News 9 Plus World Exclusive: 1993 ಮುಂಬೈ ಸರಣಿ ಸ್ಫೋಟ ದಿನ ನೆನಪಿಸಿಕೊಂಡ ಎಂ.ಎನ್ ಸಿಂಗ್; ಆ ಕರಾಳ ದಿನ ಹೇಗಿತ್ತು?

ಭಾರತ ಗುಪ್ತಚರ ಇಲಾಖೆಗಾಗಲಿ, ರಕ್ಷಣಾ ಸಚಿವಾಲಯಕ್ಕಾಗಲಿ ಅಥವಾ ಮುಂಬೈ ಪೊಲೀಸರಿಗಾಗಲಿ (Mumbai Police) ಈ ಸ್ಪೋಟದ ಸಣ್ಣ ಸುಳಿವು ಇರಲಿಲ್ಲ. ಆ ಕರಾಳ ದಿನವನ್ನು ಕಕ್ಕಾಬಿಕ್ಕಿಯಾಗಿ ಎದುರಿಸಿದ್ದು ಅಂದಿನ ಮುಂಬೈ ಪೊಲೀಸ್

News 9 Plus World Exclusive: 1993 ಮುಂಬೈ ಸರಣಿ ಸ್ಫೋಟ ದಿನ ನೆನಪಿಸಿಕೊಂಡ ಎಂ.ಎನ್ ಸಿಂಗ್; ಆ ಕರಾಳ ದಿನ ಹೇಗಿತ್ತು?
M.N SinghImage Credit source: News 9
Follow us
|

Updated on:Mar 12, 2023 | 9:56 AM

1993 ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ (1993 Mumbai Bomb Blast) ಸಣ್ಣ ಮಟ್ಟದಲ್ಲಿ ನಡೆದ ಸ್ಪೋಟವಲ್ಲ. ಅಂದು ಯಾರು ಊಹಿಸದ ರೀತಿಯಲ್ಲಿ ಮುಂಬೈ (Mumbai) ನಗರದ ಹಲವು ಭಾಗಗಳಲ್ಲಿ ಬಾಂಬ್ ಸ್ಫೋಟಗೊಂಡಿತು. ಇದರಲ್ಲಿ 200 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಭಾರತ ಗುಪ್ತಚರ ಇಲಾಖೆಗಾಗಲಿ, ರಕ್ಷಣಾ ಸಚಿವಾಲಯಕ್ಕಾಗಲಿ ಅಥವಾ ಮುಂಬೈ ಪೊಲೀಸರಿಗಾಗಲಿ (Mumbai Police) ಈ ಸ್ಪೋಟದ ಸಣ್ಣ ಸುಳಿವು ಇರಲಿಲ್ಲ. ಆ ಕರಾಳ ದಿನವನ್ನು ಕಕ್ಕಾಬಿಕ್ಕಿಯಾಗಿ ಎದುರಿಸಿದ್ದು ಅಂದಿನ ಮುಂಬೈ ಪೊಲೀಸ್. News 9 ಅವರ ಜೊತೆ 1993 ಮುಂಬೈ ಬಾಂಬ್ ಬ್ಲಾಸ್ಟ್ ನಡೆದ ದಿನ ಎಷ್ಟು ಭೀಕರವಾಗಿತ್ತು ಎಂದು ಮಾಜಿ ಮುಂಬೈ ಪೊಲೀಸ್ ಕಮಿಷನರ್ ಎಂ.ಎನ್ ಸಿಂಗ್ (M.N Singh) ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

1993, ಮಾರ್ಚ್ 12 (ಶುಕ್ರವಾರ) ಮುಸ್ಲಿಮರು ನಮಾಜ್ ಮಾಡಿ ಮನೆಗೆ ತೆರಳುತ್ತಿದ್ದರು. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈನಲ್ಲಿ ಸಂಭವಿಸಿದ ಗಲಭೆಯ ಸಂದರ್ಭದಲ್ಲಿ, ಬೀದಿಗಳಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಲು ಹಿಂದೂಗಳು “ಮಹಾ ಆರತಿ” ಪ್ರಾರಂಭಿಸಿದರು. ಇದು ಎರಡು ಸಮುದಾಯಗಳ ನಡುವೆ ಕೋಮುಗಲಭೆ ಸೃಷ್ಟಿಯಾಗಲು ಕಾರಣವಾಗಿತ್ತು. ಹಾಗಾಗಿ ಅಂದು ಮುಂಬೈ ನಗರದ ಮೇಲೆ ನಾವು ನಿಗಾ ಇರಿಸಿದ್ದೆವು,

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ನಮಗೆ ಸಂದೇಶ ಬಂದಾಗ ನಾನು ನನ್ನ ಕಚೇರಿಯಲ್ಲಿದ್ದೆ. ಮಧ್ಯಾಹ್ನ ಸುಮಾರು 1:30 ಆಗಿತ್ತು. ನಾನು ಊಟಕ್ಕೆ ಹೊರಟಾಗ ಕಂಟ್ರೋಲ್ ರೂಂ ನನಗೆ ಮಾಹಿತಿ ನೀಡಿತು. ನಾನು ತಕ್ಷಣ ಹೊರಟೆ. ಬಿಎಸ್‌ಇಯಲ್ಲಿ ನಾನು ಕಂಡ ದೃಶ್ಯ ಭೀಕರವಾಗಿತ್ತು. ಸುಮಾರು 80 ಮಂದಿ ಸಾವನ್ನಪ್ಪಿದ್ದರು.

ಶೀಘ್ರದಲ್ಲೇ, ಇತರ ಕಡೆ ಬಾಂಬ್ ಸ್ಪೋಟದ ಮಾಹಿತಿಗಳು ಬರಲಾರಂಭಿಸಿದವು. ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಸ್ಫೋಟ, ಸೆಂಚುರಿ ಭವನದ ಎದುರು, ಕತ್ರಾ ಬಜಾರ್‌ನಲ್ಲಿ ಬಾಂಬ್ ಸ್ಫೋಟ, ಜವೇರಿ ಬಜಾರ್‌ನಲ್ಲಿ ಸ್ಫೋಟ, ದಾದರ್‌ನ ಸೇನಾ ಭವನದ ಬಳಿ ಕೂಡ ಸ್ಫೋಟಗಳು ಸಂಭವಿಸಿದವು. ವಿ.ಶಾಂತಾರಾಮ್ ಒಡೆತನದ ಥಿಯೇಟರ್ ಬಳಿ ಮತ್ತು ಮಾಹಿಮ್ ಫಿಶರ್ಮನ್ ಕಾಲೋನಿಯಲ್ಲಿ ಕೂಡ ಸ್ಫೋಟ ಸಂಭವಿಸಿತ್ತು.

ಪಶ್ಚಿಮ ಉಪನಗರಗಳಲ್ಲಿ, ಮೂರು 5 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಯಿತು. ವಿಮಾನ ನಿಲ್ದಾಣದಲ್ಲಿ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆಯಲಾಗಿದೆ ಎಂದು ನಮಗೆ ತಿಳಿಸಲಾಯಿತು. ಎರಡು ಗಂಟೆ 10 ನಿಮಿಷಗಳ ಅವಧಿಯಲ್ಲಿ 12 ಬಾಂಬ್ ಸ್ಫೋಟ ಸಂಭವಿಸಿವೆ. ಇಡೀ ನಗರವೇ ದಾಳಿಗೆ ಒಳಗಾದಂತೆ ಕಾಣಿಸಿತು. ಆದರೆ ಆಗ ಹಿಂದೂ-ಮುಸ್ಲಿಂ ಗಲಭೆಯನ್ನು ತಡೆಯುವುದು ನನ್ನ ಮುಖ್ಯ ಗುರಿಯಾಗಿತ್ತು. ಅದೊಂದು ಭಯಾನಕ ಸನ್ನಿವೇಶವಾಗಿತ್ತು.

ಸ್ಪಷ್ಟವಾಗಿ ಹೇಳಬೇಕೆಂದರೆ, ದಾಳಿಯ ಬಗ್ಗೆ ನಮಗೆ ಯಾವುದೇ ಗುಪ್ತಚರ ಮಾಹಿತಿ ಇರಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲ. ಇದಲ್ಲದೆ, ನಾನು ಮತ್ತು ಪೊಲೀಸ್ ಕಮಿಷನರ್ (ಎ.ಎಸ್) ಸಮ್ರಾ ಇಬ್ಬರೂ ನಗರಕ್ಕೆ ಹೊಸಬರು. ನಾವಿಬ್ಬರೂ ಸುಮಾರು ಒಂದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೆವು.

ನಾನು ಬಿಎಸ್‌ಇಗೆ ಭೇಟಿ ನೀಡಿದ ನಂತರ, ನಾನು ಏರ್ ಇಂಡಿಯಾ ಕಟ್ಟಡಕ್ಕೆ ಹೋದೆ, ಅಲ್ಲಿ 20 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 80 ಜನರು ಗಾಯಗೊಂಡ ಸ್ಥಿತಿಯಲ್ಲಿದ್ದರು. ಇಲ್ಲಿಯೇ ನಾನು ಇತರ ಸ್ಫೋಟದ ಸ್ಥಳಗಳಲ್ಲಿ ಒಂದಾದ ಸೆಂಚುರಿ ಭವನದ ಸಮೀಪವಿರುವ ಸೀಮೆನ್ಸ್ ಕಟ್ಟಡದಲ್ಲಿ ಪತ್ತೆಯಾದ ವಾಹನದ ಕುರಿತು ಸಂದೇಶವನ್ನು ಸ್ವೀಕರಿಸಿದೆ. ಅಲ್ಲಿಗೆ ಹೋಗಿ ನೋಡಿದಾಗ ಕಾರಿನಲ್ಲಿ ಆಯುಧಗಳು ಸಿಕ್ಕವು. 1993 ರ ಮುಂಬೈ ಸ್ಫೋಟದ ದೊಡ್ಡ ತನಿಖೆ ಹೇಗೆ ಪ್ರಾರಂಭವಾಯಿತು.

ನಾವು ವಾಹನವನ್ನು ಕುಖ್ಯಾತ ಕಳ್ಳಸಾಗಾಣಿಕೆದಾರ ಟೈಗರ್ ಮೆಮನ್ ಪತ್ತೆ ಮಾಡಿದೆವು. ಮೆಮನ್ ಮಾಹಿಮ್‌, ಅಲ್-ಹುಸೇನಿ ಕಟ್ಟಡದಲ್ಲಿ ವಾಸಿಸುತ್ತಿದ್ದ. ಈತನ ಪೂರ್ಣ ಹೆಸರು ಮುಷ್ತಾಕ್ ಇಬ್ರಾಹಿಂ ಮೆಮನ್. ಆತನ ವಿರುದ್ಧ ಬಂಧನದ ಆದೇಶ ಇತ್ತು. ಮಾರ್ಚ್ 12, 1993 ಸಂಜೆಯ ಹೊತ್ತಿಗೆ ನಮಗೆ ಇಷ್ಟೆಲ್ಲ ಮಾಹಿತಿ ಸಿಕ್ಕಿತ್ತು. ನಾವು ತಕ್ಷಣ ಅಲ್-ಹುಸೇನಿ ಕಟ್ಟಡಕ್ಕೆ ಹೋದೆವು. ಮನೆಗೆ ಬೀಗ ಹಾಕಲಾಗಿತ್ತು. ನೆರೆಹೊರೆಯವರು “ಅವರು ದುಬೈಗೆ ಹೋಗಿದ್ದಾರೆ” ಎಂದು ನಮಗೆ ಹೇಳಿದರು. ಆಗ ನಮಗೆ ಅರಿವಾಯಿತು ಇದು ಬಾಂಬೆ ಭೂಗತ ಜಗತ್ತಿನ ಕೆಲಸ; ಈ ಸ್ಪೋಟಕ್ಕೂ ದಾವೂದ್ ಇಬ್ರಾಹಿಂ-ಟೈಗರ್ ಮೆಮನ್ ಲಿಂಕ್ ಇದೆ ಎಂಬುದು ನಮಗೆ ತಿಳಿಯಿತು.

ರಾಯಗಢದ ಶ್ರೀವರ್ಧನ್ ತಾಲೂಕಿನ ಶೇಖಾಡಿ ಎಂಬಲ್ಲಿ ಶಸ್ತ್ರಾಸ್ತ್ರಗಳ ಲ್ಯಾಂಡಿಂಗ್ ನಡೆದಿದೆ ಎಂದು ನಮ್ಮ ತನಿಖೆಗಳು ತೋರಿಸಿದ್ದವು. ರಾಯಗಢದ ದಿಘಿ ಎಂಬಲ್ಲಿಯೂ ಈ ಭಯೋತ್ಪಾದಕರು ಓಡಾಡಿದ್ದರು. ಇಬ್ಬರೂ ಸ್ಪೀಡ್ ಬೋಟ್ ಮೂಲಕ ಬಂದವರು. ಆದರೆ ಕರಾಚಿಯಿಂದ ಸ್ಪೀಡ್‌ಬೋಟ್‌ ಸಾಗಲು ಸಾಧ್ಯವಿರಲಿಲ್ಲ, ಹಾಗಾಗಿ ಅವರು ಮೊದಲೇ ಹಡಗಿನಲ್ಲಿ ಬಂದಿರಬೇಕು.

ದಾವೂದ್ ಮತ್ತು ಗ್ಯಾಂಗ್ ಪಾಕಿಸ್ತಾನದಲ್ಲಿ ತರಬೇತಿ ಪಡೆದವರು ಎಂದು ನಾವು ಬಂಧಿಸಿದ ಜನರಿಂದ ತಿಳಿದುಕೊಂಡೆವು. ಅವರು ಮುಂಬೈನಿಂದ ದುಬೈಗೆ ಹೋಗಿ, ಅಲ್ಲಿಂದ ಇಸ್ಲಾಮಾಬಾದ್ಗೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಅನ್ನು ತೆಗೆದುಕೊಂಡಿದ್ದರು. ಅವರಿಗೆ ಪಾಕಿಸ್ತಾನ ಸೇನೆಯ ಜನರು ತರಬೇತಿ ನೀಡಿದರು. ತನಿಖೆಯ ನಂತರ ಸ್ಪೋಟದಲ್ಲಿ ಪಾಕಿಸ್ತಾನದ ಕೈ ಸ್ಪಷ್ಟವಾಗಿ ಗೋಚರಿಸಿತು. ಪಾಕ್ ಸೇನೆಯೇ ಇವರಿಗೆ ತರಬೇತಿ, ಆಶ್ರಯ ಮತ್ತು ಸ್ಪೋಟಕ್ಕೆ ಬೇಕಾದ ಶತ್ರಸ್ತ್ರಗಳನ್ನು ನೀಡಿತ್ತು. ಇಸ್ಲಾಮಾಬಾದ್‌ಗೆ ಬಂದಿಳಿದಾಗ ಯಾರು ಅವರನ್ನು ಪರಿಶೀಲಿಸಲಿಲ್ಲ ಎಂದು ಬಂಧಿತರು ನಮಗೆ ತಿಳಿಸಿದರು. ISI ಜೊತೆ ನಂಟು ಹೊಂದಿದ್ದಾರೆ ನಿಮಗೆ ಪಾಸ್‌ಪೋರ್ಟ್ ಅಗತ್ಯವಿರುವುದಿಲ್ಲ.

ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಎರಡು ಹಂತಗಳಲ್ಲಿ ನಡೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಒಂದು ಜನವರಿಯಲ್ಲಿ ಮೊಹಮ್ಮದ್ ದೊಸ್ಸಾ ಭಾರತಕ್ಕೆ ತಂದರೆ ಇನ್ನೊಂದು ಫೆಬ್ರವರಿಯಲ್ಲಿ ಟೈಗರ್ ಮೆಮನ್ ಭಾರತದೊಳಗೆ ತರಲು ಸಹಾಯ ಮಾಡಿದ್ದ. ಜನವರಿ 9 ರಂದು, ಶಸ್ತ್ರಾಸ್ತ್ರಗಳು ಮಹಾರಾಷ್ಟ್ರದ ದಿಘಿಯಲ್ಲಿ ಲ್ಯಾಂಡಿಂಗ್ ಆಗಿ, ಜನವರಿ 15 ರಂದು ಆಯುಧಗಳನ್ನು ನಟ ಸಂಜಯ್ ದತ್ ಬಳಿಗೆ ಕೊಂಡೊಯ್ಯಲಾಯಿತು. ಅವರು ಆಯುಧಗಳನ್ನು ಹೊತ್ತ ಜನರಿಗೆ “ಕಲ್ ಆನಾ” (ನಾಳೆ ಬಾ) ಎಂದು ಹೇಳಿದರು.

ಜನವರಿ 16 ರಂದು ಅವರು ಶಸ್ತ್ರಾಸ್ತ್ರಗಳೊಂದಿಗೆ ಹಿಂತಿರುಗಿದರು. ಅದೃಷ್ಟವಶಾತ್, ಆ ವೇಳೆಗಾಗಲೇ ಗಲಭೆಗಳು ನಿಂತಿದ್ದವು ಮತ್ತು ಆಯುಧಗಳನ್ನು ಬಳಸಲಾಗಲಿಲ್ಲ. ಅಂದು ಮುಂಬೈ ನಗರದಲ್ಲಿ ಮತ್ತು ಭಾರತದ ಇತರೆಡೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ವಿತರಿಸಲಾಯಿತು.

ಎರಡನೇ ಹಂತವು ಒಂದು ತಿಂಗಳ ನಂತರ ನಡೆದಿದೆ. ಟೈಗರ್ ಮೆಮನ್ ಫೆಬ್ರವರಿ 3 ರಂದು ಕಳ್ಳಸಾಗಣೆ ಮಾಡಲು ಮೊದಲ ಶಸ್ತ್ರಾಸ್ತ್ರಗಳನ್ನು ಆಯೋಜಿಸಿದ್ದ. ಎರಡನೇ ಲಾಟ್ ಫೆಬ್ರವರಿ 7 ಮತ್ತು 8 ರಂದು ಅಕ್ರಮವಾಗಿ ಭಾರತಕ್ಕೆ ಟೈಗರ್ ಮೆಮನ್ ಸಾಗಿಸುದ್ದ. ಮಾರ್ಚ್ 12 ರ ಸ್ಫೋಟದಲ್ಲಿ ಬಳಸಲಾದ ಆರ್‌ಡಿಎಕ್ಸ್ ಅನ್ನು ಟೈಗರ್ ಮೆಮನ್ ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾನೆ. ಟೈಗರ್ ಮೆಮೊನ್, ದಾವೂದ್ ಇಬ್ರಾಹಿಂ ಮತ್ತು ಇತರರು ದಾಳಿಯ ಹೊಣೆ ಹೊತ್ತಿರುವುದು ನಮಗೆ ಆಗ ಸ್ಪಷ್ಟವಾಗಿತ್ತು.

ದಾಳಿಯಲ್ಲಿ ಒಟ್ಟು 253 ಜನರು ಸಾವನ್ನಪ್ಪಿದರು ಮತ್ತು 713 ಜನರು ಗಾಯಗೊಂಡರು. ಮುಂಬೈ ಪೊಲೀಸರು ನಾಲ್ಕು ಟನ್ ಆರ್‌ಡಿಎಕ್ಸ್ ಮತ್ತು ಸುಮಾರು 60 ಅಥವಾ ಅದಕ್ಕಿಂತ ಹೆಚ್ಚು ಎಕೆ ರೈಫಲ್‌ಗಳು, ಅನೇಕ 9 ಎಂಎಂ ಪಿಸ್ತೂಲ್‌ಗಳು ಮತ್ತು ಸುಮಾರು 5,600 ಹ್ಯಾಂಡ್ ಗ್ರೆನೇಡ್‌ಗಳು ಮತ್ತು 1,100 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಡೀ ಪಶ್ಚಿಮ ಸಮುದ್ರ ತೀರವನ್ನು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗಾಗಿ ಬಳಸಲಾಗುತ್ತಿತ್ತು. ಗ್ಯಾಂಗ್ ಹಲವಾರು ಬಾರಿ ಬಾಂಬೆ ವಿಮಾನ ನಿಲ್ದಾಣದಕ್ಕೆ ಬಂದು ಹೋಗಿ ಮಾಡಿದ್ದರು. ಆದರೆ ಈ ಬಗ್ಗೆ ನಮಗೆ ಮೊದಲೇ ಮಾಹಿತಿ ಇರಲಿಲ್ಲ.

ಆದರೆ ಇಷ್ಟು ದೊಡ್ಡ ದಾಳಿಯ ನಂತರವೂ ನಾವು ಪಾಠ ಕಲಿಯಲಿಲ್ಲ. ಈ ಲೋಪದೋಷಗಳನ್ನು ಪರಿಶೀಲಿಸಲು ಸರಕಾರ ಕೂಡಲೇ ಸಮಿತಿಯನ್ನು ನೇಮಿಸಬೇಕಿತ್ತು. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಅವರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ದುರದೃಷ್ಟವಶಾತ್ ಅದು ಆಗಲಿಲ್ಲ. ಇದರ ಪರಿಣಾಮ 2008ರಲ್ಲಿ ಮತ್ತೆ 26/11 ಬಾಂಬ್ ಸ್ಫೋಟ, 2008ರಲ್ಲಿ ಸಮುದ್ರ ಮಾರ್ಗವಾಗಿ ಭಾರತಕ್ಕೆ ಬಂದರು.

ಇದನ್ನೂ ಓದಿ: 1993 ಸರಣಿ ಸ್ಫೋಟ: ಭಾರತಕ್ಕೆ ISI ಸ್ಫೋಟಕಗಳನ್ನು ತಂದಿದ್ದು ಹೇಗೆ?

2008 ರಲ್ಲಿ ಬುದ್ದಿವಂತಿಕೆ ಇದ್ದರೂ ನಾವು ಸುಮ್ಮನಿದ್ದೆವು. ಅವರು ಸಂಜೆ ಬಂದರು… ಕೊಲಾಬಾ ಮೀನುಗಾರರ ಕಾಲೋನಿಯಲ್ಲಿ ಇಳಿದರು ಮತ್ತು ತುಂಬಾ ಆರಾಮವಾಗಿ ನಗರಕ್ಕೆ ಕಾಲಿಟ್ಟರು. ಅವರು ಟ್ಯಾಕ್ಸಿ ತೆಗೆದುಕೊಂಡು ತಾಜ್ ಹೋಟೆಲ್‌ಗೆ ನಡೆದರು. ನಾವು ಎಚ್ಚರದಿಂದಿರಲಿಲ್ಲ.

ನಂತರ, ನ್ಯಾಯಮೂರ್ತಿ ಶ್ರೀಕೃಷ್ಣ ಆಯೋಗದ ವಿಚಾರಣೆಯನ್ನು ಸ್ಥಾಪಿಸಿದಾಗ, ಅದು ಕೇವಲ ಕೋಮುಗಲಭೆಗಳ ಬಗ್ಗೆ ಗಮನ ಹರಿಸಿತು. 1996 ರಲ್ಲಿ ಶಿವಸೇನಾ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಆಯೋಗವನ್ನು ರದ್ದುಗೊಳಿಸಿದರು, ಆದರೆ ಆ ಸಮಯದಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯೊಂದಿಗೆ ಆಯೋಗವನ್ನು ಮತ್ತೆ ಪುನರ್ರಚಿಸಲಾಯಿತು. ನಂತರವೇ ಸರಣಿ ಸ್ಫೋಟಗಳನ್ನು ವಿಚಾರಣೆಯ ವ್ಯಾಪ್ತಿಗೆ ಸೇರಿಸಲಾಯಿತು. ಆದರೆ, ಮೂಲತಃ ಇದು ಕೋಮುಗಲಭೆಗಳ ಬಗ್ಗೆ ಮಾತ್ರ ವಿಚಾರಣೆಯಾಗಿತ್ತು. ಹಾಗಾಗಿ ಭದ್ರತಾ ಅಂಶವನ್ನು ಗಮನಿಸಿಲ್ಲ. ಆದರೆ ಈ ಸ್ಫೋಟಗಳು ಬಾಂಬೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಗಲಭೆಯ ವಿಸ್ತರಣೆ ಎಂದು ಆಯೋಗ ಹೇಳಿದೆ. ಅಂಡರ್‌ವರ್ಲ್ಡ್‌ನಲ್ಲಿರುವ ಮುಸ್ಲಿಂ ಘಟಕಗಳು ದಾಳಿಗಳನ್ನು ನಡೆಸಿದ್ದವು, ಮುಂಬೈ ಸ್ಪೋಟಕ್ಕೆ ಬಾಂಬೆಯ ಎಲ್ಲ ಮುಸ್ಲಿಮರು ಕಾರಣರಲ್ಲ.

ನನ್ನ ಅಧ್ಯಯನದ ಪ್ರಕಾರ 1993 ರ ಸ್ಫೋಟಗಳ ನಂತರ, 30 ಸಣ್ಣ ದಾಳಿಗಳನ್ನು ಭರತ್ ನೋಡಿದೆ. ಅವುಗಳಲ್ಲಿ 3-4 ಪ್ರಮುಖ ದಾಳಿಗಳು. ಅದೃಷ್ಟವಶಾತ್ ಅನೇಕ ದಾಳಿಗಳನ್ನು ತಡೆಯಲಾಯಿತು. ಭೂತಕಾಲವನ್ನು ನಮ್ಮ ವರ್ತಮಾನದೊಂದಿಗೆ ಹೋಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಸ್ಫೋಟದ ನಂತರ, ಭದ್ರತೆಯನ್ನು ಬಲಪಡಿಸಲು ನಾವು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ನಾನು ಹೇಳಲೇಬೇಕು, ಅದನ್ನು ನಾವು ಮಾಡಲಿಲ್ಲ. ಎಂದು ಎಂ.ಎನ್ ಸಿಂಗ್ ಪಶ್ಚಾತಾಪಪಟ್ಟರು.

Published On - 9:00 am, Sun, 12 March 23