₹ 43,000 ಕೋಟಿ ವೆಚ್ಚದಲ್ಲಿ ಆರು ಹೈಟೆಕ್ ಜಲಾಂತರ್ಗಾಮಿಗಳ ನಿರ್ಮಾಣ: ಬೃಹತ್ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ

High Tech Submarines: 2020ರ ಜನವರಿಯಲ್ಲಿ ರಕ್ಷಣಾ ಸಚಿವಾಲಯವು ಎರಡು ಭಾರತೀಯ ಮತ್ತು ಐದು ವಿದೇಶಿ ಹಡಗು ನಿರ್ಮಾಣಗಾರರನ್ನು ದೇಶದಲ್ಲಿ ಹೈಟೆಕ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಯೋಜನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿತು.

₹ 43,000 ಕೋಟಿ ವೆಚ್ಚದಲ್ಲಿ ಆರು ಹೈಟೆಕ್ ಜಲಾಂತರ್ಗಾಮಿಗಳ ನಿರ್ಮಾಣ: ಬೃಹತ್ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ
ಜಲಂತರ್ಗಾಮಿ (ಸಂಗ್ರಹ ಚಿತ್ರ)
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 04, 2021 | 7:02 PM

ದೆಹಲಿ: ಭಾರತೀಯ ನೌಕಾಪಡೆಗಾಗಿ ಸುಮಾರು ₹ 43,000 ಕೋಟಿ ವೆಚ್ಚದಲ್ಲಿ ಆರು ಸುಧಾರಿತ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಬೃಹತ್‌ ಯೋಜನೆಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ. ನೌಕಾ ಕ್ಷೇತ್ರದಲ್ಲಿ ಚೀನಾದ ಪರಾಕ್ರಮ ಹೆಚ್ಚಾಗುತ್ತಿದ್ದು, ಅದನ್ನು ಎದುರಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯನ್ನು ಬಲಪಡಿಸಲು ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಅತ್ಯುನ್ನತ ಸಂಸ್ಥೆಯಾದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯ (ಡಿಎಸಿ) ಶುಕ್ರವಾರ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲ್ಪಟ್ಟಿದೆ.ನೌಕಾಪಡೆಯು ಪಿ -75 ಇಂಡಿಯಾ ಎಂದು ಕರೆಯಲ್ಪಡುವ ಯೋಜನೆಯ ಪ್ರಸ್ತಾವನೆಗೆ ಕೋರಿಕೆ (ಆರ್‌ಎಫ್‌ಪಿ) ಶೀಘ್ರ ಸಲ್ಲಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ  ಹಿಂದೂಸ್ತಾನ್ ಟೈಮ್ಸ್  ಪತ್ರಿಕೆ  ವರದಿ ಮಾಡಿದೆ.

ಕಾರ್ಯತಂತ್ರದ ಸಹಭಾಗಿತ್ವ ಮಾದರಿಯಲ್ಲಿ ನೀಡಲಾಗುವ ಮೊದಲ ಆರ್‌ಎಫ್‌ಪಿ ಇದಾಗಿದ್ದು, ಇದು ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ ಎಂದು ಮೇಲೆ ಉಲ್ಲೇಖಿಸಿದ ಅಧಿಕಾರಿಗಳಲ್ಲಿ ಒಬ್ಬರು ಹೇಳಿದರು. ದೇಶದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ವಿದೇಶಿ ಮೂಲ ಸಲಕರಣೆಗಳ ತಯಾರಕರೊಂದಿಗೆ (OEM) ಸಹಭಾಗಿತ್ವ ವಹಿಸುವ ಭಾರತೀಯ ಕಾರ್ಯತಂತ್ರದ ಪಾಲುದಾರರಿಂದ ಪ್ರಮುಖ ರಕ್ಷಣಾ ವೇದಿಕೆಗಳ ಸ್ಥಳೀಯ ಉತ್ಪಾದನೆಯನ್ನು ಈ ಮಾದರಿ ರೂಪಿಸಿದೆ. ಹೊಸ ಜಲಾಂತರ್ಗಾಮಿ ನೌಕೆಗಳಲ್ಲಿ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (ಎಐಪಿ) ವ್ಯವಸ್ಥೆಗಳಿದ್ದು, ಹಡಗುಗಳು ನೀರಿನಲ್ಲಿ ಹೆಚ್ಚು ಕಾಲ ಉಳಿಯಲು ಮತ್ತು ಅವುಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2020ರ ಜನವರಿಯಲ್ಲಿ ರಕ್ಷಣಾ ಸಚಿವಾಲಯವು ಎರಡು ಭಾರತೀಯ ಮತ್ತು ಐದು ವಿದೇಶಿ ಹಡಗು ನಿರ್ಮಾಣಗಾರರನ್ನು ದೇಶದಲ್ಲಿ ಹೈಟೆಕ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಯೋಜನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿತು. ಇದು ಮಿಲಿಟರಿ ವಲಯದ ಅತಿದೊಡ್ಡ ಮೇಕ್ ಇನ್ ಇಂಡಿಯಾ ಯೋಜನೆಗಳಲ್ಲಿ ಒಂದಾಗಿದೆ.

ವಿದೇಶಿ ಒಇಎಂಗಳೊಂದಿಗೆ ಸಹಕರಿಸಲು ಭಾರತೀಯ ಕಾರ್ಯತಂತ್ರದ ಪಾಲುದಾರರು ಮಜಾಗನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಮತ್ತು ಎಲ್ ಅಂಡ್ ಟಿ ಆಗಿದೆ. ಫ್ರೆಂಚ್ ನೇವಲ್ ಗ್ರೂಪ್, ಜರ್ಮನ್ ಸಂಘಟಿತ ಥೈಸೆನ್‌ಕ್ರುಪ್ ಮೆರೈನ್ ಸಿಸ್ಟಮ್ಸ್, ರಷ್ಯಾದ ರೂಬಿನ್ ಡಿಸೈನ್ ಬ್ಯೂರೋ, ಸ್ಪೇನ್‌ನ ನವಾಂಟಿಯಾ ಮತ್ತು ದಕ್ಷಿಣ ಕೊರಿಯಾದ ಡೇವೂ ಶಿಪ್‌ಬಿಲ್ಡಿಂಗ್ ಮತ್ತು ಮೆರೈನ್ ಎಂಜಿನಿಯರಿಂಗ್ ಕಂಪನಿ ಈ ಯೋಜನೆಯಲ್ಲಿ ಸೇರುವ ಸಾಧ್ಯತೆ ಇದೆ.

ಶಾರ್ಟ್‌ಲಿಸ್ಟ್ ಮಾಡಿದ ಭಾರತೀಯ ಕಾರ್ಯತಂತ್ರದ ಪಾಲುದಾರರಿಗೆ ಆರ್‌ಎಫ್‌ಪಿಗಳನ್ನು ನೀಡುವ ಮೂಲಕ ಸಚಿವಾಲಯವು ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನಂತರ ಅವರು ಶಾರ್ಟ್‌ಲಿಸ್ಟ್ ಮಾಡಿದ ಒಇಎಂಗಳ ಸಹಯೋಗದೊಂದಿಗೆ ಟೆಕ್ನೋ-ಕಮರ್ಷಿಯಲ್ ಕೊಡುಗೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. ಅಸಾಧಾರಣ ಸಂದರ್ಭಗಳಲ್ಲಿ, ನಿಯಮಗಳು ಭಾರತೀಯ ಕಾರ್ಯತಂತ್ರದ ಪಾಲುದಾರರಿಗೆ ಎರಡು ಒಇಎಂಗಳ ಸಹಯೋಗದೊಂದಿಗೆ ಟೆಕ್ನೋ-ಕಮರ್ಷಿಯಲ್ ಕೊಡುಗೆಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ದೀರ್ಘ ಪ್ರಕ್ರಿಯೆಯ ಮುಂದಿನ ಹಂತಗಳಲ್ಲಿ ತಾಂತ್ರಿಕ ಕೊಡುಗೆಗಳು, ಪ್ರಯೋಗಗಳು, ಸಿಬ್ಬಂದಿ ಮೌಲ್ಯಮಾಪನ, ಆರ್‌ಎಫ್‌ಪಿಗೆ ತಾಂತ್ರಿಕವಾಗಿ ಒಪ್ಪತಕ್ಕ ಕಂಪನಿಗಳ ವಾಣಿಜ್ಯ ಕೊಡುಗೆಗಳ ತೆರೆಯುವಿಕೆ ಮತ್ತು ಮೌಲ್ಯಮಾಪನ ಮತ್ತು ಅಂತಿಮವಾಗಿ, ಕಡಿಮೆ ಬಿಡ್‌ನೊಂದಿಗೆ ಕಾರ್ಯತಂತ್ರದ ಪಾಲುದಾರರ ಆಯ್ಕೆ ಇರುತ್ತದೆ. ಆಗಸ್ಟ್ 2018 ರಲ್ಲಿ, ಡಿಎಸಿ ಕಾರ್ಯತಂತ್ರದ ಮಾದರಿಯಲ್ಲಿ 111 ನೇವಲ್ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು (ಎನ್‌ಯುಹೆಚ್) ನಿರ್ಮಿಸುವ ಯೋಜನೆಯನ್ನು ಅನುಮೋದಿಸಿತ್ತು. ಆದರೆ ರೂ 21,738 ಕೋಟಿ ಮೌಲ್ಯದ ಎನ್‌ಯುಹೆಚ್ ಯೋಜನೆಯಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.

ಇದನ್ನೂ ಓದಿ:  ಮಹಿಳೆಯರ ಪಾಲಿಗೆ ಸಿಹಿಸುದ್ದಿ ನೀಡಿದ ಸುಪ್ರೀಂಕೋರ್ಟ್; ದೈಹಿಕ ಸಾಮರ್ಥ್ಯ ಆಧರಿತ ಕೆಲಸಗಳಲ್ಲಿ ನಿವೃತ್ತಿ ವಯಸ್ಸಿನವರೆಗೂ ಮುಂದುವರೆಯಲು ಅವಕಾಶ

Published On - 6:59 pm, Fri, 4 June 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ