ಮೋದಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ, ಸಚಿನ್​ಗೆ ಬ್ಯಾಟಿಂಗ್ ಗೊತ್ತಿಲ್ಲ ಎಂಬಂತಾಯ್ತು ನಿಮ್ಮ ವಾದ: ಕಂಗನಾ ರಣಾವತ್

Kangana Ranaut: ಎಲ್ಲದಕ್ಕೂ ರೊಚ್ಚಿಗೇಳಬೇಡಿ. ಕುಂಭ ಮೇಳ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದು ನಿಮಗೂ ಗೊತ್ತಿರಬೇಕು. ದೇಶದ ಪ್ರಧಾನಿಂತೆ ನಡೆದುಕೊಳ್ಳುವ ಮೂಲಕ ಎಲ್ಲವನ್ನೂ ಸರಿ ಮಾಡುವ ಭರವಸೆಯನ್ನು ಅವರು ನೀಡಬೇಕು ಎಂದು ಟ್ವೀಟಿಗರೊಬ್ಬರು ಕಂಗನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ಮೋದಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ, ಸಚಿನ್​ಗೆ ಬ್ಯಾಟಿಂಗ್ ಗೊತ್ತಿಲ್ಲ ಎಂಬಂತಾಯ್ತು ನಿಮ್ಮ  ವಾದ: ಕಂಗನಾ ರಣಾವತ್
ನಟಿ ಕಂಗನಾ
Follow us
|

Updated on:Apr 27, 2021 | 9:39 PM

ಮುಂಬೈ: ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು #Resign_PM_Modi ಎಂಬ ಹ್ಯಾಷ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ. ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವ ಟ್ವೀಟ್​ಗಳ ಬಗ್ಗೆ ಗುಡುಗಿದ ಬಾಲಿವುಡ್ ನಟಿ ಕಂಗನಾ ರಣಾವತ್, ಮೋದಿಜೀ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ,ಕಂಗನಾಗೆ ನಟನೆ ಬರುವುದಿಲ್ಲ, ಸಚಿನ್ ಗೆ ಬ್ಯಾಟಿಂಗ್ ಮಾಡಲು ಬರುವುದಿಲ್ಲ, ಲತಾಜೀ ಅವರಿಗೆ ಹಾಡಲು ಬರುವುದಿಲ್ಲ, ಆದರೆ ಈ ಚಿಂದಿ ಟ್ರೋಲ್ ಗಳಿಗೆ ಎಲ್ಲವೂ ತಿಳಿದಿದೆ. ಪ್ಲೀಸ್ #Resign_PM_Modi ಜೀ, ಈ ವಿಷ್ಣು ಅವತಾರದ ಟ್ರೋಲ್ ಗಳನ್ನು ಭಾರತದ ಮುಂದಿನ ಪ್ರಧಾನಿಯನ್ನಾಗಿ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಗೆ ಮೋದಿಯೇ ಕಾರಣ ಎಂದು ಆರೋಪಿಸಿ ನೆಟ್ಟಿಗರು #Resign_PM_Modi ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಕಂಗನಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕೆಲವು ನೆಟ್ಟಿಗರು ದೇಶದಲ್ಲಿ ಕೊವಿಡ್ ಪ್ರಕರಣಗಳು ಇರುವಾಗಲೇ ಕುಂಭ ಮೇಳ ಆಯೋಜಿಸಲು, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲು ಮೋದಿ ಅನುಮತಿ ನೀಡಬಾರದಿತ್ತು ಎಂದಿದ್ದಾರೆ.

ಎಲ್ಲದಕ್ಕೂ ರೊಚ್ಚಿಗೇಳಬೇಡಿ. ಕುಂಭ ಮೇಳ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದು ನಿಮಗೂ ಗೊತ್ತಿರಬೇಕು. ದೇಶದ ಪ್ರಧಾನಿಂತೆ ನಡೆದುಕೊಳ್ಳುವ ಮೂಲಕ ಎಲ್ಲವನ್ನೂ ಸರಿ ಮಾಡುವ ಭರವಸೆಯನ್ನು ಅವರು ನೀಡಬೇಕು ಎಂದು ಟ್ವೀಟಿಗರೊಬ್ಬರು ಕಂಗನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೊವೊಂದನ್ನು ಟ್ವೀಟ್  ಮಾಡಿದ ಕಂಗನಾ ಇಡೀ ಜಗತ್ತು ಭಾರತದ ಬಗ್ಗೆ ಅನುಭೂತಿ ಮತ್ತು ಗೌರವವನ್ನು ತೋರಿಸುತ್ತಿದೆ, ಅದಕ್ಕೆ ಕಾರಣ ನಮ್ಮ ನಾಯಕ ಮತ್ತು ಅವರ ಶ್ರೇಷ್ಠ ನಾಯಕತ್ವ, ಖಾತರಿಗಾಗಿ ಏನನ್ನೂ ತೆಗೆದುಕೊಳ್ಳಬೇಡಿ, ವಿಷಪೂರಿತ ಕೃತಜ್ಞತೆಯಿಲ್ಲದ ಸರೀಸೃಪವಾಗಿರ.ಇವರುಕೊವಿಡ್ ವಿರುದ್ಧ ಹೋರಾಡುವ ಬದಲು ಆ ಮಹಾನ್ ನಾಯಕತ್ವದ ವಿರುದ್ಧ ಹೋರಾಡುತ್ತಾರೆ ಮತ್ತು ಅವರನ್ನು ಕಟುವಾಗಿ ನಿಂದಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Kangana Ranaut : ನಟ ಕಾರ್ತಿಕ್ ಸಹ ಬಾಲಿವುಡ್ ನೆಪೋಟಿಸ್ಮ್ ಅನ್ನು ಎದುರಿಸುತ್ತಿದ್ದಾರೆ : ನಟಿ ಕಂಗನಾ

Published On - 9:38 pm, Tue, 27 April 21

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ