AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರಧಾನ್ಯಗಳ ಗುಣಮಟ್ಟ ಕಾಪಾಡಲು ಭಾರತೀಯ ಆಹಾರ ನಿಗಮ ಏನು ಮಾಡುತ್ತದೆ?

ಭಾರತೀಯ ಆಹಾರ ನಿಗಮವು (Food Corporation of India - FCI) ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಧಾನ್ಯಗಳನ್ನು ಪೂರೈಸುವ ಮೊದಲು ಅವುಗಳ ಗುಣಮಟ್ಟವನ್ನು ಕಾಪಾಡಲು ಅತ್ಯಾಧುನಿಕ ಹಾಗೂ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುತ್ತದೆ. ಆಹಾರಧಾನ್ಯಗಳನ್ನು ಸಂಗ್ರಹಿಸುವುದರ ಜೊತೆಗೆ ಅವುಗಳ ಗುಣಮಟ್ಟ ಕಾಪಾಡುವುದು ಕೂಡ ದೊಡ್ಡ ಜವಾಬ್ದಾರಿ. ಇದಕ್ಕೆ ಎಫ್​ಸಿಐ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಆಹಾರಧಾನ್ಯಗಳ ಗುಣಮಟ್ಟ ಕಾಪಾಡಲು ಭಾರತೀಯ ಆಹಾರ ನಿಗಮ ಏನು ಮಾಡುತ್ತದೆ?
FoodgrainImage Credit source: Getty Image
ಸುಷ್ಮಾ ಚಕ್ರೆ
|

Updated on:Aug 27, 2026 | 6:25 PM

Share

ನವದೆಹಲಿ, ಆಗಸ್ಟ್ 27: ಆಹಾರ ಭದ್ರತೆ ಎಂಬುದು ಕೇವಲ ರೈತರಿಂದ ಧಾನ್ಯಗಳನ್ನು ಖರೀದಿಸುವುದಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಧಾನ್ಯದ ಕಣವೂ ಸುರಕ್ಷಿತವಾಗಿ ದೇಶದ ಪ್ರಜೆಯನ್ನು ತಲುಪುವಂತೆ ಮಾಡುವುದೇ ಎಫ್‌ಸಿಐನ ಮುಖ್ಯ ಉದ್ದೇಶವಾಗಿದೆ. ಎಫ್‌ಸಿಐ (FCI) ಕೇವಲ ಆಹಾರಧಾನ್ಯಗಳನ್ನು (Foodgrains)  ಸಂಗ್ರಹಿಸಿಡುವುದಷ್ಟೇ ಅಲ್ಲ. ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿರಂತರ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತದೆ. ಪಡಿತರ ವ್ಯವಸ್ಥೆಯನ್ನು ತಲುಪುವ ಮೊದಲು ಧಾನ್ಯಗಳನ್ನು ಸುರಕ್ಷಿತವಾಗಿಡಲು, ಕೀಟನಾಶಕ ಹಾಗೂ ರೋಗನಿರೋಧಕ ಚಿಕಿತ್ಸೆಗಳಿಂದ ಹಿಡಿದು ಇಲಿ ಮತ್ತು ಪಕ್ಷಿಗಳ ನಿಯಂತ್ರಣದವರೆಗೆ ಪ್ರತಿಯೊಂದು ಹಂತದಲ್ಲೂ ಸೂಕ್ತ ಕ್ರಮ ವಹಿಸಲಾಗುತ್ತದೆ. ಏಕೆಂದರೆ ಆಹಾರ ಭದ್ರತೆಯು ಪ್ರತಿಯೊಂದು ಧಾನ್ಯದ ಕಣವನ್ನೂ ರಕ್ಷಿಸುವುದರಿಂದಲೇ ಪ್ರಾರಂಭವಾಗುತ್ತದೆ.

ವಿಜ್ಞಾನಾಧಾರಿತ ಗೋಡೌನ್​ಗಳು:

ಧಾನ್ಯಗಳನ್ನು ತೇವಾಂಶ ಮತ್ತು ಹುಳುಗಳಿಂದ ರಕ್ಷಿಸಲು ವೈಜ್ಞಾನಿಕವಾಗಿ ನಿರ್ಮಿಸಲಾದ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ: ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್: ಪಡಿತರ ವಿತರಣೆಯಲ್ಲಿ ವ್ಯತ್ಯಯ!

ತೇವಾಂಶ ನಿಯಂತ್ರಣ:

ಧಾನ್ಯಗಳನ್ನು ಗೋದಾಮಿಗೆ ತರುವ ಮುನ್ನ ಅವುಗಳಲ್ಲಿನ ತೇವಾಂಶವನ್ನು ಪರೀಕ್ಷಿಸಿ, ಸೂಕ್ತ ಮಟ್ಟಕ್ಕೆ ಒಣಗಿಸಲಾಗುತ್ತದೆ.

ಕೋಲ್ಡ್ ಪ್ಲಾಟ್‌ಫಾರ್ಮ್:

ನೆಲದ ತೇವಾಂಶ ಧಾನ್ಯಕ್ಕೆ ತಾಗದಂತೆ ತಡೆಯಲು ಮರದ ಹಲಗೆಗಳು ಮತ್ತು ಪ್ಲಾಸ್ಟಿಕ್ ಶೀಟ್‌ಗಳ ಮೇಲೆ ಮೂಟೆಗಳನ್ನು ಜೋಡಿಸಲಾಗುತ್ತದೆ.

ಧೂಮೀಕರಣ:

ಧಾನ್ಯಗಳಲ್ಲಿ ಹುಳುಗಳು ಅಥವಾ ಕೀಟಗಳು ಕಂಡುಬಂದರೆ, ‘ಅಲ್ಯೂಮಿನಿಯಂ ಫಾಸ್ಫೈಡ್’ನಂತಹ ರಾಸಾಯನಿಕಗಳನ್ನು ಬಳಸಿ ಧೂಮೀಕರಣ ಪ್ರಕ್ರಿಯೆ (Fumigation) ನಡೆಸಿ ಕೀಟಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗುತ್ತದೆ.

ಇದನ್ನೂ ಓದಿ: World Pulses Day 2026: ದ್ವಿದಳ ಧಾನ್ಯಗಳ ಸೇವನೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ

ಪಕ್ಷಿಗಳ ನಿಯಂತ್ರಣ:

ಪಕ್ಷಿಗಳು ಗೋದಾಮಿನ ಒಳಗೆ ಬಂದು ಧಾನ್ಯವನ್ನು ಹಾಳುಮಾಡದಂತೆ ಗಾಳಿ ಬೆಳಕು ಬರುವ ಕಿಟಕಿ ಮತ್ತು ವೆಂಟಿಲೇಟರ್‌ಗಳಿಗೆ ನೆಟ್‌ಗಳನ್ನು ಅಳವಡಿಸಲಾಗುತ್ತದೆ. ಗೋದಾಮಿನ ಆವರಣದಲ್ಲಿ ಚೆಲ್ಲಿದ ಧಾನ್ಯಗಳನ್ನು ತಕ್ಷಣವೇ ಸ್ವಚ್ಛಗೊಳಿಸುವ ಮೂಲಕ ಪಕ್ಷಿಗಳು ಆಕರ್ಷಿತವಾಗುವುದನ್ನು ತಡೆಯಲಾಗುತ್ತದೆ.

ನಿರಂತರ ತಪಾಸಣೆ ಮತ್ತು ಗುಣಮಟ್ಟ ಪರಿಶೀಲನೆ:

ಎಫ್‌ಸಿಐನ ತಾಂತ್ರಿಕ ತಂಡವು ಪ್ರತಿ ತಿಂಗಳು ಗೋದಾಮುಗಳಿಗೆ ಭೇಟಿ ನೀಡಿ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸುತ್ತದೆ. ಮೊದಲು ಸಂಗ್ರಹಿಸಿದ ಧಾನ್ಯವನ್ನು ಮೊದಲೇ ವಿತರಣೆಗೆ ಕಳುಹಿಸುವ ನಿಯಮವನ್ನು ಪಾಲಿಸಲಾಗುತ್ತದೆ, ಇದರಿಂದ ಧಾನ್ಯಗಳು ಹೆಚ್ಚು ಕಾಲ ಉಳಿದು ಹಾಳಾಗುವುದು ತಪ್ಪುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Thu, 27 August 26

Follow Us
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ
ಖುದ್ದು ಖಾಲಿ ನಿವೇಶನದ ಗಿಡಗಂಟೆ ಸ್ವಚ್ಛಗೊಳಿಸಿದ ಸಚಿವ ಕೃಷ್ಣಭೈರೇಗೌಡ
ಖುದ್ದು ಖಾಲಿ ನಿವೇಶನದ ಗಿಡಗಂಟೆ ಸ್ವಚ್ಛಗೊಳಿಸಿದ ಸಚಿವ ಕೃಷ್ಣಭೈರೇಗೌಡ