AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುವಾಂಕೂರು ಮತ್ತು ಕೊಚ್ಚಿ ವಿಲೀನಗೊಂಡು ತಿರು-ಕೊಚ್ಚಿ ಏಕೀಕರಣಕ್ಕೆ 72 ವರ್ಷ

Thiru-Kochi: ತಿರುವಾಂಕೂರು-ಕೊಚ್ಚಿನ್ ರಾಜ್ಯವು ಜುಲೈ 1, 1949 ರಂದು ಅಸ್ತಿತ್ವಕ್ಕೆ ಬಂದಿತು. ತಿರುವಾಂಕೂರು ಮತ್ತು ಕೊಚ್ಚಿಯ ಮಹಾರಾಜರು ವಿಲೀನ ಒಪ್ಪಂದಕ್ಕೆ ಉತ್ಸಾಹದಿಂದ ಸಹಿ ಹಾಕಿದರು. ತಿರುವಾಂಕೂರು ರಾಜನನ್ನು ಹೊಸ ರಾಜ್ಯದ ಸಿಂಹಾಸನಕ್ಕೇರಿಸಲಾಯಿತು

ತಿರುವಾಂಕೂರು ಮತ್ತು ಕೊಚ್ಚಿ ವಿಲೀನಗೊಂಡು ತಿರು-ಕೊಚ್ಚಿ ಏಕೀಕರಣಕ್ಕೆ 72 ವರ್ಷ
ತಿರುಕೊಚ್ಚಿ (ಕೃಪೆ: ವಿಕಿಪೀಡಿಯಾ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 01, 2021 | 12:32 PM

Share

ತಿರುವಾಂಕೂರು ಮತ್ತು ಕೊಚ್ಚಿ ವಿಲೀನಗೊಂಡು ತಿರು-ಕೊಚ್ಚಿ ರಾಜ್ಯ ರಚನೆಯಾಗಿ ಇಂದಿಗೆ 72 ವರ್ಷ ತುಂಬಿದೆ. ಜುಲೈ 1, 1949ರಂದು ತಿರುವಾಂಕೂರು-ಕೊಚ್ಚಿ ರಾಜ್ಯವಾಗಿ ರಚನೆಯಾಯಿತು. ತಿರುವಾಂಕೂರು ಮತ್ತು ಕೊಚ್ಚಿಯನ್ನು ವಿಲೀನಗೊಳಿಸುವ ಯೋಚನೆ ಬಹಳ ಹಿಂದೆಯೇ ಪ್ರಾರಂಭವಾಗಿತ್ತು ಎಂದು ಕೇರಳದ ಇತಿಹಾಸ ಹೇಳುತ್ತದೆ. ಆದಾಗ್ಯೂ, ಮಾರ್ಚ್ 1949 ರ ಹೊತ್ತಿಗೆ ಕೆಲಸವು ಸಕ್ರಿಯವಾಯಿತು. ರಾಜ್ಯ ಏಕೀಕರಣ ಸಚಿವಾಲಯದ ಕಾರ್ಯದರ್ಶಿ ವಿ.ಪಿ.ಮೆನನ್ ತಿರುವನಂತಪುರಕ್ಕೆ ಆಗಮಿಸಿದರು. ತಿರುವಾಂಕೂರು ಪ್ರಧಾನಿ ಟಿ.ಕೆ.ನಾರಾಯಣ ಪಿಳ್ಳೈ ಮತ್ತು ಇತರ ನಾಯಕರು ರಾಜ್ಯ ವಿಲೀನ ಮಾತುಕತೆ ನಡೆಸಿದರು. ಅವರು ಕೊಚ್ಚಿಯ ಪ್ರಧಾನಿ ಇಕಂಡವಾರ್ಯರ್ ಅವರೊಂದಿಗೆ ಚರ್ಚೆ ನಡೆಸಿದರು. ಎರಡೂ ಸ್ಥಳಗಳ ರಾಜರು ಚರ್ಚೆಯಲ್ಲಿ ಭಾಗವಹಿಸಿದರು. ವಿಲೀನಕ್ಕೆ ಪ್ರಧಾನಮಂತ್ರಿಗಳು ಸಮ್ಮತಿಸಿದರು ಮತ್ತು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.

ಏಪ್ರಿಲ್ 2 1949 ರಂದು, ತಿರುವಾಂಕೂರು ಮತ್ತು ಕೊಚ್ಚಿ ವಿಲೀನಕ್ಕೆ ಅನುಮೋದನೆ ನೀಡುವ ಪತ್ರಿಕಾ ಪ್ರಕಟಣೆಯನ್ನು ಸರ್ಕಾರ ಬಿಡುಗಡೆ ಮಾಡಿತು. ತಿರು-ಕೊಚ್ಚಿ ರಾಜ್ಯ ಜುಲೈ 1 ರಂದು ರೂಪುಗೊಂಡಿತು. ಪರಾವೂರ್ ಟಿ.ಕೆ.ನಾರಾಯಣ ಪಿಳ್ಳೈ ಅವರು ತಿರು-ಕೊಚ್ಚಿಯ ಮುಖ್ಯಮಂತ್ರಿಯಾಗಿದ್ದರು. ತಿರುವಾಂಕೂರಿನ ರಾಜ ಚಿತ್ತಿರ ತಿರುನಾಳ್ ಅವರಿಗೆ ರಾಜ-ಪ್ರಮುಖ ಎಂಬ ಹುದ್ದೆ ನೀಡಲಾಯಿತು. ಟಿಎಂ ವರ್ಗೀಸ್ ಸ್ಪೀಕರ್ ಆಗಿ ಆಯ್ಕೆಯಾದರು.

ಇಕಂಡವಾರ್ಯರ್, ಪನಂಬಳ್ಳಿ ಗೋವಿಂದಮೆನನ್ ಮತ್ತು ಕೆ.ಅಯ್ಯಪ್ಪನ್ ಅವರು ಕೊಚ್ಚಿಯನ್ನು ಪ್ರತಿನಿಧಿಸಿದರು. ಡಾ.ಇ.ಕೆ.ಮಾಧವನ್, ಎ.ಜೆ.ಜೋನ್ ಮತ್ತು ಟಿ.ಎ.ಅಬ್ದುಲ್ಲಾ ಅವರು ತಿರುವಾಂಕೂರು ಪ್ರತಿನಿಧಿಸಿ ಸಚಿವರಾದರು.

ತಿರು-ಕೊಚ್ಚಿ ಏಕೀಕರಣ ಕೇಂದ್ರ ಸರ್ಕಾರಗಳ ವಿಲೀನ ಮತ್ತು ಮರುಸಂಘಟನೆಗಾಗಿ ಭಾರತ ಸರ್ಕಾರದ ಅಡಿಯಲ್ಲಿ ರಾಜ್ಯ ಸಚಿವಾಲಯ ಎಂಬ ಇಲಾಖೆಯನ್ನು ರಚಿಸಲಾಗುತ್ತಿತ್ತು. ಇದರ ನೇತೃತ್ವವನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ವಹಿಸಿದ್ದರು. ಇಲಾಖೆಯ ನೀತಿಗಳು ಯುನೈಟೆಡ್ ಕೇರಳ ಚಳವಳಿಯ ಉದ್ದೇಶಗಳಿಗೆ ಅನುಕೂಲ ಮಾಡಿಕೊಟ್ಟವು. ಇದರ ಮೊದಲ ಹೆಜ್ಜೆಯಾಗಿ, ತಿರುವಾಂಕೂರು ಮತ್ತು ಕೊಚ್ಚಿಯನ್ನು ತಿರುವಾಂಕೂರು-ಕೊಚ್ಚಿ ಎಂಬ ಒಂದೇ ರಾಜ್ಯಕ್ಕೆ ವಿಲೀನಗೊಳಿಸಲಾಯಿತು. ಮದ್ರಾಸ್ ರಾಜ್ಯದ ಭಾಗವಾಗಿ, ಮಲಬಾರ್ ಈಗಾಗಲೇ ಭಾರತೀಯ ಒಕ್ಕೂಟದ ನೇರ ಭಾಗವಾಗಿತ್ತು.

ತಿರುವಾಂಕೂರು-ಕೊಚ್ಚಿನ್ ರಾಜ್ಯವು ಜುಲೈ 1, 1949 ರಂದು ಅಸ್ತಿತ್ವಕ್ಕೆ ಬಂದಿತು. ತಿರುವಾಂಕೂರು ಮತ್ತು ಕೊಚ್ಚಿಯ ಮಹಾರಾಜರು ವಿಲೀನ ಒಪ್ಪಂದಕ್ಕೆ ಉತ್ಸಾಹದಿಂದ ಸಹಿ ಹಾಕಿದರು. ತಿರುವಾಂಕೂರು ರಾಜನನ್ನು ಹೊಸ ರಾಜ್ಯದ ಸಿಂಹಾಸನಕ್ಕೇರಿಸಲಾಯಿತು. ಚಿತ್ತಿರ ತಿರುನಾಳ್ ಅವರು ಕೊಚ್ಚಿಯ ರಾಜ ಪರಿಕ್ಷಿತ್ ತಂಬುರಾನ್ ಅವರಿಗೆ ‘ಉಪರಾಜ ಪ್ರಮುಖನ್’ ಎಂಬ ಬಿರುದನ್ನು ನೀಡಲು ಮುಂದಾಗಿದ್ದರೂ, “ತಮ್ಮ ಪ್ರಜೆಗಳಿಗೆ ಉತ್ತಮ ಬದುಕು ನೀಡುವ ಸಲುವಾಗಿ ಎಲ್ಲಾ ಹಕ್ಕುಗಳನ್ನು ತ್ಯಜಿಸಲು ಅವರು ಸಿದ್ಧ ಎಂದು ಹೇಳಿದ್ದರು.

ಉಭಯ ರಾಜ್ಯಗಳ ಶಾಸಕಾಂಗಗಳು, ಸಚಿವಾಲಯಗಳು, ವಿವಿಧ ಇಲಾಖೆಗಳು ಮತ್ತು ಇತರ ಆಡಳಿತಗಳನ್ನು ವಿಲೀನಗೊಳಿಸಿ ಹೊಸ ರಾಜ್ಯ ರಚನೆಯಾಯಿತು. ಶಾಸಕಾಂಗ (ಸಚಿವಾಲಯ) ಸೇರಿದಂತೆ ರಾಜಧಾನಿ ತಿರುವನಂತಪುರಂನಲ್ಲಿ ಮತ್ತು ನ್ಯಾಯಾಂಗದ ಸ್ಥಾನವಾದ ಹೈಕೋರ್ಟ್ ಎರ್ನಾಕುಲಂನಲ್ಲಿರುತ್ತದೆ ಎಂದು ಷರತ್ತು ವಿಧಿಸಲಾಯಿತು. ರಾಜ್ಯದ ಹೆಸರನ್ನು ತಿರು-ಕೊಚ್ಚಿ ಎಂದು ಚುಟುಕುಗೊಳಿಸಲಾಯಿತು. ಜನವರಿ 1, 1950 ರಂದು ತಿರು-ಕೊಚ್ಚಿಗೆ ಕೇಂದ್ರ ಸರ್ಕಾರವು ಮಾನ್ಯತೆ ನೀಡಿತು.

ತಿರು-ಕೊಚ್ಚಿಯಲ್ಲಿ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ ಮತ್ತು ತ್ರಿಶೂರ್ ಎಂಬ ನಾಲ್ಕು ಜಿಲ್ಲೆಗಳಿದ್ದವು. ತಿರುವನಂತಪುರಂ ಜಿಲ್ಲೆಯ ಇಂದಿನ ಕನ್ಯಾಕುಮಾರಿ ಜಿಲ್ಲೆಯ ಕೆಲವು ಭಾಗಗಳು, ಕೊಲ್ಲಂ ಜಿಲ್ಲೆಯು ಇಂದಿನ ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳು, ಕೊಟ್ಟಾಯಂ ಜಿಲ್ಲೆಯು ಇಂದಿನ ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳು ಮತ್ತು ತ್ರಿಶೂರ್ ಜಿಲ್ಲೆಯು ಇಂದಿನ ಎರ್ನಾಕುಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳನ್ನು ಹೊಂದಿತ್ತು. ಒಟ್ಟು 36 ತಾಲ್ಲೂಕುಗಳು ಇದ್ದವು.

ಇದನ್ನೂ ಓದಿ: ಕಾಸರಗೋಡಿನ ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಬದಲಿಸಲು ಯೋಚಿಸುತ್ತಿಲ್ಲ: ಪಿಣರಾಯಿ ವಿಜಯನ್

(Kerala History merger of the princely kingdoms of Travancore and Cochin and formation Thiru-Kochi)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ