AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜೆಂಟ್ ಆಗಿ ಖಾರ್ಕೀವ್​​ನಿಂದ ಹೊರಟುಬಿಡಿ; ಅಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಬಂತು ತುರ್ತು ಸಂದೇಶ

ನಿನ್ನೆ ಕೀವ್​​ನಲ್ಲಿರುವ ಭಾರತೀಯ ನಾಗರಿಕರಿಗೂ ಕೂಡ ಆದಷ್ಟು ಬೇಗ ಕೀವ್​ ಬಿಡುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿತ್ತು. ಲಭ್ಯ ಇರುವ ರೈಲು ಮತ್ತು ಇತರ ಸಂಚಾರ ವ್ಯವಸ್ಥೆಯ ಮೂಲಕ ಕೀವ್​​ನಿಂದ ಹೊರಟು, ಗಡಿ ದೇಶಗಳನ್ನು ತಲುಪಿಕೊಳ್ಳಿ ಎಂದು ಹೇಳಿತ್ತು.

ಅರ್ಜೆಂಟ್ ಆಗಿ ಖಾರ್ಕೀವ್​​ನಿಂದ ಹೊರಟುಬಿಡಿ; ಅಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಬಂತು ತುರ್ತು ಸಂದೇಶ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 02, 2022 | 5:48 PM

Share

ಉಕ್ರೆನ್​ನ ಎರಡನೇ ದೊಡ್ಡ ನಗರವಾದ ಖಾರ್ಕೀವ್(Kharkiv)​ ರಷ್ಯಾ ಆಕ್ರಮಣಕ್ಕೆ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ ಉಕ್ರೇನ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊಸದಾದ  ಅಡ್ವೈಸರಿಯನ್ನು ಹೊರಡಿಸಿದೆ. ಖಾರ್ಕೀವ್​​ನಲ್ಲಿರುವ ಪ್ರತಿಯೊಬ್ಬ ಭಾರತೀಯರೂ ತುರ್ತಾಗಿ ನಗರವನ್ನು ತೊರೆಯಿರಿ. ಈಗ ಎದುರಾಗಿರುವ ಪರಿಸ್ಥಿತಿಯಲ್ಲಿ ಖಾರ್ಕೀವ್​ ಯಾವ ಕಾರಣಕ್ಕೂ ಸುರಕ್ಷಿತವಲ್ಲ. ಹಾಗಾಗಿ ಭಾರತೀಯರು ಅರ್ಜೆಂಟ್ ಆಗಿ ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತು ಪ್ರದೇಶಗಳಿಗೆ ತಲುಪಿಕೊಳ್ಳುವಂತೆ ಹೇಳಿದೆ.

ಉಕ್ರೇನ್​​ನಲ್ಲಿರುವ ರಾಯಭಾರಿ ಕಚೇರಿ ಟ್ವೀಟ್ ಮೂಲಕ ಈ ಮನವಿ ಮಾಡಿದೆ. ಹಾಗೇ, ಟ್ವೀಟ್​ನಲ್ಲಿ ಪ್ರತಿ ಅಕ್ಷರವನ್ನೂ ಕ್ಯಾಪಿಟಲ್​ ಅಕ್ಷರಗಳಲ್ಲಿಯೇ ಇಡುವ ಮೂಲಕ, ಇದೊಂದು ಅತ್ಯಂತ ಮಹತ್ವದ ಅಡ್ವೈಸರಿ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೇ, ಇಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅವರು ಖಾರ್ಕೀವ್​ನಿಂದ ಹೊರಡಲೇಬೇಕು ಎಂದು ಒತ್ತಿ ಹೇಳಿದೆ. ಇದಕ್ಕೂ ಮೊದಲು ಪೋಲ್ಯಾಂಡ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಅಡ್ವೈಸರಿ ಬಿಡುಗಡೆ ಮಾಡಿ, ಉಕ್ರೇನ್​​ನ ಪಶ್ಚಿಮ ಗಡಿ ಸಮೀಪದಲ್ಲಿರುವ ಭಾರತೀಯರು ಎಷ್ಟಾಗತ್ತೋ ಅಷ್ಟು ಬೇಗ ಪೋಲ್ಯಾಂಡ್ ತಲುಪಿಕೊಳ್ಳಿ. ಅದಕ್ಕಾಗಿ ಬುಡೋಮಿಯರ್ಜ್ ಗಡಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿತ್ತು.

ನಿನ್ನೆ ಕೀವ್​​ನಲ್ಲಿರುವ ಭಾರತೀಯ ನಾಗರಿಕರಿಗೂ ಕೂಡ ಆದಷ್ಟು ಬೇಗ ಕೀವ್​ ಬಿಡುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿತ್ತು. ಲಭ್ಯ ಇರುವ ರೈಲು ಮತ್ತು ಇತರ ಸಂಚಾರ ವ್ಯವಸ್ಥೆಯ ಮೂಲಕ ಕೀವ್​​ನಿಂದ ಹೊರಟು, ಗಡಿ ದೇಶಗಳನ್ನು ತಲುಪಿಕೊಳ್ಳಿ ಎಂದು ಹೇಳಿತ್ತು. ಸದ್ಯ ರಷ್ಯಾದಲ್ಲಿ ಖಾರ್ಕೀವ್​, ಸುಮಿ ಮತ್ತು ಕೀವ್​ ಭಾಗಗಳಲ್ಲಿ ರಷ್ಯಾ ಆಕ್ರಮಣ ಹೆಚ್ಚಿದೆ. ಭಾರತೀಯರ ಸ್ಥಳಾಂತರ ಕಾರ್ಯಕ್ಕೆ ರಷ್ಯಾ ಆಗಲೀ, ಉಕ್ರೇನ್ ಆಗಲೀ ತಡೆ ಮಾಡದೆ ಇದ್ದರೂ, ಗಡಿ ಭಾಗಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಟ್ರಾಫಿಕ್​ ಉಂಟಾಗುತ್ತಿದೆ.

ಇದನ್ನೂ ಓದಿ: Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ