AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!

Indian Railways: ಕುತೂಹಲದ ವಿಷಯವೆಂದರೆ ಇದು ಭಾರತದ ಹೆಸರಿಲ್ಲದ ಏಕೈಕ ರೈಲು ನಿಲ್ದಾಣವಾಗಿದೆ. ಭಾರತೀಯ ರೈಲ್ವೆ ಇಲಾಖೆ ಈ ರೈಲು ನಿಲ್ದಾಣಕ್ಕೆ ಏಕೆ ಯಾವ ಹೆಸರನ್ನೂ ಇಡಲಿಲ್ಲ ಎಂದು ನೀವು ಆಶ್ಚರ್ಯವಾಗಬಹುದು.

Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!
ಹೆಸರಿಲ್ಲದ ರೈಲು ನಿಲ್ದಾಣ
TV9 Web
| Edited By: |

Updated on: Jan 13, 2022 | 8:07 PM

Share

ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಆಯಾ ಊರಿನ ಅಥವಾ ಆ ಊರಿನ ಪ್ರಸಿದ್ಧ ವ್ಯಕ್ತಿಗಳು, ಸ್ಥಳದ ಹೆಸರನ್ನು ಇಡಲಾಗುತ್ತದೆ. ಇದಕ್ಕಾಗಿ ಸಾಕಷ್ಟು ಲಾಬಿಗಳೂ ನಡೆಯುತ್ತವೆ. ಆದರೆ, ಭಾರತದಲ್ಲಿ ಹೆಸರಿಲ್ಲದ ರೈಲು ನಿಲ್ದಾಣವೂ ಒಂದು ಇದೆ ಎಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರ. 2017ರ ಮಾರ್ಚ್ 31ರ ಅಂಕಿ-ಅಂಶದಂತೆ ಭಾರತವು 7,349 ರೈಲು ನಿಲ್ದಾಣಗಳನ್ನು ಹೊಂದಿತ್ತು. ಆದರೆ ಅವುಗಳಲ್ಲಿ ಒಂದು ರೈಲು ನಿಲ್ದಾಣಕ್ಕೆ ಮಾತ್ರ ‘ಹೆಸರಿಲ್ಲ’. ಆ ಹೆಸರಿಲ್ಲದ ನಿಲ್ದಾಣದಿಂದ ಪ್ರಯಾಣಿಕರು ಹೇಗೆ ರೈಲಿನಲ್ಲಿ ಬರುತ್ತಾರೆ ಅಥವಾ ಯಾವ ಸ್ಟೇಷನ್​ಗೆ ಟಿಕೆಟ್ ಬುಕ್ ಮಾಡುತ್ತಾರೆ ಎಂದು ನೀವು ಬಹುಶಃ ಆಶ್ಚರ್ಯ ಪಡುತ್ತೀರಿ.

ಈ ರೈಲು ನಿಲ್ದಾಣವು ಪಶ್ಚಿಮ ಬಂಗಾಳ ರಾಜ್ಯದಲ್ಲಿದ್ದು, ಬರ್ಧಮಾನ್ ಜಿಲ್ಲೆಗೆ ಸೇರಿದೆ. ಈ ಹೆಸರಿಲ್ಲದ ರೈಲು ನಿಲ್ದಾಣವು ಬರ್ಧಮಾನ್ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರೈನಾ ಗ್ರಾಮದಲ್ಲಿದೆ. 2008ರಲ್ಲಿ ಭಾರತೀಯ ರೈಲ್ವೇ ಈ ಪ್ರದೇಶದಲ್ಲಿ ರೈಲು ನಿಲ್ದಾಣವನ್ನು ನಿರ್ಮಿಸಿತು. ಇನ್ನೊಂದು ಕುತೂಹಲದ ವಿಷಯವೆಂದರೆ ಇದು ಭಾರತದ ಹೆಸರಿಲ್ಲದ ಏಕೈಕ ರೈಲು ನಿಲ್ದಾಣವಾಗಿದೆ.

ನಿಲ್ದಾಣಕ್ಕೆ ಹೆಸರಿಡದಿರಲು ಕಾರಣವೇನು?:

ಭಾರತೀಯ ರೈಲ್ವೆ ಇಲಾಖೆ ಈ ರೈಲು ನಿಲ್ದಾಣಕ್ಕೆ ಏಕೆ ಯಾವ ಹೆಸರನ್ನೂ ಇಡಲಿಲ್ಲ ಎಂದು ನೀವು ಆಶ್ಚರ್ಯವಾಗಬಹುದು. ಇದಕ್ಕೆ ಎರಡು ಊರುಗಳ ನಡುವಿನ ಭಿನ್ನಾಭಿಪ್ರಾಯವೇ ಕಾರಣ. ರೈನಾ ಮತ್ತು ರಾಯ್​ನಗರ ಎಂಬ ಊರುಗಳ ಮಧ್ಯೆ ಇರುವ ಈ ರೈಲು ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಎರಡೂ ಗ್ರಾಮಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮೇಲ್ನೋಟಕ್ಕೆ 2008ರ ಮೊದಲು ರಾಯ್​ನಗರದಲ್ಲಿ ರಾಯ್​ನಗರ್ ರೈಲ್ವೆ ನಿಲ್ದಾಣ ಎಂದು ಕರೆಯಲಾಗುವ ರೈಲು ನಿಲ್ದಾಣವಿತ್ತು. ನಂತರ ರೈಲು ಬಂಕುರಾ-ದಾಮೋದರ್ ರೈಲ್ವೆ ಲೈನ್ ಎಂಬ ಸಣ್ಣ ಗೇಜ್ ಮಾರ್ಗದಲ್ಲಿ 200 ಮೀಟರ್ ಮುಂದೆ ನಿಲ್ಲತೊಡಗಿತು.

ಈ ಬ್ರಾಡ್ ಗೇಜ್ ಅನ್ನು ಪರಿಚಯಿಸಿದಾಗ, ರೈನಾ ಗ್ರಾಮದ ಬಳಿ ಹೊಸ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಯಿತು. ನಂತರ, ಇದು ಹೌರಾ-ಬರ್ಧಮಾನ್ ಲೈನ್‌ಗೆ ಸೇರಿತು. ಹೀಗಾಗಿ, ರೈಲು ನಿಲ್ದಾಣದ ಹೆಸರು ಚರ್ಚೆಗೆ ಗ್ರಾಸವಾದಾಗ ರೈನಾ ಪ್ರದೇಶದ ನಿವಾಸಿಗಳು ರಾಯ್​ನಗರ ಎಂದು ಹೆಸರಿಡಬಾರದು ಎಂದು ಒತ್ತಾಯಿಸಿದರು.

ರೈಲ್ವೆ ಪ್ಲಾಟ್‌ಫಾರ್ಮ್ ತಮ್ಮ ಗ್ರಾಮದಲ್ಲಿ ಇರುವುದರಿಂದ ಇದನ್ನು ರೈನಾ ಸ್ಟೇಷನ್ ಎಂದೂ ಕರೆಯಬೇಕು ಎಂದು ರೈನಾ ಗ್ರಾಮದ ನಿವಾಸಿಗಳು ಒತ್ತಾಯಿಸಿದರು. ಇದರ ಪರಿಣಾಮವಾಗಿ ಈ ರೈಲು ನಿಲ್ದಾಣವು ಇಂದಿಗೂ ಹೆಸರಿಲ್ಲದೆ ಉಳಿದಿದೆ.

ಅದೇನೇ ಇದ್ದರೂ, ಬಂಕುರಾ-ಮಸಗ್ರಾಮ್ ಹೆಸರಿನ ರೈಲು ದಿನಕ್ಕೆ 6 ಬಾರಿ ನಿಲ್ದಾಣಕ್ಕೆ ಬರುತ್ತದೆ. ಪ್ಲಾಟ್‌ಫಾರ್ಮ್‌ಗೆ ಬರುವ ಹೊಸ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಹೆಸರಿಲ್ಲ ಎಂದು ಕಂಡು ಬೆರಗಾಗುತ್ತಾರೆ. ಈ ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಕೇವಲ ಬೋರ್ಡ್ ಇದೆ, ಆದರೆ ಅದರ ಮೇಲೆ ಯಾವ ಹೆಸರನ್ನೂ ಬರೆದಿಲ್ಲ.

ಇದನ್ನೂ ಓದಿ: Bikaner Express Accident ಹಳಿತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು; ಮೂವರು ಪ್ರಯಾಣಿಕರು ಸಾವು

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Follow Us
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್