Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು

ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲು ನಿಲ್ದಾಣದ ಬಳಿ ಸೂಪರ್‌ಫಾಸ್ಟ್ ರೈಲಿನ ನಾಲ್ಕು ಬೋಗಿಗಳು ಮತ್ತು ಎಂಜಿನ್ ಹಳಿತಪ್ಪಿದ ನಂತರ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಡರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು
ರೈಲುImage Credit source: India TV
Follow us
ನಯನಾ ರಾಜೀವ್
|

Updated on: Mar 18, 2024 | 7:46 AM

ರಾಜಸ್ಥಾನದ ಅಜ್ಮೀರ್ ಬಳಿ ತಡರಾತ್ರಿ ರೈಲು ಹಳಿತಪ್ಪಿದ ಪರಿಣಾಮ ಹಲವು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತದ ನಂತರ, ಭಾರತೀಯ ರೈಲ್ವೇ ಹಲವು ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕೆಲವು ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಈ ಭಾಗದಲ್ಲಿ ಹಾದುಹೋಗುವ ರೈಲುಗಳ ವೇಳಾಪಟ್ಟಿಯನ್ನು ನೋಡಿದ ನಂತರವೇ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರೆಸಬೇಕು.

ಭಾನುವಾರ ರಾತ್ರಿ 1.04 ಕ್ಕೆ, ರೈಲು ಸಂಖ್ಯೆ 12548, ಸಬರಮತಿ-ಆಗ್ರಾ ಕ್ಯಾಂಟ್ ಅಜ್ಮೀರ್ ಬಳಿಯ ಮದರ್‌ನಲ್ಲಿ ಹೋಮ್ ಸಿಗ್ನಲ್ ಬಳಿ ಹಳಿತಪ್ಪಿತು, ಇದರಿಂದಾಗಿ ಎಂಜಿನ್ ಮತ್ತು ನಾಲ್ಕು ಜನರಲ್ ಬೋಗಿಗಳು ಹಳಿತಪ್ಪಿದವು. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೈಲ್ವೇ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತಲುಪಿದ್ದು, ಅಪಘಾತ ಪರಿಹಾರ ರೈಲು ಮದರ್ ತಲುಪಿದ್ದು, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ.

ಈ ರೈಲಿನ ಹಿಂಭಾಗವನ್ನು ಅಜ್ಮೀರ್‌ಗೆ ಕೊಂಡೊಯ್ಯಲಾಗುತ್ತಿದೆ. ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಅಜ್ಮೀರ್ ನಿಲ್ದಾಣದಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ಸಹಾಯವಾಣಿ ಸಂಖ್ಯೆ 0145-2429642 ಅನ್ನು ನೀಡಿದೆ. ಈ ಸಂಖ್ಯೆಗೆ ಸಂಪರ್ಕಿಸುವ ಮೂಲಕ ರೈಲು ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.

ಮತ್ತಷ್ಟು ಓದಿ: ವಿಜಯನಗರ: ಹಳಿ ತಪ್ಪಿದ ಗೂಡ್ಸ್ ರೈಲು, ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು; ಇಲ್ಲಿದೆ ಮಾಹಿತಿ

ಈ ರೈಲುಗಳನ್ನು ರದ್ದುಗೊಳಿಸಲಾಗಿದೆ

-ರೈಲು ಸಂಖ್ಯೆ 12065, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ಮಾರ್ಚ್ 18 ರಂದು ರದ್ದುಗೊಂಡಿದೆ. – ರೈಲು ಸಂಖ್ಯೆ 22987, ಅಜ್ಮೀರ್-ಆಗ್ರಾ ಫೋರ್ಟ್ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 09605, ಅಜ್ಮೀರ್-ಗಂಗಾಪುರ ಸಿಟಿ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 09639, ಅಜ್ಮೀರ್-ರೇವಾರಿ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 19735, ಜೈಪುರ-ಮಾರ್ವಾರ್ ಮಾರ್ಚ್ 18 ರಂದು ರದ್ದುಗೊಂಡಿದೆ. – ರೈಲು ಸಂಖ್ಯೆ 19736, ಮಾರ್ವಾರ್-ಜೈಪುರ್ ಮಾರ್ಚ್ 18 ರಂದು ರದ್ದುಗೊಂಡಿದೆ.

ಈ ರೈಲುಗಳ ಮಾರ್ಗವನ್ನು ಬದಲಿಸಲಾಗುವುದು -ರೈಲು ಸಂಖ್ಯೆ 12915, ಸಬರಮತಿ-ದೆಹಲಿ ರೈಲು ಸೇವೆಯನ್ನು ದೊರೈ-ಮದರ್ (ಅಜ್ಮೀರ್ ಹೊರತುಪಡಿಸಿ) ಮೂಲಕ ತಿರುಗಿಸಲಾಗಿದೆ – ರೈಲು ಸಂಖ್ಯೆ. 17020, ಹೈದರಾಬಾದ್-ಹಿಸಾರ್ ರೈಲು ಸೇವೆಯನ್ನು ಆದರ್ಶ್ ನಗರ-ಮಾದರ್ ಮೂಲಕ ತಿರುಗಿಸಲಾಗಿದೆ (ಅಜ್ಮೀರ್ ಹೊರತುಪಡಿಸಿ)

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು