Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೇಹ್​ಗೆ ಕೆಲಸಕ್ಕೆ ಹೋಗುವುದ ತಪ್ಪಿಸಲು ಅಪಹರಣ ನಾಟಕವಾಡಿ ಸಿಕ್ಕಿಬಿದ್ದ ಬಿಹಾರದ ವ್ಯಕ್ತಿ

ಲೇಹ್​ಗೆ ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ಬಿಹಾರದ ಯುವಕನೊಬ್ಬ ಅಪಹರಣದ ನಾಟವಾಡಿರುವ ಘಟನೆ ವರದಿಯಾಗಿದೆ.ವ್ಯಕ್ತಿಯನ್ನು ಬಿಹಾರ ನಿವಾಸಿ ಸೂರಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸೂರಜ್ ಮತ್ತು ಅವನ ಸ್ನೇಹಿತರಾದ ವಿಮಲೇಶ್ ಷಾ ಮತ್ತು ಗೋಲು ಬಿಹಾರದಿಂದ ರೈಲು ಹತ್ತಿ ದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದರು.

ಲೇಹ್​ಗೆ ಕೆಲಸಕ್ಕೆ ಹೋಗುವುದ ತಪ್ಪಿಸಲು ಅಪಹರಣ ನಾಟಕವಾಡಿ ಸಿಕ್ಕಿಬಿದ್ದ ಬಿಹಾರದ ವ್ಯಕ್ತಿ
ಬಂಧನ
Follow us
ನಯನಾ ರಾಜೀವ್
|

Updated on:Mar 14, 2024 | 7:56 AM

ಸ್ನೇಹಿತರೆಲ್ಲರೂ ಉದ್ಯೋಗವನ್ನರಸಿ ಲೇಹ್​ಗೆ ಹೋಗಲು ತೀರ್ಮಾನಿಸಿದ್ದರು. ಬಿಹಾರದಲ್ಲಿ ವಿಪರೀತ ಸೆಕೆ ಅದೇ ಲೇಹ್​ನಲ್ಲಿ ತಡೆಯಲಾರದ ಚಳಿ, ಹೀಗಾಗಿ ಕೆಲಸಕ್ಕೆ ಹೋಗುವುದನ್ನು ಹೇಗಾದರೂ ತಪ್ಪಿಸಬೇಕೆಂದು ಆಲೋಚಿಸಿ ಅಪಹರಣದ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ.

ವ್ಯಕ್ತಿಯನ್ನು ಬಿಹಾರ ನಿವಾಸಿ ಸೂರಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸೂರಜ್ ಮತ್ತು ಅವನ ಸ್ನೇಹಿತರಾದ ವಿಮಲೇಶ್ ಷಾ ಮತ್ತು ಗೋಲು ಬಿಹಾರದಿಂದ ರೈಲು ಹತ್ತಿ ದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಮೂವರೂ ಲೇಹ್‌ಗೆ ಬಂದರು, ಆದರೆ ಸೂರಜ್ ತನ್ನ ಸ್ನೇಹಿತರು ಲೇಹ್‌ನ ಶೀತ ಹವಾಮಾನದ ಬಗ್ಗೆ ಚರ್ಚಿಸುವುದನ್ನು ಕೇಳಿ, ಅವನು ಜಾರಿಕೊಂಡು ದೆಹಲಿಯ ಕೇಶೋಪುರ್ ಸಬ್ಜಿ ಮಂಡಿಗೆ ವಾಪಸಾಗಿದ್ದ.

ಬಳಿಕ ಉಪಾಯ ಮಾಡಿ ತನ್ನ ಸಹೋದರನಿಗೆ ಮೆಸೇಜ್ ಮಾಡಿ, ತನ್ನ ಅಪಹರಣವಾಗಿದೆ, 5 ಸಾವಿರ ನೀಡಿ ತನ್ನನ್ನು ಬಿಡಿಸಿಕೊಂಡು ಹೋಗುವಂತೆ ಹೇಳಿದ್ದ. ಸೂರಜ್ ಅವರ ಸಹೋದರ ನಂತರ ಶಾಗೆ ಕರೆ ಮಾಡಿ ಸಂದೇಶಗಳ ಬಗ್ಗೆ ಮಾಹಿತಿ ನೀಡಿದರು, ನಂತರ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು.

ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಯಿತು ಮತ್ತು ಆರೋಪಿಯನ್ನು ಕೇಶೋಪುರ ಸಬ್ಜಿ ಮಂಡಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 am, Thu, 14 March 24