AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಕಬ್ಬಿಣದ ಸೇತುವೆಗಳನ್ನು ರದ್ದಿ ಎಂದು ಗುರುತಿಸಿ ಹರಾಜು ಹಾಕಲು ಸರ್ಕಾರದ ನಿರ್ಧಾರ; 60 ಅಡಿ ಉದ್ದದ ಬ್ರಿಡ್ಜ್​​ ಕಳವಾದ ಬೆನ್ನಲ್ಲೇ ಕ್ರಮ

ಈ ಬಗ್ಗೆ ಬಿಹಾರದ ಸಂಪನ್ಮೂಲ ಸಚಿವ ಸಂಜಯ್​ ಕುಮಾರ್ ಝಾ ಮಾತನಾಡಿ, 60 ಅಡಿ ಉದ್ದದ ಸೇತುವೆ ಕಳವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಇಬ್ಬರು ಎಂಜಿನಿಯರ್​​ಗಳನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಕಬ್ಬಿಣದ ಸೇತುವೆಗಳನ್ನು ರದ್ದಿ ಎಂದು ಗುರುತಿಸಿ ಹರಾಜು ಹಾಕಲು ಸರ್ಕಾರದ ನಿರ್ಧಾರ; 60 ಅಡಿ ಉದ್ದದ ಬ್ರಿಡ್ಜ್​​ ಕಳವಾದ ಬೆನ್ನಲ್ಲೇ ಕ್ರಮ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 13, 2022 | 11:32 AM

Share

ಬಿಹಾರ ರಾಜ್ಯಾದ್ಯಂತ ಇರುವ ಎಲ್ಲ ಬಳಕೆಯಾಗದ ಕಬ್ಬಿಣದ ಸೇತುವೆಗಳನ್ನು ಹರಾಜು ಹಾಕಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕೆಲವು ಕಡೆ ಸೇತುವೆ ಇದ್ದರೂ ಅಲ್ಲಿ ಜನಸಂಚಾರ ಇಲ್ಲ. ಕೆಲವು ಸೇತುವೆಗಳು ಶಿಥಿಲಗೊಂಡಿರುವಂಥದ್ದಿದೆ. ಪಾಳು ಬಿದ್ದಿರುವ ಬ್ರಿಜ್​​ಗಳೂ ಇವೆ. ಅಂಥವುಗಳನ್ನು ರದ್ದಿ ಎಂದು ಗುರುತಿಸಿ, ಹರಾಜು ಹಾಕುವುದಾಗಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಬಿಹಾರದ ರೋಹ್ತಾಸ್​ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಳ್ಳರು ಕದ್ದಿದ್ದರು. ಅದೊಂದು ಅರ್ಧಂಬರ್ಧ ಹಾಳಾದ ಕಬ್ಬಿಣದ ಸೇತುವೆ. ಅದಕ್ಕೆ ಬಳಕೆಯಾಗಿದ್ದ ಎಲ್ಲ ವಸ್ತುಗಳನ್ನೂ ಕಳವು ಮಾಡಲಾಗಿತ್ತು. ಅದರಿಂದ ಎಚ್ಚೆತ್ತಿಕೊಂಡಿರುವ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಹೀಗೆ ಪಾಳುಬಿದ್ದ, ಅರ್ಧಂಬರ್ಧ ಶಿಥಿಲವಾಗಿರುವ ಎಲ್ಲ ಸೇತುವೆಗಳನ್ನೂ ಗುರುತಿಸಿ, ಹರಾಜಿಗೆ ವ್ಯವಸ್ಥೆ ಮಾಡಿ ಎಂದು ಎಲ್ಲ ವಿಭಾಗೀಯ ಎಂಜಿನಿಯರ್​​ಗಳಿಗೆ ಜಲ ಸಂಪನ್ಮೂಲ ಇಲಾಖೆ ಸೂಚನೆ ನೀಡಿದೆ. 

ಈ ಬಗ್ಗೆ ಬಿಹಾರದ ಸಂಪನ್ಮೂಲ ಸಚಿವ ಸಂಜಯ್​ ಕುಮಾರ್ ಝಾ ಮಾತನಾಡಿ, 60 ಅಡಿ ಉದ್ದದ ಸೇತುವೆ ಕಳವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಇಬ್ಬರು ಎಂಜಿನಿಯರ್​​ಗಳನ್ನು ಅಮಾನತು ಮಾಡಿದ್ದೇವೆ. ಹಾಗೇ, ಮುಖ್ಯ ಎಂಜಿನಿಯರ್​ ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್​ಗಳಿಗೆ ಶೋಕಾಸ್​ ನೋಟಿಸ್​ ನೀಡಿದ್ದೇವೆ. ಮುಂದೆ ಇಂಥ ಘಟನೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ಇರುವ, ಬಳಕೆಯಾಗದ ಸೇತುವೆಗಳನ್ನು ಹರಾಜು ಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಬಿಹಾರದಲ್ಲಿ ಹೀಗೆ ಹಾಳಾದ, ಬಳಕೆಯಾಗದ ಸೇತುವೆಗಳ ಸಂಖ್ಯ ಎಷ್ಟಿರಬಹುದು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ನಮ್ಮ ಎಂಜಿನಿಯರ್​ಗಳು ಅದನ್ನು ಲೆಕ್ಕ ಹಾಕುತ್ತಿದ್ದಾರೆ. ರೋಹ್ತಾಸ್​ ಜಿಲ್ಲೆಯಲ್ಲಿ ನಡೆದ ಘಟನೆ ಸಂಬಂಧಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ.  ಏಪ್ರಿಲ್​ 4ರಂದು ಕಳವಾದ ಬ್ರಿಡ್ಜ್​ 1972ರಲ್ಲಿ ಕಟ್ಟಿದ್ದಾಗಿತ್ತು. 2002ರಿಂದಲೂ ಈ ಸೇತುವೆ ಬಳಕೆಯಾಗುತ್ತಿರಲಿಲ್ಲ. ಅದಕ್ಕೆ ಸಮಾನಾಂತರವಾಗಿ ಸ್ವಲ್ಪ ದೂರದಲ್ಲಿ ಹೊಸ ಸೇತುವೆ ಕಟ್ಟಿದ್ದರಿಂದ ಇದು ಸಹಜವಾಗಿ ಪಾಳುಬಿದ್ದಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ! 

Published On - 8:29 am, Wed, 13 April 22

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ