AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು

Pakistan Objects To India's Border Outpost: ಗುಜರಾತ್​ನ ಪಾಕ್ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಭಾರತ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಸಮುದ್ರ ಬೆಟ್ ಜಾಗದಲ್ಲಿನ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ಆಕ್ಷೇಪ ಸಲ್ಲಿಸಿದೆ. ಈ ಜಾಗ ತನಗೆ ಸೇರಿದ್ದೆಂಬುದು ಅದರ ವಾದ.

India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 14, 2023 | 7:52 AM

Share

ನವದೆಹಲಿ: ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಜರಾತ್​ನ ಸರ್ ಕ್ರೀಕ್ (Sir Creek) ಎಂಬಲ್ಲಿ ಭಾರತ ಬಾರ್ಡರ್ ಔಟ್​ಪೋಸ್ಟ್​ಗಳನ್ನು (BOP- Border Outpost) ನಿರ್ಮಿಸಿದೆ. ಇದು ವಿವಾದಿತ ಜಾಗವಾಗಿದ್ದು, ಇಲ್ಲಿ ಔಟ್​ಪೋಸ್ಟ್ ನಿರ್ಮಿಸಬಾರದು ಎಂದು ಪಾಕಿಸ್ತಾನ ತಕರಾರು ತೆಗೆದಿದೆ. ಔಟ್​ಪೋಸ್ಟ್​​ಗಳನ್ನು ಭಾರತದ ಗಡಿಭಾಗದ ಒಳಗೆಯೇ ನಿರ್ಮಿಸಲಾಗಿದೆ ಎಂದು ಭಾರತ ಉತ್ತರ ನೀಡಿದೆ. ಇದು ಕಳೆದ ತಿಂಗಳು ನಡೆದಿರುವ ವಿದ್ಯಮಾನ.

ಜನವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಭೇಟಿ ನಡೆದಿತ್ತು. ಬಿಎಸ್​ಎಫ್ ಜೊತೆ ಪಾಕಿಸ್ತಾನದ ಗಡಿಭದ್ರತಾ ಅಧಿಕಾರಿಗಳು ಮಾತುಕತೆ ನಡೆಸಿ ಸಮುದ್ರ ಬೆಟ್ ಪ್ರದೇಶದಲ್ಲಿ ಭಾರತ ಗಡಿ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಬಿಎಸ್​ಎಫ್ ಅಧಿಕಾರಿಗಳ ಹೇಳಿಕೆಯನ್ನಾಧರಿಸಿ ಸಿಎನ್​ಎನ್ ನ್ಯೂಸ್18 ವರದಿ ಮಾಡಿದೆ.

ಈಗ ಗಡಿ ಔಟ್​ಪೋಸ್ಟ್ ನಿರ್ಮಾಣವಾಗುತ್ತಿರುವ ಜಾಗದ ಬಳಿ ಇರುವ ಜಲಮಾರ್ಗದಲ್ಲಿ ಭಾರತ ಮೊದಲಿಂದಲೂ ಪಹರೆ ನಡೆಸುತ್ತಾ ಬಂದಿದೆ. ಈಗ ಪಾಕಿಸ್ತಾನ ಈ ಜಾಗ ಭಾರತಕ್ಕೆ ಸೇರಿದ್ದಲ್ಲ ಎಂದು ಹೇಳುತ್ತಿದೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆ.

ಇದನ್ನೂ ಓದಿ: New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್

ಸರ್ ಕ್ರೀಕ್ ಜಾಗದಲ್ಲಿ ಎಂಟು ಅಂತಸ್ತಿನ ಬಂಕರುಗಳು ಮತ್ತು ವೀಕ್ಷಣಾ ಗೋಪುರವನ್ನು ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯ 50 ಕೋಟಿ ರೂ ನೀಡಿದೆ. ಈ ಜಾಗದಲ್ಲಿ ಪಾಕಿಸ್ತಾನೀ ಮೀನುಗಾರಿಕಾ ದೋಣಿಗಳು ಭಾರತದ ಭಾಗದೊಳಗೆ ಆಗಾಗ್ಗೆ ನುಸುಳಿ ಬರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಟ್ ಪೋಸ್ಟ್ ಅನ್ನು ನಿರ್ಮಿಸಲು ಭಾರತ ಹೊರಟಿರುವುದು ತಿಳಿದುಬಂದಿದೆ.

ಗುಜರಾತ್​ನ ಪಾಕಿಸ್ತಾನದ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಲಾಖಪತ್ ವಾರಿ ಬೆಟ್, ಡಫಾ ಬೆಟ್ ಮತ್ತು ಸಮುದ್ರ ಬೆಟ್, ಇವು ಪಾಕಿಸ್ತಾನದ ಗಡಿಭಾಗವನ್ನು ಬಹಳ ನಿಕಟವಾಗಿ ಗಮನಿಸಲು ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ: Pulwama Terror Attack: ಪುಲ್ವಾಮಾ ದಾಳಿ ಕರಾಳ ಘಟನೆಗೆ 4 ವರ್ಷ; ಎಂದೂ ಮರೆಯದ ಭಯಾನಕ ಘಟನೆಯ ಕುರಿತ 10 ಸಂಗತಿಗಳು

ಸಮುದ್ರ ಬೆಟ್ ಜಾಗವು ಒಂದು ದ್ವೀಪ ಪ್ರದೇಶದಲ್ಲಿದೆ. ಇದು ತನಗೆ ಸೇರಿದ ಜಾಗ ಎಂಬುದು ಪಾಕಿಸ್ತಾನದ ವಾದ. ಆದರೆ, ಈ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಭಾರತಕ್ಕೆ ಬಹಳ ಅಗತ್ಯ ಇದೆ. ಕಳೆದ ವರ್ಷ ಭಾರತದ ಭಾಗದೊಳಗೆ 22 ಪಾಕಿಸ್ತಾನೀ ಮೀನುಗಾರರು, 79 ಮೀನುಗಾರಿಕೆ ದೋಣಿಗಳು ನುಸುಳಿದ್ದವು. 250 ಕೋಟಿ ರೂ ಮೌಲ್ಯದ ಹೆರಾಯಿನ್ ಮಾದಕವಸ್ತುಗಳನ್ನು ಬಿಎಸ್​ಎಫ್ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಮೀನುಗಾರಿಕೆಯ ಸೋಗಿನಲ್ಲಿ ಉಗ್ರರು ನುಸುಳಿ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವರ ಮೇಲೆ ಸರಿಯಾದ ಕಣ್ಣಿಡಲು ಆ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಅವಶ್ಯಕ ಎನ್ನುತ್ತಾರೆ ಗಡಿ ಭದ್ರತಾ ಅಧಿಕಾರಿಗಳು.

Published On - 7:52 am, Tue, 14 February 23

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?