AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಊಸರವಳ್ಳಿಯಂತೆ ಬಣ್ಣ ಬದಲಿಸುವ ಸೀರೆ

ಚೇತನ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ನಲ್ಲ ವಿಜಯ್ ಎಂಬುವವರು ನೂತನ ವಿನ್ಯಾಸದ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯು ಊಸರವಳ್ಳಿಯಂತೆ ಬದಲಾಯಿಸುತ್ತೆ ಎಂಬುದೇ ವಿಶೇಷ. ಇದು ಮೂರು ಬಣ್ಣಗಳನ್ನು ಬದಲಾಯಿಸಲಿದೆ. ವಿಜಯ್ ಅವರ ತಂದೆ ರಾಜಣ್ಣ ಸಿರಸಿಲ್ಲ ಇಬ್ಬರೂ ಸೇರಿ ಈ ಅದ್ಭುತ ಸೀರೆಯನ್ನು ನೇಯ್ದಿದ್ದಾರೆ.

ಇದು ಊಸರವಳ್ಳಿಯಂತೆ ಬಣ್ಣ ಬದಲಿಸುವ ಸೀರೆ
ಸೀರೆ
ನಯನಾ ರಾಜೀವ್
|

Updated on: Sep 26, 2023 | 1:10 PM

Share

ಚೇತನ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ನಲ್ಲ ವಿಜಯ್ ಎಂಬುವವರು ನೂತನ ವಿನ್ಯಾಸದ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯು ಊಸರವಳ್ಳಿಯಂತೆ ಬದಲಾಯಿಸುತ್ತೆ ಎಂಬುದೇ ವಿಶೇಷ. ಇದು ಮೂರು ಬಣ್ಣಗಳನ್ನು ಬದಲಾಯಿಸಲಿದೆ. ವಿಜಯ್ ಅವರ ತಂದೆ ರಾಜಣ್ಣ ಸಿರಸಿಲ್ಲ ಇಬ್ಬರೂ ಸೇರಿ ಈ ಅದ್ಭುತ ಸೀರೆಯನ್ನು ನೇಯ್ದಿದ್ದಾರೆ.

ಇಷ್ಟು ದಿನ ನೀವು ಸಾವಿರಾರು ತರಹದ ಸೀರೆಗಳನ್ನು ನೋಡಿರುತ್ತೀರಿ ಒಂದು ಸೀರೆಯಲ್ಲಿ ಹತ್ತಾರು ಬಣ್ಣಗಳಿರಬಹುದು, ಒಂದು ಕಡೆಯಿಂದ ಒಂದು ಬಣ್ಣ ಮತ್ತೊಂದು ಕಡೆಯಿಂದ ಮತ್ತೊಂದು ಶೇಡ್​ ಇರುವ ಸೀರೆಯನ್ನು ಕೂಡ ನೋಡಿರಬಹುದು ಆದರೆ. ಮೂರು ಬಣ್ಣವನ್ನು ಬದಲಿಸುವ ಊಸರವಳ್ಳಿಯಂಥಾ ಸೀರೆಯನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ.

ಈ ಸೀರೆಯನ್ನು ನೇಯಲು ವಿಜಯ್ 2.80 ಲಕ್ಷ ರೂ. ಖರ್ಚು ಮಾಡಿದ್ದಾರೆ. ವಿಜಯ್ ಅವರ ಕೈಚಳಕದಿಂದ ಪ್ರಭಾವಿತರಾದ ಹೈದರಾಬಾದ್ ನ ಉದ್ಯಮಿ ವಿಷ್ಣು ಪ್ರಸಾದ್ ಸೀರೆಗೆ ಆರ್ಡರ್ ಮಾಡಿದ್ದಾರೆ.

ಸಚಿವ ಕೆಟಿ ರಾಮರಾವ್ ಅವರು ಸೋಮವಾರ ಹೈದರಾಬಾದ್‌ನಲ್ಲಿ ಸೀರೆಯನ್ನು ಅನಾವರಣಗೊಳಿಸಿದರು. ಸೀರೆಯು 6.30 ಮೀಟರ್ ಉದ್ದ, 48 ಇಂಚು ಅಗಲ ಮತ್ತು 600 ಗ್ರಾಂ ತೂಕವನ್ನು ಹೊಂದಿದೆ. ಈ ಸೀರೆ ತಯಾರಿಕೆಯಲ್ಲಿ ವಿಜಯ್ 30 ಗ್ರಾಂ ಚಿನ್ನ ಮತ್ತು 500 ಗ್ರಾಂ ಬೆಳ್ಳಿಯನ್ನು ಮಿಶ್ರಣ ಮಾಡಿದ್ದಾರೆ.

25 ಲಕ್ಷ ರೂಪಾಯಿ ವೆಚ್ಚದ ಇನ್ನೊಂದು ಸೀರೆಯನ್ನೂ ಅವರು ನೇಯುತ್ತಿದ್ದಾರೆ. ಕೆಟಿಆರ್ ಅವರಿಂದ ಶೀಘ್ರದಲ್ಲೇ ಸಿರಸಿಲ್ಲಾದಲ್ಲಿ ಅನಾವರಣಗೊಳ್ಳಲಿದೆ.

ಮತ್ತಷ್ಟು ಓದಿ: Viral Video: ಸೀರೆಯುಟ್ಟು ಹೈಹೀಲ್ಸ್ ಧರಿಸಿ ನೃತ್ಯ ಮಾಡಿದ ಮಹಿಳೆಯ ವಿಡಿಯೋ ವೈರಲ್

ಈ ಹಿಂದೆ ವಿಜಯ್ ಅವರು ಸುಗಂಧ ಸೂಸುವ ಸೀರೆಯನ್ನು ತಯಾರಿಸಿದ್ದರು. ಅದನ್ನು ತಯಾರಿಸಲು ಅವರು ಗಿಡಮೂಲಿಕೆಗಳನ್ನು ಬಳಸಿದರು. ಸೂಜಿಯ ಕಣ್ಣಿನಲ್ಲಿ ಹಾದು ಹೋಗುವಂತಹ ಸೀರೆಯನ್ನೂ ಮಾಡಿಸಿದರು. ಅವರ ತಂದೆ ದಿವಂಗತ ಪರಂದಾಮುಲು ಅವರು ಬೆಂಕಿಕಡ್ಡಿಯೊಳಗೆ ಹೊಂದಿಕೊಳ್ಳುವ ಸೀರೆಯನ್ನು ತಯಾರಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!