ತಹಸೀಲ್ದಾರ್​​ನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಅಧಿಕಾರಿಯ ಪತ್ನಿಗೆ ಶಾಕ್ ಮೇಲೆ ಶಾಕ್

ಅಧಿಕಾರಿಯೊಬ್ಬರು ಒತ್ತಾಯಕ್ಕೆ ಮಣಿದು ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಲವಂತವಾಗಿ ಮತಾಂತರ ಮಾಡಿ, ಆ ಅಧಿಕಾರಿಗೆ ಮದುವೆಯಾಗಿದ್ದರು, ಮುಸ್ಲಿಂ ಮಹಿಳೆಯ ಜತೆಗೆ ಮರುಮದುವೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಸುದ್ದಿ ದೇಶದ್ಯಾಂತ ಭಾರೀ ಚರ್ಚೆ ಕಾರಣವಾಗಿದೆ. ಆಶಿಶ್ ಗುಪ್ತಾ ಎಂಬ ತಹಸೀಲ್ದಾರ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಈ ಬಗ್ಗೆ ಆಶಿಶ್ ಗುಪ್ತಾ ಅವರ ಪತ್ನಿ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ತಹಸೀಲ್ದಾರ್​​ನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಅಧಿಕಾರಿಯ ಪತ್ನಿಗೆ ಶಾಕ್ ಮೇಲೆ ಶಾಕ್

Updated on: Dec 29, 2023 | 3:22 PM

ಲಕ್ನೋ,ಡಿ.29: ಅಧಿಕಾರಿಯೊಬ್ಬರು ಒತ್ತಾಯಕ್ಕೆ ಮಣಿದು ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಲವಂತವಾಗಿ ಮತಾಂತರ ಮಾಡಿ, ಆ ಅಧಿಕಾರಿಗೆ ಮದುವೆಯಾಗಿದ್ದರು, ಮುಸ್ಲಿಂ ಮಹಿಳೆಯ ಜತೆಗೆ ಮತ್ತೊಂದು ಮದುವೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಸುದ್ದಿ ದೇಶದ್ಯಾಂತ ಭಾರೀ ಚರ್ಚೆ ಕಾರಣವಾಗಿದೆ. ಆಶಿಶ್ ಗುಪ್ತಾ ಎಂಬ ತಹಸೀಲ್ದಾರ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಈ ಬಗ್ಗೆ ಆಶಿಶ್ ಗುಪ್ತಾ ಅವರ ಪತ್ನಿ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ. ಮತಾಂತರಗೊಂಡ ಆಶಿಶ್ ಗುಪ್ತಾ ಇದೀಗ ಮೊಹಮ್ಮದ್ ಯೂಸುಫ್ ಎಂದು ಹೆಸರು ಕೂಡ ಬದಲಾಯಿಸಲಾಗಿದೆ. ದಕ್ಷಿಣ ಉತ್ತರ ಪ್ರದೇಶದ ಮೌದಾಹಾ ಪಟ್ಟಣದಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಆತನ ಪತ್ನಿ ಹೇಳಿದ್ದಾರೆ.

ಸೆಪ್ಟೆಂಬರ್ 2 ರಿಂದ ಆಶಿಶ್ ಗುಪ್ತಾ ಮೌದಾಹಾದಲ್ಲಿ ನಾಯಬ್ ತಹಸೀಲ್ದಾರಾಗಿ ಸೇವೆ ಸಲ್ಲಿಸುತ್ತಿದ್ದರು. ಪಟ್ಟಣದ ಕಚರಿಯಾ ಬಾಬಾ ಮಸೀದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಗಂಡನ್ನು ಮಸೀದಿ ಕರೆದುಕೊಂಡು ಹೋಗಿ ನಮಾಜ್​​​ ಮಾಡುತ್ತಿದ್ದರು ಎಂದು ಗುಪ್ತಾ ಅವರ ಪತ್ನಿ ಆರತಿ ಯಜ್ಞಸೈನಿ ಹೇಳಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಿದಾಗ ಹಲವು ಅಚ್ಚರಿಯ ಸಂಗತಿಗಳು ಹೊರಬಿದ್ದಿದೆ. ಜತೆಗೆ ಆಶಿಶ್ ಗುಪ್ತಾ ಅವರು ಹೆಸರು ಬದಲಾವಣೆ ಮಾಡಿಕೊಂಡಿದ್ದು ಮಾತ್ರವಲ್ಲ ತಾನು ಕಾನ್ಪುರದ ನಿವಾಸಿ ಎಂದು ಕೂಡ ಬದಲಾಯಿಸಲಾಗಿತ್ತು.

ಇನ್ನು ಆರತಿ ಯಜ್ಞಸೈನಿ ದೂರಿನ ಆಧಾರದ ಮೇಲೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಯೂಸುಫ್ ಬೇರೆ ಯಾರೂ ಅಲ್ಲ, ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ವಿಚಾರ ಪೊಲೀಸರಿಗೆ ತಿಳಿದಿದೆ ಎಂದು ಮಸೀದಿಯ ಧರ್ಮಗುರು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಧರ್ಮಗುರುವಿನ ಮೇಲೆ ಬಲವಂತದ ಧಾರ್ಮಿಕ ಮತಾಂತರ ಮತ್ತು ರುಕ್ಷಾರ್ ಎಂಬ ಮಹಿಳೆಯೊಂದಿಗೆ ‘ಅನೈತಿಕ’ ವಿವಾಹಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಎಲ್ಲರೂ ಇಸ್ಲಾಂಗೆ ಮತಾಂತರವಾಗಿ, ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿ: ಇದು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ

ಪೊಲೀಸರು ತನಿಖೆ ವೇಳೆ ಈ ಮತಾಂತರ ಮಾಡಿದ ವ್ಯಕ್ತಿಯನ್ನು ರುಕ್ಷಾರ್ ಅವರ ತಂದೆ ಮುನ್ನಾ ಎಂದು ಗುರುತಿಸಲಾಗಿದೆ. ಇತ ಮಸೀದಿಯ ಧರ್ಮಗುರು ಎಂದು ಹೇಳಲಾಗಿದೆ. ಇಂತಹ ಅನೇಕ ಮತಾಂತರ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಆಶಿಶ್ ಗುಪ್ತಾ ಅವರನ್ನು ತನ್ನ ಮಗಳ ಜತೆಗೆ ಮದುವೆಗೂ ಮುನ್ನ ಮತಾಂತರ ಮಾಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಈ ಮತಾಂತರ ಆಶಿಶ್ ಗುಪ್ತಾ ಅವರಿಗೆ ಒಪ್ಪಿಗೆ ಇದ್ದು ಮಾಡಿದ್ದಾರೋ ಅಥವಾ ಒಪ್ಪಿಗೆ ಇಲ್ಲದೆ ಮಾಡಿದ್ದಾರೋ ಎಂಬುದನ್ನು ಇನ್ನು ತನಿಖೆ ಮಾಡಬೇಕಿದೆ. ಈ ಪ್ರರಕಣಕ್ಕೆ ಸಂಬಂಧಿಸಿದಂತೆ ಧರ್ಮಗುರು ಮುನ್ನಾನ್ನು ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us