AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಞಾನವಾಪಿ ಸಂಕೀರ್ಣದಲ್ಲಿ ವಿಷ್ಣು, ಹನುಮಂತನ ವಿಗ್ರಹಗಳು ಪತ್ತೆ

Gyanvapi Survey: ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ವಿಷ್ಣು, ಹನುಮಂತನ ವಿಗ್ರಹಗಳು ಲಭ್ಯವಾಗಿವೆ. ಇದನ್ನು ಮೊದಲು ಶಿವನಿಗೆ ಮೀಸಲಾದ ಸ್ಥಳ ಎಂದು ಭಾವಿಸಲಾಗಿತ್ತು, ಇದೀಗ ಎಎಸ್​ಐನಿಂದ ಪತ್ತೆಯಾದ ಕಲಾಕೃತಿಗಳಲ್ಲಿ ವಿಷ್ಣು ಹಾಗೂ ಹನುಮಂತನ ಚಿತ್ರವಿದೆ. ಗಮನಾರ್ಹವಾದ ಆವಿಷ್ಕಾರಗಳಲ್ಲಿ ಹನುಮಂತನ ಶಿಲ್ಪದ ಕೆಳಗಿನ ಅರ್ಧ ಭಾಗವು ಒಂದು ಬಂಡೆಯ ಮೇಲೆ ಒಂದು ಕಾಲನ್ನು ಇರಿಸಿದೆ, ಇದು ದೇವತೆಯ ಪ್ರತಿಮಾರೂಪದ ಭಂಗಿಯನ್ನು ಸೂಚಿಸುತ್ತದೆ.

ಜ್ಞಾನವಾಪಿ ಸಂಕೀರ್ಣದಲ್ಲಿ ವಿಷ್ಣು, ಹನುಮಂತನ ವಿಗ್ರಹಗಳು ಪತ್ತೆ
ಜ್ಞಾನವಾಪಿ ಸಮೀಕ್ಷೆImage Credit source: India Today
ನಯನಾ ರಾಜೀವ್
| Edited By: |

Updated on:Feb 02, 2024 | 12:03 PM

Share

ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ವಿಷ್ಣು, ಹನುಮಂತನ ವಿಗ್ರಹಗಳು ಲಭ್ಯವಾಗಿವೆ. ಇದನ್ನು ಮೊದಲು ಶಿವನಿಗೆ ಮೀಸಲಾದ ಸ್ಥಳ ಎಂದು ಭಾವಿಸಲಾಗಿತ್ತು, ಇದೀಗ ಎಎಸ್​ಐನಿಂದ ಪತ್ತೆಯಾದ ಕಲಾಕೃತಿಗಳಲ್ಲಿ ವಿಷ್ಣು ಹಾಗೂ ಹನುಮಂತನ ಚಿತ್ರವಿದೆ. ಗಮನಾರ್ಹವಾದ ಆವಿಷ್ಕಾರಗಳಲ್ಲಿ ಹನುಮಂತನ ಶಿಲ್ಪದ ಕೆಳಗಿನ ಅರ್ಧ ಭಾಗವು ಒಂದು ಬಂಡೆಯ ಮೇಲೆ ಒಂದು ಕಾಲನ್ನು ಇರಿಸಿದೆ, ಇದು ದೇವತೆಯ ಪ್ರತಿಮಾರೂಪದ ಭಂಗಿಯನ್ನು ಸೂಚಿಸುತ್ತದೆ.

ಜ್ಞಾನವಾಪಿ ಸಂಕೀರ್ಣದಲ್ಲಿ ಜನಾರ್ಧನ,ರುದ್ರ ಹಾಗೂ ವಿಶ್ವೇಶ್ವರನ ಶಾಸನಗಳು ಪತ್ತೆಯಾಗಿವೆ ಎಂದು ಹೇಳಲಾಗಿತ್ತು. ಮಹಾಮುಕ್ತಿ ಮಂಟಪ ವರದಿಯಲ್ಲಿ ಇದಲ್ಲದೆ ಶಿವಲಿಂಗ, ಕೃಷ್ಣ, ಹನುಮಂತರ ಹಾಗೂ ವಿಷ್ಣುವಿನ ಪ್ರತಿಮೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ವರದಿ ಪ್ರಕಾರ, 1669ರ ಸೆಪ್ಟೆಂಬರ್ 2ರಂದು ದೇವಾಲಯ ಕೆಡವಲಾಯಿತು, ಹಿಂದೆ ದೇವಾಲಯವಿದ್ದ ಕಂಬಗಳನ್ನು ಮಸೀದಿಗೆ ಬಳಸಲಾಯಿತು.

ಮಾರ್ಬಲ್​ ಸ್ಲ್ಯಾಬ್​ ಒಂದರಲ್ಲಿ ರಾಮ್ ಎಂದು ಬರೆಯಲಾಗಿದೆ, ಇದರ ಉದ್ದ 15.5 ಸೆಂಟಿಮೀಟರ್​, ಅಗಲ 9 ಸೆಂ.ಮೀ ಮತ್ತು ದಪ್ಪ ಎರಡು ಸೆಂ.ಮೀ ಆಗಿದೆ. ಮುರಿದ ಶಿವಲಿಂಗ ಅಮೃತ ಶಿಲೆಯಿಂದ ಕೆತ್ತಲಾಗಿದೆ. ಇದರ ಉದ್ದ 5 ಸೆಂ.ಮೀ ಇದೆ. ಗದೆ ಪತ್ತೆಯಾಗಿದ್ದು ಅದರ ಕೆಳಭಾಗ ಮುರಿದುಹೋಗಿದೆ.

ಮತ್ತಷ್ಟು ಓದಿ:ಕಾಶಿ ಜ್ಞಾನವಾಪಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್

ಕಲ್ಲಿನಿಂದ ಮಾಡಿದ ಮಕರವೂ ಪತ್ತೆಯಾಗಿದೆ, ಅದರ ಉದ್ದ 42 ಸೆಂ.ಮೀ, ಎತ್ತರ 24 ಸೆಂ.ಮೀ ಮತ್ತು ಅಗಲ 12 ಸೆಂ.ಮೀ, ಅದರ ಮೈಮೇಲೆ ಮೀನಿನಂತೆ ಕೆತ್ತಿದ ಗುರುತುಗಳಿವೆ. ಟೆರಾಕೋಟದಿಂದ ಮಾಡಿದ ಮಹಿಳೆಯ ಛಿದ್ರವಾದ ಪ್ರತಿಮೆ ಪತ್ತೆಯಾಗಿದೆ. ಮರಳುಗಲ್ಲಿನಿಂದ ಮಾಡಿದ ಆನೆಯೂ ಕೂಡ ಪತ್ತೆಯಾಗಿದೆ.

ಅಮೃತಶಿಲೆಯಿಂದ ಮಾಡಲಾದ ಹನುಮಂತನ ವಿಗ್ರಹ ಪತ್ತೆಯಾಗಿದೆ.. ಇದರ ಉದ್ದ 21.5 ಸೆಂಟಿಮೀಟರ್, ಅಗಲ 16 ಸೆಂಟಿಮೀಟರ್ ಮತ್ತು ಸುತ್ತು ಐದು ಸೆಂಟಿಮೀಟರ್. ವಿಗ್ರಹದಲ್ಲಿ, ಹನುಮಂತನ ಎಡಗಾಲು ಮೊಣಕಾಲಿನ ಮೇಲೆ ಬಾಗುತ್ತದೆ ಮತ್ತು ಬಲಗಾಲು ನೆಲದ ಮೇಲೆ ನಿಂತಿದೆ.

ಕೃಷ್ಣನ ವಿಗ್ರಹವು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಇದರ ಉದ್ದ 15 ಸೆಂಟಿಮೀಟರ್, ಅಗಲ ಎಂಟು ಸೆಂಟಿಮೀಟರ್ ಮತ್ತು ದಪ್ಪ ಐದು ಸೆಂಟಿಮೀಟರ್. ವಿಗ್ರಹಕ್ಕೆ ತಲೆ ಇಲ್ಲ ಮತ್ತು ಎರಡೂ ಕೈಗಳು ಮುರಿದಿವೆ. ದೇವತೆಗಳ ಶಿಲ್ಪಗಳು, ವಿವಿಧ ಆಯಾಮಗಳ ಕೀಟಗಳು ಮತ್ತು ಇತರೆ ಗೃಹಪಯೋಗಿ ವಸತುಗಳು ಇತ್ಯಾದಿ ಕಲ್ಲಿನ ವಸ್ತುಗಳು ಪತ್ತೆಯಾಗಿವೆ.

ಪಟ್ಟಿ ಮಾಡಲಾದ ಶಿಲ್ಪಗಳಲ್ಲಿ ಶಿವಲಿಂಗವೂ ಒಂದು. ಸ್ತ್ರೀ, ಪುರುಷ ಆಕೃತಿಗಳು, ಇಟ್ಟಿಗೆಗಳು, ಹೆಂಚುಗಳು, ಸ್ಲಿಂಗ್​ ಚೆಂಡುಗಳು ಸೇರಿ ವಿವಿಧ ಟೆರಾಕೋಟ ವಸ್ತುಗಳು ಸಮೀಕ್ಷೆಯಲ್ಲಿ ಪತ್ತೆಯಾಗಿವೆ. ಮಸೀದಿಯಲ್ಲಿ ಕೆಲ ನಾಣ್ಯಗಳೂ ಸಿಕ್ಕಿದ್ದು, ಈ ನಾಣ್ಯಗಳು ವಿಭಿನ್ನ ಅವಧಿಗೆ ಸೇರಿದೆ, ಮೂರು ನಾಣಯಗಳು ಪರ್ಷಿಯನ್ ಭಾಷೆಯ ಬರಹ ಹೊಂದಿದ್ದು, ಅವುಗಳನ್ನು ಷಾ ಆಲಂ ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:08 am, Wed, 31 January 24

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ