AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೈಲಟ್ ಆಗಬೇಕೆಂಬ ಕನಸು ಹೊತ್ತ ಕೇರಳದ ಬಾಲಕನನ್ನು ಕಾಕ್​ಪಿಟ್​ಗೆ ಕರೆದೊಯ್ದು ವಿಮಾನ ಚಾಲನೆ ಬಗ್ಗೆ ವಿವರಿಸಿದ ರಾಹುಲ್ ಗಾಂಧಿ; ವಿಡಿಯೊ ವೈರಲ್

Rahul Gandhi Viral Video: ವಿಡಿಯೊವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ , ಅದ್ವೈತ್​ನ ಕನಸು ನನಸಾಗಿಸಲಿರುವ ಮೊದಲ ಹೆಜ್ಜೆಯನ್ನು ನಾವಿಟ್ಟಿದ್ದೇವೆ. ಆತನಿಗೆ ಹಾರಾಡಲು ಅವಕಾಶ ಕಲ್ಪಿಸುವ ಸಮಾಜ ಮತ್ತು ಮೂಲಸೌಕರ್ಯವನ್ನು ಒದಗಿಸುವುದು ನಮ್ಮ ಕರ್ತವ್ಯ ಎಂದು ಬರೆದಿದ್ದಾರೆ.

ಪೈಲಟ್ ಆಗಬೇಕೆಂಬ ಕನಸು ಹೊತ್ತ ಕೇರಳದ ಬಾಲಕನನ್ನು ಕಾಕ್​ಪಿಟ್​ಗೆ ಕರೆದೊಯ್ದು ವಿಮಾನ ಚಾಲನೆ ಬಗ್ಗೆ ವಿವರಿಸಿದ ರಾಹುಲ್ ಗಾಂಧಿ; ವಿಡಿಯೊ ವೈರಲ್
ಕಾಕ್​ಪಿಟ್ ನಲ್ಲಿ ಕುಳಿತು ಬಾಲಕನಿಗೆ ವಿವರಿಸುತ್ತಿರುವ ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on:Apr 06, 2021 | 1:15 PM

Share

ಕಣ್ಣೂರ್: ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಹೋಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 9 ಹರೆಯದ ಬಾಲಕನಿಗೆ ಕಾಕ್​ಪಿಟ್ ನಲ್ಲಿ ಕುಳಿತು ವಿಮಾನ ಚಾಲನೆ ಬಗ್ಗೆ ಮಾಹಿತಿ ನೀಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೇರಳದ ಕಣ್ಣೂರ್ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಎರಡು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿನ ಕೀಳೂರ್​ಕುನ್ನು ಎಂಬಲ್ಲಿರುವ ಟೀ ಅಂಗಡಿಯೊಂದಲ್ಲಿ ಬಾಲಕನೊಬ್ಬನ ಪರಿಚಯವಾಗಿತ್ತು.

ಮಲಯಾಳ ಮನೋರಮಾ ವರದಿ ಪ್ರಕಾರ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬಲ್ಲ ಆ ಬಾಲಕ ರಾಹುಲ್ ಗಾಂಧಿ ಜತೆ ಮಾತನಾಡುತ್ತಾ, ತನ್ನ ಕನಸಿನ ಬಗ್ಗೆ ಹೇಳಿದ್ದನು. ನನಗೆ ಹಾರಾಡಬೇಕು, ಪೈಲಟ್ ಆಗಬೇಕು ಎಂಬುದು ನನ್ನ ಕನಸು ಎಂದು ಬಾಲಕ ರಾಹುಲ್ ಗಾಂಧಿಯವರಲ್ಲಿ ಹೇಳಿದ್ದಾನೆ.

ಮರುದಿನವೇ ರಾಹುಲ್ ಗಾಂಧಿ ಆ ಬಾಲಕ ಮತ್ತು ಆತನ ಅಪ್ಪನನ್ನು ತಮ್ಮ ಚಾರ್ಟರ್ ವಿಮಾನದ ಕಾಕ್​ಪಿಟ್ ಗೆ ಕರೆದೊಯ್ದು, ಬಾಲಕನಿಗೆ ವಿಮಾನ ಚಾಲನೆ ಬಗ್ಗೆ ಹೇಳಿಕೊಟ್ಟಿದ್ದಾರೆ.

View this post on Instagram

A post shared by Rahul Gandhi (@rahulgandhi)

ವಿಮಾನ ಯಾವ ರೀತಿ ಚಲಿಸುತ್ತದೆ ಎಂದು ಮಹಿಳಾ ಪೈಲಟ್ ಮತ್ತು ರಾಹುಲ್ ಗಾಂಧಿ ಹೇಳಿಕೊಡುತ್ತಿದ್ದರೆ ಬಾಲಕ ಅದನ್ನು ಶ್ರದ್ಧೆಯಿಂದ ಕೇಳುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ , ಅದ್ವೈತ್​ನ ಕನಸು ನನಸಾಗಿಸಲಿರುವ ಮೊದಲ ಹೆಜ್ಜೆಯನ್ನು ನಾವಿಟ್ಟಿದ್ದೇವೆ. ಆತನಿಗೆ ಹಾರಾಡಲು ಅವಕಾಶ ಕಲ್ಪಿಸುವ ಸಮಾಜ ಮತ್ತು ಮೂಲಸೌಕರ್ಯವನ್ನು ಒದಗಿಸುವುದು ನಮ್ಮ ಕರ್ತವ್ಯ ಎಂದು ಬರೆದಿದ್ದಾರೆ. ರಾಹುಲ್ ಅವರ ಈ ಕಾರ್ಯವನ್ನು ಹಲವಾರು ನೆಟ್ಟಿಗರು ಶ್ಲಾಘಿಸಿದ್ದಾರೆ.

View this post on Instagram

A post shared by Rahul Gandhi (@rahulgandhi)

ಭಾನುವಾರ ವಯನಾಡಿಗೆ ಭೇಟಿ ನೀಡಿದ್ದ ರಾಹುಲ್, ಕಲ್ಪೆಟ್ಟದಲ್ಲಿರುವ ಜೀವನ್ ಜ್ಯೋತಿ ಚಿಲ್ಡ್ರನ್ಸ್ ಹೋಮ್​ನ ಮಕ್ಕಳೊಂದಿಗೆ ಈಸ್ಟರ್ ಹಬ್ಬ ದೂಟ ಸವಿದಿದ್ದರು. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ಜೀವನ್ ಜ್ಯೋತಿ ಚಿಲ್ಡ್ರನ್ಸ್ ಹೋಮ್​ನ ಹೊಸ ಸ್ನೇಹಿತರೊಂದಿಗೆ ವಿಶೇಷ ಈಸ್ಟರ್ ಲಂಚ್ ಎಂದು ಒಕ್ಕಣೆ ಬರೆದು ವಿಡಿಯೊ ಪೋಸ್ಟ್ ಮಾಡಿದ್ದರು. ಪ್ರಿಯಾಂಕಾ ಗಾಂಧಿ ವಿಡಿಯೊ ಕರೆ ಮಾಡಿ ಅಲ್ಲಿನ ಮಕ್ಕಳಿಗೆ ಶುಭ ಹಾರೈಸಿದ್ದರು.

ಕಲ್ಪೆಟ್ಟದಲ್ಲಿರುವ ಹೆಲಿಪ್ಯಾಡ್  ಗೆ ತಲುಪಲು ರಾಹುಲ್ ಆಟೋದಲ್ಲಿ ಸಂಚರಿಸಿದ್ದರು. ರಾಹುಲ್ ಅವರ ಆಟೋ ಪ್ರಯಾಣದ ವಿಡಿಯೊ ಕೂಡಾ ವೈರಲ್ ಆಗಿತ್ತು. ಅಂದಹಾಗೆ ಕೇರಳದಲ್ಲಿ ರಾಹುಲ್ ಆಟೋದಲ್ಲಿ ಸಂಚರಿಸಿದ್ದು ಇದು ಮೊದಲೇನೂ ಅಲ್ಲ . ಚುನಾವಣಾ ಪ್ರಚಾರಕ್ಕಾಗಿ ನೇಮಂಗೆ ಬರುವಾಗಲೂ ಆಟೋದಲ್ಲೇ ಬಂದಿದ್ದ ರಾಹುಲ್ ಗಾಂಧಿ, ರೋಡ್ ಶೋ ನಡೆಸಿದ ಬಳಿಕ ಮಾತನಾಡಿ, ನಾನು ಬಂದ ಆಟೋ ಚಾಲಕನನ್ನು ಮಾತನಾಡಿಸಿದೆ. ಅವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಪಡುತ್ತಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದಿದ್ದರು.

ಇದನ್ನೂ ಓದಿ:  ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ

Rahul Gandhi: ಕೇರಳದಲ್ಲಿ ಆಟೋದಲ್ಲೇ ಪ್ರಯಾಣ ಮಾಡಿದ ರಾಹುಲ್ ಗಾಂಧಿ; ಚಾಲಕ ನನ್ನ ಬಳಿ ನೋವು ಹೇಳಿಕೊಂಡರು ಎಂದ ಕಾಂಗ್ರೆಸ್ ನಾಯಕ

( Rahul Gandhi explaining complex mechanism of a flight cockpit to Kerala boy video goes viral)

Published On - 1:10 pm, Tue, 6 April 21

Follow Us
15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ
15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ
ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: 'ಕೈ' ನಾಯಕನ ಆರೋಪ
ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: 'ಕೈ' ನಾಯಕನ ಆರೋಪ
OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ
OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ
ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ
ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ