AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರು ದೇಶ ವಿಭಜನೆ ಮಾಡಿದ ಉದಾರವಾದಿ, ಆದರೆ ಮಹಾತ್ಮ ಗಾಂಧಿ ಏನು ಮಾಡಿದರು: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

ಗಾಂಧಿ ಅವರಲ್ಲಿ ದೌರ್ಬಲ್ಯಗಳು ಇವೆ, ಒಳ್ಳೆಯ ಗುಣಗಳು ಇವೆ. ನಾವು ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು. ಮಹಾತ್ಮ ಗಾಂಧಿ, ನೆಹರು ಬಗ್ಗೆ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೆಹರು ದೇಶ ವಿಭಜನೆ ಮಾಡಿದ ಉದಾರವಾದಿ, ಆದರೆ ಮಹಾತ್ಮ ಗಾಂಧಿ ಏನು ಮಾಡಿದರು: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ
ಶಾಸಕ ಸಿ.ಟಿ. ರವಿ
TV9 Web
| Edited By: |

Updated on: May 30, 2022 | 1:26 PM

Share

ನವದೆಹಲಿ: ನೆಹರು ಅವರು ದೇಶ ವಿಭಜನೆ ಮಾಡಿದ ಉದಾರವಾದಿ. ದೇಶ ವಿಭಜನೆ ತಡೆಯಲು ಮಹಾತ್ಮ ಗಾಂಧಿ ಏನು ಮಾಡಿದರು ಎಂದು ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಏನು ಸಿಕ್ಕಿತು. ಅತ್ಯಾಚಾರ, ಮತಾಂತರ ಬಿಟ್ಟು ಬೇರೆ ಏನು ಸಿಕ್ಕಿದೆ. ಭಾರತೀಯ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದರೆ, ಇಂದು ಕಾಶ್ಮೀರ, ದೆಹಲಿ ಯಾವುದೂ ಉಳಿಯುತ್ತಿರಲಿಲ್ಲ. ಹೀಗಾಗಿಯೇ ಸೇನೆಗೆ ಸೇರುವಂತೆ ಸಾವರ್ಕರ್​ ಕರೆ ನೀಡಿದರು. ಗಾಂಧಿ ಅವರಲ್ಲಿ ದೌರ್ಬಲ್ಯಗಳು ಇವೆ, ಒಳ್ಳೆಯ ಗುಣಗಳು ಇವೆ. ನಾವು ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು ಎಂದು ಸಿ.ಟಿ. ರವಿ ಹೇಳಿದರು. 2ನೇ ವಿಶ್ವಯುದ್ಧದ ಬಳಿಕ ಬ್ರಿಟಿಷರು ಸಾಮರ್ಥ್ಯ ಕಳೆದುಕೊಂಡರು. ಸ್ವಾತಂತ್ರ್ಯಕ್ಕಾಗಿ ಹೋರಾಡದ ದೇಶಗಳಿಗೂ ಸ್ವಾತಂತ್ರ್ಯ ನೀಡಿದರು. ಗಾಂಧಿ ಜನಸಮೂಹ, ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದರು. ಎಲ್ಲರ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದರು.

ಇದನ್ನೂ ಓದಿ: ಮದುವೆಯಲ್ಲಿ ಹೂವಿನ ಹಾರದ ಬದಲು ಹಾವಿನ ಹಾರ ಹಾಕಿದ ವಧು ವರ !! ವಿಡಿಯೋ ವೈರಲ್

ಸಿದ್ದರಾಮಯ್ಯ ಅಂತ ನೀವ್ಯಾಕೆ ಹೆಸರಿಟ್ಟುಕೊಂಡಿದ್ದೀರಿ?

ಆರ್ಯ-ದ್ರಾವಿಡರ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಉತ್ತರ ಹಾಗೂ ದಕ್ಷಿಣದವರ ಡಿಎನ್‌ಎ ಒಂದೇ ಇದೆ. ಐರಿಷ್ ಪಾದ್ರಿ ಇಂಥಾದೊಂದು ವಾದ ಮಂಡನೆ ಮಾಡಿದ್ದರು. ಶ್ರೀರಾಮ ಆರ್ಯನೋ..? ದ್ರಾವಿಡನೋ? ಸಿದ್ದರಾಮಯ್ಯ ಅಂತ ನೀವ್ಯಾಕೆ ಹೆಸರಿಟ್ಟುಕೊಂಡಿದ್ದೀರಿ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಯಾವ ಆಧಾರ ಇಟ್ಟುಕೊಂಡು ವಾದ ಮಾಡುತ್ತಿದ್ದಾರೆ. ದೇಶದ ಎಲ್ಲ ಭಾಷೆಗಳಿಗೆ ಸಂಸ್ಕೃತ ತಾಯಿ ಭಾಷೆ. ಸಿದ್ದರಾಮಯ್ಯನವರದು ಅರೆಬರೆ ತಿಳಿವಳಿಕೆ, ಎಡಬಿಡಂಗಿತನ ತೋರುತ್ತಿದ್ದಾರೆ. ಒಡೆದು ಆಳುವ ಕಾಂಗ್ರೆಸ್ ಪಕ್ಷದ ಬಣ್ಣ ಮತ್ತೆ ಬಯಲಾಗಿದೆ. ಉತ್ತರ, ದಕ್ಷಿಣದಲ್ಲಿ ಶಿವ & ವಿಷ್ಣುವನ್ನು ಪೂಜಿಸುತ್ತಾರೆ. ರಾಮ, ಶಿವ, ಕೃಷ್ಣ ಕಪ್ಪು ಅವರನ್ನು ಯಾರಿಗೆ ಹೋಲಿಕೆ ಮಾಡುತ್ತೀರಿ? ಕರ್ನಾಟಕದ ಮರ್ಯಾದೆ ಕಳೆಯುವ ಕೆಲಸ ಮಾಡಬೇಡಿ. ಯಾವುದೋ ಮೆಂಟಲ್ ಗಿರಾಕಿ ಅಂತಾ ಜನರು ಹೇಳುತ್ತಾರೆ. ಯಾರೋ ತಲೆ ತಿರುಕರು ಹೇಳಿಕೊಟ್ಟಿದ್ದನ್ನು ಹೇಳಬೇಡಿ. ಆರ್​ಎಸ್​ಎಸ್ ಸಂಸ್ಕಾರ ಕೊಡುವ ಕೆಲಸ ಮಾಡುತ್ತೆ ಎಂದು ಸಿ.ಟಿ.ರವಿ ಹೇಳಿದರು.

ಶ್ರೀರಾಮ್-ಅಂಜನಾದ್ರಿ ವಾದ

ಶ್ರೀರಾಮ್ ಥೈಲ್ಯಾಂಡ್​ನಲ್ಲಿ ಹುಟ್ಟಿದ ಎನ್ನುವ ವಾದ ಇದೆ. ಆದರೆ ಇತಿಹಾಸ ಆಯೋಧ್ಯೆಯಲ್ಲಿ ಹುಟ್ಟಿದ ಎನ್ನುವುದು ಸತ್ಯ ಎಂದು ಹೇಳಿದರು. ಆಂಜನೇಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಜನಿಸಿದ್ದಾನೆ. ಆಯಾ ಕಾಲಘಟ್ಟದಲ್ಲಿ ಒಂದೊಂದು ಒಂದು ಉಲ್ಲೇಖಗಳಿದೆ. ಜನ ಮಾನಸದಲ್ಲಿ ಯಾವುದು ಹೆಚ್ಚು ಉಳಿದಿದೆ ಎಂಬುದು ಮುಖ್ಯ ಎಂದು ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್