AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ ವೈದ್ಯೆಯ ಕೊಲೆ: ಅಭಿಜಿತ್ ಮೊಂಡಲ್ ಪಾರದರ್ಶಕ ತನಿಖೆ ನಡೆಸಿದ್ದಾರೆ ಎಂದ ಹಿರಿಯ ಪೊಲೀಸ್ ಅಧಿಕಾರಿ

ನಾವು ಅಭಿಜಿತ್ ಮೊಂಡಲ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ನಾವು ಅವರ ಪತ್ನಿಯೊಂದಿಗೆ ಮಾತನಾಡಿದ್ದೇವೆ. ಪೊಲೀಸ್ ಇಲಾಖೆಯು ಕುಟುಂಬದಂತೆ ಅವರ ಬೆಂಬಲಕ್ಕೆ ನಿಂತಿದೆ ಮತ್ತು ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಅವರಿಗೆ ತಿಳಿಸಿದ್ದೇವೆ ಎಂದು ಕೋಲ್ಕತ್ತಾ ಪೊಲೀಸ್ ಹೆಚ್ಚುವರಿ ಕಮಿಷನರ್ ವಿ ಸೊಲೊಮನ್ ನೇಸಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಕೋಲ್ಕತ್ತಾ ವೈದ್ಯೆಯ ಕೊಲೆ: ಅಭಿಜಿತ್ ಮೊಂಡಲ್ ಪಾರದರ್ಶಕ ತನಿಖೆ ನಡೆಸಿದ್ದಾರೆ ಎಂದ ಹಿರಿಯ ಪೊಲೀಸ್ ಅಧಿಕಾರಿ
ಅಭಿಜಿತ್ ಮೊಂಡಲ್
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 7:47 PM

Share

ಕೋಲ್ಕತ್ತಾ ಸೆಪ್ಟೆಂಬರ್ 16: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿರುವ ಪ್ರಭಾರಿ ಅಧಿಕಾರಿ ಅಭಿಜಿತ್ ಮೊಂಡಲ್ ಅವರ ಈ ವಿಷಯದಲ್ಲಿ ‘ಪಾರದರ್ಶಕ’ ತನಿಖೆ ನಡೆಸಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರ್‌ಜಿ ಕರ್‌ನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರೊಂದಿಗೆ ಮೊಂಡಲ್ ಅವರನ್ನು ಸಿಬಿಐ ಶನಿವಾರ ಬಂಧಿಸಿದೆ. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮತ್ತು ಇತರ ಸಂಬಂಧಿತ ಅಪರಾಧಗಳಲ್ಲಿ ಮೊದಲ ತನಿಖಾ ವರದಿಯನ್ನು (ಎಫ್‌ಐಆರ್) ‘ಕನಿಷ್ಠ 14 ಗಂಟೆಗಳ ಕಾಲ’ ವಿಳಂಬಗೊಳಿಸಿದ ಆರೋಪ ಅವರ ಮೇಲಿದೆ.

“ನಾವು ಅಭಿಜಿತ್ ಮೊಂಡಲ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ನಾವು ಅವರ ಪತ್ನಿಯೊಂದಿಗೆ ಮಾತನಾಡಿದ್ದೇವೆ. ಪೊಲೀಸ್ ಇಲಾಖೆಯು ಕುಟುಂಬದಂತೆ ಅವರ ಬೆಂಬಲಕ್ಕೆ ನಿಂತಿದೆ ಮತ್ತು ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಅವರಿಗೆ ತಿಳಿಸಿದ್ದೇವೆ ಎಂದು ಕೋಲ್ಕತ್ತಾ ಪೊಲೀಸ್ ಹೆಚ್ಚುವರಿ ಕಮಿಷನರ್ ವಿ ಸೊಲೊಮನ್ ನೇಸಕುಮಾರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

“ವೈಯಕ್ತಿಕವಾಗಿ, ಅವನು ತಪ್ಪಿತಸ್ಥನಲ್ಲ ಎಂದು ನಾನು ನಂಬುತ್ತೇನೆ. ಏನೇ ಮಾಡಿದರೂ ಒಳ್ಳೆಯ ಉದ್ದೇಶವಿತ್ತು. ಅವರು ಕನಿಷ್ಠ ಸಮಯದಲ್ಲಿ ಸ್ಥಳಕ್ಕೆ ತಲುಪಿದರು, ಪಾರದರ್ಶಕ ತನಿಖೆ ನಡೆಸಿದರು ಮತ್ತು ನ್ಯಾಯದ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಿದರು, ”ಎಂದು ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.

ಮೊಂಡಲ್ ನೇತೃತ್ವದ ತಾಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಆರ್‌ಜಿ ಕರ್‌ನಲ್ಲಿ ಆಗಸ್ಟ್ 9 ರಂದು ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು.

ಭಾನುವಾರ, ನ್ಯಾಯಾಲಯವು ಘೋಷ್ ಮತ್ತು ಮೊಂಡಲ್ ಅವರನ್ನು ಸೆಪ್ಟೆಂಬರ್ 17 ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಕೋಲ್ಕತ್ತಾ ಪೊಲೀಸರನ್ನು ದೂಷಿಸಿದ ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಂಸ್ಥೆ ಆರ್‌ಜಿ ಕರ್ – ಅತ್ಯಾಚಾರ-ಕೊಲೆ ಮತ್ತು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದ ಎರಡೂ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಕೋಲ್ಕತ್ತಾ ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ತಿರುಚಲಾಗಿದೆ: ಆರ್‌ಜಿ ಕರ್ ಹಿರಿಯ ವೈದ್ಯರಿಂದ ಆರೋಪ

ಮಂಗಳವಾರ ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸ್ವಯಂ ಪ್ರೇರಿತ ವಿಚಾರಣೆಯನ್ನು ಪುನರಾರಂಭಿಸಲಿದೆ. ಪ್ರಕರಣದ ತನಿಖೆಯ ತಾಜಾ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ