‘ಯುಪಿಐನಿಂದ 2 ಲಕ್ಷ ಸ್ಟಾರ್ಟ್ಅಪ್ಗಳವರೆಗೆ’; ಮೋದಿ ಸರ್ಕಾರದ ಸಾಧನೆಯ ಲೆಕ್ಕ ಕೊಟ್ಟ ಸಚಿವ ರಾಜನಾಥ್ ಸಿಂಗ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಸಾರ್ವಜನಿಕ ಸೇವೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. "ಸೇವೆಯೊಂದೇ ನರೇಂದ್ರ ಮೋದಿಯವರ ಜೀವನ ಮತ್ತು ಆಡಳಿತದ ಮೂಲ ಆತ್ಮ ಹಾಗೂ ಮಾರ್ಗದರ್ಶಿ ಸೂತ್ರವಾಗಿದೆ" ಎಂದು ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಮೋದಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ.

ಕೊಲ್ಕತ್ತಾ, ಸೆಪ್ಟೆಂಬರ್ 16: ಪ್ರಧಾನಿ ಮೋದಿ ಅವರ ಜನ್ಮದಿನದಂದು ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಲ್ಕತ್ತಾಕ್ಕೆ ತೆರಳಿದ್ದಾರೆ. ಸೆಪ್ಟೆಂಬರ್ 17ರಂದು ಪ್ರಧಾನಿಯವರ ಜನ್ಮದಿನವಾಗಿದ್ದು, ಅದಾದ 20 ದಿನಗಳ ನಂತರ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೋದಿ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಅವರು, “ನಾವು ಅತಿಯಾದ ನಿಯಂತ್ರಣ ಮತ್ತು ಕಡಿಮೆ ಆಡಳಿತದ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ನಾವು ಅದನ್ನು ಸರಿಯಾದ ನಿಯಂತ್ರಣ ಮತ್ತು ಉತ್ತಮ ಆಡಳಿತದ ಮನಸ್ಥಿತಿಯನ್ನಾಗಿ ಮಾಡಿದ್ದೇವೆ. ಇದು ‘ಮೋದಿನಾಮಿಕ್ಸ್’. ಮೋದಿಯನ್ನು ಅರ್ಥಮಾಡಿಕೊಳ್ಳಲು, ನೀವು ಭಾರತವನ್ನು ಅರ್ಥಮಾಡಿಕೊಳ್ಳಬೇಕು” ಎಂದಿದ್ದಾರೆ.
ಯುಪಿಐ ಬಗ್ಗೆ ಮಾತನಾಡುವುದಾದರೆ, ಆರಂಭದಲ್ಲಿ ಇದು ವಿರೋಧವನ್ನು ಎದುರಿಸಿತು. ಯುಪಿಐ ಮೂಲಕ 23.66 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಫ್ರೆಂಚ್ ಅಧ್ಯಕ್ಷರು ಯುಪಿಐ ಅನ್ನು ಹೊಗಳಿದ್ದಾರೆ. ಬೀದಿ ವ್ಯಾಪಾರಿಗಳು ಯುಪಿಐ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರ ಕೆಲಸದ ವಿಧಾನ ಬದಲಾಗಿದೆ. ಒಂದು ಸ್ಟಾರ್ಟ್ಅಪ್ ಮೊದಲ 3ಡಿ ಮುದ್ರಿತ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಅನ್ನು ರಚಿಸಿದೆ. ಇದು ದೊಡ್ಡ ಸಾಧನೆ ಎಂದು ನೀವು ಭಾವಿಸುವುದಿಲ್ಲವೇ? ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.
ಸ್ಟಾರ್ಟಪ್ಗಳ ಹೆಚ್ಚಳ:
ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ. 250 ಮಿಲಿಯನ್ ಜನರನ್ನು ಬಡತನದಿಂದ ಹೊರತರಲಾಗಿದೆ. ನಾವು 120 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. 40 ಮಿಲಿಯನ್ ಜನರಿಗೆ ಮನೆಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿ ಒಬ್ಬ ಮಹಾನ್ ನಾಯಕನಿಗೆ ಬೇಕಾದ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ. 2014ರಲ್ಲಿ ಕೇವಲ 500ರಷ್ಟಿದ್ದ ಸ್ಟಾರ್ಟ್ಅಪ್ಗಳ ಸಂಖ್ಯೆ ಇಂದು 2,00,000 ಆಗಿದೆ. ರಕ್ಷಣಾ ವಲಯದ ರಫ್ತುಗಳು 56%ರಷ್ಟು ಹೆಚ್ಚಾಗಿ 1.08 ಲಕ್ಷ ಕೋಟಿ ರೂ. ತಲುಪಿದೆ. 100 ದೇಶಗಳು ನಮ್ಮ ರಕ್ಷಣಾ ಉತ್ಪನ್ನಗಳನ್ನು ಖರೀದಿಸುತ್ತವೆ ಎಂದಿದ್ದಾರೆ.
प्रधानमंत्री @narendramodi जी के नेतृत्व में आज पूरा देश प्रगति, सुशासन और सेवा-भाव से आगे बढ़ रहा है। बंगाल की महान विरासत के सम्मान से लेकर देश को नए शिखर पर पहुँचाने तक, मोदी जी के 25 वर्षों का मूल मंत्र रहा है ‘Service Before Self’.
इसी निस्वार्थ सेवा और समर्पण को समर्पित… pic.twitter.com/2JCMMDIILf
— Rajnath Singh (@rajnathsingh) September 16, 2026
“ದೇಶದ ಉಳಿದ ಭಾಗಗಳಿಗಿಂತ ಮೊದಲು ಪ್ರತಿಯೊಂದು ಮೂಲೆಗೂ ವಿದ್ಯುತ್ ತಲುಪಿದ ಏಕೈಕ ರಾಜ್ಯ ಗುಜರಾತ್. ಈಗ, ಸ್ವತಂತ್ರ ಭಾರತದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗಳ ಸಂಖ್ಯೆ ಹೆಚ್ಚಾಗಿದೆ. ಡಿಬಿಟಿ ಮೂಲಕ ಜನರ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಹಿಂದೆ ಮಧ್ಯವರ್ತಿಗಳಿಗೆ ಹೋಗುತ್ತಿದ್ದ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಸೋರಿಕೆಯನ್ನು ನಾವು ನಿಲ್ಲಿಸಿದ್ದೇವೆ. ಇದು ಐತಿಹಾಸಿಕ ಸಾಧನೆ” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಎಲ್ಲಾ ಎನ್ಡಿಎ ಮಿತ್ರಪಕ್ಷಗಳು ಒಂದು ವರ್ಷದ ಕಾಲ ಭಾರತದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿರುವುದಾಗಿ ರಾಜನಾಥ್ ಸಿಂಗ್ ಹೇಳಿದರು. ನಾಳೆ 12 ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿಯವರ ಜನ್ಮದಿನದಂದು ನಾವು ದೀಪಗಳನ್ನು ಬೆಳಗಿಸುತ್ತೇವೆ. ನಾವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.
हमारी सरकार ने भारत को दुनिया का टेक्नोलॉजी और टैलेंट हब के रूप में स्थापित किया है।
सेमीकंडक्टर चिप्स से लेकर दुनिया की 60% वैक्सीन निर्माण और वैश्विक स्तर पर दूसरे सबसे बड़े मोबाइल निर्माता बनने तक का यह सफ़र ‘मजबूत नेतृत्व और दूरदर्शी नीतियों’ का उदाहरण है। pic.twitter.com/cHeWL0b16A
— Rajnath Singh (@rajnathsingh) September 16, 2026
“ಕಳೆದ 25 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಪ್ರತಿಯೊಂದು ನಿರ್ಧಾರವೂ ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವ ‘ಅಂತ್ಯೋದಯ’ ಹಾಗೂ ಜನಸೇವೆಯ ಉದ್ದೇಶವನ್ನು ಹೊಂದಿತ್ತು. ಬಡವರ ಕಲ್ಯಾಣ, ಮೂಲಸೌಕರ್ಯ ವೃದ್ಧಿ ಮತ್ತು ಸುಡಳಿತಕ್ಕೆ ಅವರು ಹೊಸ ಭಾಷ್ಯ ಬರೆದಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Wed, 16 September 26




