ನಾಗ್ಪುರ ಹಿಂಸಾಚಾರದ ಗಲಭೆಕೋರರಿಂದ ಹಾನಿಯ ವೆಚ್ಚ ವಸೂಲಿ; ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪ್ರತಿಜ್ಞೆ
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗಲಭೆಕೋರರಿಂದ ಉಂಟಾದ ಘರ್ಷಣೆಯ ಸಮಯದಲ್ಲಿ ಆದ ಆಸ್ತಿ ಹಾನಿಯ ವೆಚ್ಚವನ್ನು ಸರ್ಕಾರ ಗಲಭೆಕೋರರಿಂದಲೇ ವಸೂಲಿ ಮಾಡುತ್ತದೆ ಎಂದು ಹೇಳಿದ್ದಾರೆ. ಘರ್ಷಣೆಯಲ್ಲಿ ತೊಡಗಿದ್ದ 104 ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊ ರೆಕಾರ್ಡಿಂಗ್ಗಳ ವಿಶ್ಲೇಷಣೆಯ ನಂತರ ನಾಗ್ಪುರ ಹಿಂಸಾಚಾರದ 104 ಆರೋಪಿಗಳನ್ನು ಗುರುತಿಸಲಾಗಿದೆ.

ಮುಂಬೈ, ಮಾರ್ಚ್ 22: ಮಾರ್ಚ್ 17ರಂದು ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರವು ನಾಗ್ಪುರದ ಹಲವಾರು ಭಾಗಗಳಲ್ಲಿ ವ್ಯಾಪಕ ಆಸ್ತಿ ಹಾನಿ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆಗೆ ಕಾರಣವಾಯಿತು. ಇದರ ಕುರಿತು ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಘರ್ಷಣೆಯ ಸಮಯದಲ್ಲಿ ಗಲಭೆಕೋರರಿಂದ ಉಂಟಾದ ಉಂಟಾದ ಆಸ್ತಿ ಹಾನಿಯ ವೆಚ್ಚವನ್ನು ಸರ್ಕಾರ ಅವರಿಂದಲೇ ಮರುಪಡೆಯುತ್ತದೆ ಎಂದು ಹೇಳಿದ್ದಾರೆ.
“ಹಿಂಸಾಚಾರದ ಅಪರಾಧಿಗಳು ಪರಿಹಾರ ನೀಡಲು ವಿಫಲವಾದರೆ, ನಷ್ಟವನ್ನು ಮರುಪಡೆಯಲು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ನಷ್ಟವನ್ನು ಮರುಪಡೆಯಲು ಮಾರಾಟ ಮಾಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ. ಅಶಾಂತಿಯ ಸಮಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಔರಂಗಜೇಬನ ವೈಭವೀಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ; ಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಜ್ಞೆ
ಘರ್ಷಣೆಯಲ್ಲಿ ತೊಡಗಿದ್ದ 104 ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊ ರೆಕಾರ್ಡಿಂಗ್ಗಳ ವಿಶ್ಲೇಷಣೆಯ ನಂತರ ನಾಗ್ಪುರ ಹಿಂಸಾಚಾರದ 104 ಆರೋಪಿಗಳನ್ನು ಗುರುತಿಸಲಾಗಿದೆ. ಕಾನೂನಿನ ಪ್ರಕಾರ 12 ಅಪ್ರಾಪ್ತ ವಯಸ್ಕರು ಸೇರಿದಂತೆ 92 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
नागपुर घटना के दंगाइयों को कड़ी से कड़ी सजा मिलेगी! जब तक आखिरी दंगाई को पकड़ा नहीं जाता तब तक ये कार्रवाई चलती रहेगी। जो भी नुकसान हुआ है उसकी भरपाई दंगाइयों से की जाएगी…
(पत्रकार परिषद | नागपुर | 22-3-2025)@NagpurPolice @nagpurcp#Maharashtra #Nagpur #NagpurViolence pic.twitter.com/qfLnVz2ysU
— Devendra Fadnavis (@Dev_Fadnavis) March 22, 2025
“1992ರ ನಂತರ ಇಂತಹ ಘಟನೆ ನಡೆದಿಲ್ಲ, ಪೊಲೀಸರ ಮೇಲೆ ದಾಳಿ ಮಾಡಿದವರನ್ನು ಬಿಡುವುದಿಲ್ಲ. ಈ ಘರ್ಷಣೆ ಮಾಡಿದವರಿಗೆ ಮಾಲೆಗಾಂವ್ ಸಂಪರ್ಕವಿದೆ. ಅವರ ನಾಯಕರು ಮಾಲೆಗಾಂವ್ಗೆ ಸಂಪರ್ಕ ಹೊಂದಿದ್ದಾರೆ, ಬುಲ್ಡೋಜರ್ ಅಗತ್ಯವಿರುವಲ್ಲೆಲ್ಲಾ ಬುಲ್ಡೋಜರ್ ಅನ್ನು ಸಹ ಬಳಸಲಾಗುತ್ತದೆ. ಇದು ಮಹಾರಾಷ್ಟ್ರ. ನಾವು ನಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಬುಲ್ಡೋಜರ್ ಅಗತ್ಯವಿರುವಲ್ಲೆಲ್ಲಾ ಬುಲ್ಡೋಜರ್ ಅನ್ನು ಸಹ ಬಳಸಲಾಗುತ್ತದೆ” ಎಂದು ಮಹಾರಾಷ್ಟ್ರ ಸಿಎಂ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Sat, 22 March 25