AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ದರ ನಿಗದಿಯಲ್ಲಿ ಭಾರೀ ಬದಲಾವಣೆ! ಗ್ರಾಹಕ ಉಪಯೋಗಿ ಸುಧಾರಣೆಗಳು ಜಾರಿಗೆ

ದೆಹಲಿ: ದೇಶದಲ್ಲಿ ವಿದ್ಯುತ್ ದರ ನಿಗದಿ ನೀತಿಯಲ್ಲಿ ಬದಲಾವಣೆ ಸನ್ನಿಹಿತವಾಗಿದೆ. ಬಳಕೆಗೆ ತಕ್ಕಂತೆ ಮಾತ್ರ ವಿದ್ಯುತ್ ದರ ವಿಧಿಸಲು ಶಿಫಾರಸು ಮಾಡಲಾಗಿದೆ. ಇದುವರೆಗೂ ವಿದ್ಯುತ್ ಬಳಕೆಯ ಉದ್ದೇಶದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಆಗುತ್ತಿತ್ತು. ಗೃಹ ಬಳಕೆಗೆ ಕಡಿಮೆ ದರ, ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಲಾಗುತ್ತಿತ್ತು. ಲೋಡ್ ಶೆಡ್ಡಿಂಗ್ ಇರಲ್ಲ, 24/7 ವಿದ್ಯುತ್ ಪೂರೈಕೆ ಈ ನೀತಿಯನ್ನು ಕೈ ಬಿಟ್ಟು ವೋಲ್ಟೇಜ್ ಆಧಾರದ ಮೇಲೆ ದರ ನೀಡಬೇಕು ಎಂದು ರಾಷ್ಟ್ರೀಯ ವಿದ್ಯುತ್ ದರ ನೀತಿಗೆ […]

ವಿದ್ಯುತ್ ದರ ನಿಗದಿಯಲ್ಲಿ ಭಾರೀ ಬದಲಾವಣೆ! ಗ್ರಾಹಕ ಉಪಯೋಗಿ ಸುಧಾರಣೆಗಳು ಜಾರಿಗೆ
ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್
ಆಯೇಷಾ ಬಾನು
| Edited By: |

Updated on: Jun 02, 2020 | 1:24 PM

Share

ದೆಹಲಿ: ದೇಶದಲ್ಲಿ ವಿದ್ಯುತ್ ದರ ನಿಗದಿ ನೀತಿಯಲ್ಲಿ ಬದಲಾವಣೆ ಸನ್ನಿಹಿತವಾಗಿದೆ. ಬಳಕೆಗೆ ತಕ್ಕಂತೆ ಮಾತ್ರ ವಿದ್ಯುತ್ ದರ ವಿಧಿಸಲು ಶಿಫಾರಸು ಮಾಡಲಾಗಿದೆ. ಇದುವರೆಗೂ ವಿದ್ಯುತ್ ಬಳಕೆಯ ಉದ್ದೇಶದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಆಗುತ್ತಿತ್ತು. ಗೃಹ ಬಳಕೆಗೆ ಕಡಿಮೆ ದರ, ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಲಾಗುತ್ತಿತ್ತು.

ಲೋಡ್ ಶೆಡ್ಡಿಂಗ್ ಇರಲ್ಲ, 24/7 ವಿದ್ಯುತ್ ಪೂರೈಕೆ ಈ ನೀತಿಯನ್ನು ಕೈ ಬಿಟ್ಟು ವೋಲ್ಟೇಜ್ ಆಧಾರದ ಮೇಲೆ ದರ ನೀಡಬೇಕು ಎಂದು ರಾಷ್ಟ್ರೀಯ ವಿದ್ಯುತ್ ದರ ನೀತಿಗೆ ತಿದ್ದುಪಡಿ ತರಲು ರಾಜನಾಥ್ ಸಿಂಗ್ ನೇತೃತ್ವದ ಗ್ರೂಪ್ ಆಫ್ ಮಿನಿಸ್ಟರ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಗ್ರಾಹಕ ಕೇಂದ್ರಿತ ಸುಧಾರಣೆಗೆ ಶಿಫಾರಸು ಮಾಡಲಾಗಿದೆ. ಪ್ರಸ್ತುತ ವಿದ್ಯುತ್ ಬಳಕೆಯಲ್ಲಿ 50-60 ಕೆಟಗರಿಗಳಿವೆ. ಆದರೆ ಇನ್ನು ಮುಂದೆ ವೋಲ್ಟೇಜ್ ಆಧಾರದ ಮೇಲೆ 6 ಕೆಟಗರಿ ಮಾಡಿ ಅದರಲ್ಲಿ ಗ್ರಾಹಕರು ಮಾತ್ರವೇ ಇರಬೇಕು. ಹೊಸ ರಾಷ್ಟ್ರೀಯ ವಿದ್ಯುತ್ ದರ ನೀತಿಯ ಪ್ರಕಾರ ಲೋಡ್ ಶೆಡ್ಡಿಂಗ್ ಇರಲ್ಲ. 24/7 ವಿದ್ಯುತ್ ಪೂರೈಕೆ ಮಾಡಲಾಗುತ್ತೆ.

ರೈತರ ಪಂಪ್ ಸೆಟ್​ಗಳಿಗೆ ಸಬ್ಸಿಡಿ ವಿದ್ಯುತ್ ಸ್ಥಗಿತ ಗ್ರಾಹಕರು ಬಳಸುವ ವೋಲ್ಟೇಜ್ ಆಧಾರದ ಮೇಲೆ ದರ ಕೊಡಬೇಕು. ಲೋಡ್ ಶೆಡ್ಡಿಂಗ್ ಮಾಡಿದ್ರೆ ವಿದ್ಯುತ್ ಪೂರೈಕೆದಾರ ಕಂಪನಿ, ಎಸ್ಕಾಂಗಳಿಗೆ ದಂಡ ವಿಧಿಸಲಾಗುತ್ತದೆ. ಶೇ. 15ಕ್ಕಿಂತ ಹೆಚ್ಚಿನ ವಾಣಿಜ್ಯ ನಷ್ಟವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತಿಲ್ಲ. ರೈತರ ಪಂಪ್ ಸೆಟ್​ಗಳಿಗೆ ಸಬ್ಸಿಡಿ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತೆ.

ರೈತರಿಗೆ ವಿದ್ಯುತ್ ಸಬ್ಸಿಡಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಬೇಕು. ಈ ಹಣವನ್ನು ರೈತರು ವಿದ್ಯುತ್ ಬಳಕೆಗೆ ಪಾವತಿ ಮಾಡಬೇಕು. ಮುಂದಿನ ವಾರ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ರಾಷ್ಟ್ರೀಯ ವಿದ್ಯುತ್ ದರ ನೀತಿಯನ್ನು ಪ್ರಸ್ತಾಪಿಸಲಾಗುತ್ತೆ. ಶಿಫಾರಸು ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ