AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ನಂತರ ಜೈಲಿನಿಂದ ಬಿಡುಗಡೆಯಾದ  ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ 

Om Prakash Chautala: ಐಎನ್‌ಎಲ್‌ಡಿ ಮುಖ್ಯಸ್ಥರೂ ಹರ್ಯಾಣದ ಮುಖ್ಯಮಂತ್ರಿಯಾಗಿದ್ದಾಗ 1999-2000ರಲ್ಲಿ ಹರಿಯಾಣದಲ್ಲಿ 3,206 ಮೂಲ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ್ದಕ್ಕಾಗಿ ಚೌಟಾಲಾ ಮತ್ತು ಅವರ ಪುತ್ರ ಅಜಯ್ ಸೇರಿದಂತೆ ಇತರ 53 ಜನರನ್ನು ದೆಹಲಿ ನ್ಯಾಯಾಲಯ 2013 ರ ಜನವರಿ 13 ರಂದು ಶಿಕ್ಷೆಗೊಳಪಡಿಸಿತ್ತು.

ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ನಂತರ ಜೈಲಿನಿಂದ ಬಿಡುಗಡೆಯಾದ  ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ 
ಓಂ ಪ್ರಕಾಶ್ ಚೌಟಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 02, 2021 | 3:51 PM

ದೆಹಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರು ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ಚೌಟಾಲಾ ಹತ್ತು ವರ್ಷಗಳ ಶಿಕ್ಷೆ ಅನುಭವಿಸಿದ್ದಾರೆ . ಐಎನ್‌ಎಲ್‌ಡಿ ಮುಖ್ಯಸ್ಥರೂ ಹರ್ಯಾಣದ ಮುಖ್ಯಮಂತ್ರಿಯಾಗಿದ್ದಾಗ 1999-2000ರಲ್ಲಿ ಹರಿಯಾಣದಲ್ಲಿ 3,206 ಮೂಲ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ್ದಕ್ಕಾಗಿ ಚೌಟಾಲಾ ಮತ್ತು ಅವರ ಪುತ್ರ ಅಜಯ್ ಸೇರಿದಂತೆ ಇತರ 53 ಜನರನ್ನು ದೆಹಲಿ ನ್ಯಾಯಾಲಯ 2013 ರ ಜನವರಿ 13 ರಂದು ಶಿಕ್ಷೆಗೊಳಪಡಿಸಿತ್ತು. ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ  ಶಿಕ್ಷಕರನ್ನು ನೇಮಕ ಮಾಡಲು ನಾಯಕರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದು, ಆಯ್ದ ಅಭ್ಯರ್ಥಿಗಳ ಮೂಲ ಪಟ್ಟಿಯನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶ ನೀಡಿತ್ತು.

86 ವರ್ಷದ ಹಿರಿಯ ರಾಜಕಾರಣಿ ವೈದ್ಯಕೀಯ ಚಿಕಿತ್ಸೆಗಾಗಿ ಮೇಲೆ ಪೆರೋಲ್​​ನಲ್ಲಿ ಹೊರಗಿದ್ದರು. ಗುರುಗ್ರಾಮ್‌ನ ಆಸ್ಪತ್ರೆಗೆ ದಾಖಲಾಗಿದ್ದಾಗ ಜೈಲು ಅಧಿಕಾರಿಗಳು ಜೂನ್ 22 ರಂದು ಪತ್ರ ಬರೆದಿದ್ದು, ಅವರ ಶಿಕ್ಷೆ ಮುಗಿದಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ತಿಹಾರ್ ಜೈಲು ತಲುಪಿದ ಚೌಟಾಲಾ ಬಿಡುಗಡೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಚೌಟಾಲಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ವಕ್ತಾರರು ಖಚಿತಪಡಿಸಿದ್ದಾರೆ. “ಅವರು ಬೆಳಿಗ್ಗೆ 2 ಗಂಟೆಗೆ, ಪೆರೋಲ್​​ಗೆ ಮುಂಚಿತವಾಗಿ ಜೈಲಿಗೆ ಬಂದರು. ಅವರು ಶಿಕ್ಷೆಗೆ ಸಂಬಂಧಿಸಿದ ಕಾಗದದ ಕೆಲಸವನ್ನು ಪೂರ್ಣಗೊಳಿಸಿದರು ಮತ್ತು ಈಗ ಬಿಡುಗಡೆ ಮಾಡಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಕೊವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತಿಹಾರ್ ಜೈಲಿನ ಅಧಿಕಾರಿಗಳು 1,000 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದಾಗ ಚೌಟಾಲಾ ಕೂಡಾ ಹೊರಗಿದ್ದರು. ಜೈಲಿನ ಅಧಿಕಾರಿಗಳು ಈ ವರ್ಷದ ಫೆಬ್ರವರಿಯಲ್ಲಿ “ವೈದ್ಯಕೀಯ ಚಿಕಿತ್ಸೆ ” ಉಲ್ಲೇಖಿಸಿ ಅವರೊಂದಿಗೆ ಬಿಡುಗಡೆಯಾದ ಇತರರಂತೆ ಚೌಟಾಲಾ ಕೂಡಾ ತಿಹಾರ್‌ಗೆ ಹಿಂತಿರುಗಲಿಲ್ಲ ಎಂದು ಹೇಳಿದರು.

ಜೈಲು ಶಿಕ್ಷೆ ಅನುಭವಿಸುತ್ತಿದ್ದರೂ ಇಂಡಿಯನ್ ನ್ಯಾಷನಲ್ ಲೋಕ ದಳದ (ಐಎನ್‌ಎಲ್‌ಡಿ) ಮುಖ್ಯಸ್ಥರಾಗಿ ಮುಂದುವರಿದ ಹಿರಿಯ ರಾಜಕಾರಣಿ, ತಮ್ಮ ಪೆರೋಲ್ ವಿಸ್ತರಣೆಗಾಗಿ ದೆಹಲಿ ಹೈಕೋರ್ಟ್‌ಗೆ ತೆರಳಿದ್ದರು. “ಇದನ್ನು ಹೈಕೋರ್ಟ್ ಎರಡು ಬಾರಿ ವಿಸ್ತರಿಸಿದೆ” ಎಂದು ಹೆಸರು ಹೆಸರು ಹೇಳಲು ಇಚ್ಛಿಸದ ಜೈಲಿನ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಚೌಟಾಲಾ ಅವರಿಗೆ 3 ತಿಂಗಳಿಗಿಂತ ಕಡಿಮೆ ಜೈಲು ಶಿಕ್ಷೆ ಉಳಿದಿರುವ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ, ಇದನ್ನು ಮನ್ನಾ ಎಂದು ಪರಿಗಣಿಸಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು, ದೆಹಲಿ ಸರ್ಕಾರವು 6 ತಿಂಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ಉಳಿದಿರುವ ಕೈದಿಗಳಿಗೆ ಶಿಕ್ಷೆ ಮನ್ನಾ ನೀಡುವ ಆದೇಶ ಹೊರಡಿಸಿದೆ. ಚೌಟಾಲಾ ಅವರಂತೆ ಶಿಕ್ಷೆ ಮನ್ನಾಗೆ ಅರ್ಹತೆ ಪಡೆದ ಕನಿಷ್ಠ 20 ಇತರ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.

ಅಜಯ್ ಚೌಟಾಲಾ ಅವರು ಇನ್ನೂ ಏಳರಿಂದದ ಎಂಟು ತಿಂಗಳುಗಳ ಕಾಲ ಶಿಕ್ಷೆ ಅನುಭವಿಸಲು ಬಾಕಿ ಇರುವುದರಿಂದ ಶಿಕ್ಷೆ ಮನ್ನಾ ಅರ್ಹತೆ ಪಡೆದಿಲ್ಲ ಇಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಖಚಿತವಾಗಿ ಹೇಳುವುದಾದರೆ, ಅಂತಹ ಕೈದಿಗಳಿಗೆ ಸರ್ಕಾರ ಶಿಕ್ಷೆ ಮನ್ನಾ ನೀಡುತ್ತಿರುವುದು ಇದೇ ಮೊದಲಲ್ಲ. ಇನ್ನೂ ಜೈಲಿನಲ್ಲಿರುವ ಅಜಯ್ ಕೌಟುಂಬಿಕ ಕಲಹದಿಂದಾಗಿ ಪಕ್ಷದಿಂದ ಹೊರನಡೆದು 2018 ರ ಡಿಸೆಂಬರ್‌ನಲ್ಲಿ ತಮ್ಮ ಪುತ್ರರಾದ ದುಶ್ಯಂತ್ ಮತ್ತು ದಿಗ್ವಿಜಯ್ ಚೌಟಾಲಾ ಅವರೊಂದಿಗೆ ಜನ್ನಾಯಕ್ ಜನತಾ ಪಾರ್ಟಿ (ಜೆಜೆಪಿ) ರಚಿಸಿದರು.

2019 ರ ವಿಧಾನಸಭಾ ಚುನಾವಣೆಯಲ್ಲಿ ಜೆಜೆಪಿ 10 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣದ ಸಮ್ಮಿಶ್ರ ಸರ್ಕಾರದಲ್ಲಿ ದುಶ್ಯಂತ್ ಉಪಮುಖ್ಯಮಂತ್ರಿಯಾದರು. ಚೌಟಾಲಾ ಅವರ ಐಎನ್‌ಎಲ್‌ಡಿ ಕೇವಲ ಒಂದು ಸೀಟಿ ಗಳಿಸಿತ್ತು. ಸಿರ್ಸಾದ ಎಲ್ಲೆನಾಬಾದ್ ಸೀಟಿನಿಂದ ಚೌಟಾಲಾ ಅವರ ಮಗ ಅಭಯ್ ಈ ಸೀಟು ಗೆದ್ದಿದ್ದರು. ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಅಭಯ್ ಈ ವರ್ಷದ ಜನವರಿಯಲ್ಲಿ ವಿಧಾನಸಭೆಗೆ ರಾಜೀನಾಮೆ ನೀಡಿದರು.

ಇದನ್ನೂ ಓದಿ: ಕೇಂದ್ರ ಮತ್ತು ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧ: ದುಷ್ಯಂತ್ ಚೌಟಾಲಾ

ಇದನ್ನೂ ಓದಿ: Sudhindra Haldodderi: ಸುಪ್ರಸಿದ್ಧ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

(Former Haryana chief minister Om Prakash Chautala released from Tihar jail after serving a ten-year sentence)

Published On - 3:49 pm, Fri, 2 July 21

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್