AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಅನುವಾದಕ ಕೆ. ನಲ್ಲತಂಬಿ

‘ಕನ್ನಡ ಸಿನಿಮಾದ ಬಗ್ಗೆ ಹೀಗೊಂದು ಪುಸ್ತಕ ತಮಿಳಿನಲ್ಲಿ ಬಂದಿರುವುದು ಅನೇಕ ಕನ್ನಡ ಸಿನಿಮಾ ರಸಿಕರಿಗೆ ತಿಳಿದಿರಲು ಸಾಧ್ಯವಿಲ್ಲ. ಮಾಹಿತಿಪೂರಕವಾದ ಈ ಕೃತಿಯನ್ನು ಅನುವಾದಿಸುವಾಗ ನನಗೆ ಸಾಕಷ್ಟು ಆಸಕ್ತಿಕರ ವಿಷಯಗಳು ತಿಳಿಯುತ್ತಾ ಹೋದವು. ಈ ಪುಸ್ತಕ  ಶೀಘ್ರದಲ್ಲೇ ಹೊರಬರಲಿದೆ.‘ ಕೆ. ನಲ್ಲತಂಬಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಅನುವಾದಕ ಕೆ. ನಲ್ಲತಂಬಿ
ಅನುವಾದಕ, ಲೇಖಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Dec 30, 2020 | 11:01 AM

Share

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ತಮಿಳು-ಕನ್ನಡ ಅನುವಾದಕ, ಲೇಖಕ ಕೆ. ನಲ್ಲತಂಬಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ನವೀನ ಕನ್ನಡ ಸಿನೆಮಾ ತಮಿಳು  : ವಿಠ್ಠಲ್ ರಾವ್ ಕನ್ನಡಕ್ಕೆ : ಕೆ. ನಲ್ಲತಂಬಿ ಪ್ರ: ನಿಜ್ಹಲ್ ಪಬ್ಲಿಕೇಶನ್

ಈ ಪುಸ್ತಕ ಕನ್ನಡ ಸಿನಿಮಾಗಳ ಬಗ್ಗೆ (1960-70) ಬಹಳ ವಿಸ್ತಾರವಾಗಿ, ಕನ್ನಡ ನಾಟಕ ರಂಗದಿಂದ ತೊಡಗಿ ಸಿನಿಮಾದವರೆಗಿನ ಅನೇಕ ಮಾಹಿತಿಗಳನ್ನು ಕೂಲಂಕಷವಾಗಿ ಚರ್ಚಿಸುವ ಅದ್ಭುತವಾದ ಬರಹಗಳು ಇದರಲ್ಲಿವೆ. ಗುಬ್ಬಿ ವೀರಣ್ಣ, ಎಂ. ವಿ. ಸುಬ್ಬಯ್ಯ ನಾಯುಡು, ಸಿ. ಹೊನ್ನಪ್ಪ ಭಾಗವತರ್, ಹಿರಣ್ಣಯ್ಯ, ಜಮಕಂಡಿ ಕಂಪನಿ, ಸೂಳೇ ದೇಸಾಯ್ ಕಂಪನಿಗಳಿಂದ ತೊಡಗಿ ಪುಟ್ಟಣ್ಣ ಕಣಗಾಲ್, ಬಿ. ವಿ. ಕಾರಂತ, ಕಾರಂತ, ಎಂ. ಎಸ್. ಸತ್ಯು, ಪಟ್ಟಾಭಿರಾಮಿ ರೆಡ್ಡಿ, ಜಿ. ವಿ. ಅಯ್ಯರ್, ಗಿರೀಶ್ ಕಾರ್ನಾಡ್, ನಾಗ್ ಸಹೋದರರು, ಗಿರೀಶ್ ಕಾಸರವಳ್ಳಿ, ಹೀಗೆ  18 ಅಧ್ಯಾಯಗಳಾಗಿ ಕನ್ನಡ ಸಿನಿಮಾದ ಬಗ್ಗೆ ಬರೆದಿರುವ ಒಂದು ಅದ್ಭುತವಾದ ಅಧ್ಯಯನದ ಕೃತಿ. ಬಹಳ ಸರಳವಾಗಿ ಬರೆಯಲ್ಪಟ್ಟಿದೆ. ವಿಪರ್ಯಾಸವೆಂದರೆ 2011 ರಲ್ಲಿ ಕನ್ನಡ ಸಿನಿಮಾದ ಬಗ್ಗೆ ತಮಿಳಿನಲ್ಲಿ ಬಂದ ಈ  ಪುಸ್ತಕ ತಮಿಳು ಸಿನಿಮಾ ರಸಿಕರಿಗೆ  ಅಗತ್ಯವಿರಲಿಲ್ಲ. ಬಹಳ ಕಡಿಮೆಯ ಸಂಖ್ಯೆಯಲ್ಲಿ ಈವರೆಗೆ ಮಾರಾಟವಾಗಿದೆ. ಕನ್ನಡ ಸಿನಿಮಾದ ಬಗ್ಗೆ ಹೀಗೊಂದು ಪುಸ್ತಕ ತಮಿಳಿನಲ್ಲಿ ಬಂದಿರುವುದು ಅನೇಕ ಕನ್ನಡ ಸಿನಿಮಾ ರಸಿಕರಿಗೆ ತಿಳಿದಿರಲು ಸಾಧ್ಯವಿಲ್ಲ. ಮಾಹಿತಿಪೂರಕವಾದ ಈ ಕೃತಿಯನ್ನು ಅನುವಾದಿಸುವಾಗ ನನಗೆ ಸಾಕಷ್ಟು ಆಸಕ್ತಿಕರ ವಿಷಯಗಳು ತಿಳಿಯುತ್ತಾ ಹೋದವು. ಈ ಪುಸ್ತಕ  ಶೀಘ್ರದಲ್ಲೇ ಹೊರಬರಲಿದೆ.

ಕೃ: ಮಾರ್ಗಜ್ಹಿ ಉರ್ಚವಮ್ (ಧನುರ್ ಉತ್ಸವ)

ಲೇ : ಸಚಿತ್ರ ದಾಮೋದರನ್

ಪ್ರ: ಸಂಧ್ಯಾ ಪಬ್ಲಿಕೇಶನ್ 

ಧನುರ್ ಮಾಸದ ಮೂವತ್ತು ದಿನಗಳೂ ವ್ರತ ಆಚರಿಸಿ, ಆಂಡಾಳ್ ರಚಿಸಿದ ಆಯ್ದ ಮೂವತ್ತು ಬಾಸುರಗಳನ್ನು  ಹಾಡಿ ಸಂಭ್ರಮಿಸುತ್ತಾರೆ. ಹಾಗೆ ಆಚರಿಸುವ ಆ ದಿನಗಳನ್ನು ‘ಪಾವೈ ನೋಂಬು’ (ಸ್ತ್ರೀ ವ್ರತ) ಎಂದು ಕೋದೈ ಆಂಡಾಳ್ ಕರೆಯುತ್ತಾಳೆ. ಆದೇನದು ಸ್ತ್ರೀ ವ್ರತ ಇದರಲ್ಲಿ ಪುರುಷರು ಪಾಲ್ಗೊಳ್ಳುವುದಿಲ್ಲವೇ? ಎಂದು ಕೇಳಿದರೆ, ಆ ಸ್ತ್ರೀಯರು ವ್ರತ ಆಚರಿಸುವುದೇ ತನ್ನೊಂದಿಗೆ ಒಡಹುಟ್ಟಿದ ಸಹೋದರರಿಂದ ಹಿಡಿದು, ತನಗೆ ಬರುವ ಗಂಡನವರೆಗೆ ಎಲ್ಲರೂ ಸುಖವಾಗಿರಬೇಕೆಂಬ ಉದ್ದೇಶದಿಂದಲೇ.

ಈ ಮೂವತ್ತು ಬಾಸುರಗಳ ಅರ್ಥ, ಅದರ ಹಿಂದಿನ ಪೌರಾಣಿಕ ಕಥೆಗಳ ಹಿನ್ನೆಲೆ ಇವುಗಳ ಜತೆ ಜತೆಯಲ್ಲಿಯೇ ಅದಕ್ಕೆ ಒಂದು ವೈಜ್ಞಾನಿಕ, ವೈದ್ಯಕೀಯ ವಿವರಣೆಗಳನ್ನು ನೀಡುತ್ತಾ ಬರೆದಿರುವ ಮೂವತ್ತು ಅಂಕಣಗಳು. ಇದು ಬಾಸುರಗಳ ಬಗ್ಗೆಯ ಒಂದು ಹೊಸ ಬಗೆಯ ಕಣ್ಣೋಟ. ಬಹಳ ಕಾವ್ಯಾಮಯವಾಗಿ, ಸರಳವಾಗಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಬರೆದಿರುವ ಕೃತಿ. ತಮಿಳು ಸಾಹಿತ್ಯಕ್ಕೆ ಒಂದು ಒಳ್ಳೆಯ ಸೇರ್ಪಡೆ. ಇದು ಸಚಿತ್ರ ಅವರ ಚೊಚ್ಚಲು ಕೃತಿ ಎಂದು ಹೇಳಲು ಸಾಧ್ಯವೇ ಇಲ್ಲ, ಅಷ್ಟು ಸೊಗಸಾಗಿಸಿದೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ನಾ. ದಾಮೋದರ ಶೆಟ್ಟಿ; ’ರಂಗಕೈರಳಿ‘ ಮತ್ತು ’ಮಿನುಗೆಲೆ ಮಿನುಗೆಲೆ ನಕ್ಷತ್ರ‘

Published On - 1:19 pm, Tue, 29 December 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!