Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank holidays February 2021: RBIನಿಂದ ಬ್ಯಾಂಕ್ ರಜೆ ಪಟ್ಟಿ ಪ್ರಕಟ, ಫೆಬ್ರವರಿಯಲ್ಲಿ 6 ದಿನ ರಜೆ ಸೇರ್ಪಡೆ

ಈ ತಿಂಗಳ ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳಂದು ಬ್ಯಾಂಕ್ ರಜೆಯಾಗಿರುತ್ತದೆ. ಜೊತೆಗೆ, ಆರು ಪ್ರಾದೇಶಿಕ ರಜೆಗಳು ಕೂಡ ಬ್ಯಾಂಕ್​ಗಳಿಗಿವೆ.

Bank holidays February 2021: RBIನಿಂದ ಬ್ಯಾಂಕ್ ರಜೆ ಪಟ್ಟಿ ಪ್ರಕಟ, ಫೆಬ್ರವರಿಯಲ್ಲಿ 6 ದಿನ ರಜೆ ಸೇರ್ಪಡೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 8:25 PM

ವರ್ಷದ ಆರಂಭದಲ್ಲಿ 2021ರ ಬ್ಯಾಂಕ್​ಗಳ ರಜಾದಿನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿತ್ತು. ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್​ಗಳು ಜನರ ಸೇವೆಗೆ ಲಭ್ಯವಿರುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಕೊಟ್ಟಿತ್ತು. ಅದರಂತೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್​ಗಳು 12 ರಜಾದಿನಗಳನ್ನು ಹೊಂದಿದೆ. ನಾಲ್ಕು ಭಾನುವಾರಗಳು, ಎರಡು ಶನಿವಾರಗಳ ಜೊತೆಗೆ ಆರು ಇತರೆ ರಜಾದಿನಗಳನ್ನು ಭಾರತದ ವಿವಿಧ ಪ್ರದೇಶದ ಬ್ಯಾಂಕ್​ಗಳು ಪಡೆಯಲಿವೆ.

ಆರ್​ಬಿಐ ಸೂಚನೆಯಂತೆ, ಸಾರ್ವಜನಿಕ ರಜಾದಿನಗಳಂದು ಬ್ಯಾಂಕ್​ಗಳು ಮುಚ್ಚಿರಲಿವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತದೆ. ಪ್ರಾದೇಶಿಕವಾಗಿ ರಜಾದಿನಗಳಲ್ಲಿ ವ್ಯತ್ಯಾಸ ಇರುತ್ತದೆ. ಗಣರಾಜ್ಯೋತ್ಸವ (ಜ.26), ಸ್ವಾತಂತ್ರ್ಯ ದಿನಾಚರಣೆ (ಆ.15), ಗಾಂಧಿ ಜಯಂತಿ (ಅ.2), ಕ್ರಿಸ್​ಮಸ್ (ಡಿ.25) ಇಂತಹ ರಜಾದಿನಗಳು ಇಡೀ ದೇಶಕ್ಕೆ ಒಂದೇ ಆಗಿರುತ್ತದೆ. ಆದರೆ, ಉಳಿದ ಕೆಲವು ಹಬ್ಬಗಳಿಗೆ ಪ್ರದೇಶಾವಾರು ವ್ಯತ್ಯಾಸವಿರುತ್ತದೆ.

ಫೆಬ್ರವರಿ ತಿಂಗಳ ಕೆಲವು ದಿನಗಳಲ್ಲಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳಂದು ಬ್ಯಾಂಕ್ ರಜೆಯಾಗಿರುತ್ತದೆ. ಜೊತೆಗೆ, ಆರು ಪ್ರಾದೇಶಿಕ ರಜೆಗಳು ಕೂಡ ಬ್ಯಾಂಕ್​ಗಳಿಗಿವೆ. ಆದರೆ, ಈ ರಜೆಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ.

ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ಪಟ್ಟಿ: ಫೆಬ್ರವರಿ 12: ಲೋಸರ್/ ಸೋನಮ್ ಲೊಚ್ಚರ್ (ಗ್ಯಾಂಗ್ಟಾಕ್) ಫೆಬ್ರವರಿ 15: Lui-Ngai-Ni (ಇಂಫಾಲ್) ಫೆಬ್ರವರಿ 16: ಸರಸ್ವತಿ ಪೂಜಾ/ ಶ್ರೀ ಪಂಚಮಿ (ಅಗರ್ತಲ, ಭುವನೇಶ್ವರ್ ಮತ್ತು ಕೋಲ್ಕತ್ತಾ) ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ್, ನಾಗ್ಪುರ್ ಮತ್ತು ಮುಂಬೈ) ಫೆಬ್ರವರಿ 20: ಸ್ಟೇಟ್ ಡೇ (ಐಜಾವ್ಲ್) ಫೆಬ್ರವರಿ 26: ಹಜರತ್ ಅಲಿ ಹುಟ್ಟುಹಬ್ಬ (ಲಕ್ನೋ ಮತ್ತು ಕಾನ್ಪುರ್)

ಪ್ರದೇಶವಾರು ಹಬ್ಬ-ಹರಿದಿನಗಳಲ್ಲಿ ಪ್ರಾದೇಶಿಕ ಬ್ಯಾಂಕ್​ಗಳ ರಜೆಯಾಗಿರುತ್ತದೆ. ಉಳಿದ ಪ್ರದೇಶ ಅಥವಾ ರಾಜ್ಯಗಳಲ್ಲಿ ಬ್ಯಾಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್​ಗಳು ರಜೆ ಇದ್ದರೂ, ಮೊಬೈಲ್ ಮತ್ತು ಇಂಟರ್​ನೆಟ್ ಬ್ಯಾಂಕ್​ಗಳು ಸಾಮಾನ್ಯವಾಗಿ ಈ ವೇಳೆಯೂ ಕಾರ್ಯನಿರ್ವಹಿಸುತ್ತವೆ. ಆದರೆ ಯಾವುದೇ ಅಡಚಣೆ ಉಂಟಾಗದಂತೆ ಮೊದಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು.

Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್​, ಆಟೊಮೊಬೈಲ್​ ವಲಯ ಜಿಗಿತ

Published On - 9:57 pm, Mon, 1 February 21

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​