AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jal Jeevan Mission ‘ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಯಡಿ 8.3 ಕೋಟಿ ಗ್ರಾಮೀಣ ಮನೆಗಳು ಪೈಪ್ ನೀರು ಸಂಪರ್ಕ ಹೊಂದಿವೆ’

ಮೋದಿ ಸರ್ಕಾರದ ಬೃಹತ್ ಯೋಜನೆಗಳಲ್ಲೊಂದಾದ ಜಲ್ ಜೀವನ್ ಮಿಷನ್, 2019 ರಲ್ಲಿ ಆರಂಭವಾಗಿದ್ದು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗೂ ನಲ್ಲಿ ನೀರಿನ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.

Jal Jeevan Mission ‘ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಯಡಿ 8.3 ಕೋಟಿ ಗ್ರಾಮೀಣ ಮನೆಗಳು ಪೈಪ್ ನೀರು ಸಂಪರ್ಕ ಹೊಂದಿವೆ’
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 12, 2021 | 11:39 AM

Share

ದೆಹಲಿ: ಸರಿಸುಮಾರ 8.3 ಕೋಟಿ ಗ್ರಾಮೀಣ ಕುಟುಂಬಗಳು,ಅಥವಾ ದೇಶದ 19.2 ಕೋಟಿ ಗ್ರಾಮೀಣ ಕುಟುಂಬಗಳ ಶೇ 43ರಷ್ಟು ಕುಟುಂಬಗಳು, ಈಗ ಪ್ರಮುಖ ಜಲ್ ಜೀವನ್ ಮಿಷನ್ (Jal Jeevan Mission) ಅಡಿಯಲ್ಲಿ ಕುಡಿಯುವ ಪೈಪ್ ನೀರಿನ  ಸಂಪರ್ಕವನ್ನು ಹೊಂದಿವೆ. ಆದರೆ ಕಳಪೆ ಆರೋಗ್ಯ ಫಲಿತಾಂಶಗಳನ್ನು ಹೊಂದಿರುವ ಕೆಲವು ದೊಡ್ಡ ರಾಜ್ಯಗಳು ವ್ಯಾಪ್ತಿಯನ್ನು ವಿಸ್ತರಿಸಲು ನಿಧಾನವಾಗಿವೆ ಎಂದು ಅಧಿಕೃತ ಡೇಟಾ ಹೇಳಿದೆ. ಮೋದಿ ಸರ್ಕಾರದ ಬೃಹತ್ ಯೋಜನೆಗಳಲ್ಲೊಂದಾದ ಜಲ್ ಜೀವನ್ ಮಿಷನ್ 2019 ರಲ್ಲಿ ಆರಂಭವಾಗಿದ್ದು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗೂ ನಲ್ಲಿ ನೀರಿನ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ವಿಶ್ವಸಂಸ್ಥೆಯ 17 ಸಮರ್ಥನೀಯ ಅಭಿವೃದ್ಧಿ ಗುರಿಗಳು ಅಥವಾ ಎಸ್‌ಡಿಜಿಗಳಲ್ಲಿ ಶುದ್ಧ ನೀರಿನ ಲಭ್ಯತೆಯೂ ಒಂದಾಗಿದೆ. ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ ಶೇ 100 ವ್ಯಾಪ್ತಿಯೊಂದಿಗೆ ಅಗ್ರಸ್ಥಾನದಲ್ಲಿವೆ ಎಂದು ಡೇಟಾ ತೋರಿಸುತ್ತದೆ. ಅವುಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಾಗರ್ ಹವೇಲಿ, ಗೋವಾ, ತೆಲಂಗಾಣ, ಪುದುಚೇರಿ ಮತ್ತು ಹರ್ಯಾಣ. ನಿಗದಿಗಿಂತ ಮುಂಚಿತವಾಗಿ ಗುರಿಯನ್ನು ಸಾಧಿಸಿದ ಇತ್ತೀಚಿನ ರಾಜ್ಯವಾಗಿದೆ ಹರ್ಯಾಣ.

ಮಿಷನ್‌ನ ಗಡುವು ಎರಡು ವರ್ಷಗಳಿಗಿಂತಲೂ ದೂರವಿದ್ದರೂ ಕೆಲವು ದೊಡ್ಡ ರಾಜ್ಯಗಳು ಒಟ್ಟು ಗ್ರಾಮೀಣ ಕುಟುಂಬಗಳ ಕಾಲು ಭಾಗಕ್ಕಿಂತ ಕಡಿಮೆ ವ್ಯಾಪ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಡೇಟಾ ತೋರಿಸುತ್ತದೆ.

ಅವುಗಳಲ್ಲಿ ಉತ್ತರ ಪ್ರದೇಶವು ತನ್ನ 2.64 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಇದುವರೆಗೆ ಶೇ12.74 ರಷ್ಟು ಮಾತ್ರ ಒಳಗೊಂಡಿದೆ. ದೇಶದ ಅತ್ಯಂತ ಒಣ ಭಾಗಗಳಲ್ಲಿ ಒಂದಾದ ಬುಂದೇಲ್‌ಖಂಡ್‌ನಲ್ಲಿ ನೀರಿನ ಸಂಪರ್ಕವನ್ನು ವಿಸ್ತರಿಸಲು ರಾಜ್ಯವು ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಯೋಜನೆಯನ್ನು ರೂಪಿಸಿದೆ.

ಒಟ್ಟಾರೆ ಮನೆಗಳ ವ್ಯಾಪ್ತಿಯಲ್ಲಿ, ಉತ್ತರ ಪ್ರದೇಶವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ನಿಧಾನವಾಗಿದೆ.

ಭಾರತದ ಒಟ್ಟಾರೆ ಆರೋಗ್ಯ ನಿಯತಾಂಕಗಳನ್ನು ಸುಧಾರಿಸಲು ಈ ರಾಜ್ಯವು ಪ್ರಮುಖವಾಗಿದ್ದು, ವಿಶೇಷವಾಗಿ ಮಕ್ಕಳಲ್ಲಿ, ಏಕೆಂದರೆ ಇದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಜಲ ಜೀವನ ಮಿಷನ್ ನಡಿಯಲ್ಲಿ ಬುಂದೇಲ್ ಖಂಡದಲ್ಲಿ 32 ಯೋಜನೆಗಳ ಅಡಿಯಲ್ಲಿ 467 ಪೈಪ್ ಕುಡಿಯುವ ನೀರಿನ ಯೋಜನೆಗಳಿವೆ. ಇವುಗಳಲ್ಲಿ 43 ಮೇಲ್ಮೈ ನೀರು ಆಧಾರಿತ ಯೋಜನೆಗಳು ಮತ್ತು 424 ಅಂತರ್ಜಲ ಆಧಾರಿತವಾಗಿವೆ.

ಇದನ್ನೂ ಓದಿ: Coronavirus cases in India ಭಾರತದಲ್ಲಿ14,313 ಹೊಸ ಕೊವಿಡ್ ಪ್ರಕರಣ ಪತ್ತೆ,181 ಮಂದಿ ಸಾವು

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!