AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಎಫ್​​ಸಿಗೆ ಹೊಸ ಸದಸ್ಯರ ಆಯ್ಕೆ, ಪ್ರೀತಿ ಜಿಂಟಾ, ಸುನಿಲ್ ಶೆಟ್ಟಿ ಜೊತೆ ಕನ್ನಡದ ಕಲಾವಿದರಿಗೂ ಸ್ಥಾನ

CBFC Members: ಖ್ಯಾತ ನಟ ಸುನಿಲ್ ಶೆಟ್ಟಿ, ನಟಿ ಪ್ರೀತಿ ಜಿಂಟಾ, ನಟ ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಖ್ಯಾತ ನಿರ್ದೇಶಕ ಪ್ರಿಯದರ್ಶನ್, ಪ್ರೊಸೆನ್ಜಿತ್ ಚಟರ್ಜಿ ಸೇರಿದಂತೆ 18 ಸದಸ್ಯರೊಂದಿಗೆ ಕೇಂದ್ರ ಸರ್ಕಾರವು ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಒಬ್ಬ ಜನಪ್ರಿಯ ಕಲಾವಿದರಿಗೂ ಸಹ ಸ್ಥಾನ ನೀಡಲಾಗಿದೆ. ಯಾರು ಆ ಕಲಾವಿದ?

ಸಿಬಿಎಫ್​​ಸಿಗೆ ಹೊಸ ಸದಸ್ಯರ ಆಯ್ಕೆ, ಪ್ರೀತಿ ಜಿಂಟಾ, ಸುನಿಲ್ ಶೆಟ್ಟಿ ಜೊತೆ ಕನ್ನಡದ ಕಲಾವಿದರಿಗೂ ಸ್ಥಾನ
Cbfc
ಮಂಜುನಾಥ ಸಿ.
|

Updated on: Sep 16, 2026 | 10:32 PM

Share

ಕೇಂದ್ರ ಸರ್ಕಾರವು ಸಿಬಿಎಫ್​​ಸಿ ಅಥವಾ ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಇಂದು (ಸೆಪ್ಟೆಂಬರ್ 16) ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ 18 ಸದಸ್ಯರ ಹೊಸ ತಂಡವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹೊಸ ಪಟ್ಟಿಯಲ್ಲಿ ವಿವಿಧ ಚಿತ್ರರಂಗದ ಗಣ್ಯರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲೂ ಬಾಲಿವುಡ್​​ಗೆ ಸಂಬಂಧಿಸಿದವರ ಸಂಖ್ಯೆ ಹೆಚ್ಚಾಗಿದೆ. ಪಟ್ಟಿಯಲ್ಲಿ ಒಬ್ಬ ಕರ್ನಾಟಕದ ಕಲಾವಿದರಿಗೂ ಅವಕಾಶ ನೀಡಲಾಗಿದೆ.

ಖ್ಯಾತ ನಟ ಸುನಿಲ್ ಶೆಟ್ಟಿ, ನಟಿ ಪ್ರೀತಿ ಜಿಂಟಾ, ನಟ ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಖ್ಯಾತ ನಿರ್ದೇಶಕ ಪ್ರಿಯದರ್ಶನ್, ಪ್ರೊಸೆನ್ಜಿತ್ ಚಟರ್ಜಿ ಸೇರಿದಂತೆ 18 ಸದಸ್ಯರೊಂದಿಗೆ ಕೇಂದ್ರ ಸರ್ಕಾರವು ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಈ ಹೊಸ ಸದಸ್ಯರ ಅಧಿಕಾರ ಅವಧಿಯು ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ಎರಡರಲ್ಲಿ ಯಾವುದು ಮೊದಲು ಘಟಿಸುತ್ತದೆಯೋ ಅದನ್ನು ಮಾನ್ಯ ಮಾಡಲಾಗುತ್ತದೆ.

ಈ ಪಟ್ಟಿಯಲ್ಲಿ ಬೆಂಗಳೂರಿನ ಹೆಮ್ಮೆಯ ಸಂಗೀತ ಕಲಾವಿದ ರಿಕ್ಕಿ ಕೇಜ್ ಅವರ ಹೆಸರು ಇದೆ. ಮೂರು ಗ್ರ್ಯಾಮಿ ಪ್ರಶಸ್ತಿಗಳು ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ರಿಕ್ಕಿ ಕೇಜ್ ಅವರು ಸಿಬಿಎಫ್​​ಸಿ ಸದಸ್ಯರಾಗಿದ್ದಾರೆ. ಇವರ ಜೊತೆಗೆ ನಿರ್ದೇಶಕಿ ಪಲ್ಲವಿ ಜೋಶಿ, ನಟಿ ರೂಪಾಲಿ ಗಂಗೂಲಿ, ಚಲನಚಿತ್ರ ನಿರ್ದೇಶಕ ನೀಲಾ ಮಾಧಬ್ ಪಾಂಡಾ, ನಟಿ ನಿಶಿಂಧಾ ವಾಡ್, ಗಾಯಕ ಹಂಸರಾಜ್ ಹಂಸ ಮತ್ತು ನಿರ್ದೇಶಕ ವಾಮನ್ ಕೇಂದ್ರೆ, ವಿನೋದ್ ಅನುಪಮ್, ಅಭಿಷೇಕ್ ಜೈನ್, ಸುಪ್ರಿಯಾ ಯರ್ಲಗಡ್ಡ, ಯತೀಂದ್ರ ಮಿಶ್ರಾ ಮತ್ತು ರಮೇಶ್ ಪಟಾಂಜೆ ಕೂಡ ಸೇರಿದ್ದಾರೆ.

ಇದನ್ನೂ ಓದಿ:ಸೈಮಾ ಪ್ರಶಸ್ತಿ ಪಡೆದ ಖುಷಿಯಲ್ಲಿ ನಟಿ ಆಶಿಕಾ ರಂಗನಾಥ್

ಭಾರತದಲ್ಲಿ ಚಲನಚಿತ್ರಗಳಿಗೆ ಸಾರ್ವಜನಿಕ ಪ್ರದರ್ಶನಕ್ಕಾಗಿ ಪ್ರಮಾಣಪತ್ರ ನೀಡುವ ಜವಾಬ್ದಾರಿಯನ್ನು ಸಿಬಿಎಫ್​​ಸಿ ಹೊಂದಿದೆ. ಸರ್ಕಾರವು 2026ರ ಮೇ ತಿಂಗಳಲ್ಲಿ ಶಶಿ ಶೇಖರ್ ವೆಂಪತಿ ಅವರನ್ನು ಮೂರು ವರ್ಷಗಳ ಅವಧಿಗೆ CBFC ಅಧ್ಯಕ್ಷರನ್ನಾಗಿ ನೇಮಿಸಿತ್ತು. ಪ್ರಸೂನ್ ಜೋಶಿ ಅವರು ಪ್ರಸಾರ ಭಾರತೀಯ ಅಧ್ಯಕ್ಷರಾಗಿ ನೇಮಕಗೊಂಡು ಹುದ್ದೆಯಿಂದ ಕೆಳಗಿಳಿದ ನಂತರ, ಶಶಿ ಶೇಖರ್ ವೆಂಪತಿ ಆ ಸ್ಥಾನವನ್ನು ವಹಿಸಿಕೊಂಡಿದ್ದರು. ಇತ್ತೀಚಿನ ಅಧಿಸೂಚನೆಯ ಪ್ರಕಾರ ಅಧ್ಯಕ್ಷರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಿಬಿಎಫ್​​ಸಿ ಹಾಗೂ ಸಿನಿಮಾ ನಿರ್ದೇಶಕರುಗಳ ಮಧ್ಯೆ ಸಾಕಷ್ಟು ತಿಕ್ಕಾಟಗಳು ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿದೆ. ಸಿಬಿಎಫ್​​ಸಿಯು ಅತಿಯಾದ ಸೆನ್ಸಾರ್​​ಶಿಪ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿದಾಗ ರಾಜಕೀಯದ ಆರೋಪವೂ ಸಹ ಕೇಳಿ ಬಂದಿತ್ತು. ಇದರ ನಡುವೆ ಇದೀಗ ಸದಸ್ಯರ ಬದಲಾವಣೆ ಆಗಿರುವುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​