AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My Home Group: ಮೈ ಹೋಮ್ ಗ್ರೂಪ್‌ಗೆ 3 ಪ್ರತಿಷ್ಠಿತ ಕೇಂದ್ರ ಪ್ರಶಸ್ತಿ; ಜೂಪಲ್ಲಿ ರಂಜಿತ್ ರಾವ್ ಅವರಿಗೆ ಕಿಶನ್ ರೆಡ್ಡಿ ಪ್ರದಾನ

ಕೈಗಾರಿಕಾ ವಲಯದಲ್ಲಿ ವಿಶೇಷ ಸೇವೆ ನೀಡುತ್ತಿರುವ ಮೈ ಹೋಮ್ ಗ್ರೂಪ್​ಗೆ ಅಪರೂಪದ ಗೌರವ ಸಿಕ್ಕಿದೆ. ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಗಳಿಸಿ ಗ್ರಾಹಕರ ಒಲವು ಗಳಿಸುತ್ತಿರುವ ಮೈ ಹೋಮ್ ಗ್ರೂಪ್​ಗೆ ಕೇಂದ್ರದಿಂದ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

ಸುಷ್ಮಾ ಚಕ್ರೆ
|

Updated on:Aug 07, 2024 | 8:58 PM

Share

ನವದೆಹಲಿ: ಕೈಗಾರಿಕಾ ವಲಯದಲ್ಲಿ ವಿಶೇಷ ಸೇವೆ ನೀಡುತ್ತಿರುವ ಮೈ ಹೋಮ್ ಗ್ರೂಪ್​ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಮನ್ನಣೆ ಗಳಿಸಿ ಗ್ರಾಹಕರ ಒಲವು ಗಳಿಸುತ್ತಿರುವ ಮೈ ಹೋಮ್ ಗ್ರೂಪ್​ಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದೆ. ಈ ಕಾರ್ಯಕ್ರಮ ಇಂದು ನಡೆದಿದ್ದು, ಕೇಂದ್ರ ಕಲ್ಲಿದ್ದಲು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಗಣಿ ಕಂಪನಿಗಳ ಪ್ರತಿನಿಧಿಗಳಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಎರಡು ತೆಲುಗು ರಾಜ್ಯಗಳ 10 ಗಣಿಗಳಿಗೆ 5 ಸ್ಟಾರ್ ರೇಟಿಂಗ್ ಸಿಕ್ಕಿದೆ. ಇದರಲ್ಲಿ ಮೈ ಹೋಮ್ ಗುಂಪಿಗೆ ಸೇರಿದ 3 ಗಣಿಗಳಿಗೆ ಪಂಚತಾರಾ ರೇಟಿಂಗ್ ಸಿಕ್ಕಿದೆ. ತೆಲಂಗಾಣದ ಚೌಟುಪಲ್ಲಿ ಗಣಿ, ಮೆಲ್ಲಚೆರುವು ಗಣಿ ಮತ್ತು ಎಪಿಯ ಶ್ರೀಜಯೋತಿ ಗಣಿ 5 ಸ್ಟಾರ್ ರೇಟಿಂಗ್ ಪ್ರಶಸ್ತಿಗಳನ್ನು ಪಡೆದಿವೆ. ಮೈ ಹೋಮ್ ಇಂಡಸ್ಟ್ರೀಸ್ ಎಂಡಿ ಜೂಪಲ್ಲಿ ರಂಜಿತ್ ರಾವ್ ಅವರು ಶ್ರೀಜಯಜ್ಯೋತಿ ಸಿಮೆಂಟ್ಸ್, ಮೈಹೋಮ್ ಮೈನ್ಸ್ ಮತ್ತು ಮೆಳ್ಳಚೆರುವು ಮತ್ತು ಚೌಟುಪಲ್ಲಿಗಾಗಿ ಮೂರು 5 ಸ್ಟಾರ್ ರೇಟಿಂಗ್ ಪ್ರಶಸ್ತಿಗಳನ್ನು ಪಡೆದರು.

ಇದನ್ನೂ ಓದಿ: ತೆಲುಗು ಚಿತ್ರರಂಗದ ಮೇಲೆ ಮತ್ತೆ ಬೇಸರ ಹೊರಹಾಕಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಗಣಿ ಸಚಿವಾಲಯದ ಅಡಿಯಲ್ಲಿನ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ದೇಶಾದ್ಯಂತ ಗಣಿಗಳ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ ಮತ್ತು 5-ಸ್ಟಾರ್ ರೇಟಿಂಗ್ ಅನ್ನು ನಿಯೋಜಿಸುತ್ತದೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ನ ಪ್ರಾಥಮಿಕ ಉದ್ದೇಶವೆಂದರೆ ದೇಶದ ಖನಿಜ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು. ಈ ಪ್ರಶಸ್ತಿಗಳು ಗುಣಮಟ್ಟ, ಸೌಲಭ್ಯಗಳು, ಸುರಕ್ಷತೆ, ಸಿಬ್ಬಂದಿ ರಕ್ಷಣೆ ಇತ್ಯಾದಿಗಳನ್ನು ಆಧರಿಸಿವೆ. ಇದರ ಭಾಗವಾಗಿ 2022-23 ನೇ ಸಾಲಿಗೆ ಗಣಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗಿದೆ ಮತ್ತು ದೇಶಾದ್ಯಂತ 68 ಗಣಿಗಳಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. ಇದರಲ್ಲಿ ಮೈ ಹೋಮ್ ಗ್ರೂಪ್ ಅಡಿಯಲ್ಲಿ ಮೂರು ಗಣಿಗಳು ಪಂಚತಾರಾ ರೇಟಿಂಗ್ ಪಡೆದಿವೆ.

ಈ ಸಂದರ್ಭದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ ಮಾತನಾಡಿ, ಗಣಿಗಾರಿಕೆಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ಮತ್ತೊಂದೆಡೆ, ಮೈ ಹೋಮ್ ಗ್ರೂಪ್‌ಗೆ 5 ಸ್ಟಾರ್ ರೇಟಿಂಗ್‌ನೊಂದಿಗೆ 68 ಗಣಿಗಳಲ್ಲಿ ಮೂರು ಗಣಿಗಳನ್ನು ಪಡೆದಿದ್ದಕ್ಕಾಗಿ ಕೈಗಾರಿಕಾ ವಲಯದ ಅನೇಕ ಪ್ರಮುಖ ವ್ಯಕ್ತಿಗಳು ಅಭಿನಂದಿಸಿದ್ದಾರೆ.

ಇದನ್ನೂ ಓದಿ: Bangladesh Crisis: ಬಾಂಗ್ಲಾದೇಶದ ಹಿಂಸಾಚಾರದ ಬಗ್ಗೆ ಪ್ರಧಾನಿ ನಿವಾಸದಲ್ಲಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ತೆಲುಗು ರಾಜ್ಯಗಳಿಂದ ಪ್ರಶಸ್ತಿ ಪಡೆದ ಗಣಿಗಳಿವು…

ಆಂಧ್ರಪ್ರದೇಶದಿಂದ 5 (ಎಲ್ಲಾ ಸುಣ್ಣದ ಗಣಿಗಳು):

ಭಾರತಿ ಸಿಮೆಂಟ್ಸ್ ಸುಣ್ಣದ ಗಣಿ – ಕಡಪ

JSW ಸಿಮೆಂಟ್ಸ್ ಲೈಮ್ ಸ್ಟೋನ್ – ನಂದ್ಯಾಳ

ದಾಲ್ಮಿಯಾ ಸಿಮೆಂಟ್ಸ್ ನವಾಬಪೇಟೆ – ತಲಮಂಚಿಪಟ್ಟಣ.

ಅಲ್ಟ್ರಾಟೆಕ್ – ಸ್ನೀಜಿಂಗ್ ಪ್ಲಾಂಟ್

ಶ್ರೀ ಜಯಜ್ಯೋತಿ (ಮೈ ಹೋಮ್ ಗ್ರೂಪ್) ಸಿಮೆಂಟ್ಸ್ – ಕರ್ನೂಲ್

ತೆಲಂಗಾಣದಿಂದ 5 (ಎಲ್ಲಾ ಸುಣ್ಣದ ಗಣಿಗಳು):

ಮೈ ಹೋಮ್ ಗ್ರೂಪ್ – ಚೌಟುಪಲ್ಲಿ-1

TSMDC – ದೇವಾಪುರ (ಮಂಚಿರ್ಯಾಲ)

ಮೈ ಹೋಮ್ ಗ್ರೂಪ್ – ಮೆಲ್ಲಚೆರುವು

ರೈನ್ ಸಿಮೆಂಟ್ಸ್ – ನಲ್ಗೊಂಡ

ಸಾಗರ್ ಸಿಮೆಂಟ್ಸ್- ನಲ್ಗೊಂಡ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Wed, 7 August 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ