AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mann Ki Baat: ಮನ್​ ಕಿ ಬಾತ್​ನಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಮನ್​ ಕಿ ಬಾತ್​ನ 99ನೇ ಸಂಚಿಕೆಯಲ್ಲಿ ಅಂಗಾಂಗ ದಾನದ ಮಹತ್ವ ಕುರಿತು ವಿವರಿಸಿದರು.

Mann Ki Baat: ಮನ್​ ಕಿ ಬಾತ್​ನಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ ಮೋದಿ
ನರೇಂದ್ರ ಮೋದಿImage Credit source: ANI
Follow us
ನಯನಾ ರಾಜೀವ್
|

Updated on: Mar 26, 2023 | 11:31 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಮನ್​ ಕಿ ಬಾತ್​ನ 99ನೇ ಸಂಚಿಕೆಯಲ್ಲಿ ಅಂಗಾಂಗ ದಾನದ ಮಹತ್ವ ಕುರಿತು ವಿವರಿಸಿದರು. ಅಂಗಾಂಗ ದಾನದ ವಿಷಯದ ಕುರಿತು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ವ್ಯಕ್ತಿಯು ಮರಣದ ನಂತರ ತನ್ನ ದೇಹವನ್ನು ದಾನ ಮಾಡಿದಾಗ, ಅದು 8 ರಿಂದ 9 ಜನರಿಗೆ ಹೊಸ ಜೀವನವನ್ನು ಪಡೆಯುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿಯೂ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದರು.

2013ರಲ್ಲಿ ನಮ್ಮ ದೇಶದಲ್ಲಿ 5 ಸಾವಿರಕ್ಕಿಂತ ಕಡಿಮೆ ಅಂಗಾಂಗ ದಾನ ಪ್ರಕರಣಗಳಿದ್ದರೆ, 2022ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಿದೆ. ಅಂಗಾಂಗಗಳನ್ನು ದಾನ ಮಾಡಿದ ವ್ಯಕ್ತಿಗಳು, ಅವರ ಕುಟುಂಬದವರು ನಿಜಕ್ಕೂ ಪುಣ್ಯದ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಕ್ಟೋಬರ್ 3, 2014 ರಂದು ವಿಜಯದಶಮಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊನೆಯದಾಗಿ ಮನ್ ಕಿ ಬಾತ್ ಕಾರ್ಯಕ್ರಮ ಫೆಬ್ರವರಿ 26 ರಂದು ಪ್ರಸಾರವಾಗಿತ್ತು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಿದರು. ಅಂಗಾಂಗ ದಾನಿಗಳ ಕುಟುಂಬಗಳೊಂದಿಗೆ ಪ್ರಧಾನಿ ಮಾತನಾಡಿದರು.

ಏಪ್ರಿಲ್ 30 ರಂದು ನಡೆಯಲಿರುವ 100 ನೇ ಸಂಚಿಕೆ ಬಗ್ಗೆ ಜನರಲ್ಲಿ ಸಾಕಷ್ಟು ಉತ್ಸಾಹವಿದೆ. 100ನೇ ಸಂಚಿಕೆಗಾಗಿ ನಿಮ್ಮ ಎಲ್ಲಾ ಸಲಹೆಗಳಿಗಾಗಿ ಕಾತರದಿಂದ ಕಾಯುತ್ತಿದ್ದೇನೆ.

ಮತ್ತಷ್ಟು ಓದಿ: Mann Ki Baat: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್​ನ 100ನೇ ಸಂಚಿಕೆ ವಿಶ್ವಾದ್ಯಂತ ಪ್ರಸಾರ

ಪ್ರತಿ ತಿಂಗಳ ಕೊನೆಯ ಭಾನುವಾರದಂದು, ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರ ಮಾಡಲಾಗುತ್ತದೆ, ಅದರ ಮೂಲಕ ಪ್ರಧಾನಿ ಮೋದಿ ದೇಶವಾಸಿಗಳೊಂದಿಗೆ ಸಂವಹನ ನಡೆಸುತ್ತಾರೆ.

ಮನ್ ಕಿ ಬಾತ್‌ನ 99 ನೇ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವವರ ಬಗ್ಗೆ ಮಾತನಾಡಿದರು. ಅಂಗಾಂಗ ದಾನ ಇಂದು ಯಾರಿಗಾದರೂ ಜೀವ ನೀಡುವ ದೊಡ್ಡ ಮಾಧ್ಯಮವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮರಣದ ನಂತರ, 8-9 ಜನರು ದೇಹದಾನದ ಮೂಲಕ ಹೊಸ ಜೀವನವನ್ನು ಪಡೆಯಬಹುದು ಎಂದು ಪುನರುಚ್ಚರಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ