಂಗಳಲ್ಲಿ ನಿರ್ಮಿಸಿದ್ದಾರೆ. ಭಾರತೀಯ ಸಂಸ್ಕೃತಿ(Indian Culture)ಯ ಬಗ್ಗೆ ಹೊಸ ಪೀಳಿಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ  ಈ ಬೃಹತ್ ವೀಣೆಯನ್ನು ತಯಾರಿಸಲಾಗಿದೆ ಎಂದು ತಂಡದ ಸದಸ್ಯ ಪವನ್ ದೇಶಪಾಂಡೆ  ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

ಈ ವೀಣೆಯು 28 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರವಿದೆ. ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಆರು ತಿಂಗಳಲ್ಲಿ ತಯಾರಿಸಲಾಗಿದೆ. ಚೈನ್, ಗೇರ್, ಬಾಲ್-ಬೇರಿಂಗ್, ವೈರ್ ಮುಂತಾದ ವಾಹನಗಳ ಬಿಡಿ ಭಾಗಳಿಂದ ಸುಮಾರು 28 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರದ ವಿಶ್ವದ ಅತಿ ದೊಡ್ಡ ರುದ್ರ ವೀಣೆಯನ್ನು ತಯಾರಿಸಲಾಗಿದೆ.

ರುದ್ರ ವೀಣೆಯು ಚೈನ್, ಗೇರ್, ಬಾಲ್-ಬೇರಿಂಗ್, ವೈರ್ ಮುಂತಾದ ವಾಹನಗಳ ಅವಶೇಷಗಳಿಂದ ಮಾಡಲ್ಪಟ್ಟಿದೆ. ಇದು ವಿಶ್ವದ ಅತಿದೊಡ್ಡ ರುದ್ರ ವೀಣೆ. ಒಟ್ಟು 15 ಕಲಾವಿದರು ಶ್ರಮ ಇದರಲ್ಲಿದೆ ಎಂದು ವೀಣೆ ತಯಾರಿಸಿದ ತಂಡ ಹೇಳಿಕೊಂಡಿದೆ. ನಮ್ಮ ಯುವ ಪೀಳಿಗೆಯು ಭಾರತೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಥೀಮ್‌ ನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ

ಜನರು ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದಾದ ಸ್ಥಳದಲ್ಲಿ ಇದನ್ನು ಇರಿಸಲಾಗುವುದು.  ಜೊತೆಗೆ ಇದರಲ್ಲಿ ಮ್ಯೂಸಿಕಲ್ ಸಿಸ್ಟಮ್ ಮತ್ತು ಲೈಟ್‌ಗಳನ್ನು ಅಳವಡಿಸುತ್ತೇವೆ. ಇದು ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಜೊತೆಗೆ ಯುವಕರು ಇಂತಹ ಕೆಲಸಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು  ದೇಶಪಾಂಡೆ ತಿಳಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:11 pm, Sat, 17 December 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು