AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ವರ್ಷದಲ್ಲೇ ಅತಿಹೆಚ್ಚು ಆಗಸ್ಟ್ ಮಳೆ; ಸೆಪ್ಟೆಂಬರ್​ನಲ್ಲಿ ಪ್ರವಾಹ, ಭೂಕುಸಿತಗಳ ಸಾಧ್ಯತೆ: ಹವಾಮಾನ ಮುನ್ನೆಚ್ಚರಿಕೆ

Heavy rainfall, floods, landslides in September: ಈ ಬಾರಿಯ ಮುಂಗಾರು ಸೀಸನ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಆಗಸ್ಟ್​ನಲ್ಲಿ ಹಲವೆಡೆ ಭೀಕರ ಮಳೆಯಾಗಿದೆ. ಸೆಪ್ಟೆಂಬರ್​ನಲ್ಲೂ ಭಾರೀ ಮಳೆಯಾಗಲಿದ್ದು, ಹಲವೆಡೆ ಪ್ರವಾಹ, ಭೂಕುಸಿತ ದುರಂತ ಸಂಭವಿಸಬಹುದು. ವಾಯವ್ಯ ಭಾರತದಲ್ಲಿ ಕಳೆದ 14 ವರ್ಷದಲ್ಲೇ ಆಗಸ್ಟ್​ನಲ್ಲಿ ಅತಿಹೆಚ್ಚು ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.

14 ವರ್ಷದಲ್ಲೇ ಅತಿಹೆಚ್ಚು ಆಗಸ್ಟ್ ಮಳೆ; ಸೆಪ್ಟೆಂಬರ್​ನಲ್ಲಿ ಪ್ರವಾಹ, ಭೂಕುಸಿತಗಳ ಸಾಧ್ಯತೆ: ಹವಾಮಾನ ಮುನ್ನೆಚ್ಚರಿಕೆ
ಆಗಸ್ಟ್ 29ರಂದು ದೆಹಲಿಯಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ರಸ್ತೆಯ ದೃಶ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2025 | 5:32 PM

Share

ನವದೆಹಲಿ, ಆಗಸ್ಟ್ 31: ಈ ಬಾರಿ ಭಾರತದಾದ್ಯಂತ ಭಾರೀ ಮಳೆ ಆಗುತ್ತಿದೆ. ಹವಾಮಾನ ಇಲಾಖೆ (IMD) ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಹಲವೆಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತ (floods and landslides) ಇತ್ಯಾದಿ ಅವಘಡಗಳು ಹಲವೆಡೆ ಅನಾಹುತ ಸೃಷ್ಟಿಸಲಿವೆ ಎಂದೂ ಎಚ್ಚರಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿಯಾಗಿ 167.9 ಎಂಎಂ ಮಳೆಯಾಗುತ್ತದೆ. ಆದರೆ, ಈ ಬಾರಿ ಶೇ. 109ರಷ್ಟು ಹೆಚ್ಚು ಮಳೆಯಾಗಬಹುದು ಎಂದು ಐಎಂಡಿ ಅಭಿಪ್ರಾಯಪಟ್ಟಿದೆ.

ದೇಶದ ಪೂರ್ವ, ಈಶಾನ್ಯದ ಕೆಲ ಪ್ರದೇಶಗಳು, ಹಾಗೂ ದಕ್ಷಿಣದ ಹಲವು ಪ್ರದೇಶಗಳು, ವಾಯವ್ಯ ಭಾಗದ (North west) ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಬಹುದು. ಇವನ್ನು ಬಿಟ್ಟರೆ ಉಳಿದ ಕಡೆ ತೀವ್ರತರವಾದ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಚೆನ್ನೈನಲ್ಲಿ ಮೇಘಸ್ಫೋಟ; ಹಲವೆಡೆ ಭಾರೀ ಮಳೆ; ಬೆಂಗಳೂರಿಗೆ ಬಂದ 3 ವಿಮಾನಗಳು

ಉತ್ತರಾಖಂಡ್​ನಲ್ಲಿ ಭೂಕುಸಿತದ ಸಂಭವ

ಭಾರೀ ಮಳೆಯಿಂದ ಸೆಪ್ಟೆಂಬರ್​ನಲ್ಲಿ ಉತ್ತರಾಖಂಡ್​ನಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಬಹುದು. ಇಲ್ಲಿಯೇ ಹಲವು ನದಿಗಳು ಉಗಮಗೊಳ್ಳುವುದರಿಂದ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು, ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು. ದಕ್ಷಿಣ ಹರ್ಯಾಣ, ದೆಹಲಿ, ಮತ್ತು ಉತ್ತರ ರಾಜಸ್ಥಾನದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ವಾಯವ್ಯ ಭಾರತದಲ್ಲಿ ಆಗಸ್ಟ್​ನಲ್ಲಿ ದಾಖಲೆಯ ಮಳೆ

ಆಗಸ್ಟ್ ತಿಂಗಳಲ್ಲಿ ವಾಯವ್ಯ ಭಾಗಗಳಲ್ಲಿ (Northwest India) ಸರಾಸರಿಯಾಗಿ 265 ಎಂಎಂ ಮಳೆಯಾಗಿದೆ. 2001ರ ನಂತರ ಈ ಭಾಗಗಳಲ್ಲಿ ಆಗಸ್ಟ್ ತಿಂಗಳಲ್ಲಿ ಕಂಡ ಅತಿಹೆಚ್ಚು ಮಳೆ ಇದು. 124 ವರ್ಷಗಳ ಬಳಿಕ, ಅಂದರೆ 1901ರ ನಂತರ ಆಗಸ್ಟ್ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆಯಲ್ಲಿ ಇದು 13ನೇ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 5,000 ಮೀಟರ್ ಸಮುದ್ರದಾಳದಲ್ಲಿ ಭಾರತೀಯರು; ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ

ಈ ಬಾರಿಯ ಮುಂಗಾರು ಸೀಸನ್​ನ ಎಲ್ಲಾ ಮೂರು ತಿಂಗಳಲ್ಲೂ ಈ ವಾಯವ್ಯ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯೇ ಆಗಿದೆ. ಜೂನ್​ನಲ್ಲಿ 111 ಎಂಎಂ, ಜುಲೈನಲ್ಲಿ 237.4 ಎಂಎಂ ಮತ್ತು ಆಗಸ್ಟ್​ನಲ್ಲಿ 265 ಎಂಎಂ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಈ ಭಾಗಗಳಲ್ಲಿ ಮಳೆ ಶಾಂತಗೊಳ್ಳಬಹುದು. ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ