AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್ ಬ್ಲೂ ಟಿಕ್ ಮರುಸ್ಥಾಪಿಸಲು ಮನವಿ ಸಲ್ಲಿಸಿದ್ದಕ್ಕಾಗಿ ಸಿಬಿಐ ಮಾಜಿ ನಿರ್ದೇಶಕ ಎಂ ನಾಗೇಶ್ವರ ರಾವ್​ಗೆ ₹10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ರಾವ್ ಅವರು ಈ ಹಿಂದೆಯೂ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಏಪ್ರಿಲ್ 7 ರಂದು, ನ್ಯಾಯಾಲಯವು ಮನವಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಮೊದಲು ತಮ್ಮ ದೂರಿನ ಬಗ್ಗೆ ಟ್ವಿಟರ್​​ನ್ನು ಸಂಪರ್ಕಿಸಲು ಸೂಚಿಸಿತು.

ಟ್ವಿಟರ್ ಬ್ಲೂ ಟಿಕ್ ಮರುಸ್ಥಾಪಿಸಲು ಮನವಿ ಸಲ್ಲಿಸಿದ್ದಕ್ಕಾಗಿ ಸಿಬಿಐ ಮಾಜಿ ನಿರ್ದೇಶಕ ಎಂ ನಾಗೇಶ್ವರ ರಾವ್​ಗೆ ₹10 ಸಾವಿರ ದಂಡ  ವಿಧಿಸಿದ ದೆಹಲಿ ಹೈಕೋರ್ಟ್
ಸಿಬಿಐ ಮಾಜಿ ನಿರ್ದೇಶಕ ಎಂ ನಾಗೇಶ್ವರ ರಾವ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 17, 2022 | 3:54 PM

Share

ಸಿಬಿಐ ಮಾಜಿ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ ರಾವ್ (M Nageswara Rao)ಅವರ ಟ್ವಿಟರ್ (Twitter) ಖಾತೆಯಲ್ಲಿನ ಬ್ಲೂ ಟಿಕ್ (verification tag) ಅನ್ನು ಮರುಸ್ಥಾಪಿಸಲು ಕೋರಿ ಅರ್ಜಿ ಸಲ್ಲಿಸಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಮಂಗಳವಾರ ₹ 10,000 ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಹಿಂದಿನ ಆದೇಶವನ್ನು ಏಪ್ರಿಲ್ 7 ರಂದು ನೀಡಲಾಯಿತು ಮತ್ತು ಪ್ರತಿವಾದಿಗಳಿಗೆ (ಟ್ವಿಟರ್​​ಗೆ ) ವ್ಯವಹರಿಸಲು ಸಾಕಷ್ಟು ಸಮಯವಿಲ್ಲದಿರುವ ಕಾರಣ ಪ್ರಸ್ತುತ ಅರ್ಜಿಯನ್ನು ಇಷ್ಟು ಬೇಗ ಸಲ್ಲಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಯಶವಂತ್ ವರ್ಮಾ ಹೇಳಿದ್ದಾರೆ. “ನಾವು ಏಪ್ರಿಲ್ 7 ರಂದು ಆದೇಶವನ್ನು ನೀಡಿದ್ದೇವೆ. ತಕ್ಷಣವೇ ನ್ಯಾಯಾಲಯವನ್ನು ಸಂಪರ್ಕಿಸಲು ನಿಮ್ಮನ್ನು ನಿರ್ಬಂಧಿಸಿರುವುದು ಏನು? ನಿಮ್ಮ ಕಕ್ಷಿದಾರರಿಗೆ ಸಾಕಷ್ಟು ಬಿಡುವಿನ ಸಮಯವಿದೆ ಎಂದು ತೋರುತ್ತಿದೆ. ನೀವು ನಮ್ಮಿಂದ ರಿಟರ್ನ್ ಗಿಫ್ಟ್ ಬಯಸುವಿರಾ” ಎಂದು ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಟೀಕಿಸಿತು. ರಾವ್ ಪರ ವಾದ ಮಂಡಿಸಿದ ವಕೀಲ ರಾಘವ್ ಅವಸ್ಥಿ ಅವರು ಟ್ವಿಟರ್‌ನೊಂದಿಗೆ ಅವರ ಕೊನೆಯ ಸಂವಹನ ಏಪ್ರಿಲ್ 18 ರಂದು ಆಗಿದ್ದು , ಅವರ ವೆರಿಫಿಕೇಷನ್​​ನ್ನು ಇನ್ನೂ ಪುನಃಸ್ಥಾಪಿಸಲಾಗಿಲ್ಲ ಎಂದು ವಾದಿಸಿದರು.

ಅದೇ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಬ್ಯಾಚ್‌ನೊಂದಿಗೆ  ಈ ವಿಷಯವನ್ನು ವಿಚಾರಣೆ ಮಾಡಲು ಅವಸ್ಥಿ ನ್ಯಾಯಾಲಯವನ್ನು ಕೋರಿದರು. ಆದಾಗ್ಯೂ, ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು ಮತ್ತು ವೆಚ್ಚದೊಂದಿಗೆ ಅರ್ಜಿಯನ್ನು ವಜಾಗೊಳಿಸಿತು.  ಮಾರ್ಚ್‌ನಲ್ಲಿ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ನಿಂದ ತೆಗೆದುಹಾಕಲಾದ ತಮ್ಮ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ (ಪರಿಶೀಲನಾ ಟ್ಯಾಗ್) ಅನ್ನು ಮರುಸ್ಥಾಪಿಸುವಂತೆ ಕೋರಿ ರಾವ್ ನ್ಯಾಯಾಲಯದ ಮೊರೆ ಹೋಗಿದ್ದರು.

ರಾವ್ ಅವರು ಈ ಹಿಂದೆಯೂ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಏಪ್ರಿಲ್ 7 ರಂದು, ನ್ಯಾಯಾಲಯವು ಮನವಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಮೊದಲು ತಮ್ಮ ದೂರಿನ ಬಗ್ಗೆ ಟ್ವಿಟರ್​​ನ್ನು ಸಂಪರ್ಕಿಸಲು ಸೂಚಿಸಿತು.

ಇದನ್ನೂ ಓದಿ
Image
ಟ್ವಿಟರ್ ವಾಕ್ ಸ್ವಾತಂತ್ರ್ಯವನ್ನು ನಂಬುವುದಿಲ್ಲ,ಕಚೇರಿ ರಾಜಕೀಯವು ಎಡಪಕ್ಷದ ಒಲವು ಹೊಂದಿದೆ: ರಹಸ್ಯ ರೆಕಾರ್ಡಿಂಗ್​​ನಿಂದ ಮಾಹಿತಿ ಬಯಲು
Image
Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ
Image
ಟ್ವಿಟರ್ ಎಲ್ಲರಿಗೂ ಉಚಿತವಲ್ಲ: ಶುಲ್ಕ ವಿಧಿಸುವ ಸಾಧ್ಯತೆ ತೆರೆದಿಟ್ಟ ಎಲನ್ ಮಸ್ಕ್ ಟ್ವೀಟ್
Image
ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರು ತೆಗೆದುಹಾಕಿದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್‌ ಪಟೇಲ್

ವಕೀಲ ಮುಖೇಶ್ ಶರ್ಮಾ ಮೂಲಕ ಸಲ್ಲಿಸಿದ ಪ್ರಸ್ತುತ ಅರ್ಜಿಯಲ್ಲಿ, ರಾವ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗೆ ಹಲವಾರು ಮೇಲ್‌ಗಳನ್ನು ಬರೆದಿದ್ದಾರೆ. ಆದರೆ ಅವರ ವೆರಿಫಿಕೇಶನ್ ಟ್ಯಾಗ್ ಅನ್ನು ಮರುಸ್ಥಾಪಿಸಲಾಗಿಲ್ಲ ಎಂದು ಹೇಳಿದರು.

ತಮ್ಮ ಪರಿಶೀಲನೆಯನ್ನು ಮರುಸ್ಥಾಪಿಸಲು ಕೋರುವುದರ ಹೊರತಾಗಿ, ರಾವ್ ಅವರು ಸಚಿವಾಲಯದೊಳಗೆ ಒಬ್ಬರು ಅಥವಾ ಹೆಚ್ಚಿನ ಅನುಸರಣೆ ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಲು ಅಥವಾ ನಿಯೋಜಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ಕೋರಿದರು.

ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರ ಕುಂದುಕೊರತೆಗಳು ಅಥವಾ ದೂರುಗಳನ್ನು ಅಧಿಕಾರಿಗಳು ಪ್ರತ್ಯೇಕವಾಗಿ ನಿರ್ವಹಿಸಬೇಕು ಇದರಿಂದಾಗಿ ಬಳಕೆದಾರರ ಗುರುತಿನ ಪರಿಶೀಲನೆ ಸೇರಿದಂತೆ ಕಾನೂನು ಮತ್ತು ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರು ಅನಗತ್ಯ ಕಿರುಕುಳಕ್ಕೆ ಒಳಗಾಗುವುದಿಲ್ಲ ಎಂದು ಅವರು ವಾದಿಸಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ