AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿಯೂ ಹರಡಲಿದೆ ಸ್ವದೇಶಿ ಇಂಗು ಕೃಷಿ ಪರಿಮಳ!

ದೆಹಲಿ: ದೇಶದ ಪ್ರತಿಯೊಂದು ಕುಟುಂಬದ ಅಡುಗೆ ಮನೆಯಲ್ಲಿ ಕಾಣಸಿಗುವ ಸಾಂಬಾರ್ ಪದಾರ್ಥಗಳಲ್ಲಿ ಇಂಗು ಸಹ ಒಂದು. ಯಾವುದೇ ಅಡುಗೆ ಶೈಲಿಯಿರಲಿ ಅದರಲ್ಲಿ ಇಂಗು ಬಳಕೆ ಸರ್ವೇಸಾಮಾನ್ಯ. ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಸಹ ಇವೆ. ರಕ್ತದ ಒತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳೂ ಸಹ ಇವೆ. ಹಾಗಾಗಿ, ಇಡೀ ಜಗತ್ತಿನಲ್ಲಿ ಉತ್ಪಾದಿಸಲಾಗುವ ಇಂಗಿನ ಶೇಕಡಾ 40ರಷ್ಟು ಪಾಲು ಭಾರತಕ್ಕೆ ರಫ್ತು ಆಗುತ್ತಿದೆ! ಆದರೆ ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ಇಂಗಿನ ಬಳಕೆ […]

ಭಾರತದಲ್ಲಿಯೂ ಹರಡಲಿದೆ ಸ್ವದೇಶಿ ಇಂಗು ಕೃಷಿ ಪರಿಮಳ!
KUSHAL V
| Edited By: |

Updated on: Oct 21, 2020 | 6:09 PM

Share

ದೆಹಲಿ: ದೇಶದ ಪ್ರತಿಯೊಂದು ಕುಟುಂಬದ ಅಡುಗೆ ಮನೆಯಲ್ಲಿ ಕಾಣಸಿಗುವ ಸಾಂಬಾರ್ ಪದಾರ್ಥಗಳಲ್ಲಿ ಇಂಗು ಸಹ ಒಂದು. ಯಾವುದೇ ಅಡುಗೆ ಶೈಲಿಯಿರಲಿ ಅದರಲ್ಲಿ ಇಂಗು ಬಳಕೆ ಸರ್ವೇಸಾಮಾನ್ಯ. ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಸಹ ಇವೆ. ರಕ್ತದ ಒತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳೂ ಸಹ ಇವೆ. ಹಾಗಾಗಿ, ಇಡೀ ಜಗತ್ತಿನಲ್ಲಿ ಉತ್ಪಾದಿಸಲಾಗುವ ಇಂಗಿನ ಶೇಕಡಾ 40ರಷ್ಟು ಪಾಲು ಭಾರತಕ್ಕೆ ರಫ್ತು ಆಗುತ್ತಿದೆ!

ಆದರೆ ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ಇಂಗಿನ ಬಳಕೆ ಇಷ್ಟು ಪ್ರಮಾಣದಲ್ಲಿದ್ದರೂ ಇಂಗು ಉತ್ಪಾದನೆಯಲ್ಲಿ ಭಾರತ ತೀರಾ ಹಿಂದೆ. ಇದಕ್ಕೆ ಮುಖ್ಯ ಕಾರಣ ಇದರ ಬೇಸಾಯಕ್ಕೆ ಬೇಕಾದ ಅನುಕೂಲಕರ ವಾತಾವರಣ ದೇಶದಲ್ಲಿ ಲಭ್ಯವಿಲ್ಲ. ಆದ್ದರಿಂದ, ಸಾಕಷ್ಟು ಪ್ರಮಾಣದ ಇಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಆದರೆ ಈಗ, ಇಂಗನ್ನು ದೇಶದಲ್ಲೇ ಉತ್ಪಾದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಮತ್ತು ಹಿಮಾಲಯನ್​ ಬಯೋರಿಸೋರ್ಸ್​ ತಂತ್ರಜ್ಞಾನ ಸಂಸ್ಥೆ ಕೈಜೋಡಿಸಿ ದೇಶದಲ್ಲಿ ಇಂಗು ಕೃಷಿಗೆ ನಾಂದಿ ಹಾಡಿದೆ.

ಹಿಮಾಚಲ ಪ್ರದೇಶದ ಲಹೌಲ್​ ಕಣಿವೆಯ ಕ್ವಾರಿಂಗ್ ಗ್ರಾಮದಲ್ಲಿ ಸರಿಸುಮಾರು 5 ಹೆಕ್ಟೇರ್​ ವಿಸ್ತೀರ್ಣದಲ್ಲಿ ಇಂಗು ಸಸಿಗಳನ್ನು ನೆಡಲಾಗಿದೆ. ಮುಂಬರುವ ದಿನಗಳಲ್ಲಿ ಇದರ ವಿಸ್ತೀರ್ಣವನ್ನು ಮತ್ತಷ್ಟು ವೃದ್ಧಿಸಲಾಗುವುದು ಎಂದು ಹೇಳಲಾಗಿದೆ.

ಪ್ರತಿ ಹೆಕ್ಟೇರ್​ಗೆ ಸುಮಾರು 5 ವರ್ಷಗಳ ಕಾಲ 3 ಲಕ್ಷ ರೂಪಾಯಿಯಷ್ಟು ಖರ್ಚು ತಗುಲಲಿದ್ದು ಐದು ವರ್ಷಗಳ ಬಳಿಕ ರೈತರಿಗೆ ಸುಮಾರು 10 ಲಕ್ಷ ರೂಪಾಯಿ ಆದಾಯ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!