AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು

Know who manufactures SCALP missile, hammer bomb, loitering munitions used in Operation Sindoor: ಮೇ 6ರ ತಡರಾತ್ರಿ ಭಾರತದ ಮಿಲಿಟರಿ ಕೈಗೊಂಡ ಆಪರೇಷನ್ ಸಿಂದೂರ್​ನ್ಲಲಿ ಪಾಕಿಸ್ತಾನದ 9 ಉಗ್ರ ನೆಲೆಗಳು ಧ್ವಂಸಗೊಂಡಿವೆ. ಈ ಕಾರ್ಯಾಚರಣೆಯಲ್ಲಿ ಸ್ಕಾಲ್ಪ್ ಕ್ಷಿಪನಿ, ಹ್ಯಾಮರ್ ಮತ್ತು ಲಾಯ್ಟರಿಂಗ್ ಮ್ಯುನಿಶನ್​​​ಗಳನ್ನು ಬಳಸಲಾಗಿತ್ತು. ಸ್ಕಾಲ್ಪ್ ಮಿಸೈಲ್​​​ಗಳು ಯೂರೋಪ್ ನಿರ್ಮಿತವಾಗಿದ್ದರೆ, ಹ್ಯಾಮರ್ ಬಾಂಬ್ ಮತ್ತು ಲಾಯ್ಟರಿಂಗ್ ಮ್ಯುನಿಶನ್​​​ಗಳ ತಯಾರಿಕೆಯಲ್ಲಿ ಭಾರತದ ಕಂಪನಿಗಳೂ ಭಾಗಿಯಾಗಿವೆ.

ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು
ಎಎಎಸ್​​ಎಂ ಹ್ಯಾಮರ್ ಬಾಂಬ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 08, 2025 | 12:37 PM

ಬೆಂಗಳೂರು, ಮೇ 8: ಮೊನ್ನೆ ತಡರಾತ್ರಿ ಭಾರತದ ಮಿಲಿಟರಿ ಪಡೆಗಳು ಆಪರೇಷನ್ ಸಿಂದೂರ (Operation Sindoor) ಕೈಗೊಂಡು ಪಾಕಿಸ್ತಾನದಲ್ಲಿರುವ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿವೆ. ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸದೆಯೇ ವಿವಿಧ ರೀತಿಯ ಕ್ಷಿಪಣಿಗಳ ಮೂಲಕ ನಿರ್ದಿಷ್ಟ ಸ್ಥಳಗಳನ್ನು ಗುರಿ ಮಾಡಲಾಗಿತ್ತು. ನಾಗರಿಕರಿಗೆ ಹಾನಿಯಾಗದಂತೆ, ಕೇವಲ ಉಗ್ರರಿರುವ ಕಟ್ಟಡವನ್ನು ಟಾರ್ಗೆಟ್ ಮಾಡಲಾಗಿದ್ದು ವಿಶೇಷ. ಅದಕ್ಕಾಗಿ ವಾಯುಪಡೆಯ ಬತ್ತಳಿಕೆಯಲ್ಲಿರುವ ಸ್ಕಾಲ್ಪ್ ಕ್ಷಿಪಣಿ (SCALP missiles), ಹ್ಯಾಮರ್ ಬಾಂಬ್ (AASM Hammer bombs) ಮತ್ತು ಲಾಯ್ಟರಿಂಗ್ ಮ್ಯೂನಿಶನ್​​​ಗಳನ್ನು (Loitering munitions) ಈ ದಾಳಿಗೆ ಬಳಸಲಾಗಿತ್ತು. ಇದರಲ್ಲಿ ಹ್ಯಾಮರ್ ಬಾಂಬ್ ಮತ್ತು ಮ್ಯುನಿಶನ್​​ಗಳ ತಯಾರಿಕೆಯಲ್ಲಿ ಬೆಂಗಳೂರಿನ ಕಂಪನಿಗಳ ಪಾತ್ರ ಇರುವುದು ಹೆಮ್ಮೆಯ ವಿಚಾರ. ಮೇಲೆ ತಿಳಿಸಿದ ಕ್ಷಿಪಣಿ, ಬಾಂಬ್ ಮತ್ತು ಮ್ಯುನಿಶನ್​​​ಗಳು ಯಾವ್ಯಾವ ಕಂಪನಿಗಳು ತಯಾರಿಸುತ್ತವೆ ಎನ್ನುವ ವಿವರ ಇಲ್ಲಿದೆ:

ಸ್ಕಾಲ್ಪ್ ಮಿಸೈಲ್​​ಗಳು ಫ್ರಾನ್ಸ್ ನಿರ್ಮಿತ

ಆಪರೇಷನ್ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಷಿಪಣಿಗಳೆಂದರೆ ಅದು ಸ್ಕಾಲ್ಪ್. ಇದು ಫ್ರಾನ್ಸ್ ಮತ್ತು ಬ್ರಿಟನ್ ಮೂಲದ ಎಂಬಿಡಿಎ ಎನ್ನುವ ಕಂಪನಿ ತಯಾರಿಸಿದ ಕ್ಷಿಪಣಿಯಾಗಿದೆ. ದೂರ ಶ್ರೇಣಿಯ, ಅಂದರೆ ದೂರ ಸ್ಥಳದಲ್ಲಿರುವ ಗುರಿಯನ್ನು ನಿಖರವಾಗಿ ಇದು ತಲುಪಬಲ್ಲುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಗಳು ಪೂರ್ಣವಾಗಿ ಯೂರೋಪ್​​ನಲ್ಲೇ ತಯಾರಾಗಿವೆ.

ಇದನ್ನೂ ಓದಿ: ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್​​ಗಳ ನಿಯೋಜನೆಗೆ ಭಾರತ ನಿರ್ಧಾರ

ಇದನ್ನೂ ಓದಿ
Image
52 ಸ್ಪೈ ಸೆಟಿಲೈಟ್​​​​ಗಳನ್ನು ಆಗಸಕ್ಕೆ ಕಳುಹಿಸಲಿದೆ ಭಾರತ
Image
ಟರ್ಕಿ ಜೊತೆ ಸ್ನೇಹ ಯಾಕೆ? ಸರ್ಕಾರವನ್ನು ಟೀಕಿಸಿದ ತಜ್ಞರು
Image
80 ಭಾರತೀಯ ವಿಮಾನಗಳಿಂದ ಸ್ಟ್ರೈಕ್; ಟ್ರೋಲ್ ಆದ ಪಾಕ್ ಪ್ರಧಾನಿ
Image
ಇಂಟರ್ನೆಟ್​​​ನಲ್ಲಿ ಪಾಕ್ ಜನಸಾಮಾನ್ಯರು ಹೆಚ್ಚು ಹುಡುಕಿದ್ದು ಏನನ್ನು?

ಎಎಎಸ್​​ಎಂ ಹ್ಯಾಮರ್ ಬಾಂಬ್ ತಯಾರಿಕೆಯಲ್ಲಿ ಬಿಇಎಲ್

ಎಎಎಸ್​​ಎಂ ಹ್ಯಾಮರ್ ಬಾಂಬ್ ಎಂಬುದು ಒಂದು ರೀತಿಯ ಬಾಂಬ್​​​ಗಳನ್ನು ಹೊತ್ತೊಯ್ಯುವ ಮ್ಯೂನಿಶನ್​ ಆಗಿದೆ. ಫ್ರಾನ್ಸ್ ದೇಶದ ಸಫ್ರಾನ್ ಎಲೆಕ್ಟ್ರಾನಿಕ್ಸ್ ಅಂಡ್ ಡಿಫೆನ್ಸ್ ಎನ್ನುವ ಸಂಸ್ಥೆಯು ಈ ಮ್ಯುನಿಶನ್​​ನ ಮೂಲ ತಯಾರಿಕಾ ಸಂಸ್ಥೆ. ಭಾರತದ ಮಿಲಿಟರಿಗಾಗಿ ಸರಬರಾಜು ಮಾಡಲಾಗುವ ಎಎಎಸ್​​ಎಂ ಹ್ಯಾಮರ್ ಬಾಂಬ್​​ಗಳನ್ನು ಭಾರತದಲ್ಲೇ ಸಫ್ರಾನ್ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆ ತಯಾರಿಸುತ್ತದೆ.

ಲಾಯ್ಟರಿಂಗ್ ಮ್ಯೂನಿಶನ್ಸ್​ನ ತಯಾರಿಕೆಯಲ್ಲಿ ಬೆಂಗಳೂರಿನ ನ್ಯೂಸ್ಪೇಸ್ ರಿಸರ್ಚ್

ಆಪರೇಷನ್ ಸಿಂದೂರ್​​​ನಲ್ಲಿ ಲಾಯ್ಟರಿಂಗ್ ಮ್ಯೂನಿಶನ್​​ಗಳನ್ನೂ ಬಳಸಲಾಗಿತ್ತು. ಇವು ಡ್ರೋನ್ ರೀತಿಯ ಕ್ಷಿಪಣಿಗಳಾಗಿವೆ. ಕಾಮಿಕೇಜ್ ಡ್ರೋನ್ಸ್ ಎಂದೂ ಹೆಸರುವಾಸಿಯಾಗಿವೆ. ಹದ್ದಿನ ಹಾಗೆ ಮೇಲೆ ಹಾರಾಡುತ್ತಾ, ಸರಿಯಾದ ಸಮಯಕ್ಕೆ ಕಾದು ಗುರಿಯ ಮೇಲೆ ಪ್ರಹಾರ ಮಾಡುವುದಕ್ಕೆ ಇವುಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮೂರ್ನಾಲ್ಕು ಕಂಪನಿಗಳು ಈ ರೀತಿಯ ಲಾಯ್ಟರಿಂಗ್ ಮ್ಯೂನಿಶನ್​​​ಗಳನ್ನು ತಯಾರಿಸುತ್ತಿವೆ.

ಇದನ್ನೂ ಓದಿ: ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್​​ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು

ಇಸ್ರೇಲ್​​ನ ಎಲ್ಬಿಟ್ ಸಿಸ್ಟಮ್ಸ್ ಜೊತೆ ಸೇರಿ ಭಾರತದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಯಿಂದ ಸ್ಕೈ ಸ್ಟ್ರೈಕರ್ ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಕೆ ಆಗುತ್ತಿದೆ.

ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ಎಕನಾಮಿಕ್ ಎಕ್ಸ್​​ಪ್ಲೋಸಿವ್ಸ್, ಬೆಂಗಳೂರಿನ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಸಂಸ್ಥೆಗಳೂ ಕೂಡ ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಕೆಯಲ್ಲಿ ತೊಡಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Thu, 8 May 25

ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು