Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ; ಹೃತ್ಪೂರ್ವಕ ಸಂದೇಶದೊಂದಿಗೆ ಇನ್​ಸ್ಟಾ ಪೋಸ್ಟ್​​

ಅಂದಹಾಗೆ ಸ್ಮೃತಿ ಇರಾನಿಗೆ ಶಾನೆಲ್​ ಸ್ವಂತ ಮಗಳಲ್ಲ. ಪತಿ ಜುಬಿನ್​ ಅವರ ಮೊದಲ ಪತ್ನಿ ಮೋನಾ ಮಗಳು. ಹಾಗಂತ ಇವರೆಲ್ಲ ಸ್ನೇಹದಿಂದಲೇ ಇದ್ದಾರೆ. ಶಾನೆಲ್​ರನ್ನೂ ಸ್ಮೃತಿ ಇರಾನಿ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ.

ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ; ಹೃತ್ಪೂರ್ವಕ ಸಂದೇಶದೊಂದಿಗೆ ಇನ್​ಸ್ಟಾ ಪೋಸ್ಟ್​​
ಶಾನೆಲ್​ ಇರಾನಿ ಮತ್ತು ಅರ್ಜುನ್​ ಭಲ್ಲಾ
Follow us
TV9 Web
| Updated By: Lakshmi Hegde

Updated on: Dec 26, 2021 | 8:33 AM

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್​ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾಗೇ, ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಗುಡ್​ ನ್ಯೂಸ್ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಶಾನೆಲ್​ ನಿಶ್ಚಿತಾರ್ಥವಾಯಿತು ಎಂದು ಹೇಳಿರುವ ಅವರು, ಮಗಳು ಮತ್ತು ಬಾವಿ ಅಳಿಯನ ಫೋಟೋವನ್ನು  ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಅಂದಹಾಗೆ, ಸ್ಮೃತಿ ಇರಾನಿ ಪುತ್ರಿ ಶಾನೆಲ್, ಅರ್ಜುನ್​ ಭಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಮೃತಿ ಇರಾನಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಮೊದಲ ಫೋಟೋದಲ್ಲಿ ಅರ್ಜುನ್​ ಅವರು ಶಾನೆಲ್​​ಗೆ ಪ್ರಪೋಸ್​ ಮಾಡುತ್ತಿರುವುದನ್ನು ನೋಡಬಹುದು. ಹಾಗೇ ಎರಡನೇ ಫೋಟೋ, ಇವರಿಬ್ಬರೂ ಪ್ರೀತಿಯಿಂದ ಮುಖಕ್ಕೆ-ಮುಖ ತಾಗಿಸಿ ನಗುತ್ತ ನಿಂತಿರುವುದನ್ನು ನೋಡಬಹುದು. ಹಾಗೇ, ಸ್ಮೃತಿ ಇರಾನಿ ಎಂದಿನಿಂತೆ ಫನ್ನಿಯಾಗಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಅರ್ಜುನ್​ ಭಲ್ಲಾ ನಮ್ಮ ಹೃದಯವನ್ನು ಗೆದ್ದ ವ್ಯಕ್ತಿ. ಅವರಿಗೆ ನಮ್ಮ ಕ್ರೇಜಿ ಕುಟುಂಬಕ್ಕೆ ಸ್ವಾಗತ. ಹಾಗೇ, ನೀವು ಇನ್ನು ಮುಂದೆ ನಮ್ಮ ಹುಚ್ಚುತನವನ್ನೆಲ್ಲ ಸಹಿಸಿಕೊಳ್ಳಬೇಕು ಎಂದು ಅರ್ಜುನ್​ಗೆ ಪ್ರೀತಿಯಿಂದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಾಗೇ, ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

ಅಂದಹಾಗೆ ಸ್ಮೃತಿ ಇರಾನಿಗೆ ಶಾನೆಲ್​ ಸ್ವಂತ ಮಗಳಲ್ಲ. ಪತಿ ಜುಬಿನ್​ ಅವರ ಮೊದಲ ಪತ್ನಿ ಮೋನಾ ಮಗಳು. ಹಾಗಂತ ಇವರೆಲ್ಲ ಸ್ನೇಹದಿಂದಲೇ ಇದ್ದಾರೆ. ಶಾನೆಲ್​ರನ್ನೂ ಸ್ಮೃತಿ ಇರಾನಿ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಹಾಗೇ, ಸ್ಮೃತಿ ಇರಾನಿಗೆ ಜೋಹರ್​ ಎಂಬ ಮಗ ಮತ್ತು ಜೋಯಿಶ್​ ಎಂಬ ಮಗಳಿದ್ದಾರೆ. ಈ ಹಿಂದೆ ಒಮ್ಮೆ ತಮ್ಮ ಮೂರು ಮಕ್ಕಳೊಂದಿಗೆ ಇರುವ ಫೋಟೋವನ್ನು ಸ್ಮೃತಿ ಇರಾನಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ನನಗೆ ನನ್ನ ಮಕ್ಕಳೇ ಜೀವ, ಪ್ರಪಂಚ ಎಂದು ಕ್ಯಾಪ್ಷನ್​ ಬರೆದಿದ್ದರು.

ಇದನ್ನೂ ಓದಿ: Mann Ki Baat: ಇಂದು ವರ್ಷದ ಕೊನೇ ಮನ್​ ಕೀ ಬಾತ್​​ನಲ್ಲಿ ಪ್ರಧಾನಿ ಮೋದಿ ಮಾತು; ಸಮಯ ಯಾವುದು? ಎಲ್ಲೆಲ್ಲಿ ಪ್ರಸಾರವಾಗಲಿದೆ? ಇಲ್ಲಿದೆ ಮಾಹಿತಿ

ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು