AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರ್​​: ದೇಶದ ಸುರಕ್ಷತೆ, ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರ ಮಠಿಸುವಂತೆ ಕಂಚಿ ಮಠ ಕರೆ

ಪಾಕಿಸ್ತಾನಿ ಉಗ್ರರ ತಾಣಗಳನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿ ಆಗಿದೆ. ಈ ಯಶಸ್ಸಿನ ಹಿನ್ನೆಲೆ ದೇಶಾದ್ಯಂತ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕಂಚಿ ಮಠದ ಪೀಠಾಧಿಪತಿಗಳು ಮೂಕಪಂಚಶತಿ ಸ್ತೋತ್ರ ಪಠಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ಸ್ವರ್ಣವಲ್ಲಿ ಸ್ವಾಮೀಜಿ ಕೂಡ ದೇಶ ಹಿತಕ್ಕಾಗಿ ಪಾರ್ಥಿಸುವಂತೆ ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ್​​: ದೇಶದ ಸುರಕ್ಷತೆ, ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರ ಮಠಿಸುವಂತೆ ಕಂಚಿ ಮಠ ಕರೆ
ಕಂಚಿ ಮಠ
ಗಂಗಾಧರ​ ಬ. ಸಾಬೋಜಿ
|

Updated on:May 08, 2025 | 11:46 AM

Share

ಕಾಂಚೀಪುರಂ, ಮೇ 08: ನಿನ್ನೆ ಭಾರತೀಯ ಸೇನೆ ಆಪರೇಷನ್​ ಸಿಂಧೂರ್ (Operation Sindoor)​ ಮೂಲಕ ಪಾಕಿಸ್ತಾನಿ ಉಗ್ರರ ತಾಣಗಳನ್ನು ಹೊಡೆದುರುಳಿಸಿದೆ. ಕೇವಲ 25 ನಿಮಿಷದಲ್ಲೇ ಭಾರತ ಸದೆ ಬಡಿದಿದೆ. ದಿಢೀರ್ ಏರ್​ಸ್ಟ್ರೈಕ್​ಗೆ ಪಾಕ್ ನಖಶಿಕಾಂತ ಬೆಚ್ಚಿಬಿದ್ದಿದೆ. ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿ ಹಿನ್ನಲೆ ದೇಶದೆಲ್ಲೆಡೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಈ ಮಧ್ಯೆ ಕಾಂಚಿಪುರಂನ (kanchi matha) ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ, ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಮೂಕಪಂಚಶತಿ ಸ್ತೋತ್ರವನ್ನು ಪಠಿಸುವಂತೆ ಕರೆ ನೀಡಲಾಗಿದೆ.

ಪಾಕ್ ನೆಲಕ್ಕೆ ನುಗ್ಗಿ ಉಗ್ರರ ನೆಲೆಯನ್ನ ಭಾರತೀಯ ಸೇನೆ ಉಡೀಸ್ ಮಾಡಿದೆ. ಆಪರೇಷನ್​ ಸಿಂಧೂರ್​ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ಹಿನ್ನೆಲ್ಲೆ ಇದೀಗ ಭಾರತೀಯ ಸೇನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ತುಂಬಲು ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳಲಾಗುತ್ತಿದೆ. ಹಾಗಾಗಿ ಕಂಚಿ ಮಠದಿಂದ ಕೂಡ ಮೂಕಪಂಚಶತಿ ಸ್ತೋತ್ರವನ್ನು ಪಠಿಸುವಂತೆ ಸಂದೇಶ ರವಾನಿಸಲಾಗಿದೆ. ಜೊತೆಗೆ ಸ್ವರ್ಣವಲ್ಲಿ ಸ್ವಾಮೀಜಿ ಕೂಡ ದೇಶ ಹಿತಕ್ಕಾಗಿ ಪಾರ್ಥಿಸುವಂತೆ ತಿಳಿಸಿದ್ದಾರೆ.

ಮೂಕಪಂಚಶತಿ ಸ್ತೋತ್ರ 

ಆರ್ಯ ಶತಕದ 90ನೇ ಶ್ಲೋಕವು ಕಾಮಾಕ್ಷಿ ಪರದೇವತೆಯೇ ದಂಡನಾಥ ಅಥವಾ ವಾರಾಹಿಯ ರೂಪವನ್ನು ತಾಳಿ, ಶತ್ರುಗಳನ್ನು ಸಂಹರಿಸಲಿ, ಆಕೆಯ ಆಯುಧಗಳಾದ ಹಲಾ ಮತ್ತು ಮುಸಲದಿಂದ ಒಳ್ಳೆಯ ಜನರನ್ನು ರಕ್ಷಿಸಲಿ.

ಇದನ್ನೂ ಓದಿ: ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ದಿಟ್ಟ ಹೆಜ್ಜೆ ಇಟ್ಟಿದೆ, ರವಿಶಂಕರ್​ ಗುರೂಜಿ

ಪಾದಾರವಿಂದ ಶತಕದ 59ನೇ ಶ್ಲೋಕವು ಭಗವತಿಯ ಪಾದಕಮಲಗಳು ಹೇಗೆ ನವಗ್ರಹಗಳಂತಿವೆ ಎಂಬುದನ್ನು ವಿವರಿಸುತ್ತದೆ. ಆದ್ದರಿಂದ ನವಗ್ರಹಗಳ ಅನುಗ್ರಹ ನೀಡಲು ಮತ್ತು ಅವರ ಸ್ಥಾನಗಳಿಂದ ಸೂಚಿಸಲಾದ ಯಾವುದೇ ಪ್ರತಿಕುಲವನ್ನು ತೆಗೆದುಹಾಕಲು ಭಗವತಿಯ ಪಾದಾರವಿಂದಕ್ಕೆ ಸೇವೆ ಸಲ್ಲಿಸುವುದು.

ಇದನ್ನೂ ಓದಿ: ಉಗ್ರ ಮಸೂದ್ ಅಜರ್​ಗೆ ಮನೆಯವರೇ ಸತ್ತರೂ ಕಣ್ಣೀರಿಲ್ಲ, ಹತಾಶೆಯಿಲ್ಲ: ಭಯೋತ್ಪಾದನೆಯೇ ಕನಸು!

ಸ್ತುತಿ ಶತಕದ 84ನೇ ಶ್ಲೋಕವು ಭಗವತಿಯ ಅನುಗ್ರಹದಿಂದ ಒಳ್ಳೆಯ ಜನರ ಮನಸ್ಸು ದೃಢವಾಗಲಿ, ಒಳ್ಳೆಯ ಮಾತುಗಳನ್ನು ಆಡಲಿ, ಒಳ್ಳೆಯದನ್ನು ವಿರೋಧಿಸುವವರು ತಮ್ಮ ದುಷ್ಟ ಆಲೋಚನೆಗಳನ್ನು ಬಿಡಲಿ ಎಂದು ಪ್ರಾರ್ಥಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:45 am, Thu, 8 May 25

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್