AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರ್​​ಗೆ ಸಹಾಯ ಮಾಡಿದ 10 ವರ್ಷದ ಬಾಲಕ; ಸೇನೆಯ ಮನ ಗೆದ್ದ ಹೀರೋ

ಆಪರೇಷನ್ ಸಿಂಧೂರ್‌ನ ಅತ್ಯಂತ ಕಿರಿಯ ಯೋಧನ ಕತೆ ಬಹಳ ವೈರಲ್ ಆಗುತ್ತಿದೆ. 10 ವರ್ಷದ ಬಾಲಕ ಶ್ರವಣ್ ಸಿಂಗ್ ಈಗ ಸೇನೆಯ ಮನ ಗೆದ್ದಿದ್ದಾನೆ. ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಈ ಸಣ್ಣ ಬಾಲಕ ಸಹಾಯ ಮಾಡಿದ್ದ. ನಾಗರಿಕ ಯೋಧನಾಗುವ ಮೂಲಕ ಧೈರ್ಯದಿಂದ ಭಾರತೀಯ ಸೇನೆಗೆ ಸಹಾಯ ಮಾಡಿದ ಈ ಬಾಲಕ ಮುಂದೆ ಸೈನಿಕನಾಗುವ ಆಸೆ ಹೊಂದಿದ್ದಾನೆ. ಆತನಿಗೆ ಸೇನೆ ಸನ್ಮಾನ ಮಾಡಿದೆ.

ಆಪರೇಷನ್ ಸಿಂಧೂರ್​​ಗೆ ಸಹಾಯ ಮಾಡಿದ 10 ವರ್ಷದ ಬಾಲಕ; ಸೇನೆಯ ಮನ ಗೆದ್ದ ಹೀರೋ
Shravan Singh
ಸುಷ್ಮಾ ಚಕ್ರೆ
|

Updated on:May 29, 2025 | 5:15 PM

Share

ನವದೆಹಲಿ, ಮೇ 29: ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯ ತಾರಾ ವಾಲಿ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಮಿಲಿಟರಿ ನಿಯೋಜನೆ ಮಾಡಲಾಗಿತ್ತು. ಈ ಗ್ರಾಮವು ಭಾರತ-ಪಾಕಿಸ್ತಾನ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿದೆ. ಮೇ 7ರಿಂದ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾದಾಗ ಸೈನಿಕರು ಇಲ್ಲಿಗೆ ಮೆರವಣಿಗೆ ನಡೆಸಿದರು, ಶಿಬಿರಗಳನ್ನು ಸ್ಥಾಪಿಸಿದರು ಮತ್ತು ಆಪರೇಷನ್ ಸಿಂಧೂರ್ ಅಡಿಯಲ್ಲಿ ಕಾರ್ಯಾಚರಣೆಗೆ ಸಿದ್ಧರಾದರು.

ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನ್ಯಕ್ಕೆ ಸಹಾಯ ಮಾಡಿದ ಫಿರೋಜ್‌ಪುರದ 10 ವರ್ಷದ ಶ್ರವಣ್ ಸಿಂಗ್ ದೇಶದ ಅತ್ಯಂತ ಕಿರಿಯ ನಾಗರಿಕ ಯೋಧ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ಫಿರೋಜ್‌ಪುರದ ಮಾಮ್‌ಡೋಟ್ ಪಟ್ಟಣದ ಗಡಿ ಗ್ರಾಮವಾದ ತರ್ವಾಲಿಯ ಸರ್ವಾನ್ ಸಿಂಗ್ ಆತನನ್ನು ಸೈನಿಕರಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಅವರೊಂದಿಗೆ ಸಮಯ ಕಳೆದಿದ್ದಕ್ಕಾಗಿ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಸನ್ಮಾನಿಸಿದ್ದಾರೆ.

ಇದನ್ನೂ ಓದಿ
Image
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
Image
ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ
Image
ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
Image
ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧದ ನಡುವೆ ಇಲ್ಲಿದೆ ಗುಡ್ ನ್ಯೂಸ್

ಆಪರೇಷನ್ ಸಿಂಧೂರ್ ಸಮಯದಲ್ಲಿ ಶ್ರವಣ್ ಸಿಂಗ್ ತನ್ನ ಮನೆಯಿಂದ ಸೈನಿಕರಿಗೆ ನೀರು, ಹಾಲು, ಚಹಾ, ಲಸ್ಸಿ ಮತ್ತು ಐಸ್ ತರುತ್ತಿದ್ದರು. ಅವನು ಪ್ರತಿದಿನ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಸಹಾಯ ಮಾಡುತ್ತಿದ್ದನು ಮತ್ತು ಅವರೊಂದಿಗೆ ಸಮಯ ಕಳೆಯುತ್ತಿದ್ದನು. ಶ್ರವಣ್ ಅವರ ತಂದೆ ಸೋಹ್ನಾ ಸಿಂಗ್ ಅವರು ಸೇನಾ ಸಿಬ್ಬಂದಿ ತಮ್ಮ ಜಮೀನಿನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ಕೇಳಿದ ಶ್ರವಣ್ ಮೊದಲ ದಿನದಿಂದಲೇ ಸೈನಿಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದನು. ಬೂಟುಗಳು ಮತ್ತು ಬ್ಯಾರಿಕೇಡ್‌ಗಳ ಗದ್ದಲದ ನಡುವೆ, ಬದ್ಧತೆ ಮತ್ತು ಧೈರ್ಯದಿಂದ 10 ವರ್ಷದ ಬಾಲಕ ಸೈನಿಕರ ಜೊತೆ ಯಾವುದೇ ಭಯವಿಲ್ಲದೆ ನಿಂತಿದ್ದನು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಭಾರತೀಯ ಸಶಸ್ತ್ರ ಪಡೆಗಳಿಗೆ ಅಮಿತ್ ಶಾ ಶ್ಲಾಘನೆ

ಆತನನ್ನು ಈಗ ಆಪರೇಷನ್ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಿದ್ದಕ್ಕೆ ಸೇನೆಯಿಂದ ಸನ್ಮಾನಿಸಲ್ಪಟ್ಟಿದ್ದಾನೆ. ಸೇನೆಯಿಂದ ಈ ರೀತಿ ಗೌರವಿಸಲ್ಪಟ್ಟ ಅತ್ಯಂತ ಕಿರಿಯ ನಾಗರಿಕ ಈ ಹುಡುಗ. ಸೈನಿಕರು, ಯುದ್ಧೋಪಕರಣಗಳನ್ನು ಕಂಡು ಹೆದರಿದ ಜನರು ಮನೆಯೊಳಗೆ ಬಾಗಿಲು ಹಾಕಿಕೊಂಡು ಕುಳಿತಿದ್ದಾಗ, ಪಾಕ್ ಎಲ್ಲಿ ದಾಳಿ ಮಾಡುತ್ತದೋ ಎಂದು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾಗ ಆ ಬಾಲಕ ಸೈನಿಕರ ಜೊತೆಗೇ ಕಾಲ ಕಳೆಯುತ್ತಾ ಅವರಿಗೆ ಬೇಕಾದ ಸೌಲಭ್ಯವನ್ನು ಮನೆಯಿಂದ ತಂದು ಕೊಡುತ್ತಿದ್ದ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಗೋಲ್ಡನ್ ಟೆಂಪಲ್​ನಲ್ಲಿ ಬಂದೂಕು ಇಟ್ಟಿರಲಿಲ್ಲ; ಭಾರತೀಯ ಸೇನೆ ಸ್ಪಷ್ಟನೆ

ಆ ಬಾಲಕನ ಉತ್ಸಾಹವನ್ನು ಗುರುತಿಸಿದ ಸೇನೆಯ 7ನೇ ಪದಾತಿ ದಳದ GOC ಮೇಜರ್ ಜನರಲ್ ರಂಜೀತ್ ಸಿಂಗ್ ಮನ್ರಾಲ್, ಆತನನ್ನು ವೈಯಕ್ತಿಕವಾಗಿ “ಆಪರೇಷನ್ ಸಿಂಧೂರ್‌ನ ಕಿರಿಯ ನಾಗರಿಕ ಯೋಧ” ಎಂದು ಗೌರವಿಸಿದ್ದಾರೆ. ಅವರಿಗೆ ಪ್ರಶಸ್ತಿ ಪತ್ರ, ವಿಶೇಷ ಊಟ ಮತ್ತು ಆತನ ನೆಚ್ಚಿನ ಐಸ್ ಕ್ರೀಮ್ ನೀಡಿ ಬೆನ್ನು ತಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:36 pm, Thu, 29 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ