AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನ್ ಮಾತಾಡ್ತಿರೋದು, ಏನ್ ಸಮಾಚಾರ ಅಂತ ಫೋನ್ ಮಾಡಿ ವಿಚಾರಿಸುತ್ತಾರೆ ; ಪಿಣರಾಯಿ ವಿಜಯನ್ ಬಗ್ಗೆ ಮೋಹನ್​ಲಾಲ್ ಮಾತು

Mohanlal: ವಿಜಯನ್ ಮಾತಾಡ್ತಿರೋದು,ಏನ್ ಸಮಾಚಾರ ಎಂದು ಪಿಣರಾಯಿ ವಿಜಯನ್ ಫೋನ್ ಮಾಡಿ ಕೇಳುತ್ತಾರೆ ಎಂದು ನಿಮಗೆ ಊಹಿಸಲು ಸಾಧ್ಯವೆ? ಅವರ ಈ ಗೆಳೆತನವನ್ನು ನಿಭಾಯಿಸುವ ರೀತಿಯಿಂದಲೇ ನನಗೆ ಅವರು ಇಷ್ಟ ಆಗಿದ್ದುಅಂತಾರೆ ಮೋಹನ್​ಲಾಲ್.

ವಿಜಯನ್ ಮಾತಾಡ್ತಿರೋದು, ಏನ್ ಸಮಾಚಾರ ಅಂತ ಫೋನ್ ಮಾಡಿ ವಿಚಾರಿಸುತ್ತಾರೆ ; ಪಿಣರಾಯಿ ವಿಜಯನ್ ಬಗ್ಗೆ ಮೋಹನ್​ಲಾಲ್ ಮಾತು
ಪಿಣರಾಯಿ ವಿಜಯನ್- ಮೋಹನ್​ಲಾಲ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:May 20, 2021 | 8:39 PM

Share

ತಿರುವನಂತಪುರಂ: ಹೊಸ ಅಧಿಕಾರವಧಿಗೆ ಕಾಲಿಡುತ್ತಿರುವ ಗೌರವಾನ್ವಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರಕ್ಕೆ ಶುಭ ಹಾರೈಕೆಗಳು. ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆ ಆಗಲಿ,ಕೇರಳ ಜಗತ್ತಿಗೆ ಮಾದರಿಯಾಗಲಿ ಎಂದು ಮಲಯಾಳಂ ನಟ ಮೋಹನ್​ಲಾಲ್ ಫೇಸ್​ಬು​ಕ್​ನಲ್ಲಿ ಹಾರೈಸಿದ್ದಾರೆ. ಪಿಣರಾಯಿ ವಿಜಯನ್ ಇಂದು ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮುಖ್ಯಮಂತ್ರಿ ಜತೆಗಿರುವ ಫೋಟೊವನ್ನು ಮೋಹನ್​ಲಾಲ್ ಪೋಸ್ಟಿಸಿದ್ದಾರೆ. ಅಂದಹಾಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆಗಿನ ಗೆಳೆತನದ ಬಗ್ಗೆ ಮೋಹನ್ಲಾಲ್ ಇಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮಲಯಾಳ ಮನೋರಮಾ ಪತ್ರಿಕೆ ಜತೆ ಮಾತನಾಡಿದ ಲಾಲೇಟ್ಟನ್ ಪಿಣರಾಯಿ ವಿಜಯನ್ ಬಗ್ಗೆ ಹೇಳಿದ್ದು ಹೀಗೆ…

‘ನನಗೆ ಅಚ್ಚರಿ ಎನಿಸಿದ್ದು ಕಾಮ್ರೇಡ್ ಪಿಣರಾಯಿ ವಿಜಯನ್ ಅವರ ಗೆಳೆತನದ ಬಗ್ಗೆ. ನಮ್ಮಿಬ್ಬರ ನಡುವೆ ಮೂರು ನಾಲ್ಕು ಮ್ಯೂಚುವಲ್ ಫ್ರೆಂಡ್ಸ್ ಇದ್ದಾರೆ. ಯಾವುದೇ ಕೆಲಸ ಅವರ ಕೈಲಾಗದು ಎನ್ನುವಂತಿಲ್ಲ ಹಾಗಿರುವ ಅಸಾಧಾರಣ ವ್ಯಕ್ತಿ ಅವರು. ಪಿಣರಾಯಿ ಅವರ ವ್ಯಕ್ತಿತ್ವವೂ ಅಂಥದ್ದೇ.  ಭೇಟಿಯಾದಾಗೆಲ್ಲ ಆ ಗೆಳೆಯರ ಬಗ್ಗೆ ಹೇಳ್ತಾರೆ, ಅವರ ಜತೆ ಮಾತನಾಡಿದ್ದೆ ಅಂತಾರೆ ಅಷ್ಟೇ. ಆ ವ್ಯಕ್ತಿಗಳು ಹೇಗೆ ಪಿಣರಾಯಿ ಅವರ ಗೆಳೆಯರಾದರು ಎಂಬುದರ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಆ ವ್ಯಕ್ತಿಗಳಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಗೊತ್ತಿಲ್ಲ. ಅವರ ಕ್ಷೇತ್ರದ ಬಗ್ಗೆ ಪಿಣರಾಯಿಗೂ ಸಂಬಂಧವಿಲ್ಲ. ಈ ರೀತಿ ಯಾವುದೇ ಸಂಬಂಧವಿಲ್ಲದ ಕ್ಷೇತ್ರಗಳ ಹಲವಾರು ಸ್ನೇಹಿತರು ಪಿಣರಾಯಿ ಅವರಿಗಿದ್ದಾರೆ. ಅವರಲ್ಲಿ ಕೆಲವರ ಬಗ್ಗೆ ನನಗೆ ಗೊತ್ತು. ಆ ಒಳ್ಳೆ ಮನಸ್ಸಿನ ಮನುಷ್ಯರ ಒಡನಾಟದ ಪಾಸಿಟಿವ್ ಫೀಲ್ ಪಿಣರಾಯಿ ಅವರಿಗೆ ಸಿಗುತ್ತಿರಬಹುದು. ಗೆಳೆಯರನ್ನು ಆಯ್ಕೆ ಮಾಡುವಾಗ ಇಷ್ಟೊಂದು ಸೂಕ್ಷ್ಮವಾಗಿ ಇರುವ ಬೇರೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಅವರನ್ನು ಭೇಟಿಯಾಗಿದ್ದು ಎಲ್ಲಿ ,ಈಗಲೂ ಈ ಗೆಳೆತನವನ್ನು ಮುಂದುರಿಸಿಕೊಂಡು ಹೇಗೆ ಹೋಗುತ್ತಿದ್ದೀರಿ ಎಂದು ಕೇಳಬೇಕು ಎಂದು ಅನಿಸುತ್ತಿತ್ತು. ಅವರಿಗಾಗಿ ಸಮಯವನ್ನು ಮೀಸಲಿಡುತ್ತಿರುವುದು ಹೇಗೆ ಎಂಬ ಅಚ್ಚರಿ ನನಗೆ. ವಿಜಯನಾ, ಎಂದೊಕ್ಕೆಯುಂಡುಡೊ ಪರಾ (ವಿಜಯನ್ ಮಾತಾಡ್ತಿರೋದು,ಏನ್ ಸಮಾಚಾರ) ಎಂದು ಪಿಣರಾಯಿ ವಿಜಯನ್ ಫೋನ್ ಮಾಡಿ ಕೇಳುತ್ತಾರೆ ಎಂದು ನಿಮಗೆ ಊಹಿಸಲು ಸಾಧ್ಯವೆ? ಅವರ ಈ ಗೆಳೆತನವನ್ನು ನಿಭಾಯಿಸುವ ರೀತಿಯಿಂದಲೇ ನನಗೆ ಅವರು ಇಷ್ಟ ಆಗಿದ್ದು.

ಇದನ್ನೂ ಓದಿ: Pinarayi Vijayan Oath Taking ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿಣರಾಯಿ ವಿಜಯನ್

Published On - 8:33 pm, Thu, 20 May 21

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!