AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು

Pakistan Objects To India's Border Outpost: ಗುಜರಾತ್​ನ ಪಾಕ್ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಭಾರತ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಸಮುದ್ರ ಬೆಟ್ ಜಾಗದಲ್ಲಿನ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ಆಕ್ಷೇಪ ಸಲ್ಲಿಸಿದೆ. ಈ ಜಾಗ ತನಗೆ ಸೇರಿದ್ದೆಂಬುದು ಅದರ ವಾದ.

India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 14, 2023 | 7:52 AM

Share

ನವದೆಹಲಿ: ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಜರಾತ್​ನ ಸರ್ ಕ್ರೀಕ್ (Sir Creek) ಎಂಬಲ್ಲಿ ಭಾರತ ಬಾರ್ಡರ್ ಔಟ್​ಪೋಸ್ಟ್​ಗಳನ್ನು (BOP- Border Outpost) ನಿರ್ಮಿಸಿದೆ. ಇದು ವಿವಾದಿತ ಜಾಗವಾಗಿದ್ದು, ಇಲ್ಲಿ ಔಟ್​ಪೋಸ್ಟ್ ನಿರ್ಮಿಸಬಾರದು ಎಂದು ಪಾಕಿಸ್ತಾನ ತಕರಾರು ತೆಗೆದಿದೆ. ಔಟ್​ಪೋಸ್ಟ್​​ಗಳನ್ನು ಭಾರತದ ಗಡಿಭಾಗದ ಒಳಗೆಯೇ ನಿರ್ಮಿಸಲಾಗಿದೆ ಎಂದು ಭಾರತ ಉತ್ತರ ನೀಡಿದೆ. ಇದು ಕಳೆದ ತಿಂಗಳು ನಡೆದಿರುವ ವಿದ್ಯಮಾನ.

ಜನವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಭೇಟಿ ನಡೆದಿತ್ತು. ಬಿಎಸ್​ಎಫ್ ಜೊತೆ ಪಾಕಿಸ್ತಾನದ ಗಡಿಭದ್ರತಾ ಅಧಿಕಾರಿಗಳು ಮಾತುಕತೆ ನಡೆಸಿ ಸಮುದ್ರ ಬೆಟ್ ಪ್ರದೇಶದಲ್ಲಿ ಭಾರತ ಗಡಿ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಬಿಎಸ್​ಎಫ್ ಅಧಿಕಾರಿಗಳ ಹೇಳಿಕೆಯನ್ನಾಧರಿಸಿ ಸಿಎನ್​ಎನ್ ನ್ಯೂಸ್18 ವರದಿ ಮಾಡಿದೆ.

ಈಗ ಗಡಿ ಔಟ್​ಪೋಸ್ಟ್ ನಿರ್ಮಾಣವಾಗುತ್ತಿರುವ ಜಾಗದ ಬಳಿ ಇರುವ ಜಲಮಾರ್ಗದಲ್ಲಿ ಭಾರತ ಮೊದಲಿಂದಲೂ ಪಹರೆ ನಡೆಸುತ್ತಾ ಬಂದಿದೆ. ಈಗ ಪಾಕಿಸ್ತಾನ ಈ ಜಾಗ ಭಾರತಕ್ಕೆ ಸೇರಿದ್ದಲ್ಲ ಎಂದು ಹೇಳುತ್ತಿದೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆ.

ಇದನ್ನೂ ಓದಿ: New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್

ಸರ್ ಕ್ರೀಕ್ ಜಾಗದಲ್ಲಿ ಎಂಟು ಅಂತಸ್ತಿನ ಬಂಕರುಗಳು ಮತ್ತು ವೀಕ್ಷಣಾ ಗೋಪುರವನ್ನು ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯ 50 ಕೋಟಿ ರೂ ನೀಡಿದೆ. ಈ ಜಾಗದಲ್ಲಿ ಪಾಕಿಸ್ತಾನೀ ಮೀನುಗಾರಿಕಾ ದೋಣಿಗಳು ಭಾರತದ ಭಾಗದೊಳಗೆ ಆಗಾಗ್ಗೆ ನುಸುಳಿ ಬರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಟ್ ಪೋಸ್ಟ್ ಅನ್ನು ನಿರ್ಮಿಸಲು ಭಾರತ ಹೊರಟಿರುವುದು ತಿಳಿದುಬಂದಿದೆ.

ಗುಜರಾತ್​ನ ಪಾಕಿಸ್ತಾನದ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಲಾಖಪತ್ ವಾರಿ ಬೆಟ್, ಡಫಾ ಬೆಟ್ ಮತ್ತು ಸಮುದ್ರ ಬೆಟ್, ಇವು ಪಾಕಿಸ್ತಾನದ ಗಡಿಭಾಗವನ್ನು ಬಹಳ ನಿಕಟವಾಗಿ ಗಮನಿಸಲು ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ: Pulwama Terror Attack: ಪುಲ್ವಾಮಾ ದಾಳಿ ಕರಾಳ ಘಟನೆಗೆ 4 ವರ್ಷ; ಎಂದೂ ಮರೆಯದ ಭಯಾನಕ ಘಟನೆಯ ಕುರಿತ 10 ಸಂಗತಿಗಳು

ಸಮುದ್ರ ಬೆಟ್ ಜಾಗವು ಒಂದು ದ್ವೀಪ ಪ್ರದೇಶದಲ್ಲಿದೆ. ಇದು ತನಗೆ ಸೇರಿದ ಜಾಗ ಎಂಬುದು ಪಾಕಿಸ್ತಾನದ ವಾದ. ಆದರೆ, ಈ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಭಾರತಕ್ಕೆ ಬಹಳ ಅಗತ್ಯ ಇದೆ. ಕಳೆದ ವರ್ಷ ಭಾರತದ ಭಾಗದೊಳಗೆ 22 ಪಾಕಿಸ್ತಾನೀ ಮೀನುಗಾರರು, 79 ಮೀನುಗಾರಿಕೆ ದೋಣಿಗಳು ನುಸುಳಿದ್ದವು. 250 ಕೋಟಿ ರೂ ಮೌಲ್ಯದ ಹೆರಾಯಿನ್ ಮಾದಕವಸ್ತುಗಳನ್ನು ಬಿಎಸ್​ಎಫ್ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಮೀನುಗಾರಿಕೆಯ ಸೋಗಿನಲ್ಲಿ ಉಗ್ರರು ನುಸುಳಿ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವರ ಮೇಲೆ ಸರಿಯಾದ ಕಣ್ಣಿಡಲು ಆ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಅವಶ್ಯಕ ಎನ್ನುತ್ತಾರೆ ಗಡಿ ಭದ್ರತಾ ಅಧಿಕಾರಿಗಳು.

Published On - 7:52 am, Tue, 14 February 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ