ನವಸಾರಿಯಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ; ಫೋಟೊ ವೈರಲ್
8 ವರ್ಷಗಳ ಹಿಂದೆ ಗುಜರಾತ್ನ ಜನರು ತಮ್ಮನ್ನು ದೆಹಲಿಗೆ ಕಳುಹಿಸಿದ್ದನ್ನು ಮೋದಿ ನೆನಪಿಸಿಕೊಂಡರು. ಕಳೆದ 8 ವರ್ಷಗಳಲ್ಲಿ, ಅಭಿವೃದ್ಧಿ ಪ್ರಕ್ರಿಯೆ ಮತ್ತು ಆಕಾಂಕ್ಷೆಗಳೊಂದಿಗೆ ಜನರು ಮತ್ತು ಪ್ರದೇಶಗಳ ಅನೇಕ ಹೊಸ ವಿಭಾಗಗಳನ್ನು ಜೋಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ನವಸಾರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಗುಜರಾತ್ನ ನವಸಾರಿ (Navsari) ಜಿಲ್ಲೆಯಲ್ಲಿ ವಡೋದರಾದ (Vadodara) ತಮ್ಮ ಮಾಜಿ ಶಾಲಾ ಶಿಕ್ಷಕರನ್ನು ಭೇಟಿಯಾದರು. ನವಸಾರಿಯಲ್ಲಿ ಮೋದಿ ಸುಮಾರು 3,050 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ತಮ್ಮ ಮಾಜಿ ಶಾಲಾ ಶಿಕ್ಷಕರೊಂದಿಗೆ ಪ್ರಧಾನಿ ಮೋದಿಯವರ ಭಾವನಾತ್ಮಕ ಪುನರ್ಮಿಲನದ ಚಿತ್ರವು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಧಾನಿಯವರು ತಮ್ಮ ಮಾಜಿ ಶಿಕ್ಷಕರನ್ನು ಕೈಮುಗಿದು ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಮೋದಿಯವರು 7 ಯೋಜನೆಗಳ ಉದ್ಘಾಟನೆ, 12 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ 14 ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ನವಸಾರಿಯಲ್ಲಿ ‘ಗುಜರಾತ್ ಗೌರವ್ ಅಭಿಯಾನ’ದ ಸಮಯದಲ್ಲಿ ಪ್ರಾರಂಭಿಸಲಾದ ಈ ಯೋಜನೆಗಳು ಈ ಪ್ರದೇಶದಲ್ಲಿ ನೀರಿನ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಸಂಪರ್ಕ ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪಿಐಬಿ ಅಧಿಕೃತ ಪ್ರಕಟಣೆ ತಿಳಿಸಿದೆ. ‘ಗುಜರಾತ್ ಗೌರವ ಅಭಿಯಾನ’ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಡಬಲ್ ಇಂಜಿನ್ ಸರ್ಕಾರವು ಈ ವೈಭವಯುತ ಸಂಪ್ರದಾಯವನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದೆ. ಈ ಅಭಿವೃದ್ಧಿ ಯೋಜನೆಗಳು ದಕ್ಷಿಣ ಗುಜರಾತ್ನ ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಹೇಳಿದ್ದಾರೆ.
8 ವರ್ಷಗಳ ಹಿಂದೆ ಗುಜರಾತ್ನ ಜನರು ತಮ್ಮನ್ನು ದೆಹಲಿಗೆ ಕಳುಹಿಸಿದ್ದನ್ನು ಮೋದಿ ನೆನಪಿಸಿಕೊಂಡರು. ಕಳೆದ 8 ವರ್ಷಗಳಲ್ಲಿ, ಅಭಿವೃದ್ಧಿ ಪ್ರಕ್ರಿಯೆ ಮತ್ತು ಆಕಾಂಕ್ಷೆಗಳೊಂದಿಗೆ ಜನರು ಮತ್ತು ಪ್ರದೇಶಗಳ ಅನೇಕ ಹೊಸ ವಿಭಾಗಗಳನ್ನು ಜೋಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಬಡವರು, ವಂಚಿತರು, ದಲಿತರು, ಬುಡಕಟ್ಟುಗಳು, ಮಹಿಳೆಯರು ಮತ್ತು ಇತರ ದುರ್ಬಲ ವರ್ಗಗಳು ತಮ್ಮ ಸಂಪೂರ್ಣ ಜೀವನವನ್ನು ಕೇವಲ ಮೂಲಭೂತ ಅಗತ್ಯಗಳಿಗಾಗಿ ಕಳೆಯುತ್ತಿದ್ದ ಕಾಲವಿತ್ತು. ಹಿಂದಿನ ಸರ್ಕಾರಗಳು ಅಭಿವೃದ್ಧಿಯನ್ನು ತಮ್ಮ ಆದ್ಯತೆಯನ್ನಾಗಿ ಮಾಡಲಿಲ್ಲ, ಹೆಚ್ಚಿನ ಅಗತ್ಯವಿರುವ ವಿಭಾಗಗಳು ಮತ್ತು ಪ್ರದೇಶಗಳು ಸೌಲಭ್ಯಗಳಿಂದ ವಂಚಿತವಾಗಿವೆ.
Speaking at a public function in Navsari. https://t.co/U3PJkVWlpZ
— Narendra Modi (@narendramodi) June 10, 2022
ತಾಪಿ, ನವಸಾರಿ ಮತ್ತು ಸೂರತ್ ಜಿಲ್ಲೆಗಳ ನಿವಾಸಿಗಳಿಗೆ 961 ಕೋಟಿ ರೂ.ಗಳ 13 ನೀರು ಸರಬರಾಜು ಯೋಜನೆಗಳಿಗೆ ಪ್ರಧಾನಿ ಭೂಮಿಪೂಜೆ ನೆರವೇರಿಸಿದರು. ನವಸಾರಿ ಜಿಲ್ಲೆಯ ಸುಮಾರು 542 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯಕೀಯ ಕಾಲೇಜಿನ ಭೂಮಿಪೂಜೆಯನ್ನೂ ಪ್ರಧಾನಿ ನೆರವೇರಿಸಿದ್ದಾರೆ. ಸುಮಾರು 586 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಧುಬನ್ ಅಣೆಕಟ್ಟು ಆಧಾರಿತ ಅಸ್ಟೋಲ್ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಮೋದಿ ಉದ್ಘಾಟಿಸಿದ್ದ, 163 ಕೋಟಿ ರೂ.ಗಳ ‘ನಲ್ ಸೇ ಜಲ್’ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಗಳು ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ನಿವಾಸಿಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುತ್ತವೆ.
ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 549 ಕೋಟಿ ರೂಪಾಯಿ ಮೌಲ್ಯದ 8 ನೀರು ಸರಬರಾಜು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:20 pm, Fri, 10 June 22