ಏರ್​ ಇಂಡಿಯಾ ಬಗ್ಗೆ ಸರ್ಕಾರ ತೆಗೆದುಕೊಂಡ ನಿರ್ಧಾರ ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ: ನರೇಂದ್ರ ಮೋದಿ

ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ಹಸ್ತಾಂತರ ಪ್ರಕ್ರಿಯೆಯು ದೇಶದ ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು

ಏರ್​ ಇಂಡಿಯಾ ಬಗ್ಗೆ ಸರ್ಕಾರ ತೆಗೆದುಕೊಂಡ ನಿರ್ಧಾರ ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Edited By:

Updated on: Oct 20, 2021 | 4:40 PM

ಕುಶಿನಗರ: ಏರ್ ಇಂಡಿಯಾ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಟಾಟಾ ಗ್ರೂಪ್​ ಸಿದ್ಧವಾಗುತ್ತಿದೆ. ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ಹಸ್ತಾಂತರ ಪ್ರಕ್ರಿಯೆಯು ದೇಶದ ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಏರ್​ ಇಂಡಿಯಾದ ಯಶಸ್ವಿ ಬಿಡ್ಡರ್ ಆಗಿ ಟಾಟಾ ಗ್ರೂಪ್ ಹೊರಹೊಮ್ಮಿದ ನಂತರ ಪ್ರಧಾನಿ ವೈಮಾನಿಕ ಕ್ಷೇತ್ರದ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿದ್ದಾರೆ. ನಷ್ಟದಲ್ಲಿದ್ದ ಏರ್ ಇಂಡಿಯಾ ವಿಲೇವಾರಿ ಮಾಡುವ ಮೂಲಕ ಬಂಡವಾಳ ಹಿಂಪಡೆಯುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿತ್ತು.

ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಮಾತನಾಡಿದ ಮೋದಿ, ಏರ್​ ಇಂಡಿಯಾ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವು ದೇಶದ ವೈಮಾನಿಕ ರಂಗವನ್ನು ವೃತ್ತಿಪರವಾಗಿ ನಡೆಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಏರ್​ ಇಂಡಿಯಾ ಖರೀದಿಗೆ ಟಾಟಾ ಗ್ರೂಪ್​ ಮಾಡಿದ್ದ ಬಿಡ್ ಅನ್ನು ಸರ್ಕಾರ ಒಪ್ಪಿಕೊಂಡಿತ್ತು. ಕಳೆದ ಅಕ್ಟೋಬರ್ 11ರಂದು ಟಾಟಾ ಗ್ರೂಪ್​ಗೆ ಹಸ್ತಾಂತರ ಪ್ರಸ್ತಾವನ್ನು ಸರ್ಕಾರ ಪತ್ರ ನೀಡಿತ್ತು. ಏರ್ ಇಂಡಿಯಾ ಖರೀದಿಗೆ ಟಾಟಾ ಗ್ರೂಪ್​ ₹ 2,700 ನಗದು ಪಾವತಿಸಲಿದೆ. ಇದರ ಜೊತೆಗೆ ಏರ್​ಇಂಡಿಯಾದ ಸಾಲದಲ್ಲಿ ₹ 15,300 ಕೋಟಿ ಮೊತ್ತದ ಜವಾಬ್ದಾರಿ ವಹಿಸಿಕೊಳ್ಳಲಿದೆ.

ಏರ್​ ಇಂಡಿಯಾ ಜೊತೆಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಕಂಪೆನಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮತ್ತು ವಿಮಾನ ನಿಲ್ದಾಣಗಳಲ್ಲಿರುವ ಏರ್​ ಇಂಡಿಯಾದ ಆಸ್ತಿ ನಿರ್ವಹಿಸುವ ‘ಅಸಿಟ್ಸ್​’ ಉದ್ಯಮದಲ್ಲಿ ಅರ್ಧದಷ್ಟು ಪಾಲನ್ನು ಟಾಟಾ ಕಂಪೆನಿ ತನ್ನ ಸುಪರ್ದಿಗೆ ಪಡೆದುಕೊಳ್ಳಲಿದೆ.

ಇದನ್ನೂ ಓದಿ: Air India: ಏರ್​ ಇಂಡಿಯಾದ ಬಾಕಿ ಬಿಲ್​ ಮೊತ್ತ 16 ಸಾವಿರ ಕೋಟಿ ರೂಪಾಯಿ AIAHLಗೆ ವರ್ಗಾಯಿಸಬೇಕಿದೆ ಸರ್ಕಾರ
ಇದನ್ನೂ ಓದಿ: Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ

Loading...
Unable to load recommendations.
Follow Us