AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!

Indian Railways: ಕುತೂಹಲದ ವಿಷಯವೆಂದರೆ ಇದು ಭಾರತದ ಹೆಸರಿಲ್ಲದ ಏಕೈಕ ರೈಲು ನಿಲ್ದಾಣವಾಗಿದೆ. ಭಾರತೀಯ ರೈಲ್ವೆ ಇಲಾಖೆ ಈ ರೈಲು ನಿಲ್ದಾಣಕ್ಕೆ ಏಕೆ ಯಾವ ಹೆಸರನ್ನೂ ಇಡಲಿಲ್ಲ ಎಂದು ನೀವು ಆಶ್ಚರ್ಯವಾಗಬಹುದು.

Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!
ಹೆಸರಿಲ್ಲದ ರೈಲು ನಿಲ್ದಾಣ
TV9 Web
| Updated By: ಸುಷ್ಮಾ ಚಕ್ರೆ|

Updated on: Jan 13, 2022 | 8:07 PM

Share

ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಆಯಾ ಊರಿನ ಅಥವಾ ಆ ಊರಿನ ಪ್ರಸಿದ್ಧ ವ್ಯಕ್ತಿಗಳು, ಸ್ಥಳದ ಹೆಸರನ್ನು ಇಡಲಾಗುತ್ತದೆ. ಇದಕ್ಕಾಗಿ ಸಾಕಷ್ಟು ಲಾಬಿಗಳೂ ನಡೆಯುತ್ತವೆ. ಆದರೆ, ಭಾರತದಲ್ಲಿ ಹೆಸರಿಲ್ಲದ ರೈಲು ನಿಲ್ದಾಣವೂ ಒಂದು ಇದೆ ಎಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರ. 2017ರ ಮಾರ್ಚ್ 31ರ ಅಂಕಿ-ಅಂಶದಂತೆ ಭಾರತವು 7,349 ರೈಲು ನಿಲ್ದಾಣಗಳನ್ನು ಹೊಂದಿತ್ತು. ಆದರೆ ಅವುಗಳಲ್ಲಿ ಒಂದು ರೈಲು ನಿಲ್ದಾಣಕ್ಕೆ ಮಾತ್ರ ‘ಹೆಸರಿಲ್ಲ’. ಆ ಹೆಸರಿಲ್ಲದ ನಿಲ್ದಾಣದಿಂದ ಪ್ರಯಾಣಿಕರು ಹೇಗೆ ರೈಲಿನಲ್ಲಿ ಬರುತ್ತಾರೆ ಅಥವಾ ಯಾವ ಸ್ಟೇಷನ್​ಗೆ ಟಿಕೆಟ್ ಬುಕ್ ಮಾಡುತ್ತಾರೆ ಎಂದು ನೀವು ಬಹುಶಃ ಆಶ್ಚರ್ಯ ಪಡುತ್ತೀರಿ.

ಈ ರೈಲು ನಿಲ್ದಾಣವು ಪಶ್ಚಿಮ ಬಂಗಾಳ ರಾಜ್ಯದಲ್ಲಿದ್ದು, ಬರ್ಧಮಾನ್ ಜಿಲ್ಲೆಗೆ ಸೇರಿದೆ. ಈ ಹೆಸರಿಲ್ಲದ ರೈಲು ನಿಲ್ದಾಣವು ಬರ್ಧಮಾನ್ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರೈನಾ ಗ್ರಾಮದಲ್ಲಿದೆ. 2008ರಲ್ಲಿ ಭಾರತೀಯ ರೈಲ್ವೇ ಈ ಪ್ರದೇಶದಲ್ಲಿ ರೈಲು ನಿಲ್ದಾಣವನ್ನು ನಿರ್ಮಿಸಿತು. ಇನ್ನೊಂದು ಕುತೂಹಲದ ವಿಷಯವೆಂದರೆ ಇದು ಭಾರತದ ಹೆಸರಿಲ್ಲದ ಏಕೈಕ ರೈಲು ನಿಲ್ದಾಣವಾಗಿದೆ.

ನಿಲ್ದಾಣಕ್ಕೆ ಹೆಸರಿಡದಿರಲು ಕಾರಣವೇನು?:

ಭಾರತೀಯ ರೈಲ್ವೆ ಇಲಾಖೆ ಈ ರೈಲು ನಿಲ್ದಾಣಕ್ಕೆ ಏಕೆ ಯಾವ ಹೆಸರನ್ನೂ ಇಡಲಿಲ್ಲ ಎಂದು ನೀವು ಆಶ್ಚರ್ಯವಾಗಬಹುದು. ಇದಕ್ಕೆ ಎರಡು ಊರುಗಳ ನಡುವಿನ ಭಿನ್ನಾಭಿಪ್ರಾಯವೇ ಕಾರಣ. ರೈನಾ ಮತ್ತು ರಾಯ್​ನಗರ ಎಂಬ ಊರುಗಳ ಮಧ್ಯೆ ಇರುವ ಈ ರೈಲು ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಎರಡೂ ಗ್ರಾಮಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮೇಲ್ನೋಟಕ್ಕೆ 2008ರ ಮೊದಲು ರಾಯ್​ನಗರದಲ್ಲಿ ರಾಯ್​ನಗರ್ ರೈಲ್ವೆ ನಿಲ್ದಾಣ ಎಂದು ಕರೆಯಲಾಗುವ ರೈಲು ನಿಲ್ದಾಣವಿತ್ತು. ನಂತರ ರೈಲು ಬಂಕುರಾ-ದಾಮೋದರ್ ರೈಲ್ವೆ ಲೈನ್ ಎಂಬ ಸಣ್ಣ ಗೇಜ್ ಮಾರ್ಗದಲ್ಲಿ 200 ಮೀಟರ್ ಮುಂದೆ ನಿಲ್ಲತೊಡಗಿತು.

ಈ ಬ್ರಾಡ್ ಗೇಜ್ ಅನ್ನು ಪರಿಚಯಿಸಿದಾಗ, ರೈನಾ ಗ್ರಾಮದ ಬಳಿ ಹೊಸ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಯಿತು. ನಂತರ, ಇದು ಹೌರಾ-ಬರ್ಧಮಾನ್ ಲೈನ್‌ಗೆ ಸೇರಿತು. ಹೀಗಾಗಿ, ರೈಲು ನಿಲ್ದಾಣದ ಹೆಸರು ಚರ್ಚೆಗೆ ಗ್ರಾಸವಾದಾಗ ರೈನಾ ಪ್ರದೇಶದ ನಿವಾಸಿಗಳು ರಾಯ್​ನಗರ ಎಂದು ಹೆಸರಿಡಬಾರದು ಎಂದು ಒತ್ತಾಯಿಸಿದರು.

ರೈಲ್ವೆ ಪ್ಲಾಟ್‌ಫಾರ್ಮ್ ತಮ್ಮ ಗ್ರಾಮದಲ್ಲಿ ಇರುವುದರಿಂದ ಇದನ್ನು ರೈನಾ ಸ್ಟೇಷನ್ ಎಂದೂ ಕರೆಯಬೇಕು ಎಂದು ರೈನಾ ಗ್ರಾಮದ ನಿವಾಸಿಗಳು ಒತ್ತಾಯಿಸಿದರು. ಇದರ ಪರಿಣಾಮವಾಗಿ ಈ ರೈಲು ನಿಲ್ದಾಣವು ಇಂದಿಗೂ ಹೆಸರಿಲ್ಲದೆ ಉಳಿದಿದೆ.

ಅದೇನೇ ಇದ್ದರೂ, ಬಂಕುರಾ-ಮಸಗ್ರಾಮ್ ಹೆಸರಿನ ರೈಲು ದಿನಕ್ಕೆ 6 ಬಾರಿ ನಿಲ್ದಾಣಕ್ಕೆ ಬರುತ್ತದೆ. ಪ್ಲಾಟ್‌ಫಾರ್ಮ್‌ಗೆ ಬರುವ ಹೊಸ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಹೆಸರಿಲ್ಲ ಎಂದು ಕಂಡು ಬೆರಗಾಗುತ್ತಾರೆ. ಈ ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಕೇವಲ ಬೋರ್ಡ್ ಇದೆ, ಆದರೆ ಅದರ ಮೇಲೆ ಯಾವ ಹೆಸರನ್ನೂ ಬರೆದಿಲ್ಲ.

ಇದನ್ನೂ ಓದಿ: Bikaner Express Accident ಹಳಿತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು; ಮೂವರು ಪ್ರಯಾಣಿಕರು ಸಾವು

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ