AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ

Uttar Pradesh News: ಉತ್ತರ ಪ್ರದೇಶದ ನೋಯ್ಡಾದಲ್ಲಿ ಎತ್ತರದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಸ್ಫೋಟಗೊಳಿಸಿ ನೆಲಸಮಗೊಳಿಸಲಾಗಿದೆ. ಆ ಸ್ಥಳದಲ್ಲಿ ಈಗ ಧೂಳು ಮಾತ್ರ ಆವರಿಸಿಕೊಂಡಿದೆ.

Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ
ನೊಯ್ಡಾದ ಅವಳಿ ಕಟ್ಟಡದ ಅವಶೇಷಗಳುImage Credit source: Indian Express
TV9 Web
| Updated By: ಸುಷ್ಮಾ ಚಕ್ರೆ|

Updated on: Aug 29, 2022 | 11:06 AM

Share

ನವದೆಹಲಿ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಸೂಪರ್‌ಟೆಕ್‌ನ ಅವಳಿ ಕಟ್ಟಡಗಳನ್ನು (Twin Towers) ನೆಲಸಮಗೊಳಿಸಿದ ಮರುದಿನ ಆ ಜಾಗದಲ್ಲಿ ಸಿಮೆಂಟ್, ಬೂದಿ ಮತ್ತು ಇತರ ವಸ್ತುಗಳ ಅವಶೇಷಗಳ ರಾಶಿಯೇ ಕಂಡುಬಂದಿದೆ. ಆ ಸ್ಥಳ ಈಗ ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ. ಸುಮಾರು 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳು ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಕುಸಿದಿವೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಎತ್ತರದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಸ್ಫೋಟಗೊಳಿಸಿ ನೆಲಸಮಗೊಳಿಸಲಾಗಿದೆ. ಆ ಸ್ಥಳದಲ್ಲಿ ಈಗ ಧೂಳು ಮಾತ್ರ ಆವರಿಸಿಕೊಂಡಿದೆ.

ನೊಯ್ಡಾದ ಸೆಕ್ಟರ್ 93Aನಲ್ಲಿರುವ 40 ಅಂತಸ್ತಿನ ಎರಡು ಗಗನಚುಂಬಿ ಕಟ್ಟಡಗಳು (ಅಪೆಕ್ಸ್ ಮತ್ತು ಸೆಯಾನೆ) ದೆಹಲಿಯ ಐಕಾನಿಕ್ ಕಟ್ಟಡವಾದ ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದವು. ಇವುಗಳನ್ನು ಅಕ್ರಮವಾಗಿ ಕಟ್ಟಿದ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಪತನಗೊಳಿಸಲಾಗಿದೆ.

ಇದನ್ನೂ ಓದಿ: ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ

ಅವಳಿ ಗೋಪುರಗಳನ್ನು ನೆಲಸಮಗೊಳಿಸಿದ ಮಾರನೇ ದಿನವಾದ ಇಂದು ಈ ಪ್ರದೇಶವು ಧೂಳಿನ ಕಣಗಳೊಂದಿಗೆ ಯುದ್ಧದಿಂದ ಹಾನಿಗೀಡಾದ ಸ್ಥಳದಂತೆ ಕಾಣುತ್ತಿದೆ. ಈ ಜಾಗದ ಅಕ್ಕಪಕ್ಕದ ಪ್ರದೇಶಗಳ ಶುಚಿಗೊಳಿಸುವ ಕಾರ್ಯವು ನಡೆಯುತ್ತಿದೆ. ಸಂಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಮುಗಿದ ನಂತರ ಅಕ್ಕಪಕ್ಕದ ಸೊಸೈಟಿಗಳ ನಿವಾಸಿಗಳು ತಮ್ಮ ಮನೆಗಳಿಗೆ ಮರಳಲು ಅನುಮತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಡವುವಿಕೆಯ ಹಿನ್ನೆಲೆಯಲ್ಲಿ ನೆರೆಯ ಕಟ್ಟಡಗಳಲ್ಲಿ ಕಿಟಕಿ ಮತ್ತು ಗೋಡೆಗೆ ಹಾನಿಯಾದ ಬಗ್ಗೆ ಕೆಲವು ವರದಿಗಳಿವೆ ಎಂದು ನೋಯ್ಡಾ ಸಿಇಒ ರಿತು ಮಹೇಶ್ವರಿ ಹೇಳಿದ್ದಾರೆ. ಈ ಕಟ್ಟಡದ ಪಕ್ಕದ ಎಟಿಎಸ್ ಸೊಸೈಟಿಯ ಗಡಿ ಗೋಡೆಯ ಸುಮಾರು 10 ಮೀಟರ್ ಹಾನಿಗೊಳಗಾಗಿದೆ. ಅದರ ಕೆಲವು ಗಾಜಿನ ಕಿಟಕಿಗಳು ಅವಶೇಷಗಳ ಹೊಡೆತದಿಂದ ಒಡೆದುಹೋಗಿವೆ.

ಇದನ್ನೂ ಓದಿ: Noida Supertech Twin Towers ನೆಲಸಮವಾಯ್ತು ನೋಯ್ಡಾದ ಅವಳಿ ಕಟ್ಟಡ, ವಿಡಿಯೊ ನೋಡಿ

ನೊಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಭಾನುವಾರ ಸ್ಫೋಟದಿಂದ ಸುರಕ್ಷಿತವಾಗಿ ಕೆಡವಲಾಯಿತು. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಎರಡು ಹೌಸಿಂಗ್ ಸೊಸೈಟಿಗಳ 5,000 ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಸ್ಫೋಟದ ದೃಷ್ಟಿಯಿಂದ ಸೆಕ್ಟರ್ 93A ಯಲ್ಲಿನ ಎರಡು ಸೊಸೈಟಿಗಳಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿವಾಸಿಗಳು ಮಾತ್ರವಲ್ಲದೆ, ಅವರ ವಾಹನಗಳು ಮತ್ತು ಸಾಕುಪ್ರಾಣಿಗಳನ್ನು ಸಹ ಸ್ಥಳಾಂತರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್