AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ: ಮಂಗನ ಕಾಟ ತಪ್ಪಿಸಲು ಬೃಹತ್ ಗಾತ್ರದ ಲಂಗೂರ್ ಕಟೌಟ್ ಸ್ಥಾಪಿಸಿದ ದೆಹಲಿ ಮುನ್ಸಿಪಲ್ ಕೌನ್ಸಿಲ್

ಸೆಪ್ಟೆಂಬರ್ 9-10 ರಂದು ಪ್ರಗತಿ ಮೈದಾನದಲ್ಲಿ G20 ಶೃಂಗಸಭೆ (G20 Summit) ನಡೆಯಲಿದ್ದು, ಸಭೆಗೆ ಆಗಮಿಸುವ ಗಣ್ಯರಿಗೆ ಮಂಗನ ಕಾಟ ಇರಬಾರದು ಎಂದು ಕೌನ್ಸಿಲ್ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇದಲ್ಲದೆ, ನಾಗರಿಕ ಸಂಸ್ಥೆಯು 40 ತರಬೇತಿ ಪಡೆದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಅವರು ಗ್ರೇ ಲಂಗೂರ್​​ಗಳ ಧ್ವನಿಯನ್ನು ಅನುಕರಿಸುತ್ತಾರೆ. G20 ಶೃಂಗಸಭೆಗೆ ಸಂಬಂಧಿಸಿದ ಹೋಟೆಲ್‌ಗಳು ಮತ್ತು ಸ್ಥಳಗಳ ಸಮೀಪದಲ್ಲಿ ಮಂಗಗಳು ಬಾರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಜಿ20 ಶೃಂಗಸಭೆ: ಮಂಗನ ಕಾಟ ತಪ್ಪಿಸಲು ಬೃಹತ್ ಗಾತ್ರದ ಲಂಗೂರ್ ಕಟೌಟ್ ಸ್ಥಾಪಿಸಿದ ದೆಹಲಿ ಮುನ್ಸಿಪಲ್ ಕೌನ್ಸಿಲ್
ಲಂಗೂರ್ ಕಟೌಟ್Image Credit source: PTI
Follow us
ರಶ್ಮಿ ಕಲ್ಲಕಟ್ಟ
|

Updated on: Aug 30, 2023 | 4:39 PM

ದೆಹಲಿ ಆಗಸ್ಟ್ 30:ಕೆಲವು ತಿಂಗಳಿನಿಂದ ದೆಹಲಿಯಲ್ಲಿ ಕೆಂಪು ಮುಖದ ರೀಸಸ್ ಮಕಾಕ್‌ಗಳು (rhesus macaques) (ಒಂದು ಪ್ರಬೇಧದ ಕೋತಿ) ಕಾಟ ಕೊಡುತ್ತಿದೆ. ಇದು ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಜನಸಂಖ್ಯೆಯಲ್ಲಿ ಭಯವನ್ನು ಸೃಷ್ಟಿಸಿದೆ. 2018 ರ ಚುನಾವಣೆಯ ಸಂದರ್ಭದಲ್ಲಿ ಕಂಡುಬಂದ ಆತಂಕಕಾರಿ ಪರಿಸ್ಥಿತಿಯು ಮರುಕಳಿಸದಂತೆ ತಡೆಯಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಸೆಂಟ್ರಲ್ ರಿಡ್ಜ್ ರಸ್ತೆಗಳ ಉದ್ದಕ್ಕೂ ಬೂದು ಬಣ್ಣದ ಲಂಗೂರ್​​ಗಳ (Langur) ದೈತ್ಯ ಗಾತ್ರದ ಕಟೌಟ್ ಇರಿಸಿದೆ. ರೀಸಸ್ ಮಂಗಗಳನ್ನು ಹೆದರಿಸಿ ಓಡಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 9-10 ರಂದು ಪ್ರಗತಿ ಮೈದಾನದಲ್ಲಿ G20 ಶೃಂಗಸಭೆ (G20 Summit) ನಡೆಯಲಿದ್ದು, ಸಭೆಗೆ ಆಗಮಿಸುವ ಗಣ್ಯರಿಗೆ ಮಂಗನ ಕಾಟ ಇರಬಾರದು ಎಂದು ಕೌನ್ಸಿಲ್ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಇದಲ್ಲದೆ, ನಾಗರಿಕ ಸಂಸ್ಥೆಯು 40 ತರಬೇತಿ ಪಡೆದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ, ಅವರು ಗ್ರೇ ಲಂಗೂರ್​​ಗಳ ಧ್ವನಿಯನ್ನು ಅನುಕರಿಸುತ್ತಾರೆ. G20 ಶೃಂಗಸಭೆಗೆ ಸಂಬಂಧಿಸಿದ ಹೋಟೆಲ್‌ಗಳು ಮತ್ತು ಸ್ಥಳಗಳ ಸಮೀಪದಲ್ಲಿ ಮಂಗಗಳು ಬಾರದಂತೆ ಕ್ರಮಕೈಗೊಳ್ಳಲಾಗಿದೆ. ಲಂಗೂರ್ ಕಟ್-ಔಟ್‌ಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಹಾಕಲಾಗಿದೆ. ಅವು ಮಂಗಗಳಮೇಲೆ ಎಷ್ಟು ನೈಜ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ನೋಡಬೇಕಾಗಿದೆ. ಲಂಗೂರ್‌ಗಳಿಗೆ ಸಮಾನವಾದ ಶಬ್ದಗಳನ್ನು ಮಾಡುವಲ್ಲಿ ಪರಿಣಿತರಾಗಿರುವ ತರಬೇತಿ ಪಡೆದ ಜನರನ್ನು ಸಹ ನಾವು ಹೊಂದಿದ್ದೇವೆ. ಕೋತಿಗಳನ್ನು ಹಿಡಿತದಲ್ಲಿಡಲು ನವದೆಹಲಿಯ ವಿವಿಧ ಸ್ಥಳಗಳಲ್ಲಿ ಅವರನ್ನು ನಿಯೋಜಿಸಲಾಗುವುದು ಎಂದು ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿರುವುದಾಗಿ ನ್ಯೂಸ್18 ವರದಿ ಮಾಡಿದೆ.

ಆದಾಗ್ಯೂ, ಕೆಲವು ತಜ್ಞರು ಈ ಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಸಂದೇಹವನ್ನು ಹೊಂದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಕೋತಿ ಸಮಸ್ಯೆಯನ್ನು ನಿಭಾಯಿಸಲು ಇನ್ನಷ್ಟು ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಜೀವವೈವಿಧ್ಯ ಉದ್ಯಾನಗಳ ಕಾರ್ಯಕ್ರಮದ ಮೇಲ್ವಿಚಾರಣೆಯ ವಿಜ್ಞಾನಿ ಫೈಯಾಜ್ ಖುದ್ಸರ್ ಅವರು ಇಂಥಾಹ ಪ್ರಯೋಗವನ್ನು ಕೈಗೊಳ್ಳಲಾಗಿದ್ದರೂ, ಚಲನೆಯು ನಿರ್ಣಾಯಕ ಅಂಶವಾಗಿದೆ. ಇದಕ್ಕೆ ಹೀಗೆ ಇಟ್ಟಿರುವ ಕಟೌಟ್​​ಗಳು ಸಹಾಯ ಮಾಡದಿರಬಹುದು. ಅವರು ಈ ಕಟೌಟ್​​​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಬೇಕು ಏಕೆಂದರೆ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕಟೌಟ್ ಬೇಕಾಗುತ್ತದೆ ಎಂದಿದ್ದಾರೆ.

ಪರಿಣಾಮಕಾರಿ ಮಧ್ಯಸ್ಥಿಕೆಗಳಿಗಾಗಿ ಬಹು ಅಂಶಗಳನ್ನು ವಿಶ್ಲೇಷಿಸುವ ಅಗತ್ಯವನ್ನು ಖುದ್ಸರ್ ಎತ್ತಿ ತೋರಿಸಿದ್ದಾರೆ. ಏಜೆನ್ಸಿಗಳು ಮಂಗಗಳ ಚಲನೆಯ ಮಾದರಿಗಳನ್ನು ಪರೀಕ್ಷಿಸಬೇಕು, ನಿರ್ದಿಷ್ಟ ಆವಾಸಸ್ಥಾನಗಳು ಅಥವಾ ನೀರಿನ ಮೂಲಗಳಿಗೆ ರಸ್ತೆಗಳನ್ನು ದಾಟುವ ಅಗತ್ಯತೆ ಮತ್ತು ಆಹಾರದ ನಿರೀಕ್ಷೆಗಳ ಕಾರಣದಿಂದಾಗಿ ಪ್ರಮುಖ ದಿನಗಳಲ್ಲಿ ಅವುಗಳ ಚಟುವಟಿಕೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: G20 ಸಭೆಯಲ್ಲಿ ಸಂಸ್ಕೃತಿ ಕಾರಿಡಾರ್, ಡಿಜಿಟಲ್ ಮ್ಯೂಸಿಯಂಗೆ ಸರ್ಕಾರ ಯೋಜನೆ

ಅದೇ ವೇಳೆ ಕೋತಿಗಳ ಸಂಖ್ಯೆ ದೆಹಲಿ ಮತ್ತು ಅದರ ನೆರೆಯ ಜಾಸ್ತಿಯಾಗಿದೆ.. ಆದಾಗ್ಯೂ, ನಿಖರ ಸಂಖ್ಯೆಯ ಅಧಿಕೃತ ಅಂದಾಜು ಲಭ್ಯವಿಲ್ಲ. ವರ್ಷಗಳಲ್ಲಿ, ಭಾರತವು ಈ ಸಮಸ್ಯೆಯನ್ನು ಎದುರಿಸಲು ವಿವಿಧ ತಂತ್ರಗಳನ್ನು ಜಾರಿಗೆ ತಂದಿದೆ. ಹಿಂದೆ, ಕೋತಿಗಳನ್ನು ಹೆದರಿಸಲು ದೊಡ್ಡ ಕಪ್ಪು ಮುಖದ ಲಂಗೂರ್‌ಗಳನ್ನು ನಿರ್ಣಾಯಕ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಮಾಡಲಾಯಿತು. ಆದಾಗ್ಯೂ, ಲಂಗೂರ್‌ಗಳನ್ನು ಸೆರೆಯಲ್ಲಿ ಇಡುವುದು ಕಾನೂನುಬಾಹಿರವಾದಾಗ ಈ ವಿಧಾನವನ್ನು ನಿಲ್ಲಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್