AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಗ್ ಪಾಲಿಟಿಕ್ಸ್; ಪ್ರಿಯಾಂಕಾ ಗಾಂಧಿಗೆ 1984 ಎಂದು ಬರೆದ ಬ್ಯಾಗ್ ನೀಡಿದ ಬಿಜೆಪಿ ಸಂಸದೆ

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದ ಬ್ಯಾಗ್‌ನಲ್ಲಿ 1984 ಎಂದು ಬರೆಯಲಾಗಿತ್ತು. ಈ ಬ್ಯಾಗ್​ನ ವಿನ್ಯಾಸವು 1984ರ ಸಿಖ್ ವಿರೋಧಿ ದಂಗೆಗಳನ್ನು ಪ್ರತಿನಿಧಿಸಲು ರಕ್ತದ ಚಿಮ್ಮುವಿಕೆಯನ್ನು ತೋರಿಸುತ್ತದೆ. ಹೇಗೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಮೂಲಕ ಸಂದೇಶ ನೀಡುತ್ತಿದ್ದಾರೋ, ಅದೇ ರೀತಿ ಕಾಂಗ್ರೆಸ್‌ಗೆ ತನ್ನ ಇತಿಹಾಸವನ್ನು ನೆನಪಿಸುವಂತೆ ನಾನು ಈ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಬ್ಯಾಗ್ ಪಾಲಿಟಿಕ್ಸ್; ಪ್ರಿಯಾಂಕಾ ಗಾಂಧಿಗೆ 1984 ಎಂದು ಬರೆದ ಬ್ಯಾಗ್ ನೀಡಿದ ಬಿಜೆಪಿ ಸಂಸದೆ
Priyanka Gandhi (4)
ಸುಷ್ಮಾ ಚಕ್ರೆ
|

Updated on: Dec 20, 2024 | 3:54 PM

Share

ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಪಾಲಿಟಿಕ್ಸ್ ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನ ಇತಿಹಾಸದಲ್ಲಿ ದಾಖಲಾಗುವಂಥದ್ದು. ಏಕೆಂದರೆ, ಈ ಅಧಿವೇಶನದಲ್ಲಿ ಜಟಾಪಟಿಯಿಂದ ಹಿಡಿದು ಬ್ಯಾಗ್ ರಾಜಕೀಯದವರೆಗಿನ ಹಕವು ರೀತಿಯ ಘಟನೆಗಳು ಕಂಡು ಬಂದಿವೆ. ಹೊಸ ಬ್ಯಾಗ್‌ಗಳೊಂದಿಗೆ ಸಂಸತ್ತಿಗೆ ಬಂದ ನಂತರ ಪ್ರಿಯಾಂಕಾ ಗಾಂಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಪ್ಯಾಲೆಸ್ತೀನ್ ಮತ್ತು ಕೆಲವೊಮ್ಮೆ ಬಾಂಗ್ಲಾದೇಶ ಎಂದು ಬರೆದಿರುವ ಬ್ಯಾಗ್​ಗಳನ್ನು ಹಿಡಿದುಕೊಂಡು ಪ್ರಿಯಾಂಕಾ ಸಂಸತ್​ಗೆ ಬಂದಿದ್ದರು. ಈ ಸಂದರ್ಭದಲ್ಲಿ, ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ‘1984’ ಎಂದು ಬರೆದ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿಗೆ ನೀಡಿ ಬಿಜೆಪಿ ಪರವಾಗಿ ಬ್ಯಾಗ್ ರಾಜಕೀಯಕ್ಕೆ ಪ್ರವೇಶಿಸಿದರು. ಪ್ರಿಯಾಂಕಾ ಬ್ಯಾಗ್ ಮೂಲಕ ಬರುತ್ತಿರುವ ಸಂದೇಶಗಳಿಗೆ ಸ್ಪಂದಿಸಿ ಈ ಬ್ಯಾಗ್ ಅನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾಗಿ ಅಪರಾಜಿತಾ ಹೇಳಿದ್ದಾರೆ.

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಸಿಖ್ ಹತ್ಯಾಕಾಂಡವನ್ನು ನೆನಪಿಸಲು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರಿಗೆ ‘ಉಡುಗೊರೆ’ ಎಂದು 1984 ಎಂದು ಬರೆದಿರುವ ಟೋಟ್ ಬ್ಯಾಗ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದ ಬ್ಯಾಗ್‌ನಲ್ಲಿ ‘1984’ ಎಂದು ಬರೆಯಲಾಗಿತ್ತು.

ಚೀಲದ ವಿನ್ಯಾಸವು 1984ರ ಸಿಖ್ ವಿರೋಧಿ ದಂಗೆಗಳನ್ನು ಪ್ರತಿನಿಧಿಸಿತ್ತು. ಕಾಂಗ್ರೆಸ್‌ನ ತಪ್ಪುಗಳು ಮತ್ತು ಆ ಅವಧಿಯ ದುರಂತವನ್ನು ನೆನಪಿಸುವ ಸಂಕೇತವಾಗಿದೆ ಎಂದು ಅಪರಾಜಿತಾ ಬಣ್ಣಿಸಿದ್ದಾರೆ. ಹೇಗೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಮೂಲಕ ಸಂದೇಶ ನೀಡುತ್ತಿದ್ದಾರೋ ಅದೇ ರೀತಿ ಕಾಂಗ್ರೆಸ್ ಇತಿಹಾಸವನ್ನು ನೆನಪಿಸುವಂತೆ ಈ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಬಾಂಗ್ಲಾದಲ್ಲಿರುವ ಹಿಂದೂಗಳಿಗಾಗಿ ಏನಾದರೂ ಮಾಡಿ’; ಪ್ಯಾಲೆಸ್ತೀನ್ ಬ್ಯಾಗ್ ವಿವಾದದ ನಂತರ ಪ್ರಿಯಾಂಕಾ ಗಾಂಧಿ ಮೊದಲ ಪ್ರತಿಕ್ರಿಯೆ

ಬ್ಯಾಗ್‌ನಲ್ಲಿ ‘1984’ ಎಂಬ ಪದವನ್ನು ರಕ್ತದಲ್ಲಿ ಚಿತ್ರಿಸಲಾಗಿದೆ, ಇದು ಆ ವರ್ಷದ ಸಿಖ್ ವಿರೋಧಿ ಗಲಭೆಗಳನ್ನು ನೆನಪಿಸುತ್ತದೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಗಲಭೆ ಪ್ರಾರಂಭವಾಯಿತು. ಆ ಘಟನೆಯಲ್ಲಿ ಸಾವಿರಾರು ಸಿಖ್ಖರು ಪ್ರಾಣ ಕಳೆದುಕೊಂಡರು. ಇದು ಕಾಂಗ್ರೆಸ್ ಅಸಮಾಧಾನದ ಪ್ರತೀಕ ಎಂದು ಅಪರಾಜಿತಾ ಬಣ್ಣಿಸಿದ್ದು, ಕಾಂಗ್ರೆಸ್ ನ ಗತವೈಭವವನ್ನು ಜನರಿಗೆ ತಲುಪಿಸಲು ಈ ಬ್ಯಾಗ್ ನೀಡಲಾಗಿದೆ ಎಂದರು. ವಿಶೇಷವೆಂದರೆ ಈ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿ ಏನೂ ಹೇಳದೆ ಸ್ವೀಕರಿಸಿದರು. ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ