ಮಂಟಪದಲ್ಲಿ ವಧುವಿನ ಸ್ನೇಹಿತರಿಗೆ ವರ ಕೊಟ್ಟ ಉತ್ತರ ಕೇಳಿ ಮದುವೆಯೇ ನಿಂತೋಯ್ತು
ಸಾಮಾನ್ಯವಾಗಿ ಮದುವೆ(Marriage) ಮನೆಯಲ್ಲಿ ತಮಾಷೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವರನ ಜತೆ ವಧುವಿನ ಸಹೋದರಿಯರು, ಸ್ನೇಹಿತರು ಸ್ವಲ್ಪ ಹೆಚ್ಚಾಗಿಯೇ ಕೀಟಲೆ ಮಾಡುತ್ತಾರೆ. ಹಾಗೆಯೇ ವಧುವಿನ ಸ್ನೇಹಿತರು ಕೇಳಿದ್ದ ಪ್ರಶ್ನೆಗೆ ವರ ಕೊಟ್ಟ ಉತ್ತರ ಕೇಳಿ ವಧು ಮದುವೆಯನ್ನೇ ನಿಲ್ಲಿಸಿದ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಸಿದೆ. ಶುಕ್ರವಾರ ಪ್ರಯಾಗ್ರಾಜ್ನ ಮೇಜಾದ ಅಕ್ಬರ್ ಶಹಪುರ್ ಗ್ರಾಮಕ್ಕೆ ವಿವಾಹ ಮೆರವಣಿಗೆ ಆಗಮಿಸಿತ್ತು. ಒಬ್ಬ ಸ್ನೇಹಿತೆ ವರನ ಬಳಿ ನೀವು ಹುಟ್ಟಿದ ವರ್ಷ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ.

ಪ್ರಯಾಗ್ರಾಜ್, ಮೇ 11: ಸಾಮಾನ್ಯವಾಗಿ ಮದುವೆ(Marriage) ಮನೆಯಲ್ಲಿ ತಮಾಷೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವರನ ಜತೆ ವಧುವಿನ ಸಹೋದರಿಯರು, ಸ್ನೇಹಿತರು ಸ್ವಲ್ಪ ಹೆಚ್ಚಾಗಿಯೇ ಕೀಟಲೆ ಮಾಡುತ್ತಾರೆ. ಹಾಗೆಯೇ ವಧುವಿನ ಸ್ನೇಹಿತರು ಕೇಳಿದ್ದ ಪ್ರಶ್ನೆಗೆ ವರ ಕೊಟ್ಟ ಉತ್ತರ ಕೇಳಿ ವಧು ಮದುವೆಯನ್ನೇ ನಿಲ್ಲಿಸಿದ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಸಿದೆ.
ಶುಕ್ರವಾರ ಪ್ರಯಾಗ್ರಾಜ್ನ ಮೇಜಾದ ಅಕ್ಬರ್ ಶಹಪುರ್ ಗ್ರಾಮಕ್ಕೆ ವಿವಾಹ ಮೆರವಣಿಗೆ ಆಗಮಿಸಿತ್ತು. ಒಬ್ಬ ಸ್ನೇಹಿತೆ ವರನ ಬಳಿ ನೀವು ಹುಟ್ಟಿದ ವರ್ಷ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಅದಕ್ಕೆ ವರ 2025 ಎಂದು ಹೇಳಿದ್ದಾನೆ, ಅಷ್ಟಕ್ಕೇ ವಧು ವರ ತನಗೆ ಬೇಡ ಎಂದು ಹೇಳಿ ಮಂಟಪದಿಂದ ಹೊರ ನಡೆದಿದ್ದಾಳೆ. ನಂತರ, ಅವಳು ಅವನನ್ನು ಮನವೊಲಿಸಲು ಪ್ರಯತ್ನಿಸಿದಳು ಆದರೆ ಅವನು ಒಪ್ಪಲಿಲ್ಲ. ಮದುವೆ ಮೆರವಣಿಗೆ ವಧು ಇಲ್ಲದೆ ಹಿಂತಿರುಗಿತು.
ಮದುವೆ ಮುರಿದು ಬಿದ್ದ ಕಾರಣ ಹೇಳಿದ ವಧುವಿನ ಸಹೋದರ ಈ ಘಟನೆ ಅಕ್ಬರ್ ಶಹಪುರದಲ್ಲಿ ನಡೆದಿದೆ. ರಾಮ್ಸಾಗರ್ ಕುಶ್ವಾಹ ಅವರ ಮಗಳು ಪಿಂಕಿಯ ವಿವಾಹವಿತ್ತು, ಅಲ್ಲಿಗೆ ಮದುವೆ ಮೆರವಣಿಗೆ ಬಂದಿತ್ತು. ವಧುವಿನ ಸಹೋದರನು ಏಳು ಸಹೋದರರಲ್ಲಿ ಆಕೆ ಒಬ್ಬಳೇ ಹೆಣ್ಣುಮಗಳು. ಮದುವೆಗೆ ಬೈಕ್ ಹೊರತುಪಡಿಸಿ 11 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ದರೆ ವರನ ವರ್ತನೆ ಮತ್ತು ಅವನ ತಂದೆಯ ನಿರಂತರ ವರದಕ್ಷಿಣೆ ಬೇಡಿಕೆಯಿಂದ ಬೇಸತ್ತು, ಸಹೋದರಿಯ ಮದುವೆ ಬೇಡವೆಂದು ಹೇಳಿದ್ದಾಳೆ.
ಮತ್ತಷ್ಟು ಓದಿ: ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
ವರ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವೂ ಆತನಿಗಿಲ್ಲ. ಅವನಿಗೆ ಮೊಬೈಲ್ ಫೋನ್ ಅಥವಾ ಬೈಕು ಚಲಾಯಿಸಲು ಬರುವುದಿಲ್ಲ. ಹುಟ್ಟಿದ ದಿನಾಂಕವನ್ನೂ ಹೇಳಲು ಬರುವುದಿಲ್ಲ ಎಂದು ಆರೋಪಿಸಲಾಗಿದೆ.
ಅದೇ ಸಮಯದಲ್ಲಿ, ವಧುವಿನ ಕುಟುಂಬದವರು ಮಾಡಿದ ಆರೋಪಗಳನ್ನು ವರನ ಕಡೆಯವರು ನಿರಾಕರಿಸಿದ್ದಾರೆ.ಆತ ವಧುವಿನ ಕಡೆಯವರ ಮನವೊಲಿಸಲು ಪ್ರಯತ್ನಿಸಿದ್ದಾನೆ, ಆದರೆ ಅವರು ಮದುವೆಗೆ ಒಪ್ಪಲಿಲ್ಲ. ವರನ ಕಡೆಯವರ ಪ್ರಕಾರ, ಆತ ತಮಾಷೆಗೆ ತಪ್ಪು ತಪ್ಪಾಗಿ ಹುಟ್ಟಿದ ವರ್ಷವನ್ನು ಹೇಳಿದ್ದಾನೆ. ಏನೇ ಹೇಳಿದರೂ ವಧುವಿನ ಕಡೆಯವರು ಒಪ್ಪಿಗೆ ನೀಡದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ