AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲೊಂದು ವಿಶಿಷ್ಟ ಗ್ರಾಮ, ಸಂಜೆ ಇಲ್ಲ, ಇಲ್ಲಿ ರಾತ್ರಿ ಮಾತ್ರ, ಸಂಜೆ 4 ಗಂಟೆಗೆಲ್ಲಾ ಕಗ್ಗತ್ತಲು

ತೆಲಂಗಾಣದ ಕೊಡುರುಪಾಕ ಗ್ರಾಮವು ಒಂದು ವಿಶಿಷ್ಟ ಭೌಗೋಳಿಕ ವಿಸ್ಮಯವನ್ನು ಹೊಂದಿದೆ. ಇಲ್ಲಿ ಸಂಜೆಯೆಂಬುದೇ ಇಲ್ಲ; ಬದಲಿಗೆ ಮಧ್ಯಾಹ್ನ 4 ಗಂಟೆಗೇ ಕತ್ತಲೆ ಆವರಿಸುತ್ತದೆ. ಬೃಹತ್ ಬೆಟ್ಟಗಳಿಂದ ಸುತ್ತುವರೆದಿರುವ ಕಾರಣ ಸೂರ್ಯನ ಬೆಳಕು ಬೇಗನೆ ಮಾಯವಾಗುತ್ತದೆ. ಇದು ಗ್ರಾಮಸ್ಥರ ದೈನಂದಿನ ಜೀವನಶೈಲಿಯನ್ನು ವಿಭಿನ್ನಗೊಳಿಸಿದ್ದು, ಬೇಗನೆ ಕೆಲಸ ಮುಗಿಸಿ ಮನೆ ಸೇರುತ್ತಾರೆ.

ತೆಲಂಗಾಣದಲ್ಲೊಂದು ವಿಶಿಷ್ಟ ಗ್ರಾಮ, ಸಂಜೆ ಇಲ್ಲ, ಇಲ್ಲಿ ರಾತ್ರಿ ಮಾತ್ರ, ಸಂಜೆ 4 ಗಂಟೆಗೆಲ್ಲಾ ಕಗ್ಗತ್ತಲು
ಕೊಡುರುಪಾಕ
ನಯನಾ ರಾಜೀವ್
|

Updated on:Jul 20, 2026 | 9:54 AM

Share

ಹೈದರಾಬಾದ್, ಜುಲೈ 20: ನಮ್ಮ ದೈನಿಂದಿನ ಜೀವನದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂಬ ನಾಲ್ಕು ಹಂತಗಳಿರುವುದು ಸಾಮಾನ್ಯ. ಆದರೆ ಸಂಜೆಯನ್ನೇ ಕಾಣದ ಹಳ್ಳಿ ಭಾರತದಲ್ಲಿದೆ. ಅಲ್ಲಿನ ಜನರು ಶತಮಾನಗಳಿಂದ ಸಂಜೆಯನ್ನೇ ಕಂಡಿಲ್ಲ. ಮಧ್ಯಾಹ್ನದ ಬಳಿಕ ಸೂರ್ಯ ಮುಳುಗಳು ಶುರುವಾಗುತ್ತಿದ್ದಂತೆ ಅಲ್ಲಿ ಮುಸ್ಸಂಜೆ ಎಂಬುದೇ ಇಲ್ಲದೆ ನೇರವಾಗಿ ಕತ್ತಲಾಗಿಬಿಡುತ್ತದೆ. ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದಲ್ಲಿರುವ ‘ಕೊಡುರುಪಾಕ’ಎಂಬ ಸುಂದರ ಹಳ್ಳಿಯೇ ಈ ಭೌಗೋಳಿಕ ವಿಸ್ಮಯದ ತಾಣ.

ಸಂಜೆ ನಾಲ್ಕು ಗಂಟೆಗೆ ಜನರು ಮನೆಯ ದೀಪ ಬೆಳಗಿಸುತ್ತಾರೆ

ಸಾಮಾನ್ಯವಾಗಿ ಎಲ್ಲೆಡೆ ಜನರು ಸಂಜೆ 6 ಅಥವಾ 7 ಗಂಟೆಯ ಸುಮಾರಿಗೆ ಸೂರ್ಯಾಸ್ತವನ್ನು ಆನಂದಿಸುತ್ತಾ ಟೀ ಕುಡಿಯುತ್ತಾರೆ. ಆದರೆ, ಕೊಡುರುಪಾಕ ಗ್ರಾಮದಲ್ಲಿ ಸಂಜೆ 4 ಗಂಟೆಯಾಗುತ್ತಿದ್ದಂತೆ ಇಡೀ ಊರು ಕತ್ತಲೆಯಲ್ಲಿ ಮುಳುಗಿಹೋಗುತ್ತದೆ. ಹೀಗಾಗಿ, ಗ್ರಾಮಸ್ಥರು ನಾಲ್ಕು ಗಂಟೆಗೆಲ್ಲಾ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಆರಂಭಿಸುತ್ತಾರೆ. ಈ ಹಳ್ಳಿಗೆ ಯಾವುದೇ ಶಾಪವಾಗಲಿ ಅಥವಾ ಮಾಂತ್ರಿಕ ಕಾರಣವಲ್ಲ. ಬದಲಿಗೆ ಪ್ರಕೃತಿಯ ಕೌತುಕಮಯ ಭೌಗೋಳಿಕ ರಚನೆಯೇ ಇದಕ್ಕೆ ಮೂಲ ಕಾರಣ.

ಈ ವಿಸ್ಮಯಕ್ಕೆ ನಿಜವಾದ ಕಾರಣವೇನು?

ಕೊಡುರುಪಾಕ ಗ್ರಾಮವು ಎಲ್ಲಾ ದಿಕ್ಕುಗಳಲ್ಲೂ ಬೃಹತ್ ಎತ್ತರದ ಬೆಟ್ಟಗಳಿಂದ ಆವೃತವಾಗಿದೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ‘ರಂಗನಾಯಕುಲ ಗುಟ್ಟ’ ಮತ್ತು ‘ಗೋರ್ಲಾ ಗುಟ್ಟ’ ಎಂಬ ಬೃಹತ್ ಎತ್ತರದ ಬೆಟ್ಟಗಳಿವೆ. ಮಧ್ಯಾಹ್ನ 3.30 ರಿಂದ 4ರ ಅವಧಿಯಲ್ಲಿ ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದಂತೆ, ಈ ಎತ್ತರದ ಬೆಟ್ಟಗಳು ಗೋಡೆಯಂತೆ ನಿಂತು ಸೂರ್ಯನ ಬೆಳಕನ್ನು ತಡೆಯುತ್ತವೆ.

ಮತ್ತಷ್ಟು ಓದಿ: Video: ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮಲಗಿದ ಮರಿಯಾನೆ

ಭಾರತೀಯ ಸಾಂಪ್ರದಾಯಿಕ ಕಾಲಮಾನದ ಪ್ರಕಾರ, ಸಾಮಾನ್ಯವಾಗಿ ದಿನವೊಂದಕ್ಕೆ 12 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಸಿಗುತ್ತದೆ. ಆದರೆ ಈ ಬೆಟ್ಟಗಳ ನೆರಳಿನಿಂದಾಗಿ ಕೊಡುರುಪಾಕ ಗ್ರಾಮಕ್ಕೆ ಕೇವಲ 9 ಗಂಟೆಗಳ ಕಾಲ ಮಾತ್ರ ಸೂರ್ಯನ ಬೆಳಕು ಲಭ್ಯವಾಗುತ್ತದೆ.

ವಿಭಿನ್ನ ದೈನಂದಿನ ಜೀವನ ಶೈಲಿ

ಈ ವಿಶಿಷ್ಟ ಪ್ರಕೃತಿಯ ನಿಯಮದಿಂದಾಗಿ, ಇಲ್ಲಿನ ಗ್ರಾಮಸ್ಥರ ದಿನಚರಿಯೂ ತೀರಾ ಭಿನ್ನವಾಗಿದೆ. ಬೆಟ್ಟಗಳ ಕಾರಣದಿಂದಾಗಿ ಬೆಳಗಿನ ಸೂರ್ಯ ಕೂಡ ಈ ಹಳ್ಳಿಯಲ್ಲಿ ಅರ್ಧ ಗಂಟೆ ತಡವಾಗಿಯೇ ಉದಯಿಸುತ್ತಾನೆ. ಮಧ್ಯಾಹ್ನ 3.30 ಕಳೆಯುತ್ತಿದ್ದಂತೆ ಕತ್ತಲೆ ಆವರಿಸುವುದರಿಂದ, ರೈತರು ಮತ್ತು ಕಾರ್ಮಿಕರು ತಮ್ಮ ಕೆಲಸಗಳನ್ನು ಮಧ್ಯಾಹ್ನದ ಒಳಗೇ ಮುಗಿಸಿಕೊಂಡು ಮನೆಗೆ ಮರಳುತ್ತಾರೆ.

ಬೇಗನೆ ರಾತ್ರಿ ಊಟ: ಸಂಜೆ 4 ಗಂಟೆಗೆಲ್ಲಾ ಕತ್ತಲೆಯಾಗುವುದರಿಂದ ಗ್ರಾಮಸ್ಥರು ರಾತ್ರಿಯ ಊಟವನ್ನು ಬೇಗನೇ ಮುಗಿಸಿ, ಬೇಗ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾರೆಪ್ರಕೃತಿಯ ಈ ಅಪರೂಪದ ಆಟವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಪ್ರವಾಸಿಗರು ಈ ಹಳ್ಳಿಗೆ ಭೇಟಿ ನೀಡುತ್ತಿರುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:54 am, Mon, 20 July 26

Follow Us
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!