AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಮುತ್ತು ಎರಡು ರೆಕ್ಕೆಗಳಾಗಿ ಬದಲಾಗಿದ್ದವು, ತುಟಿಗಳು ಕಣ್ಣಿಂದ ಮರೆಯಾದವು

Indraneela Story by A. Vennila : ಜೀವ ತುಂಬಿಕೊಂಡು ದುಂಡಗೆ ತಿರುಗುವ ಭೂಮಿಯ ಚೆಂಡಿನ ನಾಲಿಗೆಯನ್ನು ನಾನು ಸವಿಯುತ್ತಿದ್ದೆ. ದೇಹದ ಕದಗಳು ತೆರೆಯುತ್ತಲೇ, ಪ್ರಪಂಚದ ಗರ್ಭಗುಡಿಯೊಳಗೆ ನುಸುಳಿದೆ.

Literature: ನೆರೆನಾಡ ನುಡಿಯೊಳಗಾಡಿ; ಮುತ್ತು ಎರಡು ರೆಕ್ಕೆಗಳಾಗಿ ಬದಲಾಗಿದ್ದವು, ತುಟಿಗಳು ಕಣ್ಣಿಂದ ಮರೆಯಾದವು
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on:Mar 18, 2022 | 4:34 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನಿಧಿ ತುಂಬಿರುವ ಗುಡಿಯ ಬೀಗದ ಕೀಲಿ ತುಟಿಯೊಳಗೆಯೇ ಇದೆ. ರಸ ಒಸರುವ ಹಣ್ಣಿನ ರುಚಿಯನ್ನದು ಸವಿಯಿತು. ಕಣ್ಣನ ಬಿಸಿಯುಸಿರನ್ನು ನನ್ನ ಉಸಿರು ಅನುಭವಿಸಿತು. ಅವನ ಉಸಿರನ್ನು ಕ್ರಮವಾಗಿಸಲು ನನ್ನ ಉಸಿರಿನ ಗಾಳಿಯನ್ನು ಅವನೊಳಗೆ ಕಳುಹಿಸಿದೆ. ಮುಚ್ಚಿ ತೆರೆದ ಕಣ್ಣುಗಳಲ್ಲಿ ಕೆಂಪು ನೀಲಿಯೂ ಬೆರೆತ ತುಣುಕುಗಳು ತೇಲಿದವು. ಮುತ್ತಿನ ತೇವದಲ್ಲಿ ಹೊಸ ಜೀವ ಮೊಳೆಯಿತು. ಕಾಡು, ಮೇಡು, ಕಡಲು, ಜಲಪಾತ ಎಲ್ಲವೂ ಕಾಲ ಕೆಳಗೆ ಜಾರಿದವು. ಆಕಾಶದಲ್ಲಿ ಹಾರಾಡಿದೆ. ಮುತ್ತು ಎರಡು ರೆಕ್ಕೆಗಳಾಗಿ ಬದಲಾಗಿದ್ದವು. ತುಟಿಗಳು ಕಣ್ಣಿಂದ ಮರೆಯಾದವು. ಜೀವ ತುಂಬಿಕೊಂಡು ದುಂಡಗೆ ತಿರುಗುವ ಭೂಮಿಯ ಚೆಂಡಿನ ನಾಲಿಗೆಯನ್ನು ನಾನು ಸವಿಯುತ್ತಿದ್ದೆ. ದೇಹದ ಕದಗಳು ತೆರೆಯುತ್ತಲೇ, ಪ್ರಪಂಚದ ಗರ್ಭಗುಡಿಯೊಳಗೆ ನುಸುಳಿದೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 18)

ಕಾಡು ಹೂಗಳ ಪರಿಮಳ ಬಂದಿತು. ಭೂಮಿಯಿಂದ ಅಗೆದು ತೆಗೆದ ಹಸಿಗೆಣಸುಗಳ ತೇವದ ಮಣ್ಣಿನ ವಾಸನೆ. ಕರೆದ ಹಾಲಿನ ಉಕ್ಕುವ ನೊರೆ. ಕಡಲ ನೀರಿನ ಉಪ್ಪು. ಚಿಲುಮೆ ನೀರಿನ ಸಿಹಿ. ಕೆಮ್ಮಣ್ಣು ಗುಡ್ಡೆಯ ಒಗರು. ಅಗಲ ತೆರೆದ ಕಣ್ಣನ ಬಾಯೊಳಗೆ ಸುತ್ತುವ ಪ್ರಪಂಚ. ಒಂದನ್ನೊಂದು ಕಚ್ಚಿಕೊಂಡು ಬಿಗಿಯಾಗಿ ಮುಚ್ಚಿಕೊಂಡ ನಾಲ್ಕು ತುಟಿಗಳೊಳಗೆ ತಿರುಗಿತು. ಪರ್ವಗಳನ್ನು ದಾಟಿದ ಪುಳಕ.

‘‘ಬಿಡೇ, ಉಸಿರು ಕಟ್ಟುತ್ತಿದೆ” ಎದೆ ಮೇಲೆ ಕೈಯಿಟ್ಟು ಮುಂದಕ್ಕೆ ನೂಕಿದ.

ಕಣ್ಣನ ತುಟಿಗಳನ್ನು ಬಿಡಲಾಗದೆ ಹಿಂದಕ್ಕೆ ಸರಿದೆ. ದೇಹ ತುಟಿಯಲ್ಲಿ ಕೇಂದ್ರಿತವಾಗಿತ್ತು. ಸಣ್ಣ ಚಲನೆಯೂ ದೇಹದಲ್ಲಿರಲಿಲ್ಲ.

“ಮ್ ಮ್ ಮ್. ತಿಕ್ಕಲು. ಏನಾಯ್ತು, ಬಿಡೇ” ವೇಗವಾಗಿ ಮುಖದ ಮೇಲೆ ಕೈಯಿಟ್ಟು ಅಗಲಿಸಿದ. ಮೊಲೆ ಹಾಲು ಕುಡಿಯುವ ಮಗುವಿನಿಂದ ಮೊಲೆ ತೊಟ್ಟನ್ನು ಬಿಡಿಸಿದರೆ, ಅರಚುವಂತೆ ಅಳು ಬಂದಿತು.

“ಕಣ್ಣ, ಪ್ಲೀಸ್.” ಮತ್ತೆ ತುಟಿಯನ್ನು ಕಚ್ಚಲು ಹೋದೆ. ಬಲವಾದ ಕೈಗಳಿಂದ ಹಿಂದಕ್ಕೆ ಎಳೆದು, ತೋಳಿನಲ್ಲಿ ನನ್ನನ್ನು ಅಡಗಿಸಿಕೊಂಡು, ಮಲಗುವ ಕೋಣೆಯ ಕಡೆಗೆ ನಡೆದ. ಚೀಲ ಅದೇ ಜಾಗದಲ್ಲಿ ಕೆಳಗೆ ಬಿದ್ದಿತ್ತು.

ಆಂಗಿಯನ್ನು ಕಳಚಲಿಲ್ಲ. ಪ್ಯಾಂಟನ್ನು ಮಾತ್ರ ಆತುರವಾಗಿ ಬಿಚ್ಚಿದ. ನನ್ನ ಬಟ್ಟೆಗಳನ್ನು ಕಣ್ಣ ಕಳಚುತ್ತಾನೆ ಎಂದು ಕಾದಿದ್ದೆ. ದೇಹದ ಪ್ರತಿ ಅಂಗಗಳೂ ಹೇಗೆ ಬದಲಾಗಿದೆ ಎಂದು ತೋರಿಸಲು ಬಯಸಿದೆ.

ಭಾಗ 16 : Literature: ನೆರೆನಾಡ ನುಡಿಯೊಳಗಾಡಿ; ಕಣ್ಣ, ನೀನು ಯಾವ ಬಾಗಿಲ ಮೂಲಕ ಒಳಗೆ ಬರುತ್ತೀಯಾ?

ಹೂವಲ್ಲಿ ತಂಗಿರುವ ಹಿಮದ ಹನಿಯನ್ನು ಸವಿಯುವುದು, ಹಣ್ಣಾದ ಹಣ್ಣಿನ ರಸವನ್ನು ಹೀರುವುದು, ನೀರಿನ ಆಳಕ್ಕೆ ಇಳಿದು ಸವಿನೀರನ್ನು ಕುಡಿಯುವುದು ಎಂದು ಪ್ರತಿ ಘಟ್ಟವನ್ನೂ ಅವನನ್ನು ದಾಟಿಸಬೇಕು. ಇದ್ದಕ್ಕಿದ್ದಂತೆ ನನ್ನ ಮೇಲೆ ಭಾರ ಇಳಿಯಿತು. ಕಣ್ಣ ಹರಡಿಕೊಂಡಿದ್ದ.

“ಕಣ್ಣ, ತಡಿ ತಡಿ” ಎಂದೇ. ಅಷ್ಟರಲ್ಲಿ ಅರ್ಧ ದಾಟಿದ್ದ. “ಸ್ವಲ್ಪ ತಡಿ, ಹೇಳೋದು ಕೇಳು.”

ಸೀರೆ ಸಹ ಜರುಗಿರಲಿಲ್ಲ. ಏದುರಿಸಿರು ಬಿಡುತ್ತಾ ಮೇಲೆ ಒರಗಿದ. ಕಣ್ಣನ ಬೆವರು ಅಂಟಂಟಾಗಿತ್ತು. ಬೆಟ್ಟ ಹತ್ತಲು ಪ್ರಾರಂಭವಾದ ಪಯಣ, ಪ್ರಸ್ಥಭೂಮಿಯಲ್ಲೇ ನಿಂತುಹೋಯಿತು. ಪ್ರೀತಿಯಿಂದ ಇರುವಾಗ ಕ್ಷಣವೂ ಕಾಣದ ದೇಹದ ಹೊರೆ ಈಗ ಹೆಚ್ಚಾಗಿ ಭಾರವಾಯಿತು.

ಬೆವರು ಅಡಗಿದ ಮೇಲೆ, ಟವಲಿನೊಂದಿಗೆ ಸ್ನಾನಕ್ಕೆ ಹೊರಟ.

ಯುದ್ಧಕ್ಕೆ ಕಹಳೆಯೂದಿ, ಸಿದ್ಧವಾಗಿದ್ದ ಸೈನ್ಯವನ್ನು ಚದುರಿಹೋಗಲು ಹೇಳುವಂತೆ ಮನಸ್ಸು ಕುಂದಿತು. ಅಮ್ಮನಿಗೆ ಅಭಿಷೇಕ ಮಾಡಲು ವಸ್ತುಗಳನ್ನು ಸಿದ್ಧವಾಗಿಟ್ಟು ಅಭಿಷೇಕ ಮಾಡದೆ, ಕರ್ಪೂರದ ಆರತಿ ಮಾತ್ರ ತೋರಿಸಿದಂತೆ ಶೂನ್ಯತೆ.

ಕಪ್ಪು ಪ್ರತಿಮೆಯ ದೇಹದಲ್ಲಿ ಎಣ್ಣೆಪಸೆಯ ಕಮಟು ವಾಸನೆ ಹರಡಿತು. “ಎದ್ದು, ಸರಿಯಾಗಿ ಮಲಗು” ಎಂದು ಕಣ್ಣ ಹೇಳಿ ಮುಖವನ್ನು ಒರೆಸಿಕೊಂಡು ಹೊರಗೆಹೋದ.

(ಮುಗಿಯಿತು)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

ಇದನ್ನೂ ಓದಿ : Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ

Published On - 4:28 pm, Fri, 18 March 22

‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್