ದೆಹಲಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಪತ್ತೆ, ಫ್ಲಾಟ್ ಮಾಲೀಕನ ಬಂಧನ, ಪತಿ ಪರಾರಿ
ದೆಹಲಿಯ ಫ್ಲಾಟ್ನಲ್ಲಿ ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಘಟನೆಯ ನಂತರ ಪತಿ ಪತ್ತೆಯಾಗಿಲ್ಲ. ಆರೋಪಿಗಳಲ್ಲಿ ಒಬ್ಬರಾದ ಮನೆ ಮಾಲೀಕ ವಿವೇಕಾನಂದ ಮಿಶ್ರಾ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು ಶನಿವಾರ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪತಿಯ ಅಸಿಸ್ಟೆಂಟ್ ಅಭಯ್ ಕುಮಾರ್ ಮತ್ತು ಇನ್ನೂ ತಲೆಮರೆಸಿಕೊಂಡಿರುವ ಪತಿ ಹಾಗೂ ಇನ್ನೂ ಇಬ್ಬರು ಕೊಲೆಯಲ್ಲಿ ಭಾಗಿಯಾಗಿರುವ ಕುರಿತು ಬಾಯ್ಬಿಟ್ಟಿದ್ದಾನೆ.

ನವದೆಹಲಿ, ಮಾರ್ಚ್ 30: ಪೂರ್ವ ದೆಹಲಿಯ ಫ್ಲಾಟ್ವೊಂದರ ಮಂಚದ ಬಾಕ್ಸ್ನಲ್ಲಿ ಮಹಿಳೆಯ ಶವ(DeadBody) ಪತ್ತೆಯಾಗಿದ್ದು, ಫ್ಲಾಟ್ ಮಾಲೀಕನನ್ನು ಬಂಧಿಸಲಾಗಿದೆ. ಪತಿ ಪರಾರಿಯಾಗಿದ್ದಾನೆ. ಬೆಡ್ ಬಾಕ್ಸ್ನಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ಪೊಲೀಸರು ಮನೆಯ ಮಾಲೀಕರು ಮತ್ತು ಸಂತ್ರಸ್ತೆಯ ಪತಿಯ ಅಸಿಸ್ಟೆಂಟ್ನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಘಟನೆಯ ನಂತರ ಪತಿ ಪತ್ತೆಯಾಗಿಲ್ಲ. ಆರೋಪಿಗಳಲ್ಲಿ ಒಬ್ಬರಾದ ಮನೆ ಮಾಲೀಕ ವಿವೇಕಾನಂದ ಮಿಶ್ರಾ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು ಶನಿವಾರ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪತಿಯ ಅಸಿಸ್ಟೆಂಟ್ ಅಭಯ್ ಕುಮಾರ್ ಮತ್ತು ಇನ್ನೂ ತಲೆಮರೆಸಿಕೊಂಡಿರುವ ಪತಿ ಹಾಗೂ ಇನ್ನೂ ಇಬ್ಬರು ಕೊಲೆಯಲ್ಲಿ ಭಾಗಿಯಾಗಿರುವ ಕುರಿತು ಬಾಯ್ಬಿಟ್ಟಿದ್ದಾನೆ.
ಇಬ್ಬರೂ ಆರೋಪಿಗಳು ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಪತಿ ಸಿಕ್ಕಿಬಿದ್ದ ನಂತರವೇ ಕೊಲೆಗೆ ಕಾರಣ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಶುಕ್ರವಾರ, ದೆಹಲಿ ಪೊಲೀಸರಿಗೆ ವಿವೇಕ್ ವಿಹಾರ್ನಿಂದ ಪಿಸಿಆರ್ ಕರೆ ಬಂದಿದ್ದು, ಡಿಡಿಎ ಫ್ಲಾಟ್ಗಳಲ್ಲಿ ಒಂದರಿಂದ ದುರ್ವಾಸನೆ ಬರುತ್ತಿದೆ ಎಂದು ದೂರುಗಳು ಬಂದಿದ್ದವು.
ಸ್ಥಳಕ್ಕೆ ತಲುಪಿದ ನಂತರ, ಪೊಲೀಸರು ಮನೆ ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡುಕೊಂಡರು ಮತ್ತು ಹಿಂಬಾಗಿಲಿನ ಬಳಿ ರಕ್ತದ ಕುರುಹುಗಳು ಕಂಡುಬಂದವು. ಒಳಗೆ ಹೋಗಿ ನೋಡಿದಾಗ, ಚೀಲದೊಳಗೆ ಕೊಳೆತ ದೇಹವೊಂದು ಕಂಡುಬಂದಿತು, ಅದನ್ನು ಕಂಬಳಿಯಲ್ಲಿ ಸುತ್ತಿ ಹಾಸಿಗೆಯ ಪೆಟ್ಟಿಗೆಯೊಳಗೆ ಇಡಲಾಗಿತ್ತು.
ಮತ್ತಷ್ಟು ಓದಿ: ಬೆಳಗಾವಿ: ಮನೆಯಲ್ಲಿ ಕೂಡಿಹಾಕಿದ್ದಕ್ಕೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ!
ಆನಂದ್ ವಿಹಾರ್ನ ಸೂರಜ್ಮಲ್ ಪಾರ್ಕ್ ಬಳಿಯ ಮನೆಯ 65 ವರ್ಷದ ಮಾಲೀಕರನ್ನು ಪೊಲೀಸರು ಪತ್ತೆಹಚ್ಚಿ, ನಂತರ ಬಂಧಿಸಿದರು. ತನ್ನ ಪತಿಯ ಅನೈತಿಕ ಸಂಬಂಧ ತಿಳಿದ ನಂತರ, ಮಹಿಳೆ ಪಂಜಾಬ್ನ ಲುಧಿಯಾನದಲ್ಲಿರುವ ತನ್ನ ಹೆತ್ತವರ ಸ್ಥಳಕ್ಕೆ ತೆರಳಿದ್ದಾಳೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಮಾರ್ಚ್ 21 ರಂದು, ಅಂಜಲಿಯ ಪತಿ ಆಶಿಶ್ ಅವಳನ್ನು ಲುಧಿಯಾನದಿಂದ ದೆಹಲಿಗೆ ಕರೆತಂದನು. ಎರಡು ದಿನಗಳ ನಂತರ, ಆಶಿಶ್ ತನ್ನ ಸಹಾಯಕ ಮತ್ತು ಮನೆಮಾಲೀಕನೊಂದಿಗೆ ಅವಳನ್ನು ಕೊಲೆ ಮಾಡಿ, ಅವಳ ದೇಹವನ್ನು ಹಾಸಿಗೆಯ ಪೆಟ್ಟಿಗೆಯಲ್ಲಿ ತುಂಬಿಸಿ ಜೈಪುರಕ್ಕೆ ಓಡಿಹೋದನು, ಅಲ್ಲಿ ಅವರು ಅಭಯ್ನ ಸೋದರಸಂಬಂಧಿಯ ಮನೆಯಲ್ಲಿ ಉಳಿದುಕೊಂಡರು.
ಮನೆ ಮಾಲೀಕರು ದೆಹಲಿಗೆ ಹಿಂತಿರುಗಿದಾಗ, ಅಭಯ್ ಮತ್ತು ಆಶಿಶ್ ಇಬ್ಬರೂ ಬಿಹಾರಕ್ಕೆ ಓಡಿಹೋದರು. ಮೂವರು ವ್ಯಕ್ತಿಗಳು ಶವವನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸುತ್ತಿದ್ದಾಗ, ಮಾರ್ಚ್ 28 ರಂದು ಪೊಲೀಸರಿಗೆ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ಬಂದಿತು, ಹೀಗಾಗಿ ಅವರ ಸಂಚು ವಿಫಲವಾಯಿತು.
ಕೆಲವು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮೀರತ್ನಲ್ಲಿ ಮಹಿಳೆ ಮುಸ್ಕಾನ್ ಎಂಬಾಕೆ ತನ್ನ ಪ್ರಿಯಕರ ಸಾಹಿಲ್ ಜತೆ ಸೇರಿ ಪತಿ ಸೌರಭ್ನನ್ನು ಕೊಲೆ ಮಾಡಿ, 15 ತುಂಡುಗಳಾಗಿ ಕತ್ತರಿಸಿ, ಡ್ರಂನಲ್ಲಿರಿಸಿ ಸಿಮೆಂಟ್ ಹಾಕಿ ಸೀಲ್ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ