AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi MCD: ದೆಹಲಿ ಸಿವಿಕ್ ಸೆಂಟರ್‌ನಲ್ಲಿ ಎಎಪಿ, ಬಿಜೆಪಿ ಕೌನ್ಸಿಲರ್‌ಗಳ ನಡುವೆ ಹೊಡೆದಾಟ; ಬಿಜೆಪಿ ಗೂಂಡಾಗಿರಿ ನಿಲ್ಲಿಸಲಿ ಎಂದ ಆಪ್

ಇದು ಯಾವ ರೀತಿಯ ನಡವಳಿಕೆ? ಇದು ನಾಚಿಕೆಗೇಡು ಮತ್ತು ಖಂಡನೀಯ. ದೇಶ ಇದನ್ನು ನೋಡುತ್ತಿದೆ. ಬಿಜೆಪಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ಬಿಜೆಪಿ ಅವರ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ.

Delhi MCD: ದೆಹಲಿ ಸಿವಿಕ್ ಸೆಂಟರ್‌ನಲ್ಲಿ ಎಎಪಿ, ಬಿಜೆಪಿ ಕೌನ್ಸಿಲರ್‌ಗಳ ನಡುವೆ ಹೊಡೆದಾಟ; ಬಿಜೆಪಿ ಗೂಂಡಾಗಿರಿ ನಿಲ್ಲಿಸಲಿ ಎಂದ ಆಪ್
ದೆಹಲಿ ಎಂಸಿಡಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 24, 2023 | 9:20 PM

ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ (Standing Committee elections)ವೇಳೆ ಇಂದು (ಶುಕ್ರವಾರ) ಎಎಪಿ (AAP) ಮತ್ತು ಬಿಜೆಪಿ (BJP) ಕೌನ್ಸಿಲರ್‌ಗಳು ಪರಸ್ಪರ ಹೊಡೆದಾಡಿಕೊಂಡು, ಹಲ್ಲೆ ನಡೆಸಿ, ಗುದ್ದಾಡಿಕೊಂಡಿದ್ದರಿಂದ ದೆಹಲಿ ಸಿವಿಕ್ ಸೆಂಟರ್‌ನಲ್ಲಿ ನಡೆದ ಗದ್ದಲದ ನಡುವೆ ಒಬ್ಬ ಕೌನ್ಸಿಲರ್ ಕುಸಿದು ಬಿದ್ದಿದ್ದಾರೆ. ತಮ್ಮ ಪಕ್ಷವು ಚುನಾವಣೆಯಲ್ಲಿ ಸೋಲುತ್ತದೆ ಎಂದು ತಿಳಿದಾಗ ಬಿಜೆಪಿ ಸದಸ್ಯರು ಆಕ್ರೋಶಗೊಂಡು ದೆಹಲಿ ಮೇಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ಶಾಸಕಿ ಅತಿಶಿ ಆರೋಪಿಸಿದ್ದಾರೆ.ಇದು ಯಾವ ರೀತಿಯ ನಡವಳಿಕೆ? ಇದು ನಾಚಿಕೆಗೇಡು ಮತ್ತು ಖಂಡನೀಯ. ದೇಶ ಇದನ್ನು ನೋಡುತ್ತಿದೆ. ಬಿಜೆಪಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ಬಿಜೆಪಿ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ಮೇಯರ್ ಮೇಲೆ ಹಲ್ಲೆ ನಡೆಸಿದವರನ್ನು ಜೈಲಿಗಟ್ಟಲಾಗುವುದು ಎಂದು ಅವರು ಹೇಳಿದ್ದಾರೆ.

ದೆಹಲಿ ಸಿವಿಕ್ ಸೆಂಟರ್‌ನಲ್ಲಿ ಕುಸಿದುಬಿದ್ದ ಎಎಪಿ ಕೌನ್ಸಿಲರ್ ಅಶೋಕ್ ಕುಮಾರ್ ಮಾನು ನಂತರ ತಮ್ಮ ಪಕ್ಷದ ಇತರ ಕೌನ್ಸಿಲರ್‌ಗಳೊಂದಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡರು.

ಸ್ಥಾಯಿ ಸಮಿತಿಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದೆ ಎಂದು ನಮಗೆ ಅನಧಿಕೃತವಾಗಿ ತಿಳಿಸಲಾಗಿದೆ. ಆದರೂ, ದೆಹಲಿ ಮೇಯರ್ ತಾಂತ್ರಿಕ ತಂಡದ ನಿರ್ಧಾರವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಬಿಜೆಪಿ ಕೌನ್ಸಿಲರ್ ಹೇಳಿದ್ದಾರೆ.

ಪೌರಾಯುಕ್ತರ ಆರು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಪ್ರಕ್ರಿಯೆ ಮುಂದುವರಿಸಲು ಇಂದು ನಗರಸಭೆ ಭವನವನ್ನು ಮತ್ತೆ ಕರೆಯಲಾಯಿತು. 250 ಕೌನ್ಸಿಲರ್‌ಗಳ ಪೈಕಿ 242 ಮಂದಿ ತಮ್ಮ ಹಕ್ಕು ಚಲಾಯಿಸಿದ ನಂತರ ಸಂಜೆ ಮತ ಎಣಿಕೆ ಮುಕ್ತಾಯವಾಯಿತು.

ಇದನ್ನೂ ಓದಿ:ಖಲಿಸ್ತಾನಿ ಅಮೃತಪಾಲ್ ಸಿಂಗ್ ಮಾತು ಕೂಡಾ ರಾಹುಲ್ ಗಾಂಧಿಯಂತೆಯೇ ಇದೆ: ಹಿಮಂತ ಬಿಸ್ವಾ ಶರ್ಮಾ

ಆದಾಗ್ಯೂ,ದೆಹಲಿಯ ಮೇಯರ್ ಶೆಲ್ಲಿ ಒಬೆರಾಯ್ ಸೆಕ್ರೆಟರಿಯೇಟ್ ಸಿಬ್ಬಂದಿ ಒದಗಿಸಿದ ಫಲಿತಾಂಶಗಳಿಗೆ ಸಹಿ ಹಾಕಲು ನಿರಾಕರಿಸಿದರು. ಅದು ತಾನು ಅಮಾನ್ಯವೆಂದು ಪರಿಗಣಿಸಿದ ಮತವನ್ನು ಒಳಗೊಂಡಿದೆ ಎಂದು ಶೆಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ಎರಡೂ ಪಕ್ಷಗಳು ಒಮ್ಮತಕ್ಕೆ ಬರದ ಕಾರಣ ಮತ್ತು ಈ ಪ್ರಕ್ರಿಯೆಗೆ ಏಜೆಂಟರನ್ನು ಕಳುಹಿಸದ ಕಾರಣ ಮರು ಎಣಿಕೆ ಇರುವುದಿಲ್ಲ ಎಂದು ಅವರು ಹೇಳಿದರು.

ಎಂಸಿಡಿಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸುವಂತೆ ದೆಹಲಿ ಬಿಜೆಪಿ ಆಗ್ರಹ

ಸ್ಥಾಯಿ ಸಮಿತಿ ಚುನಾವಣೆ ವೇಳೆ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ನಡುವೆ ಮಾತಿನ ಚಕಮಕಿ ನಡೆದ ನಂತರ, ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಎಂಸಿಡಿಯನ್ನು ವಿಸರ್ಜಿಸಿ ಮತ್ತೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

“ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ವಿಧಾನಸಭೆಯನ್ನು ನಡೆಸುವ ಅಭ್ಯಾಸವನ್ನು ಹೊಂದಿದೆ, ಅಲ್ಲಿ ಅವರು ವಿರೋಧ ಪಕ್ಷದ ಕೆಲವು ಶಾಸಕರನ್ನು ಅವರು ಬಯಸಿದಾಗ ನಿರಂಕುಶವಾಗಿ ಹೊರಹಾಕುತ್ತಾರೆ. ಆದರೆ ಇಂದು, ಎಂಸಿಡಿಯನ್ನು ಸಮಾನ ವಿರೋಧದೊಂದಿಗೆ ನಡೆಸುವಾಗ ಕೌನ್ಸಿಲರ್‌ಗಳು, ಅವರು ಮೊದಲ ದಿನವೇ ಸದನದಲ್ಲಿ ಒಮ್ಮತವನ್ನು ಮಾಡಲು ವಿಫಲರಾದರು, ಇದರಿಂದಾಗಿ ಸದನದಲ್ಲಿ ಹಿಂಸಾಚಾರ ಉಂಟಾಯಿತು ಎಂದಿದ್ದಾರೆ ಅವರು.

ಹರಿತವಾದ ವಸ್ತುವಿನಿಂದ ಹೊಡೆದಿದ್ದಾರೆ: ಬಿಜೆಪಿ ಶಾಸಕಿ ನಾಯಕಿ ಮೀನಾಕ್ಷಿ ಶರ್ಮಾ ಆರೋಪ

ಎಎಪಿ, ಬಿಜೆಪಿ ಕೌನ್ಸಿಲರ್‌ಗಳ ನಡುವೆ ವಾಗ್ವಾದ ನಡೆಯುತ್ತಿದ್ದಂತೆ, ಬಿಜೆಪಿ ಶಾಸಕಿ ನಾಯಕಿ ಮೀನಾಕ್ಷಿ ಶರ್ಮಾ ತನಗೆ ಹರಿತವಾದ ವಸ್ತುವಿನಿಂದ ಥಳಿಸಿದ್ದಾರೆ ಎಂದು ಆರೋಪಿಸಿದರು. “ಅವರು ನನ್ನ ಕುತ್ತಿಗೆಯನ್ನು ಮುಟ್ಟಿದರು. ಇದನ್ನು ಒಬ್ಬ ಪುರುಷ ಕೌನ್ಸಿಲರ್ ಮಾಡಿದ್ದಾರೆ. ಅವರು ಒಂದೇ ಒಂದು ಸದನವನ್ನು ಉಳಿಸಿಕೊಳ್ಳಲು ಅವಕಾಶ ನೀಡಿಲ್ಲ. ಅವರು ದೆಹಲಿಯ ಮೇಯರ್ ಅಥವಾ ಎಎಪಿ ಎಂದು ತಿಳಿದಿಲ್ಲ. ಅವರು ಕೇಜ್ರಿವಾಲ್ ಮತ್ತು ಇತರ ಮಾಸ್ಟರ್‌ಗಳ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ” ಎಂದು ಶರ್ಮಾ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Fri, 24 February 23

ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ