Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ಪ್ರಕರಣ ಇತ್ಯರ್ಥಗೊಳಿಸಲು ₹30 ಕೋಟಿ ಆಫರ್ ನೀಡಲಾಗಿತ್ತು: ಸ್ವಪ್ನಾ ಸುರೇಶ್

Swapna Suresh ಒಂದು ವಾರದೊಳಗೆ ನನ್ನ ಮಕ್ಕಳೊಂದಿಗೆ ಹರಿಯಾಣ ಅಥವಾ ಜೈಪುರಕ್ಕೆ ತೆರಳುವಂತೆ ಅವರು ನನ್ನನ್ನು ಕೇಳಿದರು. ವೀಣಾ (ಕೇರಳ ಸಿಎಂ ಪುತ್ರಿ ವೀಣಾ ವಿಜಯನ್), ಸಿಎಂ ಅಥವಾ ಕಮಲಾ ಮೇಡಂ (ಸಿಎಂ ಪತ್ನಿ) ಅವರಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಅವರಿಗೆ ಹಸ್ತಾಂತರಿಸಬೇಕು

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ಪ್ರಕರಣ ಇತ್ಯರ್ಥಗೊಳಿಸಲು ₹30 ಕೋಟಿ ಆಫರ್ ನೀಡಲಾಗಿತ್ತು: ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 09, 2023 | 8:15 PM

ಕೇರಳದ ಚಿನ್ನ ಕಳ್ಳಸಾಗಣೆ (gold smuggling case) ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ (Swapna Suresh), ಪ್ರಸ್ತುತ ಮೂರು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುತ್ತಿರುವ ಪ್ರಕರಣವನ್ನು ಇತ್ಯರ್ಥಗೊಳಿಸಲು 30 ಕೋಟಿ ರೂ. ಆಫರ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಿಂದ ಫೇಸ್‌ಬುಕ್‌ನಲ್ಲಿ ಲೈವ್ ಆಗಿ ಕಾಣಿಸಿಕೊಂಡಿರುವ ಸ್ವಪ್ನಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎಲ್ಲಾ ಸಾಕ್ಷ್ಯಗಳನ್ನು ನೀಡಲು ವಿಜಯ್ ಪಿಳ್ಳೈ ಎಂಬ ವ್ಯಕ್ತಿ ತನ್ನನ್ನು ಸಂಪರ್ಕಿಸಿದರು ಎಂದು ಆರೋಪಿಸಿದ್ದಾರೆ. ಈ ಮಾತನ್ನು ಪಾಲಿಸಲು ನಿರಾಕರಿಸಿದರೆ ಜೀವ ಭಯ ಪಡಬೇಕಾಗುತ್ತದೆ ಎಂದು ಮಧ್ಯವರ್ತಿ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ ಸ್ವಪ್ನಾ.

ಒಂದು ವಾರದೊಳಗೆ ನನ್ನ ಮಕ್ಕಳೊಂದಿಗೆ ಹರಿಯಾಣ ಅಥವಾ ಜೈಪುರಕ್ಕೆ ತೆರಳುವಂತೆ ಅವರು ನನ್ನನ್ನು ಕೇಳಿದರು. ವೀಣಾ (ಕೇರಳ ಸಿಎಂ ಪುತ್ರಿ ವೀಣಾ ವಿಜಯನ್), ಸಿಎಂ ಅಥವಾ ಕಮಲಾ ಮೇಡಂ (ಸಿಎಂ ಪತ್ನಿ) ಅವರಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಅವರಿಗೆ ಹಸ್ತಾಂತರಿಸಬೇಕು. ಒಂದು ವೇಳೆ ನಾನು ಅದನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಿದ್ದರೆ ಅದರ ಹಸ್ತಾಂತರ ಪ್ರವೇಶವನ್ನು ಸಹ ನೀಡಬೇಕು ಎಂದು ಅವರು ಹೇಳಿದ್ದಾರೆ.

ಉದ್ಯೋಗ ಸಂದರ್ಶನದ ಹೆಸರಿನಲ್ಲಿ ಬೆಂಗಳೂರಿಗೆ ಕರೆಸಲಾಗಿತ್ತು. ಎರಡು ನಿಮಿಷಗಳ ನಂತರ, ಇದು ಇತ್ಯರ್ಥದ ಮಾತುಕತೆ ಎಂದು ನಾನು ಅರಿತುಕೊಂಡೆ ಎಂದು ಸ್ವಪ್ನಾ ಹೇಳಿದ್ದಾರೆ.

ಇದನ್ನು ಪಾಲಿಸದಿದ್ದರೆ ಜೀವಕ್ಕೆ ಹಾನಿಯಾಗುತ್ತದೆ ಎಂಬ ಸಂದೇಶವನ್ನು ಪಕ್ಷದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರಿಂದ ರವಾನಿಸುತ್ತಿದ್ದೇನೆ ಎಂದು ಪಿಳ್ಳೈ ಹೇಳಿದ್ದಾರೆ. ಕೈಗಾರಿಕೋದ್ಯಮಿ ಯೂಸುಫ್ ಅಲಿ ವಿರುದ್ಧವೂ ಮಾತನಾಡದಂತೆ ಕೇಳಿಕೊಳ್ಳಲಾಗಿದೆ. ನಾವು ನಿನ್ನ ಸಾಮಾನು ಸರಂಜಾಮುಗಳಲ್ಲಿ ಮಾದಕವಸ್ತುಗಳಂತಹ ಅಕ್ರಮ ವಸ್ತುಗಳನ್ನು ಬಚ್ಚಿಟ್ಟು ಬಲೆಗೆ ಬೀಳಿಸುತ್ತೇವೆ ಎಂದು ಅವರು ಬೆದರಿಕೆ ಹಾಕಿರುವುದಾಗಿ ಸ್ವಪ್ನಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಆಂಧ್ರ ಪ್ರದೇಶದ ಗ್ರಾಮದಲ್ಲಿ ನಾಲ್ಕು ಹುಲಿ ಮರಿ ಪತ್ತೆ; ಅಮ್ಮ ಹುಲಿ ಪತ್ತೆಗಾಗಿ ಮುಂದುವರಿದ ಹುಡುಕಾಟ

ಚಿನ್ನದ ಕಳ್ಳಸಾಗಣೆ ಆರೋಪಿಗಳು ತಮ್ಮ ವಕೀಲ ಕೃಷ್ಣ ರಾಜ್ ಅವರಿಗೆ ಎಲ್ಲಾ ವಿವರಗಳನ್ನು ಹಸ್ತಾಂತರಿಸಿದ್ದು, ಅವರು ಕರ್ನಾಟಕ ಗೃಹ ಸಚಿವರು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಡಿಜಿಪಿ ಮತ್ತು ಇಡಿ ಅವರಿಗೆ ದೂರುಗಳನ್ನು ಸಲ್ಲಿಸಿದ್ದಾರೆ.ನಾನು ಸಾಯಬಹುದು ಎಂದು ಅನಿಸುತ್ತಿದೆ. ಆದರೆ ನಾನು ಕೇರಳದ ಜನರಿಗೆ ಮೋಸ ಮಾಡುವುದಿಲ್ಲ. ನನಗೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಆದರೆ ಸತ್ಯ ಹೊರಬೀಳುತ್ತಿರುವುದು ಸಂತಸ ತಂದಿದೆ. ತಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 pm, Thu, 9 March 23

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ